AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತಮ ಪಿಚ್​ಗಳ ಮೇಲೆ ಚೆನ್ನಾಗಿ ಆಡಿದಾಗಲೇ ಇಂಗ್ಲೆಂಡ್​ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯವನ್ನು ಮಣಿಸುವುದು ಸಾಧ್ಯ: ಮೈಕೆಲ ವಾನ್

ಟೆಲಿಗ್ರಾಫ್​ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ವಾನ್, ನ್ಯೂಜಿಲೆಂಡ್​ ವಿರುದ್ಧ ಆಡಿದ ಎರಡೂ ಟೆಸ್ಟ್​ಗಳಲ್ಲಿ ಒಬ್ಬ ಪರಿಣಿತ ಸ್ಪಿನ್ನರ್​ನನ್ನು ಆಡಿಸದೆ ಇಂಗ್ಲೆಂಡ್ ಟೀಮ್ ಮ್ಯಾನೇಜ್ಮೆಂಟ್​ ಬಹಳ ದೊಡ್ಡ ಪ್ರಮಾದವೆಸಗಿತು ಎಂದು ಹೇಳಿದ್ದಾರೆ.

ಉತ್ತಮ ಪಿಚ್​ಗಳ ಮೇಲೆ ಚೆನ್ನಾಗಿ ಆಡಿದಾಗಲೇ ಇಂಗ್ಲೆಂಡ್​ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯವನ್ನು ಮಣಿಸುವುದು ಸಾಧ್ಯ: ಮೈಕೆಲ ವಾನ್
ಮೈಕೆಲ್ ವಾನ್
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jun 14, 2021 | 5:56 PM

Share

ನ್ಯೂಜಿಲೆಂಡ್​ ವಿರುದ್ಧ ಎಜ್​ಬ್ಯಾಸ್ಟನ್​ನಲ್ಲಿ ಎರಡನೇ ಟೆಸ್ಟ್ ಸೋತು ಎರಡು ಪಂದ್ಯಗಳ ಸರಣಿಯನ್ನು 0-1 ಅಂತರದಿಂದ ಒಪ್ಪಿಸಿಕೊಟ್ಟ ಜೋ ರೂಟ್ ಅವರ ಇಂಗ್ಲೆಂಡ್​ ತಂಡ ತನ್ನ ದೇಶದಲ್ಲಿ ಮಾಜಿ ಆಟಗಾರರಿಂದ ಮತ್ತು ಅಭಿಮಾನಗಳಿಂದ ತೀವ್ರ ಸ್ವರೂಪದ ಟೀಕೆಯನ್ನು ಎದುರಿಸುತ್ತಿದೆ. ಎರಡನೆ ಟೆಸ್ಟ್​ನ ದ್ವಿತೀಯ ಇನ್ನಿಂಗ್ಸ್​ನಲ್ಲಿ ಕಿವೀಸ್ ವೇಗದ ದಾಳಿಯೆದರು ತತ್ತರಿಸಿ ಕೇವಲ 122 ರನ್​ಗಳ ಮೊತ್ತಕ್ಕೆ ಆಲೌಟಾದ ಇಂಗ್ಲೆಂಡ್​ ವರ್ಷಾಂತ್ಯದಲ್ಲಿ ನಡೆಯಲಿರುವ ಌಶಸ್​ ಸರಣಿಯಲ್ಲಿ ಮತ್ತೂ ಭಯಾನಕ ವೇಗದ ದಾಳಿಯನ್ನು ಹೊಂದಿರುವ ಆಸ್ಸೀಗಳ ವಿರುದ್ಧ ಮಣ್ಣುಮುಕ್ಕಲಿದೆ ಎಂದು ಮಾಜಿ ನಾಯಕ ಮೈಕೆಲ್ ವಾನ್ ಹೇಳಿದ್ದಾರೆ. ಕೇನ್ ವಿಲಿಯಮ್ಸನ್ ಅವರ ಗೈರು ಹಾಜರಿಯಲ್ಲೂ ಅತಿಥೇಯನ್ನು ಮಣಿಸಿದ ನ್ಯೂಜಿಲೆಂಡ್​ 22 ವರ್ಷಗಳ ನಂತರ ಆಂಗ್ಲರ ನಾಡಿನಲ್ಲಿ ಸರಣಿ ಗೆದ್ದಿದೆ.

ಟೆಲಿಗ್ರಾಫ್​ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ವಾನ್, ನ್ಯೂಜಿಲೆಂಡ್​ ವಿರುದ್ಧ ಆಡಿದ ಎರಡೂ ಟೆಸ್ಟ್​ಗಳಲ್ಲಿ ಒಬ್ಬ ಪರಿಣಿತ ಸ್ಪಿನ್ನರ್​ನನ್ನು ಆಡಿಸದೆ ಇಂಗ್ಲೆಂಡ್ ಟೀಮ್ ಮ್ಯಾನೇಜ್ಮೆಂಟ್​ ಬಹಳ ದೊಡ್ಡ ಪ್ರಮಾದವೆಸಗಿತು ಎಂದು ಹೇಳಿದ್ದಾರೆ.

‘ಲಾರ್ಡ್ಸ್​​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಮಳೆ ಬಂದಿದ್ದರಿಂದ ಇಂಗ್ಲೆಂಡ್​ ಬಚಾವಾಯಿತು. ಆದರೆ ಒಂದೇ ತಪ್ಪನ್ನು ಕೇವಲ ಎರಡು ವಾರಗಳ ಅವಧಿಯಲ್ಲಿ ಎರಡನೇ ಸಲ ಮಾಡುವುದು ತಪ್ಪಲ್ಲ, ಅಪಾರಾಧ ಅನಿಸಿಕೊಳ್ಳುತ್ತದೆ. ಲಾರ್ಡ್ಸ್ ಪಿಚ್​ ತಿರುವು ತೆಗೆದುಕೊಳ್ಳುತ್ತಿತ್ತು ನಿಜ, ಆದರೆ ಜಾಸ್ತಿ ತಾಪಮಾನ ಮತ್ತು ಒಣಹವೆಯಿಂದ ಕೂಡಿದ್ದ ಎಜ್​ಬ್ಯಾಸ್ಟನ್​ನ ಮೈದಾನದ ಪಿಚ್​ಮೇಲೆ ವೈವಿಧ್ಯಮಯ ಬೌಲಿಂಗ್ ಆಕ್ರಮಣದ ಅವಶ್ಯಕತೆಯಿತ್ತು. ತಂಡದಲ್ಲಿ ನಾಲ್ವರು ವೇಗದ ಬೌಲರ್​ಗಳಿದ್ದರೆ ಅವರನ್ನೇ ದಾಳಿಗಿಳಿಸದೆ ಬೇರೆ ವಿಧಿಯಿರುವುದಿಲ್ಲ. ಆದರೆ ಮೂರು ಸೀಮರ್​ಗಳ ಜೊತೆಗೆ ಸ್ಪಿನ್ನರ್ ರೂಪದಲ್ಲಿ ಜ್ಯಾಕ್​ ಲೀಚ್​ ಅವರನ್ನು ಆಡಿಸಿದ್ದರೆ ಜೋ ರೂಟ್​ ಅಗಾಗ ದಾಳಿಗಿಳಿದು ವೇಗದ ಬೌಲರ್​ಗಳು ದಣಿಯದಂತೆ ನೋಡಿಕೊಳ್ಳುತ್ತಿದ್ದರು. ಭಾರತದ ವಿರುದ್ಧ ನಡೆಯುವ ಸರಣಿಯಲ್ಲಿ ಅತಿಥೇಯರು ಇದೇ ಪ್ರಮಾದ ಪ್ರಮಾದವನ್ನು ಪುನರಾವರ್ತಿಸಲಾರರು ಎಂದು ನಿರೀಕ್ಷಿಸುತ್ತೇನೆ,’ ಎಂದು ವಾನ್ ಹೇಳಿದ್ದಾರೆ.

ಉತ್ತಮವಾದ ಪಿಚ್​ಗಳ ಮೇಲೆ ಹೇಗೆ ಆಡಿ ಗೆಲ್ಲಬೇಕೆನ್ನುವ ಅಂಶವನ್ನು ಕಂಡುಕೊಂಡ ನಂತರವೇ ಇಂಗ್ಲೆಂಡ್​ ಆಸ್ಟ್ರೇಲಿಯಾ ವಿಸುದ್ಧ ನಡೆಯುವ ಸರಣಿಯನ್ನು ಗೆಲ್ಲುವ ಬಗ್ಗೆ ಯೋಚಿಸಲಾರಂಭಿಸಬೇಕು ಎಂದು ಅವರು ಹೇಳಿದ್ದಾರೆ.

‘ಈ ಎರಡು ಪಿಚ್​ಗಳ ಮೇಲೆ ಇಂಗ್ಲೆಂಡ್ ಹೆಣಗಾಡಿದ್ದು ನಿಜವಾದರೂ, ಉತ್ತಮ ಪಿಚ್​ಗಳ ಮೇಲೆ ಅಡುವುದನ್ನು ಅದು ಮುಂದುವರಿಸಬೇಕು. ಟೀಮಿನ ಹೆಡ್​ ಕೋಚ್ ಕ್ರಿಸ್​ ಸಿಲ್ವರ್​ವುಡ್​ ಇದನ್ನೇ ಬಯಸಿದ್ದಾರೆ. ಭಾರತದ ವಿರುದ್ಧ ಹಸಿರು ಹಾಸಿನ ಪಿಚ್​ಗಳ ಮೇಲೆ ಆಡಿ ಒಂದೆರಡು ಟೆಸ್ಟ್​ಗಳನ್ನು ಗೆದ್ದರೆ ಇಂಗ್ಲೆಂಡ್​ಗೆ ಏನೂ ಪ್ರಯೋಜನವಾಗದು. ಅವರು ಌಶಸ್ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಮಣಿಸುವ ಬಗ್ಗೆ ಅಲೋಚಿಸಬೇಕಿದೆ. ಉತ್ತಮ ಪಿಚ್​ಗಳ ಮೇಲೆ ಚೆನ್ನಾಗಿ ಆಡಿ ಗೆಲ್ಲುವ ಅಂಶವನ್ನು ಅವರು ಕಂಡುಕೊಳ್ಳಬೇಕು,’ ಎಂದು ವಾನ್ ಹೇಳಿದ್ದಾರೆ.

‘ಕಳೆದ ಕೆಲವು ವಾರಗಳಲ್ಲಿ ಇಂಗ್ಲೆಂಡ್​ ಆಡಿರೋದು ಟೆಸ್ಟ್​ ಕ್ರಿಕೆಟ್​ ಅತ್ಯಂತ ಸೂಕ್ತವಾದ ಪಿಚ್​ಗಳ ಮೇಲೆ. ಉತ್ತಮ ಆಟ ಪ್ರದರ್ಶಿಸಿದ ಟೀಮ್ ಟೆಸ್ಟ್ ಮತ್ತು ಸರಣಿಗಳನ್ನು ಗೆದ್ದುಕೊಂಡಿತು. ತಾನು ಉತ್ತಮವಾಗಿ ಆಡಿಲ್ಲ ಎಂಬ ಅಂಶವನ್ನು ಇಂಗ್ಲೆಂಡ್​ ಮನಗಾಣಬೇಕಿದೆ. ಈಗಿನ ಇಂಗ್ಲಿಷ್ ತಂಡ ಆಸ್ಟ್ರೇಲಿಯವನ್ನು ಅದರೆ ನೆಲದಲ್ಲೇ ಮಣಿಸುವ ಯೋಚನೆ ನಿಜವಾಗಬೇಕಾದರೆ ಅದರ ಒಟ್ಟಾರೆ ಪ್ರದರ್ಶನದ ಮಟ್ಟ ಬಹಳಷ್ಟು ಸುಧಾರಿಸಬೇಕಿದೆ,’ ಎಂದು ವಾನ್​ ಹೇಳಿದ್ದಾರೆ.

ಇದನ್ನೂ ಓದಿ: India vs England Test Series: ನಿವೃತ್ತರಾಗುವ ಹೊತ್ತಿಗೆ ಅಶ್ವಿನ್ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಎನಿಸಿಕೊಳ್ಳಲಿದ್ದಾರೆ: ಕೆವಿನ್ ಪೀಟರ್ಸನ್

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ