AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಅತಿ ಹೆಚ್ಚು ಜನರು ಆಡುವ ಮೊಬೈಲ್ ಗೇಮ್‌ಗಳು ಯಾವುವು ಗೊತ್ತಾ?: ಇದನ್ನು ನೀವು ಆಡಿದ್ದೀರಾ?

ಭಾರತದಲ್ಲಿ ಲಭ್ಯವಿರುವ ಅತ್ಯಂತ ಜನಪ್ರಿಯ ಆನ್‌ಲೈನ್ ಆಂಡ್ರಾಯ್ಡ್ ಮೊಬೈಲ್ ಗೇಮ್‌ಗಳು ಯಾವುವು ಎಂಬುದನ್ನು ನೋಡೋಣ. ದೇಶದಲ್ಲಿ ಅತಿ ಹೆಚ್ಚು ಆಡುವ ಟಾಪ್-5 ಆಂಡ್ರಾಯ್ಡ್ ಮೊಬೈಲ್ ಗೇಮ್‌ಗಳ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.

ಭಾರತದಲ್ಲಿ ಅತಿ ಹೆಚ್ಚು ಜನರು ಆಡುವ ಮೊಬೈಲ್ ಗೇಮ್‌ಗಳು ಯಾವುವು ಗೊತ್ತಾ?: ಇದನ್ನು ನೀವು ಆಡಿದ್ದೀರಾ?
ಪ್ರೀತಿ ಭಟ್​, ಗುಣವಂತೆ
| Edited By: |

Updated on: Oct 08, 2024 | 11:51 AM

Share

ಕಳೆದ 10 ವರ್ಷಗಳಲ್ಲಿ ಭಾರತದ ಆನ್‌ಲೈನ್ ಗೇಮಿಂಗ್ ಉದ್ಯಮವು ವೇಗವಾಗಿ ಬೆಳೆದಿದೆ. ಭಾರತವು ಮುಂದಿನ 10 ವರ್ಷಗಳಲ್ಲಿ ಜಾಗತಿಕ ಗೇಮಿಂಗ್ ಉದ್ಯಮದಲ್ಲಿ ಬಹುಶಃ ಅತಿದೊಡ್ಡ ಮಾರುಕಟ್ಟೆ, ಕೇಂದ್ರವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇದೀಗ ಭಾರತದಲ್ಲಿ ಲಭ್ಯವಿರುವ ಅತ್ಯಂತ ಜನಪ್ರಿಯ ಆನ್‌ಲೈನ್ ಆಂಡ್ರಾಯ್ಡ್ ಮೊಬೈಲ್ ಗೇಮ್‌ಗಳು ಯಾವುವು ಎಂಬುದನ್ನು ನೋಡೋಣ. ದೇಶದಲ್ಲಿ ಅತಿ ಹೆಚ್ಚು ಆಡುವ ಟಾಪ್-5 ಆಂಡ್ರಾಯ್ಡ್ ಮೊಬೈಲ್ ಗೇಮ್‌ಗಳ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.

ಲುಡೋ ಕಿಂಗ್:

ಲುಡೋ ಕಿಂಗ್ ಎರಡು ಅಥವಾ ನಾಲ್ಕು ಆಟಗಾರರ ನಡುವೆ ಆಡಬಹುದಾದ ಕ್ಲಾಸಿಕ್ ಬೋರ್ಡ್ ಆಟವಾಗಿದೆ. 500+ ಮಿಲಿಯನ್ ಡೌನ್‌ಲೋಡ್‌ಗಳೊಂದಿಗೆ, ಈ ಗೇಮ್ ಗೂಗಲ್ ಪ್ಲೇ ಸ್ಟೋರಿ ಚಾರ್ಟ್‌ಗಳಲ್ಲಿ ದೀರ್ಘಕಾಲ ಅಗ್ರಸ್ಥಾನದಲ್ಲಿದೆ. ಇದು ಕ್ರಾಸ್ ಪ್ಲಾಟ್‌ಫಾರ್ಮ್ ಆಟವಾಗಿದೆ. ಅಂದರೆ ನೀವು ಅದನ್ನು ಡೆಸ್ಕ್‌ಟಾಪ್ ಅಥವಾ ಐಒಎಸ್ ಸಾಧನಗಳಲ್ಲಿ ಆಟವಾಡಬಹುದು. ಲುಡೋ ಕಿಂಗ್ ಡೌನ್‌ಲೋಡ್ ಗಾತ್ರ 52MB ಆಗಿದೆ. ಇದು ನಿಮ್ಮ ಸ್ಟೋರೇಜ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಫ್ರೀ ಫೈರ್ ಮ್ಯಾಕ್ಸ್:

ಎರಡನೇ ಸ್ಥಾನದಲ್ಲಿ ಗರೆನಾ ಅವರ ಫ್ರೀ ಫೈರ್ ಮ್ಯಾಕ್ಸ್ ಗೇಮ್ ಇದೆ. ಇದು ಬ್ಯಾಟಲ್ ರಾಯಲ್ ಆಟವಾಗಿದೆ. ಇದರಲ್ಲಿ 50 ಆಟಗಾರರು ದ್ವೀಪವೊಂದರಲ್ಲಿ ಸಿಲುಕಿಕೊಂಡಿರುತ್ತಾರೆ. ಬದುಕಲು ಯುದ್ಧದಲ್ಲಿ ಇತರ ಆಟಗಾರರನ್ನು ಸೋಲಿಸಬೇಕು. ಸಾಧ್ಯವಾದಷ್ಟು ಸಮಯ ನೀವು ಸುರಕ್ಷಿತ ಜಾಗದಲ್ಲಿ ಉಳಿಯಲು ಪ್ರಯತ್ನಿಸಬೇಕು. ಆ ಆಟದಲ್ಲಿ ಆಟಗಾರರು ವಾಹನಗಳನ್ನು ಸಹ ಓಡಿಸಬಹುದು. ವೀಕ್ಷಕರು ತಮ್ಮನ್ನು ಸುರಕ್ಷಿತವಾಗಿರಿಸಲು ವಿವಿಧ ಕೆಲಸಗಳನ್ನು ಮಾಡಬಹುದು. ಪಂದ್ಯವನ್ನು ಗೆಲ್ಲಲು ಆಟಗಾರರು ಶಸ್ತ್ರಾಸ್ತ್ರಗಳನ್ನು ಹುಡುಕಬೇಕಾಗಿದೆ. ಶತ್ರುಗಳನ್ನು ಸೋಲಿಸಿ ನೀವು ಬದುಕಬೇಕು. ಭಾರತ ಸರ್ಕಾರವು ತಿಂಗಳ ಹಿಂದೆ ಫ್ರೀ ಫೈರ್ ಅನ್ನು ನಿಷೇಧಿಸಿದ್ದರೂ, ದೇಶದಲ್ಲಿ ಫ್ರೀ ಫೈರ್ ಮ್ಯಾಕ್ಸ್ ಅನ್ನು ಇನ್ನೂ ನಿಷೇಧಿಸಲಾಗಿಲ್ಲ.

ರಾಯಲ್ ಮ್ಯಾಚ್:

ರಾಯಲ್‌ ಮ್ಯಾಚ್​ನಲ್ಲಿ 3 ಒಗಟುಗಳನ್ನು ಪರಿಹರಿಸುವ ಮೂಲಕ ಬಹುಮಾನಗಳನ್ನು ಗೆಲ್ಲಬಹುದು. ಇದನ್ನು ಗೆದ್ದರೆ, ಕಿಂಗ್ ರಾಬರ್ಟ್ ತನ್ನ ರಾಜ್ಯದಲ್ಲಿ ಕಳೆದುಹೋದ ಗೌರವವನ್ನು ಮರಳಿ ಪಡೆಯಬಹುದು. ಈ ಆಟವು ಗೆಲ್ಲಲು ಹಲವು ಹಂತಗಳನ್ನು ಹೊಂದಿದೆ ಮತ್ತು ಅನ್‌ಲಾಕ್ ಮಾಡಲು ಸವಾಲು ಎದುರಿಸಬೇಕಾಗುತ್ತದೆ. ನೀವು ಗೆದ್ದ ನಾಣ್ಯಗಳಿಂದ ರಾಜನ ಕೋಟೆಯನ್ನು ಅಲಂಕರಿಸಬಹುದು. ಇದು ಕ್ಯಾಂಡಿ ಕ್ರಷ್‌ನಂತಹ ಆಟಗಳಿಗಿಂತ ಭಿನ್ನವಾಗಿದೆ.

ಕ್ಯಾರಮ್ ಪೂಲ್:

ಕ್ಯಾರಮ್ ಪೂಲ್ ಮಲ್ಟಿಪ್ಲೇಯರ್ ಕೇರಂ ಆಟವಾಗಿದೆ. ನೀವು ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಆಟವಾಡಬಹುದು. ಇದು ಮೂರು ಆಟದ ವಿಧಾನಗಳನ್ನು ಹೊಂದಿದೆ. ಕೇರಂ, ಫ್ರೀಸ್ಟೈಲ್, ಡಿಸ್ಕ್ ಪೂಲ್, ಕೇರಂ ಮೋಡ್. ಇದರಲ್ಲಿ ನೀವು ಅನೇಕ ಬಹುಮಾನಗಳನ್ನು ಪಡೆಯಬಹುದು. ಇದನ್ನು ಆಫ್‌ಲೈನ್‌ನಲ್ಲಿಯೂ ಆಡಬಹುದು.

ಇದನ್ನೂ ಓದಿ: ಸ್ಮಾರ್ಟ್‌ಫೋನ್‌ಗಳಲ್ಲಿ ಮೂರು ಕ್ಯಾಮೆರಾಗಳು ಇರುವುದು ಯಾಕೆ ಗೊತ್ತೇ?, ಇದರ ಹಿಂದಿರುವ ಲೆಕ್ಕಾಚಾರ ತಿಳಿಯಿರಿ

ಹಂಟರ್ ಕಿಲ್ಲರ್:

ಇದು ಕಣ್ಣಾಮುಚ್ಚಾಲೆ ಆಟವಿದ್ದಂತೆ. ಈ ಆಟಕ್ಕೆ ತಲೆ ಉಪಯೋಗಿಸಿ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ. ಇದರಲ್ಲಿ ನೀವು ಕತ್ತಿಯಿಂದ ಬೇಟೆಗಾರನ ಪಾತ್ರವನ್ನು ನಿರ್ವಹಿಸುತ್ತೀರಿ. ನೀವು ಶತ್ರುಗಳನ್ನು ಕೊಲ್ಲಬೇಕು. ಈ ಆಟದಲ್ಲಿ ವಿವಿಧ ಅಪಾಯಗಳಿವೆ. ಅವರೆಲ್ಲರನ್ನೂ ಜಯಿಸಿ ಶತ್ರುಗಳನ್ನು ಸಂಹರಿಸಬೇಕು. ಸಾಕಷ್ಟು ಮಿಷನ್‌ಗಳು ಹೋರಾಡಲು ವಿವಿಧ ಸಾಧನಗಳೊಂದಿಗೆ ಲೋಡ್ ಮಾಡಲಾಗಿದೆ. ಇದು ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯ ಆಟಗಳಲ್ಲಿ ಒಂದಾಗಿದೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕೈವ್​​ನ ಸೂಪರ್ ಮಾರ್ಕೆಟ್​​ನಲ್ಲಿ ಗುಂಡು ಹಾರಿಸಿ ಐವರನ್ನು ಕೊಂದ ಶೂಟರ್​
ಕೈವ್​​ನ ಸೂಪರ್ ಮಾರ್ಕೆಟ್​​ನಲ್ಲಿ ಗುಂಡು ಹಾರಿಸಿ ಐವರನ್ನು ಕೊಂದ ಶೂಟರ್​
ಟ್ರಾಫಿಕ್ ದಂಡ ತಪ್ಪಿಸಲು ಬಾಣಲೆಯನ್ನೇ ಹೆಲ್ಮೆಟ್ ಮಾಡಿಕೊಂಡ ಯುವಕ!
ಟ್ರಾಫಿಕ್ ದಂಡ ತಪ್ಪಿಸಲು ಬಾಣಲೆಯನ್ನೇ ಹೆಲ್ಮೆಟ್ ಮಾಡಿಕೊಂಡ ಯುವಕ!
ಬೆಂಗಳೂರಿಗೆ ಬಂದ ನಟ ಅಡಿವಿಶೇಷ್ ಕೈಕುಲುಕಲು ಮುಗಿಬಿದ್ದ ಜನ
ಬೆಂಗಳೂರಿಗೆ ಬಂದ ನಟ ಅಡಿವಿಶೇಷ್ ಕೈಕುಲುಕಲು ಮುಗಿಬಿದ್ದ ಜನ
ತಮ್ಮ ಕುಟುಂಬದ ಮಹಿಳೆಯರು ಮಾತ್ರ ಉದ್ಧಾರವಾಗಬೇಕೆಂಬ ಕುತಂತ್ರ; ಮೋದಿ ಚಾಟಿ
ತಮ್ಮ ಕುಟುಂಬದ ಮಹಿಳೆಯರು ಮಾತ್ರ ಉದ್ಧಾರವಾಗಬೇಕೆಂಬ ಕುತಂತ್ರ; ಮೋದಿ ಚಾಟಿ
ಸಂಪುಟ ಪುನಾರಚನೆಯ ಬಗ್ಗೆ ಬೇಲೂರು ಗೋಪಾಲಕೃಷ್ಣ ಮಹತ್ವದ ಸುಳಿವು!
ಸಂಪುಟ ಪುನಾರಚನೆಯ ಬಗ್ಗೆ ಬೇಲೂರು ಗೋಪಾಲಕೃಷ್ಣ ಮಹತ್ವದ ಸುಳಿವು!
ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ
ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ
ರಾಹುಲ್​ ಗಾಂಧಿ ಪೆದ್ದು ಪೆದ್ದಾಗಿ ಮಾತನಾಡುತ್ತಾರೆ": ಪ್ರಹ್ಲಾದ್ ಜೋಶಿ
ರಾಹುಲ್​ ಗಾಂಧಿ ಪೆದ್ದು ಪೆದ್ದಾಗಿ ಮಾತನಾಡುತ್ತಾರೆ
ಪ್ರಧಾನಿ ಮೋದಿ ದೇಶದ ಜನರನ್ನು ಉದ್ದೇಶಿಸಿ ಭಾಷಣ ನೇರಪ್ರಸಾರ
ಪ್ರಧಾನಿ ಮೋದಿ ದೇಶದ ಜನರನ್ನು ಉದ್ದೇಶಿಸಿ ಭಾಷಣ ನೇರಪ್ರಸಾರ
ಹಾರ್ಮುಜ್ ಜಲಸಂಧಿ ದಾಟುತ್ತಿದ್ದ ಭಾರತದ 2 ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ
ಹಾರ್ಮುಜ್ ಜಲಸಂಧಿ ದಾಟುತ್ತಿದ್ದ ಭಾರತದ 2 ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ
ಆರ್​​ಸಿಬಿ ಸೋಲಿಗೆ ಕಾರಣರಾದ ಕನ್ನಡಿಗ ಕೆಎಲ್ ರಾಹುಲ್
ಆರ್​​ಸಿಬಿ ಸೋಲಿಗೆ ಕಾರಣರಾದ ಕನ್ನಡಿಗ ಕೆಎಲ್ ರಾಹುಲ್