Geomagnetic Storm: ಇಂದು ಅಥವಾ ನಾಳೆ ಭೂಮಿಗೆ ಅಪ್ಪಳಿಸಲಿದೆ ಸೌರ ಚಂಡಮಾರುತ; ಮೊಬೈಲ್​ ಸಿಗ್ನಲ್, ವಿದ್ಯುತ್, ಸ್ಯಾಟಲೈಟ್ ಸಂಪರ್ಕ ಎಲ್ಲವೂ ಕಡಿತ ಸಾಧ್ಯತೆ!

Solar Storm: ಈಗಿನ ಲೆಕ್ಕಾಚಾರದ ಪ್ರಕಾರ ಇಂದು ಅಥವಾ ನಾಳೆ ಅಯಸ್ಕಾಂತೀಯ ಗುಣದ ಈ ಚಂಡಮಾರುತಗಳು (Geomagnetic storm) ಭೂಮಿಗೆ ಬಂದೆರಗುವ ಸಾಧ್ಯತೆ ದಟ್ಟವಾಗಿದೆ.

Geomagnetic Storm: ಇಂದು ಅಥವಾ ನಾಳೆ ಭೂಮಿಗೆ ಅಪ್ಪಳಿಸಲಿದೆ ಸೌರ ಚಂಡಮಾರುತ; ಮೊಬೈಲ್​ ಸಿಗ್ನಲ್, ವಿದ್ಯುತ್, ಸ್ಯಾಟಲೈಟ್ ಸಂಪರ್ಕ ಎಲ್ಲವೂ ಕಡಿತ ಸಾಧ್ಯತೆ!
ಸಾಂಕೇತಿಕ ಚಿತ್ರ
Follow us
| Updated By: Digi Tech Desk

Updated on:Jul 13, 2021 | 1:14 PM

ಭೂಮಂಡಲದತ್ತ ಅತಿ ವೇಗವಾಗಿ ನುಗ್ಗಿ ಬರುತ್ತಿರುವ ಸೌರ ಚಂಡಮಾರುತ (Solar Storm) ಇಂದು (ಜುಲೈ 13, ಮಂಗಳವಾರ) ಅಥವಾ ನಾಳೆ (ಜುಲೈ 14, ಬುಧವಾರ) ಭೂಮಿಗೆ (Earth) ಅಪ್ಪಳಿಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಹಿಂದಿನ ವರದಿಗಳು ಸೌರ ಚಂಡಮಾರುತ ಭಾನುವಾರ ಅಥವಾ ಸೋಮವಾರದಂದೇ ಭೂಮಿಗೆ ಅಪ್ಪಳಿಸಲಿವೆ ಎಂದು ಹೇಳಿದ್ದವು. ಆದರೆ, ಈಗಿನ ಲೆಕ್ಕಾಚಾರದ ಪ್ರಕಾರ ಇಂದು ಅಥವಾ ನಾಳೆ ಅಯಸ್ಕಾಂತೀಯ ಗುಣದ ಈ ಚಂಡಮಾರುತಗಳು (Geomagnetic storm) ಭೂಮಿಗೆ ಬಂದೆರಗುವ ಸಾಧ್ಯತೆ ದಟ್ಟವಾಗಿದೆ. ಇವುಗಳು ಅತಿ ವೇಗದ ಸೌರ ಚಂಡಮಾರುತವಾಗಿದ್ದು, ಗಂಟೆಗೆ 1.6 ದಶಲಕ್ಷ ಕಿ.ಮೀ ವೇಗದಲ್ಲಿ ಧಾವಿಸುತ್ತಿದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಈ ಸೌರ ಚಂಡಮಾರುತ ಭೂಮಿಗೆ ಅಪ್ಪಳಿಸಿದ ದಿನ ಜಗತ್ತಿನಾದ್ಯಾಂತ ವಿದ್ಯುತ್​ ಸಮಸ್ಯೆ ಉಂಟಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸೂರ್ಯನ ವಾತಾವರಣದಲ್ಲಿ ರಂಧ್ರವೊಂದು ತೆರೆಯಲ್ಪಟ್ಟಿದ್ದು, ಅದರ ಮೂಲಕವೇ ಈ ಚಂಡಮಾರುತ ಹೊರಬರುತ್ತಿದೆ ಮತ್ತು ಭೂಮಿಯತ್ತ ಬೀಸುತ್ತಿದೆ ಎಂದು ಸ್ಪೇಸ್​ ವೆದರ್​ ಡಾಟ್​ ಕಾಂ ವೆಬ್​ಸೈಟ್ ವರದಿ ಮಾಡಿದೆ. ಈ ಸೌರ ಚಂಡಮಾರುತ ಉಪಗ್ರಹಗಳ ಸಿಗ್ನಲ್​ಗಳಿಗೂ ಅಡೆತಡೆ ಉಂಟುಮಾಡಲಿದೆ. ಇದರಿಂದಾಗಿ ರೇಡಿಯೋ ಸಿಗ್ನಲ್​ಗಳು, ಸಂವಹನ ಕ್ಷೇತ್ರಕ್ಕೆ ಸಮಸ್ಯೆಯಾಗಲಿದೆ. ಹವಾಮಾನದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ವೆಬ್​ಸೈಟ್​​ನಲ್ಲಿ ವರದಿಯಾಗಿದೆ. ಇಷ್ಟೇ ಅಲ್ಲದೆ, ಭೂಮಿಯ ಕಾಂತಕ್ಷೇತ್ರದ ಪ್ರಾಬಲ್ಯ ಹೆಚ್ಚಿರುವ ಬಾಹ್ಯಾಕಾಶ ಪ್ರದೇಶದ ಮೇಲೆಯೂ ಸೌರಚಂಡಮಾರುತ ಪ್ರಭಾವ ಬೀರಲಿದೆ.

ಸೂರ್ಯನಲ್ಲಿ ನಿರಂತರವಾಗಿ ರಾಸಾಯನಿಕ ಪ್ರಕ್ರಿಯೆಗಳು ಘಟಿಸುವುದರಿಂದ, ಆ ರಾಸಾಯನಿಕ ಪ್ರಕ್ರಿಯೆಗಳಲ್ಲಿ ಏರುಪೇರಾದರೆ ಇಂತಹ ಸೌರ ಅಲೆಗಳು ಚಂಡಮಾರುತದ ರೂಪದಲ್ಲಿ ಏಳುತ್ತವೆ. ಈಗ ಬೀಸುತ್ತಿರುವ ಸೌರ ಚಂಡಮಾರುತದ ವೇಗ ಗಂಟೆಗೆ 1.6 ದಶಲಕ್ಷ ಕಿಮೀ ಇದೆ. ಆದರೆ ಇದು ಇನ್ನೂ ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಅಂದಾಜಿಸಿದೆ. ಇದು ಭೂಮಿಯ ಹೊರಮೈ ವಾತಾವರಣವನ್ನು ಉಷ್ಣಗೊಳಿಸಲಿದ್ದು, ಉಪಗ್ರಹಗಳ ಮೇಲೆ ನೇರ ಪರಿಣಾಮ ಬೀರಲಿದೆ. ಜಿಪಿಸಿಎಸ್​ ನೇವಿಗೇಶನ್​, ಮೊಬೈಲ್​ ಫೋನ್​ ನೆಟ್ವರ್ಕ್​​​, ಸೆಟಲೈಟ್ ಟಿವಿ, ವಿದ್ಯುತ್​ ಲೈನ್​​ಗಳಿಗೆ ಸಮಸ್ಯೆ ಒಡ್ಡುತ್ತದೆ ಎಂದು ಹವಾಮಾನ್ಯ ತಜ್ಞರು ಹೇಳಿದ್ದಾರೆ.

ಭೂಮಿಯ ಕಾಂತಕ್ಷೇತ್ರ ರಕ್ಷಣಾ ಕವಚದಂತೆ ಕೆಲಸ ಮಾಡುತ್ತದೆ. ಆದರೆ ಅದರ ಮೇಲೆಯೇ ಸೌರಚಂಡಮಾರುತ ಅಪ್ಪಳಿಸುವುದರಿಂದ ತೀವ್ರ ತೊಂದರೆಯಾಗಲಿದೆ. ಇನ್ನೊಂದು ಪ್ರಮುಖ ವಿಷಯವೆಂದರೆ ಈ ಸೌರ ಚಂಡಮಾರುತದ ಕಾರಣದಿಂದ ದೇಶದ ಉತ್ತರ ಅಥವಾ ದಕ್ಷಿಣ ಧ್ರುವದಲ್ಲಿ ವಾಸವಾಗಿರುವ ಜನರು ರಾತ್ರಿ ವೇಳೆ ಸುಂದರ ಆಕಾಶ ಬೆಳಕನ್ನು ವೀಕ್ಷಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಸೌರ ಬಿರುಗಾಳಿಗಳು ಭೂಮಿಯ ವಾತಾವರಣವನ್ನು ಅಸ್ತವ್ಯಸ್ತಗೊಳಿಸುತ್ತವೆ. 1989ರ ಮಾರ್ಚ್​ನಲ್ಲಿ ಇಂಥದ್ದೇ ಒಂದು ಸೌರ ಚಂಡಮಾರುತ ಭೂಮಿಗೆ ಅಪ್ಪಳಿಸಿತ್ತು. ಆಗ ಕೆನಡಾದಲ್ಲಿ 9 ಗಂಟೆಗಳ ಕಾಲ ವಿದ್ಯುತ್​ ಪ್ರಸರಣದಲ್ಲಿ ಅವ್ಯವಸ್ಥೆ ಉಂಟಾಗಿತ್ತು ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: Solar Storm: ಸದ್ಯದಲ್ಲೇ ಭೂಮಿಗೆ ಅಪ್ಪಳಿಸಲಿದೆ ಭೀಕರ ಸೌರ ಚಂಡಮಾರುತ; ಜಿಪಿಎಸ್​ ಸಿಗ್ನಲ್​, ಮೊಬೈಲ್​ ನೆಟ್ವರ್ಕ್​ಗಳೆಲ್ಲ ಅಸ್ತವ್ಯಸ್ತ

Published On - 11:49 am, Tue, 13 July 21

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ