AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋತರೂ ವಿಶ್ವ ಚಾಂಪಿಯನ್ನರಿಗೆ ನಡುಕ ಹುಟ್ಟಿಸಿದ ಪ್ರಜ್ಞಾನಂದ

Chess World Cup 2023: ಮೊದಲ ಟೈಬ್ರೇಕ್​ ಅನ್ನು ಗೆಲ್ಲುವ ಮೂಲಕ ಒತ್ತಡ ಹೇರಿದರು. ಇನ್ನು 2ನೇ ಟೈಬ್ರೇಕ್​ನಲ್ಲಿ ಒತ್ತಡಕ್ಕೆ ಸಿಲುಕಿದ ಪ್ರಜ್ಞಾನಂದ ವಿರುದ್ಧ ಡ್ರಾ ಸಾಧಿಸುವಲ್ಲಿ ನಾರ್ವೆ ತಾರೆ ಯಶಸ್ವಿಯಾದರು.

ಸೋತರೂ ವಿಶ್ವ ಚಾಂಪಿಯನ್ನರಿಗೆ ನಡುಕ ಹುಟ್ಟಿಸಿದ ಪ್ರಜ್ಞಾನಂದ
, R Praggnanandhaa
TV9 Web
| Edited By: |

Updated on: Aug 24, 2023 | 6:19 PM

Share

ಚೆಸ್ ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಭಾರತದ ಆರ್​. ಪ್ರಜ್ಞಾನಂದ (R Praggnanandhaa )ವಿರೋಚಿತವಾಗಿ ಸೋಲೊಪ್ಪಿಕೊಂಡಿದ್ದಾರೆ. ವಿಶ್ವದ ನಂಬರ್ 1 ಚೆಸ್ ತಾರೆ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧದ ಈ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಕ್ಲಾಸಿಕ್​ ಗೇಮ್​ಗಳ ಮೂಲಕವೇ ಚಾಂಪಿಯನ್ ಪಟ್ಟ ಅಲಂಕರಿಸುವ ನಿರೀಕ್ಷೆಯಲ್ಲಿದ್ದ ಕಾರ್ಲ್​​ಸೆನ್​ಗೆ ಮೊದಲ ಗೇಮ್​ನಲ್ಲೇ ಡ್ರಾ ಮಾಡಿಕೊಳ್ಳುವ ಮೂಲಕ ಭಾರತೀಯ ತಾರೆ ಶಾಕ್ ನೀಡಿದ್ದರು. ಇನ್ನು 2ನೇ ಗೇಮ್​​ನಲ್ಲಿ ಪ್ರಜ್ಞಾನಂದನ ವಿರುದ್ಧ ಗೆಲುವು ಅಸಾಧ್ಯ ಎಂಬುದನ್ನು ಅರಿತ ಕಾರ್ಲ್​ಸೆನ್ ಡ್ರಾ ಮಾಡಿಕೊಂಡಿದ್ದರು.

ಇದರೊಂದಿಗೆ ಪಂದ್ಯವು ಟೈಬ್ರೇಕ್​ನತ್ತ ಸಾಗಿತು. ಆದರೆ ಇಲ್ಲಿ ತಮ್ಮೆಲ್ಲಾ ಅನುಭವವನ್ನು ಧಾರೆಯೆರೆದ ಕಾರ್ಲ್​ಸೆನ್ ಭಾರತೀಯ ಆಟಗಾರನ ಮೇಲೆ ಮೊದಲ ಸುತ್ತಿನಲ್ಲೇ ಹಿಡಿತ ಸಾಧಿಸಿದ್ದರು. ಅಲ್ಲದೆ ಮೊದಲ ಟೈಬ್ರೇಕ್​ ಅನ್ನು ಗೆಲ್ಲುವ ಮೂಲಕ ಒತ್ತಡ ಹೇರಿದರು. ಇನ್ನು 2ನೇ ಟೈಬ್ರೇಕ್​ನಲ್ಲಿ ಒತ್ತಡಕ್ಕೆ ಸಿಲುಕಿದ ಪ್ರಜ್ಞಾನಂದ ವಿರುದ್ಧ ಡ್ರಾ ಸಾಧಿಸುವಲ್ಲಿ ನಾರ್ವೆ ತಾರೆ ಯಶಸ್ವಿಯಾದರು. ಈ ಡ್ರಾನೊಂದಿಗೆ ಟೈಬ್ರೇಕ್ ಅನ್ನು 1-0 ಅಂತರದಿಂದ ಗೆದ್ದು ಕಾರ್ಲ್​ಸೆನ್ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದರು.

ವಿಶ್ವ ಚಾಂಪಿಯನ್ನರ ನಿದ್ದೆಗೆಡಿಸಿದ ಪ್ರಜ್ಞಾನಂದ:

ಫೈನಲ್ ಪಂದ್ಯದಲ್ಲಿ ಆರ್​ ಪ್ರಜ್ಞಾನಂದ ಸೋತಿರುವುದು ವಿಶ್ವದ ನಂಬರ್ 1 ಚೆಸ್ ತಾರೆ  ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ಎಂಬುದು ಇಲ್ಲಿ ಉಲ್ಲೇಖಾರ್ಹ. ಏಕೆಂದರೆ ಕಾರ್ಲ್​ಸೆನ್ ಇಲ್ಲಿ ಅಗ್ರಸ್ಥಾನದಲ್ಲಿದ್ದರೆ, ಪ್ರಜ್ಞಾನಂದ ಅವರು 29ನೇ ಸ್ಥಾನದಲ್ಲಿದ್ದಾರೆ. ಅಂದರೆ ವಿಶ್ವ ಶ್ರೇಯಾಂಕದಲ್ಲಿ 29ನೇ ಸ್ಥಾನದಲ್ಲಿರುವ 18 ವರ್ಷದ ಭಾರತೀಯ ತಾರೆ ವಿಶ್ವದ ನಂಬರ್ ಒನ್ ತಾರೆಗೆ ಸವಾಲೊಡ್ಡಿದ್ದರು.

ಅಷ್ಟೇ ಯಾಕೆ, ವಿಶ್ವದ ನಂಬರ್-2 ಹಾಗೂ ನಂಬರ್-3 ಆಟಗಾರರಿಗೂ ಸೋಲುಣಿಸಿದ್ದರು. ಅಂದರೆ ಫೈನಲ್​ಗೂ ಮುನ್ನ ಪ್ರೀ ಕ್ವಾಟರ್​ಫೈನಲ್​ನಲ್ಲಿ ವಿಶ್ವದ ನಂಬರ್-2 ಚೆಸ್ ತಾರೆ ಅಮೆರಿಕದ ಹಿಕಾರು ನಕಮುರಾಗೆ ಪ್ರಜ್ಞಾನಂದ ಸೋಲುಣಿಸಿದ್ದರು. ಈ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದ ಭಾರತೀಯ ಚೆಸ್ ಚತುರನಿಗೆ ಎದುರಾಗಿದ್ದು ವಿಶ್ವದ 3ನೇ ಶ್ರೇಯಾಂಕದ ಫ್ಯಾಬಿಯಾನೋ ಕರುವಾನಾ.

ಅಮೆರಿಕದ ಕರುವಾನಾಗೆ ಭರ್ಜರಿ ಪೈಪೋಟಿ ನೀಡಿದ್ದ ಪ್ರಜ್ಞಾನಂದ ಪಂದ್ಯವನ್ನು ಟೈಬ್ರೇಕ್​ನತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ ಟೈಬ್ರೇಕ್​ನಲ್ಲಿ ಫ್ಯಾಬಿಯಾನೋ ಕರುವಾನಾಗೆ ಸೋಲುಣಿಸಿ ಫೈನಲ್​ಗೆ ಪ್ರವೇಶಿಸಿದ್ದರು.

ಇನ್ನು ಫೈನಲ್​ನಲ್ಲೂ ವಿಶ್ವದ ನಂಬರ್ ಒನ್ ಚೆಸ್ ಪಟು ಮ್ಯಾಗ್ನಸ್ ಕಾರ್ಲ್‌ಸೆನ್​ಗೂ ಎಲ್ಲಾ ರೀತಿಯಲ್ಲೂ ಸವಾಲೊಡ್ಡಿದ್ದರು. ಮೊದಲ ಗೇಮ್​ಗಳ ಮೂಲಕ ಚಾಂಪಿಯನ್ ಪಟ್ಟ ನಿರೀಕ್ಷೆಯಲ್ಲಿದ್ದ ಕಾರ್ಲ್​ಸೆನ್ ವಿರುದ್ಧ ಚಾಂಪಿಯನ್​ ಪಟ್ಟಕ್ಕಾಗಿ ಮೂರು ದಿನ ಸೆಣಸಾಡುವಲ್ಲಿ 29ನೇ ಶ್ರೇಯಾಂಕದಲ್ಲಿರುವ ಪ್ರಜ್ಞಾನಂದ ಯಶಸ್ವಿಯಾಗಿದ್ದರು.

ಇದಾಗ್ಯೂ ಟೈಬ್ರೇಕ್​ನಲ್ಲಿ ಮ್ಯಾಗ್ನಸ್ ಕಾರ್ಲ್‌ಸೆನ್ ಅವರ ಅನುಭವದ ಮುಂದೆ 18ರ ಹರೆಯದ ಆರ್​. ಪ್ರಜ್ಞಾನಂದ ತಲೆಬಾಗಲೇಬೇಕಾಯಿತು. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಆರ್​. ಪ್ರಜ್ಞಾನಂದ ತಮ್ಮ ಮೂರು ಪಂದ್ಯಗಳಲ್ಲಿ ಎದುರಿಸಿರುವುದು ವಿಶ್ವ ಟಾಪ್-3 ಚೆಸ್​ ಪಟುಗಳನ್ನು ಎಂಬುದು.

ಇದನ್ನೂ ಓದಿ: 2 ಬಾರಿ ಚೆಸ್ ವಿಶ್ವಕಪ್ ಗೆದ್ದಿದ್ದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್

ಅಂದರೆ ಮೂವರಲ್ಲಿ ಇಬ್ಬರಿಗೂ ಪ್ರಜ್ಞಾನಂದ ಸೋಲಿನ ರುಚಿ ತೋರಿಸಿದ್ದರು. ಇನ್ನು ಒಬ್ಬರಿಗೆ ಸೋಲಿನ ಭೀತಿ ಹುಟ್ಟಿಸಿದರೂ ವಿಜಯಮಾಲೆ ಮಾತ್ರ ಒಲಿಯಲಿಲ್ಲ. ಆದರೆ ಮುಂಬರುವ ದಿನಗಳಲ್ಲಿ ವಿಶ್ವ ಚಾಂಪಿಯನ್​ ಮ್ಯಾಗ್ನಸ್ ಕಾರ್ಲ್‌ಸೆನ್ ಅವರಿಗೆ  29ನೇ ಶ್ರೇಯಾಂಕದಲ್ಲಿರುವ ಆರ್​. ಪ್ರಜ್ಞಾನಂದ ಸವಾಲೊಡ್ಡುವುದರಲ್ಲಿ ಅನುಮಾನವೇ ಇಲ್ಲ. ಅದರ ಮೊದಲ ಟ್ರೈಲರ್ ಈಗ ಚೆಸ್ ವಿಶ್ವಕಪ್​ನಲ್ಲಿ ಕಂಡು ಬಂದಿರುವ ಭರ್ಜರಿ ಪೈಪೋಟಿ.

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ