AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ವೀಟ್​ಗಳು ಸೂಕ್ತವಲ್ಲ ಮತ್ತು ದಾರಿತಪ್ಪಿಸುತ್ತವೆ: ಬೋಪಣ್ಣ, ಸಾನಿಯಾ ಮಿರ್ಝಾ ಟ್ವೀಟ್​ಗೆ ಎಐಟಿಎ ಖಂಡನೆ

ರೋಹನ್ ಬೋಪಣ್ಣ ಐಟಿಎಫ್ ನಿಯಮಗಳ ಪ್ರಕಾರ ಅರ್ಹತೆ ಪಡೆಯಲಾರರು. ಆದ್ದರಿಂದ ಸಾನಿಯಾ ಮಿರ್ಝಾ ಅವರ ಟ್ವೀಟ್ ಕೂಡ ಆಧಾರರಹಿತವಾಗಿದೆ ಹಾಗೂ  ಅವರ ಅಭಿಪ್ರಾಯ ಖಂಡನೀಯ ಎಂದು ಎಐಟಿಎ ತಿಳಿಸಿದೆ.

ಟ್ವೀಟ್​ಗಳು ಸೂಕ್ತವಲ್ಲ ಮತ್ತು ದಾರಿತಪ್ಪಿಸುತ್ತವೆ: ಬೋಪಣ್ಣ, ಸಾನಿಯಾ ಮಿರ್ಝಾ ಟ್ವೀಟ್​ಗೆ ಎಐಟಿಎ ಖಂಡನೆ
Rohan Bopanna, Sania Mirza
TV9 Web
| Updated By: Vinay Bhat|

Updated on: Jul 20, 2021 | 11:06 AM

Share

ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ) ಟೋಕಿಯೊ ಒಲಿಂಪಿಕ್ಸ್‌ಗೆ (Tokyo Olympics) ಆಟಗಾರರ ಅರ್ಹತೆ ಕುರಿತು ಟೆನಿಸ್ ತಾರೆಯರಾದ ರೋಹನ್ ಬೋಪಣ್ಣ ಹಾಗೂ  ಸಾನಿಯಾ ಮಿರ್ಝಾ (Rohan Bopanna and Sania Mirza) ಅವರು ಮಾಡಿದ್ದ ಟ್ವೀಟ್‌ಗಳನ್ನು ಖಂಡಿಸಿದೆ. ಒಲಿಂಪಿಕ್ಸ್  ಅರ್ಹತೆಯ ಬಗ್ಗೆ ಎಐಟಿಎ ಆಟಗಾರರನ್ನು ದಾರಿತಪ್ಪಿಸುತ್ತಿದೆ ಎನ್ನುವ ಟೆನಿಸ್ ತಾರೆಯರ ಆರೋಪವನ್ನು  ಎಐಟಿಎ ನಿರಾಕರಿಸಿದ್ದು, ಇವರು ಮಾಡಿದ ಟ್ವೀಟ್​ಗಳು ಸೂಕ್ತವಲ್ಲ ಮತ್ತು ಇದು ದಾರಿತಪ್ಪಿಸುತ್ತವೆ ಎಂದು ಹೇಳಿದೆ.

ಭಾರತ ಖ್ಯಾತ ಟೆನಿಸ್ ಆಟಗಾರ ರೋಹನ್ ಬೋಪಣ್ಣ, ಆಟಗಾರರು, ಸರಕಾರ, ಮಾಧ್ಯಮ ಹಾಗೂ  ಎಲ್ಲರನ್ನೂ ಎಐಟಿಎ ದಾರಿ ತಪ್ಪಿಸಿದೆ ಟ್ವೀಟ್ ಮಾಡಿದ್ದರು. ನಾಮನಿರ್ದೇಶನಗೊಂಡಿರುವ ಬೋಪಣ್ಣ-ದಿವಿಜ್ ಶರಣ್ ಬದಲಿಗೆ ಬೋಪಣ್ಣ ಹಾಗೂ  ಸುಮಿತ್ ನಾಗಲ್ ಅವರಿಗೆ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ಅವಕಾಶವಿದೆ ಎಂದು ಹೇಳುವ ಮೂಲಕ ಎಐಟಿಎ ಆಟಗಾರರನ್ನು “ದಾರಿ ತಪ್ಪಿಸಿದೆ” ಎಂದು ಸೋಮವಾರ ಬೋಪಣ್ಣ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದರು.

ಬೋಪಣ್ಣ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸಾನಿಯಾ, ಏನಿದು? ಇದು ನಿಜವಾಗಿದ್ದರೆ ಅದು ಸಂಪೂರ್ಣವಾಗಿ ಹಾಸ್ಯಾಸ್ಪದ ಹಾಗೂ ನಾಚಿಕೆಗೇಡಿನ ಸಂಗತಿ. ನಾವು ಮಿಶ್ರ ಡಬಲ್ಸ್ ನಲ್ಲಿ ಪದಕ ಗೆಲ್ಲುವಂತಹ ಉತ್ತಮ ಅವಕಾಶವನ್ನು ತ್ಯಾಗ ಮಾಡಿದ್ದೇವೆ ಎಂದು ಟ್ವೀಟ್ ಮಾಡಿದ್ದರು.

ಅವರ ಟ್ವಿಟರ್ ಕಾಮೆಂಟ್‌ಗಳು ಸೂಕ್ತವಲ್ಲ, ಅವು ದಾರಿತಪ್ಪಿಸುವಂತಿವೆ ಮತ್ತು ಅವರಿಗೆ ನಿಯಮಗಳ ಅರಿವಿಲ್ಲದಿರುವುದನ್ನು ತೋರಿಸುತ್ತದೆ. ವಾಸ್ತವ ಸಂಗತಿಯೆಂದರೆ ಭಾರತದ ಅತ್ಯುತ್ತಮ ಪ್ರವೇಶವೆಂಬ ಕಾರಣಕ್ಕೆ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಹೆಸರನ್ನು ಕಳುಹಿಸಲಾಗಿತ್ತು, ಇದು ಸರಿಯಾದ ನಿರ್ಧಾರವಾಗಿತ್ತು. ಆದರೆ, ಇಬ್ಬರೂ ಐಟಿಎಫ್ ನಿಯಮಗಳ ಪ್ರಕಾರ ಅರ್ಹತೆ ಪಡೆಯಲಿಲ್ಲ  ಎಐಟಿಎ ಹೇಳಿಕೆಯೊಂದರಲ್ಲಿ ತಿಳಿಸಿದೆ.

ರೋಹನ್ ಬೋಪಣ್ಣ ಐಟಿಎಫ್ ನಿಯಮಗಳ ಪ್ರಕಾರ ಅರ್ಹತೆ ಪಡೆಯಲಾರರು. ಆದ್ದರಿಂದ ಸಾನಿಯಾ ಮಿರ್ಝಾ ಅವರ ಟ್ವೀಟ್ ಕೂಡ ಆಧಾರರಹಿತವಾಗಿದೆ ಹಾಗೂ  ಅವರ ಅಭಿಪ್ರಾಯ ಖಂಡನೀಯ ಎಂದು ಎಐಟಿಎ ತಿಳಿಸಿದೆ.

IND vs SL: ಯುಜ್ವೇಂದ್ರ ಚಹಲ್ ಮೇಲೆ ಎಲ್ಲರ ಕಣ್ಣು: ಹೊಸ ದಾಖಲೆ ಬರೆಯುವತ್ತ ಟೀಮ್ ಇಂಡಿಯಾ ಸ್ಪಿನ್ನರ್

ಭಾರತ ಟಿ-20 ವಿಶ್ವಕಪ್​ ಗೆಲ್ಲಬೇಕಾದರೆ ಇಂಥಹ ಆಟಗಾರರು ತಂಡದಲ್ಲಿರಬೇಕು ಎಂದ ಹರ್ಭಜನ್

(Indian Tennis Association Condemns Rohan Bopanna and Sania Mirza Tweets On Tokyo Games Qualification)

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು