Tokyo Olympics: ವಿಶ್ವದ ನಂ.1 ಆಟಗಾರ ಜೊಕೊವಿಕ್ ಚಿನ್ನ ಗೆಲ್ಲುವ ಕನಸು ಭಗ್ನ: ನೊವಾಕ್ ಮಣಿಸಿ ಫೈನಲ್​ ಪ್ರವೇಶಿಸಿದ ಅಲೆಕ್ಸಾಂಡರ್ ಜ್ವೆರೆವ್

Tokyo Olympics: ಪುರುಷರ ಸಿಂಗಲ್ಸ್ ಸೆಮಿಫೈನಲ್​ನಲ್ಲಿ, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಜೊಕೊವಿಚ್ ಅವರನ್ನು 1-6, 6-3, 6-1ರಿಂದ ಮೂರು ಸೆಟ್​ಗಳ ಪಂದ್ಯದಲ್ಲಿ ಸೋಲಿಸಿ ತನ್ನ ಮೊದಲ ಒಲಿಂಪಿಕ್ ಫೈನಲ್ ತಲುಪಿದರು.

Tokyo Olympics: ವಿಶ್ವದ ನಂ.1 ಆಟಗಾರ ಜೊಕೊವಿಕ್ ಚಿನ್ನ ಗೆಲ್ಲುವ ಕನಸು ಭಗ್ನ: ನೊವಾಕ್ ಮಣಿಸಿ ಫೈನಲ್​ ಪ್ರವೇಶಿಸಿದ ಅಲೆಕ್ಸಾಂಡರ್ ಜ್ವೆರೆವ್
ಅಲೆಕ್ಸಾಂಡರ್ ಜ್ವೆರೆವ್, ಜೊಕೊವಿಚ್
Follow us
| Updated By: ಪೃಥ್ವಿಶಂಕರ

Updated on:Jul 30, 2021 | 4:10 PM

ಟೋಕಿಯೊ ಒಲಿಂಪಿಕ್ಸ್ 2020 ಒಂದರ ನಂತರ ಒಂದರಂತೆ ಅನೇಕ ಆಶ್ಚರ್ಯಕಾರಿ ಮತ್ತು ಆಘಾತಕಾರಿ ಫಲಿತಾಂಶಗಳನ್ನು ನೀಡುತ್ತಿದೆ. ವಿಶೇಷವಾಗಿ ಟೆನಿಸ್ ಕೋರ್ಟ್ ಅತ್ಯಂತ ಆಶ್ಚರ್ಯಕರ ಫಲಿತಾಂಶಗಳನ್ನು ನೀಡಿದೆ. ಸೆಮಿಫೈನಲ್‌ನಲ್ಲಿ ವಿಶ್ವದ ಪ್ರಥಮ ಪುರುಷ ಟೆನಿಸ್ ಆಟಗಾರ ಸೆರ್ಬಿಯಾದ ನೊವಾಕ್ ಜೊಕೊವಿಕ್ ಸೋಲನುಭವಿಸಿದ್ದಾರೆ. ಪುರುಷರ ಸಿಂಗಲ್ಸ್ ಸೆಮಿಫೈನಲ್​ನಲ್ಲಿ, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಜೊಕೊವಿಚ್ ಅವರನ್ನು 1-6, 6-3, 6-1ರಿಂದ ಮೂರು ಸೆಟ್​ಗಳ ಪಂದ್ಯದಲ್ಲಿ ಸೋಲಿಸಿ ತನ್ನ ಮೊದಲ ಒಲಿಂಪಿಕ್ ಫೈನಲ್ ತಲುಪಿದರು. ಇದರೊಂದಿಗೆ, ‘ಗೋಲ್ಡನ್ ಸ್ಲ್ಯಾಮ್’ ಪೂರ್ಣಗೊಳಿಸುವ ಜೊಕೊವಿಕ್ ಅವರ ಕನಸು ಈಡೇರಲಿಲ್ಲ. ಫೈನಲ್‌ನಲ್ಲಿ ಜ್ವೆರೆವ್ ರಷ್ಯಾದ ಒಲಿಂಪಿಕ್ ಸಮಿತಿ ಆಟಗಾರ ಕರೆನ್ ಖಚನೋವ್ ಅವರನ್ನು ಎದುರಿಸಲಿದ್ದಾರೆ.

ಈ ವರ್ಷ ಒಲಿಂಪಿಕ್ಸ್‌ಗೆ ಮೊದಲು ನಡೆದ ಮೂರು ಗ್ರ್ಯಾಂಡ್ ಸ್ಲ್ಯಾಮ್‌ಗಳಲ್ಲಿ ಪ್ರಶಸ್ತಿಯನ್ನು ಗೆದ್ದ ಜೊಕೊವಿಕ್ ಯಾವುದೇ ಪ್ರಮುಖ ಪಂದ್ಯವನ್ನು ಕಳೆದುಕೊಂಡಿರಲಿಲ್ಲ. ಅವರು ಮೊದಲ ಬಾರಿಗೆ ಸಿಂಗಲ್ಸ್ ಚಿನ್ನ ಗೆಲ್ಲುವ ಉದ್ದೇಶದಿಂದ ಒಲಿಂಪಿಕ್ಸ್‌ಗೆ ಪ್ರವೇಶಿಸಿದರು ಮತ್ತು ಅತ್ಯುತ್ತಮ ಫಾರ್ಮ್‌ನಲ್ಲಿದ್ದರು. ಟೋಕಿಯೊದಲ್ಲಿ ಪಂದ್ಯಗಳು ಆರಂಭವಾದಾಗಿನಿಂದ ಸೆಮಿಫೈನಲ್‌ವರೆಗೂ ಉತ್ತಮವಾಗಿ ಕಾಣುತ್ತಿದ್ದ ಜೊಕೊವಿಚ್ ತನ್ನ ಪ್ರತಿಸ್ಪರ್ಧಿಗಳನ್ನು ಸುಲಭವಾಗಿ ಸೋಲಿಸಿ ಸೆಮಿಫೈನಲ್‌ಗೆ ತಲುಪಿದ್ದರು.

ಜೊಕೊವಿಚ್ ತನ್ನ ಆಕ್ರಮಣಕಾರಿ ಶೈಲಿಯನ್ನು ಮೊದಲ ಸೆಟ್ ನಲ್ಲಿ ತೋರಿಸಿದರು ಮತ್ತು ಜ್ವೆರೆವ್ ಅವರನ್ನು 6-1ಅಂತರದಿಂದ ಸೋಲಿಸಿದರು. ಜ್ವೆರೆವ್ ಈ ಸೆಟ್ನಲ್ಲಿ ಚೇತರಿಸಿಕೊಳ್ಳುವ ಅವಕಾಶವನ್ನು ಸಹ ಪಡೆಯಲಿಲ್ಲ. ಆದರೆ ಅವರು ಎರಡನೇ ಸೆಟ್ನಲ್ಲಿ ಬಲವಾದ ಪುನರಾಗಮನ ಮಾಡಿದರು. ಜರ್ಮನಿಯ ಯುವ ಆಟಗಾರ ಜೊಕೊವಿಚ್ ಸರ್ವ್ ಮುರಿದು 6-3 ಸೆಟ್ ಗೆದ್ದು ಪಂದ್ಯದ ಫಲಿತಾಂಶವನ್ನು ಅಂತಿಮ ಸೆಟ್ ಗೆ ಕೊಂಡೊಯ್ದರು. ಇಲ್ಲಿ ಜ್ವೆರೆವ್ ಸಂಪೂರ್ಣವಾಗಿ ವಿಭಿನ್ನ ರೂಪದಲ್ಲಿ ಕಾಣಿಸಿಕೊಂಡರು. ಜೊಕೊವಿಚ್ ಅವರ ಮೊದಲ ಎರಡು ಸರ್ವ್‌ಗಳನ್ನು ಮುರಿದು 4-0 ಮುನ್ನಡೆ ಸಾಧಿಸಿದರು. ಜೊಕೊವಿಚ್‌ಗೆ ಹೆಚ್ಚಿನ ಪುನರಾಗಮನದ ಅವಕಾಶವಿರಲಿಲ್ಲ ಮತ್ತು ಜ್ವೆರೆವ್ ಕೊನೆಯ ಸೆಟ್‌ನಲ್ಲಿ 6-1 ಅಂತರದಿಂದ ಜಯಗಳಿಸಿ ಎಲ್ಲರನ್ನು ಅಚ್ಚರಿಗೊಳಿಸಿದರು.

Published On - 3:53 pm, Fri, 30 July 21

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ