AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ನನ್ನ ಪತ್ನಿಯ ಸಂಗಾತಿಯೇ ಹೊರತು ಆಕೆಯನ್ನು ಆಳುವ ಧಣಿಯಲ್ಲ: ಇರ್ಫಾನ್ ಪಠಾಣ್

ತಮ್ಮ ಹಿರಿಯ ಸಹೋದರ ಯೂಸುಫ್​ ಪಠಾಣ್​ರೊಂದಿಗೆ ಇರ್ಫಾನ್ ಅವರು ಕೋವಿಡ್-19 ಸೋಂಕಿನಿಂದ ಬಳಲುತ್ತಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಅವರಿಬ್ಬರ ಪಠಾಣ್ ಫೌಂಡೇಶನ್, ಎರಡನೇ ಅಲೆಯಲ್ಲಿ ಸೋಂಕಿತರಾಗಿರುವವರಿಗೆ ಆಹಾರ, ಆಕ್ಸಿಜನ್ ಸಿಲಿಂಡರ್​, ವೆಂಟಿಲೇಟರ್​, ಆಮ್ಲಜನಕದ ಸಾಂದ್ರಕ ಮುಂತಾದವುಗಳನ್ನು ಒದಗಿಸುತ್ತಿದೆ.

ನಾನು ನನ್ನ ಪತ್ನಿಯ ಸಂಗಾತಿಯೇ ಹೊರತು ಆಕೆಯನ್ನು ಆಳುವ ಧಣಿಯಲ್ಲ: ಇರ್ಫಾನ್ ಪಠಾಣ್
ಇರ್ಫಾನ್ ಪಠಾಣ್
ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on: May 26, 2021 | 4:47 PM

Share

ಭಾರತದ ಮಾಜಿ ಆಲ್​ರೌಂಡರ್ ಮತ್ತು ಈ ವೀಕ್ಷಕ ವಿವರಣೆಗಾರ ಇರ್ಫಾನ್ ಪಠಾಣ್ ಕ್ರಿಕೆಟೇತರ ಕಾರಣಗಳಿಗೆ ಸುದ್ದಿಯಲ್ಲಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರ ಪತ್ನಿ ಸಫಾ ಬೇಗಂ ಅವರ ಬ್ಲರ್ ಅಗಿರೋ ಇಮೇಜ್​ಗೆ ಸಂಬಂಧಿಸಿದಂತೆ ವ್ಯಾಪಕ ಟೀಕೆ ಮತ್ತು ದ್ವೇಷಕಾರುವ ಪ್ರತಿಕ್ರಿಯೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅವರು ಟ್ವೀಟ್​ ಮೂಲಕ ಉತ್ತರ ನೀಡಿದ್ದ್ದಾರೆ. ಇರ್ಫಾನ್ ತಮ್ಮ ಹೆಂಡತಿಯ ಮುಖ ಬೇರೆಯವರಿಗೆ ಕಾಣದಂತಿರಲು ಉದ್ದೇಶಪೂರ್ವಕವಾಗಿ ಬ್ಲರ್ ಮಾಡಿದ್ದಾರೆ ಎಂದು ಕೆಲವರು ಹೇಳಿರುವುದು ಪಠಾಣ್​ ಸಹೋದರರಲ್ಲಿ ಕಿರಿಯನಾಗಿರುವ ಇರ್ಫಾನ್​ ಅವರನ್ನು ಕೆರಳಿಸಿದೆ. ಅದೇ ಚಿತ್ರವನ್ನು ತಮ್ಮ ಟ್ವಿಟ್ಟರ್ ಹ್ಯಾಂಡಲ್​ನಲ್ಲಿ ಪೋಸ್ಟ್ ಮಾಡಿ, ಈ ಚಿತ್ರವನ್ನು ಪೋಸ್ಟ್​ ಮಾಡಿದ್ದು ನನ್ನ ಪತ್ನಿಯೇ ಹೊರತು ನಾನಲ್ಲ ಎಂದಿರುವ ಅವರು, ‘ನಾನು ಆಕೆಯ ಸಂಗಾತಿ, ಧಣಿ ಅಲ್ಲ’ ಎಂದು ಹೇಳಿದ್ದಾರೆ.

‘ಈ ಚಿತ್ರವನ್ನು ಮಗನ ಅಕೌಂಟ್​ನಿಂದ ನನ್ನ ಪಟ್ಟದರಸಿಯೇ ಪೋಸ್ಟ್​ ಮಾಡಿದ್ದಾಳೆ. ಇದರ ಬಗ್ಗೆ ಅನೇಕ ದ್ವೇಷಪೂರ್ಣ ಕಾಮೆಂಟ್​ಗಳು ಬರುತ್ತಿವೆ. ಅದೇ ಚಿತ್ರವನ್ನು ನಾನಿಲ್ಲಿ ಪೋಸ್ಟ್​ ಮಾಡುತ್ತಿದ್ದೇನೆ. ಆಕೆ ತನ್ನಿಚ್ಛೆಯಿಂದ ಈ ಚಿತ್ರವನ್ನು ಬ್ಲರ್ ಮಾಡಿದ್ದಾಳೆ. ನಾನು ಹೇಳಬಯಸುವ ಮತ್ತೊಂದು ಸಂಗತಿಯೇನೆಂದರೆ ನಾನು ಆಕೆಯ ಸಂಗಾತಿಯೇ ಹೊರತು ಧಣಿ ಅಲ್ಲ’ ಎಂದು ಇರ್ಫಾನ್ ಟ್ವೀಟ್​ ಮಾಡಿದ್ದಾರೆ.

ತಮ್ಮ ಹಿರಿಯ ಸಹೋದರ ಯೂಸುಫ್​ ಪಠಾಣ್​ರೊಂದಿಗೆ ಇರ್ಫಾನ್ ಅವರು ಕೋವಿಡ್-19 ಸೋಂಕಿನಿಂದ ಬಳಲುತ್ತಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಅವರಿಬ್ಬರ ಪಠಾಣ್ ಫೌಂಡೇಶನ್, ಎರಡನೇ ಅಲೆಯಲ್ಲಿ ಸೋಂಕಿತರಾಗಿರುವವರಿಗೆ ಆಹಾರ, ಆಕ್ಸಿಜನ್ ಸಿಲಿಂಡರ್​, ವೆಂಟಿಲೇಟರ್​, ಆಮ್ಲಜನಕದ ಸಾಂದ್ರಕ ಮುಂತಾದವುಗಳನ್ನು ಒದಗಿಸುತ್ತಿದೆ.

ಸದಾ ಚಟುವಟಿಕೆಯಿಂದಿರುವ ಇರ್ಫಾನ್ ಟ್ವಿಟ್ಟರ್​ನಲ್ಲೂ ಸಕ್ರಿಯರಾಗಿದ್ದು ಪಾಲೆಸ್ಟೀನ್​ನಂಥ ವಿಷಯಗಳ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಸದರಿ ವಿಷಯವನ್ನು ಕುರಿತು ಕೆಲ ವಿದೇಶೀ ಆಟಗಾರರು ಟ್ವೀಟ್​ ಮಾಡಿರುವುದನ್ನು ಅವರು ರೀಟ್ವೀಟ್​ ಮಾಡಿದ್ದಾರೆ. ಪಾಲೆಸ್ಟೀನ್ ಮೇಲಿನ ಅವರ ಟ್ವೀಟ್​ಗೆ ಬಾಲಿವುಡ್​ ನಟಿ ಕಂಗನಾ ರನೌತ್ ಖಂಡಿಸಿದ್ದಾರೆ.

ಇದಕ್ಕೆ ಮೊದಲು, ರೋಡ್​ ಸೇಫ್ಟಿ ವರ್ಲ್ಡ್ ಸಿರೀಸ್ 2020-21 ರಲ್ಲಿ ಪಾಲ್ಗೊಂಡಿದ್ದ ಇರ್ಫಾನ್ ಟೂರ್ನಿ ಮುಗಿದ ನಂತರ ಸೋಂಕಿಗೊಳಗಾಗಿದ್ದರು. ಅವರ ಸೋಂಕು ಎಸಿಂಪ್ಟೋಮ್ಯಾಟಿಕ್ ಸ್ವರೂಪದ್ದಾಗಿತ್ತು ಮತ್ತು ಹೋಮ್ ಐಸೋಲೇಶನ್ ನಂತರ ಚೇತರಿಸಿಕೊಂಡಿದ್ದರು. ಆ ಸರಣಿಯಲ್ಲಿ ಇರ್ಫಾನ್ ಏಳು ಪಂದ್ಯಗಳನ್ನಾಡಿ ಏಳು ವಿಕೆಟ್​ ಪಡೆದರಲ್ಲದೆ ತಮಗೆ ಬ್ಯಾಟ್​ ಮಾಡಲು ಅವಕಾಶ ದೊರೆತ 3 ಇನ್ನಿಂಗ್ಸ್​ಗಳಲ್ಲಿ 126 ರನ್ ಗಳಿಸಿದರು. ಶ್ರೀಲಂಕಾ ಲೆಜೆಂಡ್ಸ್ ವಿರುದ್ಧ ನಡೆದ ಟೂರ್ನಮೆಂಟ್​ನ ಫೈನಲ್ ಪಂದ್ಯದಲ್ಲಿ ಗೆದ್ದ ಭಾರತ ಲೆಜೆಂಡ್ಸ್ ತಂಡಕ್ಕೆ ಅವರು ಮಹತ್ತರ ಮತ್ತು ನಿರ್ಣಾಯಕ ಕಾಣಿಕೆ ನೀಡಿದರು. ಅವರು ಪಡೆದ ಎರಡು ವಿಕೆಟ್​ಗಳ ನೆರವಿನಿಂದ ಭಾರತ ಪಂದ್ಯವನ್ನು 14 ರನ್​ಗಳಿಂದ ಗೆದ್ದಿತ್ತು.

ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್​ ಓವಲ್​ನಲ್ಲಿ ಟೆಸ್ಟ್ ಕ್ರಿಕೆಟ್​ಗೆ 2003 ರಲ್ಲಿ ಪಾದಾರ್ಪಣೆ ಮಾಡಿದ ಇರ್ಫಾನ್ ಒಟ್ಟು 29 ಟೆಸ್ಟ್​ಗಳನ್ನಾಡಿ 31.6 ಸರಾಸರಿಯಲ್ಲಿ 1 ಶತಕದ ನೆರವಿನೊಂದಿಗೆ 1,105 ರನ್ ಗಳಿಸಿದರು. ಹಾಗಯೇ ಎಡಗೈ ಮಧ್ಯಮ ವೇಗದ ಬೌಲಿಂಗ್ ಮೂಲಕ ಅವರು 100 ವಿಕೆಟ್​ ಸಹ ಪಡೆದರು. 120 ಒಂದು ದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಇರ್ಫಾನ್ 1,544 ರನ್ ಗಳಿಸಿದರಲ್ಲದೆ 118 ವಿಕೆಟ್​ಗಳನ್ನು ಪಡೆದರು. ಹಾಗೆಯೇ, ಆಡಿದ 24 ಟಿ20ಐ ಪಂದ್ಯಗಳಲ್ಲಿ 172 ರನ್ ಗಳಿಸಿ 28 ವಿಕೆಟ್​ ಪಡೆದರು.

ಇದನ್ನೂ ಓದಿ: IPL 2021: ಅರ್ಧಕ್ಕೆ ನಿಂತಿದ್ದ ಐಪಿಎಲ್​ ಮತ್ತೆ ಆರಂಭ; ಸೆಪ್ಟೆಂಬರ್​ನಿಂದ ಸರಣಿ ಮುಂದುವರೆಸಲು ಬಿಸಿಸಿಐ ನಿರ್ಧಾರ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ