Sign In

By signing in or creating an account, you agree with Associated Broadcasting Company's Terms & Conditions and Privacy Policy.

Sundar Pichai: ಭಾರತದಲ್ಲಿ ಸ್ಟಾರ್ಟ್-ಅಪ್ ಸಂಸ್ಕೃತಿ ನೋಡಲು ಖುಷಿಯಾಗುತ್ತದೆ, ಇದನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಾರೆ: ಗೂಗಲ್ ಸಿಇಒ ಸುಂದರ್ ಪಿಚೈ

ಖಾಸಗಿ ವೆಬ್​ಸೈಟ್​ವೊಂದಕ್ಕೆ ನೀಡಿದ ಸಂದರ್ಶದಲ್ಲಿ ಮಾತನಾಡಿದ ಸುಂದರ್ ಪಿಚೈ, “ಜಾಗತಿಕ ಮಟ್ಟದಲ್ಲಿ ಭಾರತ ತಮ್ಮನ್ನು ತಾವು ಸಾಬೀತುಪಡಿಸುತ್ತಿದೆ. ಭಾರತದಲ್ಲಿ ಹಲವಾರು ಸ್ಟಾರ್ಟ್‌ಅಪ್‌ಗಳನ್ನು ನೋಡುವುದು ಖುಷಿಯಾಗುತ್ತದೆ ಎಂದು ಹೇಳಿದ್ದಾರೆ.

Sundar Pichai: ಭಾರತದಲ್ಲಿ ಸ್ಟಾರ್ಟ್-ಅಪ್ ಸಂಸ್ಕೃತಿ ನೋಡಲು ಖುಷಿಯಾಗುತ್ತದೆ, ಇದನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಾರೆ: ಗೂಗಲ್ ಸಿಇಒ ಸುಂದರ್ ಪಿಚೈ
Sundar Pichai, Google CEO
Follow us
TV9 Web
| Updated By: Vinay Bhat

Updated on: Dec 04, 2021 | 9:39 AM

ಸಾಮಾಜಿಕ ಜಾಲತಾಣದ (Social Media) ದಿಗ್ಗಜ ಸಂಸ್ಥೆಗಳಲ್ಲಿ, ಅದರಲ್ಲೂ ಅಮೆರಿಕದ ಹೆಸರಾಂತ ಕಂಪೆನಿಗಳಲ್ಲಿ ಭಾರತದ ಪ್ರತಿಭೆಗಳು ಮುಖ್ಯಸ್ಥರಾಗಿ ನೇಮಕವಾಗುತ್ತಿರುವುದು ಈಗೀಗ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೆ ಟ್ವಿಟ್ಟರ್‌ನ (Twitter) ನೂತನ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಭಾರತ ಮೂಲದ ಅಮೆರಿಕನ್ ಪರಾಗ್ ಅಗರ್ವಾಲ್ (Parag Agarwal) ಆಯ್ಕೆಯಾಗಿದ್ದರು. ಇದರ ನಡುವೆ ಸದ್ಯ ಆಲ್ಪಾಬೆಟ್ ಮತ್ತು ಗೂಗಲ್​ (Google) ಕಂಪನಿಯ ಸಿಇಒ ಸುಂದರ್ ಪಿಚೈ (Sundar Pichai) ಮಾತನಾಡಿದ್ದು, ಭಾರತದಲ್ಲಿ ಸ್ಟಾರ್ಟ್-ಅಪ್ ಸಂಸ್ಕೃತಿಯನ್ನು ನೋಡಲು ತುಂಬಾನೇ ಖುಷಿಯಾಗಿದೆ. ಭಾರತದಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಸ್ಕೇಲ್ ಅಪ್ ಮಾಡಲು AI ರೂಪದಲ್ಲಿ ತಾಂತ್ರಿಕ ಬೆಂಬಲವನ್ನು ನೀಡಲು ಗೂಗಲ್ (Google) ಬಯಸುತ್ತದೆ ಎಂದು ಹೇಳಿದ್ದಾರೆ.

ಖಾಸಗಿ ವೆಬ್​ಸೈಟ್​ವೊಂದಕ್ಕೆ ನೀಡಿದ ಸಂದರ್ಶದಲ್ಲಿ ಮಾತನಾಡಿದ ಸುಂದರ್ ಪಿಚೈ, “ಜಾಗತಿಕ ಮಟ್ಟದಲ್ಲಿ ಭಾರತ ತಮ್ಮನ್ನು ತಾವು ಸಾಬೀತುಪಡಿಸುತ್ತಿದೆ. ಭಾರತದಲ್ಲಿ ಹಲವಾರು ಸ್ಟಾರ್ಟ್‌ಅಪ್‌ಗಳನ್ನು ನೋಡುವುದು ಖುಷಿಯಾಗುತ್ತದೆ. ನಾವು ಭಾರತದಲ್ಲಿನ ಕಂಪನಿಗಳನ್ನು ಬೆಂಬಲಿಸಲು ಬಯಸುತ್ತೇವೆ. ಅವರಿಗೆ AI ಮತ್ತು ತಂತ್ರಜ್ಞಾನವನ್ನು ಒದಗಿಸಲು ಸಹಾಯ ಮಾಡುತ್ತೇವೆ ಇದರಿಂದ ಅವರು ತಮ್ಮ ಕಾರ್ಯವೈಖರಿಯನ್ನು ಹೆಚ್ಚಿಸಬಹುದು” ಎಂದು ಹೇಳಿದ್ದಾರೆ.

ಇದೇವೇಳೆ ದೇಶದಲ್ಲಿನ ಸ್ಟಾರ್ಟ್‌ಅಪ್ ಸಂಸ್ಕೃತಿಯ ಕುರಿತು ಮಾತನಾಡಿದ ಅವರು, “ಭಾರತೀಯರು ಒಂದು ವಸ್ತುಗಳನ್ನು ನಿರ್ಮಿಸುವ ಮತ್ತು ಅದನ್ನು ಜಾಗತಿಕವಾಗಿ ತೆರೆದಿಡುವ ಬಗ್ಗೆ ಗಮನಸುತ್ತಿದ್ದೇನೆ. ಅದಕ್ಕಾಗಿಯೇ ನಾವು ಗೂಗಲ್ ಪೇ ಪರಿಚಯಿಸಿದ್ದೇವೆ. ಜೊತೆಗೆ ಬೇರೆಬೇರೆ ಮಾರುಕಟ್ಟೆಗಳಲ್ಲಿಯೂ ಇದನ್ನು ಅಭಿವೃದ್ದಿ ಪಡಿಸುತ್ತಿದ್ದೇವೆ. ಕೆಲವು ಸಂಗತಿಗಳಿಗೆ ನಾವು ಇವತ್ತು ಅನುಸರಿಸುತ್ತಿರುವ ಕಂಪ್ಯೂಟಿಂಗ್ ಇನ್ನಷ್ಟು ಉತ್ತಮ ಆಗುವ ಸಾಧ್ಯತೆ ಇದೆ. ಆದರೆ ಕೆಲವು ಸಂಗತಿಗಳಿಗೆ ಕ್ವಾಂಟಮ್ ಕಂಪ್ಯೂಟಿಂಗ್ ಹೊಸ ರೇಂಜ್​ನ ಸಲ್ಯೂಷನ್ ತೆರೆದಿಡುತ್ತದೆ” ಎಂದರು.

ಮುಂದಿನ ಭವಿಷ್ಯದ ತಂತ್ರಜ್ಞಾನದ ಕುರಿತು ಪ್ರತಿಕ್ರಿಯಿಸಿದ ಪಿಚೈ, “ಭವಿಷ್ಯದಲ್ಲಿ AI ಮತ್ತು AR (ಆಗ್ಮೆಂಟೆಡ್ ರಿಯಾಲಿಟಿ) ಪ್ರಾಬಲ್ಯ ಸಾಧಿಸಲಿದೆ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಂಪ್ಯೂಟಿಂಗ್ ಜನರಿಗೆ ಸ್ವಾಭಾವಿಕವಾಗಿ ಹೊಂದಿಕೊಳ್ಳುತ್ತದೆ. ಅದು ಮೊಬೈಲ್ ಫೋನ್ ರೀತಿಯಲ್ಲ. ಭವಿಷ್ಯವು ಆಗ್ಮೆಂಟೆಡ್ ರಿಯಾಲಿಟಿ ಆಗಿರುತ್ತದೆ. ನಾವು ಇದರ ಮೇಲೆ ಈಗಾಗಲೇ ಕೆಲಸವನ್ನು ಪ್ರಾರಂಭಿಸಿದ್ದೇವೆ. ಗೂಗಲ್ ಲ್ಯಾಂಬ್ಡಾ ಅಂತಹ ಒಂದು ಉತ್ಪನ್ನವಾಗಿದೆ” ಎಂಬುದು ಅವರ ಅಭಿಪ್ರಾಯ.

“ಇಂದು ನೀವು AR ನ ಅಂಶಗಳನ್ನು ಹೊಂದಿದ್ದೀರಿ. ಆದರೆ ಇದು ಮುಂದಿನ ದಿನಗಳಲ್ಲಿ ಹೆಚ್ಚು ಸ್ವಾಭಾವಿಕವಾಗಿರುತ್ತದೆ. ನೀವು ನೈಜ್ಯ ಪ್ರಪಂಚದೊಂದಿಗೆ ಸಂವಹನ ನಡೆಸಲು ಅಡ್ಡಿಯಾಗುವುದಿಲ್ಲ. ಅಂದರೆ ನೀವು ಹೇಗೆ ನೋಡುತ್ತೀರಿ ಮತ್ತು ಮಾತನಾಡುತ್ತೀರಿ ಎಂಬುದೇಲ್ಲವೂ ಕಂಪ್ಯೂಟಿಂಗ್‌ನಲ್ಲಿಯೂ ಸಹ ಪ್ಲೇ ಆಗುತ್ತವೆ” ಎಂದು ಸುಂದರ್ ಪಿಚೈ ಹೇಳಿದ್ದಾರೆ.

ಪಿಚೈ ಸುಂದರರಾಜನ್, ಆಲ್ಫಾಬೆಟ್ ಹಾಗೂ ಅದರ ಅಂಗಸಂಸ್ಥೆ ಗೂಗಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ. 49 ವರ್ಷದ ಪಿಚೈ, ತಮಿಳುನಾಡಿನ ಚೆನ್ನೈನವರು. ಐಐಟಿ ಕಾನ್ಪುರದಲ್ಲಿ ಬಿ-ಟೆಕ್ ಪದವಿ ಪಡೆದ ಅವರು, ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಮತ್ತು ಮೆಟೀರಿಯಲ್ ಸೈನ್ಸ್‌ನಲ್ಲಿ ಎಂಎಸ್ ಮಾಡಿದ್ದಾರೆ. 2004ರಲ್ಲಿ ಗೂಗಲ್‌ನಲ್ಲಿ ವೃತ್ತಿ ಆರಂಭಿಸಿದ ಅವರು, 2015ರ ಆಗಸ್ಟ್ 10ರಂದು ಸಿಇಒ ಆಗಿ ನೇಮಕವಾದರು.

(Alphabet and Google CEO Sundar Pichai said that its heartening to see start-up culture in India)

‘ಅಂಡಮಾನ್’ ಹಾಡನ್ನು ರೀ-ಕ್ರಿಯೇಟ್ ಮಾಡಿದ ಶಿವಣ್ಣ-ನಿವೇದಿತಾ
‘ಅಂಡಮಾನ್’ ಹಾಡನ್ನು ರೀ-ಕ್ರಿಯೇಟ್ ಮಾಡಿದ ಶಿವಣ್ಣ-ನಿವೇದಿತಾ
ವಿರೋಧ ಯಾರದ್ದೂ ಇಲ್ಲ, ಸಂದೇಹಗಳನ್ನು ಮಾತ್ರ ವ್ಯಕ್ತಪಡಿಸಿದ್ದಾರೆ: ರಾಜಣ್ಣ
ವಿರೋಧ ಯಾರದ್ದೂ ಇಲ್ಲ, ಸಂದೇಹಗಳನ್ನು ಮಾತ್ರ ವ್ಯಕ್ತಪಡಿಸಿದ್ದಾರೆ: ರಾಜಣ್ಣ
ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ