AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನರೇಂದ್ರ, ನರೇಂದ್ರ, ನರೇಂದ್ರ..; ಈ ಹೆಸರು ನನಗೆ ಸ್ವಲ್ಪನೂ ಇಷ್ಟವಿಲ್ಲ ಎಂದ ಪಾಕ್ ಬಾಕ್ಸರ್

PM Modi Meets CWG Medalists; ಪ್ರಧಾನಿ ಮೋದಿ ಪದಕ ವಿಜೇತ ಕ್ರೀಡಾಪಟುಗಳನ್ನು ಭೇಟಿಯಾದರು. ಈ ವೇಳೆ ಬಾಕ್ಸರ್ ನರೇಂದ್ರ ಬರ್ವಾಲ್ 2015ರ ವಿಶ್ವ ಮಿಲಿಟರಿ ಕ್ರೀಡಾಕೂಟದಲ್ಲಿ ಪಾಕಿಸ್ತಾನಿ ಬಾಕ್ಸರ್ ಜೊತೆಗಿನ ಹಾಸ್ಯಮಯ ಸಂಭಾಷಣೆಯನ್ನು ಹಂಚಿಕೊಂಡರು. 'ನಿಮ್ಮ ಹೆಸರು ನರೇಂದ್ರ, ಕೋಚ್ ನರೇಂದ್ರ, ಪ್ರಧಾನಿ ನರೇಂದ್ರ. ನನಗೆ ಈ ಹೆಸರೇ ಇಷ್ಟವಿಲ್ಲ' ಎಂದು ಪಾಕ್ ಬಾಕ್ಸರ್ ಹೇಳಿದ್ದನ್ನು ಕೇಳಿ ಪ್ರಧಾನಿ ಸೇರಿದಂತೆ ಎಲ್ಲರೂ ನಗೆಗಡಲಲ್ಲಿ ತೇಲಿದರು. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದ ಬರ್ವಾಲ್ ಭಾರತದ ಕೀರ್ತಿ ಹೆಚ್ಚಿಸಿದ್ದರು.

ನರೇಂದ್ರ, ನರೇಂದ್ರ, ನರೇಂದ್ರ..; ಈ ಹೆಸರು ನನಗೆ ಸ್ವಲ್ಪನೂ ಇಷ್ಟವಿಲ್ಲ ಎಂದ ಪಾಕ್ ಬಾಕ್ಸರ್
Narender Berwal
ಪೃಥ್ವಿಶಂಕರ
|

Updated on: Aug 10, 2026 | 3:58 PM

Share

2026 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ (Commonwealth Games) ಭಾರತದ ಸ್ಪರ್ಧಿಗಳು ಅದ್ಭುತ ಪ್ರದರ್ಶನ ನೀಡಿದರು. ಅನೇಕ ಪ್ರಮುಖ ಕ್ರೀಡೆಗಳ ಅನುಪಸ್ಥಿತಿಯ ಹೊರತಾಗಿಯೂ, ಭಾರತೀಯ ಆಟಗಾರರು 39 ಪದಕಗಳನ್ನು ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದರು. ಪದಕ ವಿಜೇತರಿಗೆ ದೇಶದಲ್ಲಿ ಅದ್ಧೂರಿ ಸ್ವಾಗತ ಕೂಡ ನೀಡಲಾಯಿತು. ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದವರನ್ನು ದೇಶದ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಭೇಟಿ ಮಾಡಿದರು. ಈ ಸಮಯದಲ್ಲಿ ಕ್ರೀಡಾಪಟುಗಳು ಪ್ರಧಾನಿಯೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಇದೇ ವೇಳೆ ಬಾಕ್ಸರ್ ನರೇಂದ್ರ ಬರ್ವಾಲ್ ( Narender Berwal) ಹಂಚಿಕೊಂಡ ಪಾಕಿಸ್ತಾನಿ ಬಾಕ್ಸರ್ ಜೊತೆಗಿನ ಸಂವಾದ ಅಲ್ಲಿದವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು.

ಪಾಕ್ ಬಾಕ್ಸರ್ ವಿರುದ್ಧ ಸ್ಪರ್ಧೆ

2015 ರಲ್ಲಿ ನಡೆದ ವಿಶ್ವ ಮಿಲಿಟರಿ ಕ್ರೀಡಾಕೂಟದಲ್ಲಿ ಪಾಕಿಸ್ತಾನಿ ಬಾಕ್ಸರ್ ಜೊತೆಗಿನ ಪಂದ್ಯ ಹಾಗೂ ಸಮಯದಲ್ಲಿ ಇಬ್ಬರ ನಡುವೆ ನಡೆದ ಮಾತುಕತೆಯ ವಿವರನ್ನು ಪ್ರಧಾನಿಯವರೊಂದಿಗೆ ನರೇಂದ್ರ ಬರ್ವಾಲ್ ಹಂಚಿಕೊಂಡರು. ಸರ್, ‘2015 ರಲ್ಲಿ ನಡೆದ ವಿಶ್ವ ಮಿಲಿಟರಿ ಕ್ರೀಡಾಕೂಟದಲ್ಲಿ ನನ್ನ ಮೊದಲ ಸುತ್ತಿನ ಪಂದ್ಯ ಪಾಕಿಸ್ತಾನದ ವಿರುದ್ಧವಾಗಿತ್ತು. ನೀನು ಪಾಕಿಸ್ತಾನಿ ಬಾಕ್ಸರ್ ಎದುರು ಸೋಲುವಂತಿಲ್ಲ ಎಂದು ನನಗೆ ನನ್ನ ಮಿಲಿಟರಿ ಸಹೋದ್ಯೋಗಿಗಳು ಎಚ್ಚರಿಸಿದ್ದರು. ಅದರಂತೆ ನಾನು ಆ ಪಂದ್ಯವನ್ನು ಗೆದ್ದೆ. ಆದರೆ ಆ ಪಂದ್ಯದ ಸಮಯದಲ್ಲಿ ಇಬ್ಬರಿಗೂ ಗಾಯಗಳಾಗಿದ್ದವು. ಆ ಗಾಯಗಳಿಗೆ ಹೊಲಿಗೆಗಳನ್ನು ಹಾಕಿಸಿಕೊಳ್ಳಲು ಇಬ್ಬರು ಆಸ್ಪತ್ರೆಗೆ ತೆರಳಿದ್ದವು

ನರೇಂದ್ರ ಹೆಸರು ನನಗೆ ಇಷ್ಟವಿಲ್ಲ; ಪಾಕ್ ಬಾಕ್ಸರ್

ಇದೇ ವೇಳೆ ನನ್ನ ಜೊತೆ ಮಾತನಾಡಿದ ಪಾಕಿಸ್ತಾನಿ ಬಾಕ್ಸರ್, ‘ಬಾಯ್ ನಿಮ್ಮ ಹತ್ತಿರ ಒಂದು ಮಾತು ಹೇಳಲ, ಆಪ್ಕಾ ನಾಮ್ ನರೇಂದರ್ ಹೈ, ಆಪ್ಕೆ ಕೋಚ್ ಕಾ ನಾಮ್ ನರೇಂದರ್ ಹೈ, ಆಪ್ಕೆ ಪ್ರಧಾನ ಮಂತ್ರಿ ಕಾ ನಾಮ್ ನರೇಂದ್ರ ಹೈ. ಮುಝೆ ನರೇಂದ್ರ ನಾಮ್ ಸೆ ನಫ್ರತ್ ಹೋ ಗಯಿ ಹೈ’ (ನಿಮ್ಮ ಹೆಸರು ನರೇಂದ್ರ, ನಿಮ್ಮ ತರಬೇತುದಾರರ ಹೆಸರು ನರೇಂದ್ರ, ನಿಮ್ಮ ಪ್ರಧಾನಿಯ ಹೆಸರು ನರೇಂದ್ರ. ನನಗೆ ಈ ನರೇಂದ್ರ ಎಂಬ ಹೆಸರು ಇಷ್ಟವಿಲ್ಲ) ಎಂದಿದ್ದ’ ಎಂಬುದನ್ನು ಪ್ರಧಾನಿ ಮುಂದೆ ವಿವರಿಸಿದರು. ಇದನ್ನು ಕೇಳಿದೊಡನೆ ಪ್ರಧಾನಿ ಜೊತೆಗೆ ಅಲ್ಲಿ ನೆರೆದಿದ್ದ ಇತರ ಪದಕ ವಿಜೇತರು ನಗೆಗಡಲಲ್ಲಿ ತೇಲಿದರು.

ಬೆಳ್ಳಿ ಪದಕ ಗೆದ್ದ ಬೆರ್ವಾಲ್

2026 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ 90 ಕೆಜಿ ವಿಭಾಗದಲ್ಲಿ ಬಾಕ್ಸರ್ ಬೆರ್ವಾಲ್ ಬೆಳ್ಳಿ ಪದಕ ಗೆದ್ದರು. ಇಂಗ್ಲೆಂಡ್‌ನ ಡಮರ್ ಥಾಮಸ್ ವಿರುದ್ಧದ ಚಿನ್ನದ ಪದಕ ಪಂದ್ಯದಲ್ಲಿ 0-5 ಅಂತರದಿಂದ ಸೋತ ಬೆರ್ವಾಲ್ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಈ ಮೂಲಕ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ 10 ನೇ ಪದಕವನ್ನು ಗೆದ್ದುಕೊಟ್ಟರು. ಇನ್ನು ಬಾಕ್ಸಿಂಗ್‌ನಲ್ಲಿ ಭಾರತದ ಪ್ರದರ್ಶನ ಅಮೋಘವಾಗಿತ್ತು. ಈ ಸ್ಪರ್ಧೆಯಲ್ಲಿ ಭಾರತ ಏಳು ಚಿನ್ನ ಮತ್ತು ಮೂರು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸ್ಟಾರ್ ಹೋಟೆಲ್​​​​​ ಬೆನ್ನಲ್ಲೇ ಕಾಸ್ಮೆಟಿಕ್ಸ್ ಅಂಗಡಿಗಳ ಮೇಲೆ ದಾಳಿ
ಸ್ಟಾರ್ ಹೋಟೆಲ್​​​​​ ಬೆನ್ನಲ್ಲೇ ಕಾಸ್ಮೆಟಿಕ್ಸ್ ಅಂಗಡಿಗಳ ಮೇಲೆ ದಾಳಿ
ಬೆಂಗಳೂರಲ್ಲಿ 105 ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಪತ್ತೆ
ಬೆಂಗಳೂರಲ್ಲಿ 105 ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಪತ್ತೆ
ಪ್ರಾಯಶ್ಚಿತ್ತ ಯಾತ್ರೆ ಅನ್ನೋರಿಗೆ ದೇವೇಗೌಡರಿಂದ ತಿರುಗೇಟು!
ಪ್ರಾಯಶ್ಚಿತ್ತ ಯಾತ್ರೆ ಅನ್ನೋರಿಗೆ ದೇವೇಗೌಡರಿಂದ ತಿರುಗೇಟು!
ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್ ಸೇರಿ 6 ಆರೋಪಿಗಳು ವಿಚಾರಣೆಗೆ ಹಾಜರು
ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್ ಸೇರಿ 6 ಆರೋಪಿಗಳು ವಿಚಾರಣೆಗೆ ಹಾಜರು
ಶಿವಗಂಗೆ ಬೆಟ್ಟದಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್!
ಶಿವಗಂಗೆ ಬೆಟ್ಟದಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್!
ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ಹರ್ ಘರ್ ತಿರಂಗಾ ಯಾತ್ರೆ
ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ಹರ್ ಘರ್ ತಿರಂಗಾ ಯಾತ್ರೆ
ಮಡಿಕೇರಿಯ ಸ್ಟೋನ್ ಹಿಲ್‌ನಲ್ಲಿ ಭೂಕುಸಿತ
ಮಡಿಕೇರಿಯ ಸ್ಟೋನ್ ಹಿಲ್‌ನಲ್ಲಿ ಭೂಕುಸಿತ
ಬೆಂಗಳೂರಿಗರೇ ಎಚ್ಚರ: ಮನೆಗೆ ಕನ್ನ ಹಾಕಲು ಎಂಟ್ರಿ ಕೊಟ್ಟಿದೆ ಚಡ್ಡಿ ಗ್ಯಾಂಗ್
ಬೆಂಗಳೂರಿಗರೇ ಎಚ್ಚರ: ಮನೆಗೆ ಕನ್ನ ಹಾಕಲು ಎಂಟ್ರಿ ಕೊಟ್ಟಿದೆ ಚಡ್ಡಿ ಗ್ಯಾಂಗ್
ರಾಧಿಕಾ ಪಂಡಿತ್ ಯಶ್ ಅವರ ಅತಿ ದೊಡ್ಡ ಶಕ್ತಿ; ನಯನತಾರಾ ಭಾವುಕ ಮಾತು
ರಾಧಿಕಾ ಪಂಡಿತ್ ಯಶ್ ಅವರ ಅತಿ ದೊಡ್ಡ ಶಕ್ತಿ; ನಯನತಾರಾ ಭಾವುಕ ಮಾತು
ಅಧಿವೇಶನಕ್ಕೂ ಮುನ್ನ ಖಾತೆ ಹಂಚಿಕೆಯಾಗದಿದ್ರೆ ಏನ್ಮಾಡ್ತಾರಂತೆ ಡಿಕೆಶಿ!
ಅಧಿವೇಶನಕ್ಕೂ ಮುನ್ನ ಖಾತೆ ಹಂಚಿಕೆಯಾಗದಿದ್ರೆ ಏನ್ಮಾಡ್ತಾರಂತೆ ಡಿಕೆಶಿ!