AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC Final: ಡಬ್ಲ್ಯೂಟಿಸಿ ಫೈನಲ್​ಗೆ ವರುಣನ ಅಡ್ಡಿ, ಸೌತಾಂಪ್ಟನ್‌ನಲ್ಲಿ ನಿಲ್ಲದ ಮಳೆ! ಮೊದಲ ದಿನದ ಆಟ ಸ್ಥಗಿತ

WTC Final: ಸೌತಾಂಪ್ಟನ್‌ನಲ್ಲಿ ನಿರಂತರ ಮಳೆಯಿಂದಾಗಿ, ಟಾಸ್ ಅಥವಾ ಮೊದಲ ಸೆಷನ್ ಆಡಲಾಗಲಿಲ್ಲ. ನಿರಂತರ ಮಳೆಯಿಂದಾಗಿ ಮೊದಲ ದಿನದ ಆಟವನ್ನು ರದ್ದುಗೊಳಿಸಿ ಆಡಳಿತ ಮಂಡಳಿ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ.

WTC Final: ಡಬ್ಲ್ಯೂಟಿಸಿ ಫೈನಲ್​ಗೆ ವರುಣನ ಅಡ್ಡಿ, ಸೌತಾಂಪ್ಟನ್‌ನಲ್ಲಿ ನಿಲ್ಲದ ಮಳೆ! ಮೊದಲ ದಿನದ ಆಟ ಸ್ಥಗಿತ
ಪೃಥ್ವಿಶಂಕರ
|

Updated on:Jun 18, 2021 | 7:58 PM

Share

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ 2021 ರಲ್ಲಿ ಭಾರತ ಮತ್ತು ನ್ಯೂಜಿಲೆಂಡ್ (ಭಾರತ ವಿರುದ್ಧ ನ್ಯೂಜಿಲೆಂಡ್) ಮುಖಾಮುಖಿಯಾಗಿದೆ. ಮಳೆಯಿಂದಾಗಿ ಮೊದಲ ದಿನದ ಆಟವು ಕೆಟ್ಟ ಪರಿಣಾಮ ಬೀರಿದೆ. ಹೀಗಾಗಿ ಮೊದಲ ದಿನದ ಆಟವನ್ನು ಆಡಳಿತ ಮಂಡಳಿ ಸ್ಥಗಿತಗೊಳಿಸಿದೆ. ಸೌತಾಂಪ್ಟನ್‌ನಲ್ಲಿ ನಿರಂತರ ಮಳೆಯಿಂದಾಗಿ, ಟಾಸ್ ಅಥವಾ ಮೊದಲ ಸೆಷನ್ ಆಡಲಾಗಲಿಲ್ಲ. ಆಟಗಾರರು ಮತ್ತು ಅಭಿಮಾನಿಗಳು ಎಲ್ಲರೂ ಮಳೆ ನಿಲ್ಲುವವರೆಗೆ ಕಾಯುತ್ತಿದ್ದರು. ಆದರೆ ನಿರಂತರ ಮಳೆಯಿಂದಾಗಿ ಮೊದಲ ದಿನದ ಆಟವನ್ನು ರದ್ದುಗೊಳಿಸಿ ಆಡಳಿತ ಮಂಡಳಿ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ.

ನಾಳೆ ಭಾರತದ ಕಾಲಮಾನದ ಪ್ರಕಾರ 3 ಗಂಟೆಗೆ ಆಟ ಪ್ರಾರಂಭ ಈ ಬಗ್ಗೆ ಬಿಸಿಸಿಐ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ದುರದೃಷ್ಟವಶಾತ್, ಮಳೆಯಿಂದಾಗಿ ಮೊದಲ ದಿನದ ಆಟವನ್ನು ರದ್ದುಪಡಿಸಲಾಗಿದೆ. ನಾಳೆ ಸ್ಥಳೀಯ ಸಮಯ ಬೆಳಿಗ್ಗೆ 10.30 ಕ್ಕೆ (ಭಾರತದ ಕಾಲಮಾನದ ಪ್ರಕಾರ 3 ಗಂಟೆ) ಆಟ ಪ್ರಾರಂಭವಾಗಲಿದೆ. ಜೂನ್ 18 ರಂದು ನಿರಂತರವಾಗಿ ಮಳೆಯಾಯಿತು. ಹಿಂದಿನ ದಿನ ಅಂದರೆ ಜೂನ್ 17 ರಂದು ಮಳೆ ರಾತ್ರಿಯಿಡಿ ಸೌತಾಂಪ್ಟನ್ನಲ್ಲಿ ನಿರಂತರವಾಗಿ ಬೀಳುತ್ತಿತ್ತು.ಇದರಿಂದ ಪಿಚ್​ ಕೂಡ ನೀರಿನಿಂದ ತುಂಬಿತ್ತು.

ಈ ನಡುವೆ ಸ್ವಲ್ಪ ಸಮಯ ಮಳೆ ನಿಂತಿತ್ತು. ನಂತರ ನೀರನ್ನು ಮೈದಾನದಿಂದ ಹೊರಹಾಕಲು ಪ್ರಯತ್ನಿಸಲಾಯಿತು. ಇಷ್ಟರಲ್ಲಾಗಲೇ, ಊಟದ ವಿರಾಮವೂ ಮುಗಿದು ಹೋಗಿತ್ತು. ಹೀಗಾಗಿ ಭಾರತೀಯ ಸಮಯ ಸಂಜೆ 7.30 ಕ್ಕೆ ಪಿಚ್​ ಪರೀಕ್ಷಿಸಲು ನಿರ್ಧರಿಸಲಾಯಿತು. ಆದರೆ ಮತ್ತೆ ಮಳೆ ಬರಲಾರಂಭಿಸಿತು. ಹೀಗಾಗಿ ಮೊದಲ ದಿನದ ಆಟ ರದ್ದಾಯಿತು. ಈಗ ಮೊದಲ ದಿನದ ಓವರ್‌ಗಳನ್ನು ಮೀಸಲು ದಿನದಂದು ಮಾಡಬಹುದು. ಮಳೆಯ ಸಾಧ್ಯತೆಯಿಂದಾಗಿ, ಈ ಟೆಸ್ಟ್​ಗೆ ಒಂದು ದಿನವನ್ನು ಕಾಯ್ದಿರಿಸಲಾಗಿದೆ.

ಮಳೆ ಮುಂದುವರಿಯುವ ನಿರೀಕ್ಷೆಯಿದೆ ಮುಂದಿನ ನಾಲ್ಕು ದಿನಗಳಲ್ಲಿ ಪ್ರತಿದಿನ 98 ಓವರ್‌ಗಳನ್ನು ಆಡಲಾಗುವುದು ಎಂದು ಹೇಳಲಾಗಿದೆ. ಇದರ ನಂತರ ಉಳಿದಿರುವ ಓವರ್‌ಗಳು ಮೀಸಲು ದಿನದಂದು ಪೂರ್ಣಗೊಳ್ಳುತ್ತವೆ. ಆದಾಗ್ಯೂ, ಸೌತಾಂಪ್ಟನ್‌ನಲ್ಲಿ ಮಳೆ ಮುಂದುವರಿಯುವ ನಿರೀಕ್ಷೆಯಿರುವುದರಿಂದ ಇದು ಕೂಡ ಕಡಿಮೆ. ಮುಂದಿನ ದಿನಗಳಲ್ಲಿ ನಿರಂತರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ಪಂದ್ಯದ ಫಲಿತಾಂಶದ ಬಗ್ಗೆ ಅನುಮಾನವಿದೆ. ಭಾರತ ಮತ್ತು ನ್ಯೂಜಿಲೆಂಡ್ ಜಂಟಿಯಾಗಿ ಮೊದಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಪಡೆಯುವ ಸಾಧ್ಯತೆ ಇದೆ.

Published On - 7:34 pm, Fri, 18 June 21

ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ