AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಮುಂದೆ ಗೂಗಲ್​ ಪೇ, ಫೋನ್ ​ಪೇ ಮೂಲಕ ಎಟಿಎಂನಲ್ಲಿ ಹಣ ವಿತ್​ಡ್ರಾ ಮಾಡ್ಬಹುದು! ಹೇಗೆ?

ಎಟಿಎಂ ಕಂಪೆನಿ ಎನ್​ಸಿಆರ್ ಕಾರ್ಪೋರೇಷನ್​ ಹೊಸ ಆಯ್ಕೆಯನ್ನು ಪರಿಚಯಿಸಿದೆ. ಸಿಟಿ ಯೂನಿಯನ್​ ಬ್ಯಾಂಕ್​ ಎನ್​​ಸಿಆರ್​ ಜತೆ ಕೈ ಜೋಡಿಸಿದೆ.

ಇನ್ಮುಂದೆ ಗೂಗಲ್​ ಪೇ, ಫೋನ್ ​ಪೇ ಮೂಲಕ ಎಟಿಎಂನಲ್ಲಿ ಹಣ ವಿತ್​ಡ್ರಾ ಮಾಡ್ಬಹುದು! ಹೇಗೆ?
ಪ್ರಾತಿನಿಧಿಕ ಚಿತ್ರ
ರಾಜೇಶ್ ದುಗ್ಗುಮನೆ
| Updated By: preethi shettigar|

Updated on:Apr 03, 2021 | 7:05 AM

Share

ಭಾರತ ಡಿಜಿಟಲೀಕರಣದತ್ತ ಸಾಗುತ್ತಿದೆ. ಯಾವುದೇ ಅಂಗಡಿಗೆ ತೆರಳಿದರೂ ಗೂಗಲ್​ ಪೇ, ಫೋನ್​ ಪೇ ಮೊದಲಾದ ಆ್ಯಪ್​ಗಳ ಮೂಲಕ ಹಣ ಪಾವತಿ ಮಾಡಲಾಗುತ್ತಿದೆ. ಇನ್ಮುಂದೆ ಈ ಆ್ಯಪ್​ಗಳ ಸಹಾಯದಿಂದ ನೀವು ಎಟಿಎಂನಲ್ಲಿ ಹಣ ಕೂಡ ವಿತ್​ಡ್ರಾ ಮಾಡಬಹುದಾಗಿದೆ! ಹೀಗೊಂದು ಹೊಸ ಕ್ರಮವನ್ನು ಜಾರಿಗೆ ತರಲಾಗುತ್ತಿದೆ. ಇದು ದೇಶಾದ್ಯಂತ ಯಶಸ್ವಿಯಾಗಿ ಜಾರಿಗೆ ಬಂದರೆ ಕಾರ್ಡ್​ಲೆಸ್​ ವ್ಯವಹಾರಕ್ಕೆ ಮತ್ತಷ್ಟು ಒತ್ತು ಸಿಗಲಿದೆ. ಎಟಿಎಂ ಕಂಪೆನಿ ಎನ್​ಸಿಆರ್ ಕಾರ್ಪೋರೇಷನ್​ ಹೊಸ ಆಯ್ಕೆಯನ್ನು ಪರಿಚಯಿಸಿದೆ. ಸಿಟಿ ಯೂನಿಯನ್​ ಬ್ಯಾಂಕ್​ ಎನ್​​ಸಿಆರ್​ ಜತೆ ಕೈ ಜೋಡಿಸಿದೆ. ಮೊದಲ ಹಂತದಲ್ಲಿ ಸುಮಾರು 1500 ಎಟಿಎಂಗಳನ್ನು ಅಪ್​ಗ್ರೇಡ್​ ಮಾಡಲಾಗುತ್ತಿದೆ. ಈ ಎಟಿಎಂಗಳಲ್ಲಿ ಮಾತ್ರ ಹೊಸ ಆಯ್ಕೆ ಸಿಗಲಿದೆ.

ಹಣ ವಿತ್​ಡ್ರಾ ಮಾಡೋದು ಹೇಗೆ? ಅಪ್​ಗ್ರೇಡ್​ ಆದ ಎಟಿಎಂನಲ್ಲಿ ಮಾತ್ರ ಯುಪಿಐ (ಗೂಗಲ್​ ಪೇ, ಭೀಮ್, ಪೇಟಿಎಂ, ಫೋನ್​ಪೇ) ಮೂಲಕ ಹಣ ವಿತ್​ ಡ್ರಾ ಮಾಡಬಹುದು. ಎಟಿಎಂ ಯಂತ್ರದ ಮೇಲೆ ಒಂದು QR code ಇಡಲಾಗುತ್ತದೆ. ಇದನ್ನು ಸ್ಕ್ಯಾನ್​ ಮಾಡಬೇಕು. ಸ್ಕ್ಯಾನ್​ ಪೂರ್ಣಗೊಂಡ ನಂತರ ನಿಮಗೆ ವಿತ್​ಡ್ರಾ ಮಾಡಲು ಎಷ್ಟು ಹಣ ಬೇಕು ಎಂಬುದನ್ನು ಉಲ್ಲೇಖ ಮಾಡಿ ಪ್ರೊಸೆಸ್​ ಕೊಡಬೇಕು. ನಂತರ ಯುಪಿಐ ಪಿನ್​ ನೋಂದಣಿ ಮಾಡಬೇಕು. ಆಗ, ಎಟಿಎಂ ಮೂಲಕ ಹಣ ಬರಲಿದೆ. ಒಮ್ಮೆಗೆ 5,000 ರೂಪಾಯಿ ಮಾತ್ರ ವಿತ್​ಡ್ರಾ ಮಾಡಲು ಅವಕಾಶ ಇದೆ.

ಯಪಿಐ ಎಂದರೇನು? ಏಕಿಕೃತ ಪಾವತಿ ವ್ಯವಸ್ಥೆ ಎಂಬುದು ಯಪಿಐ ವಿಸ್ತ್ರತ ರೂಪ. ಒಂದು ಬ್ಯಾಂಕ್​ ಖಾತೆಯಿಂದ ಮತ್ತೊಂದು ಬ್ಯಾಂಕ್​ ಖಾತೆಗೆ ಹಣ ವರ್ಗಾವಣೆ ಮಾಡಲು ಇದು ಸಹಕಾರಿ. ಪ್ರತಿ ಬಳಕೆದಾರರ ಯಪಿಐ ಸಂಖ್ಯೆ ಬೇರೆಯದೇ ಆಗುತ್ತದೆ. ನೀವು ಒಂದು ಯುಪಿಐ ಅಪ್ಲಿಕೇಶನ್ ಮೂಲಕ ಅನೇಕ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಬಹುದು ಮತ್ತು ಕೆಲವೇ ಸೆಕೆಂಡುಗಳಲ್ಲಿ ಹಣವನ್ನು ವರ್ಗಾಯಿಸಬಹುದು.

ಇದನ್ನೂ ಓದಿ: ಮೊಬಿಕ್ವಿಕ್​​ನ 35 ಲಕ್ಷ ಬಳಕೆದಾರರ ಸೂಕ್ಷ್ಮ ಮಾಹಿತಿ ಕಳುವಾಗಿದೆ ಎಂದ ಸಂಶೋಧಕ; ಅಂಥದ್ದೇನೂ ಆಗಿಲ್ಲ ಎಂದ ಕಂಪೆನಿ

(Now You Can Withdraw Amounts from ATM Using Phone Pe and Google Pay Here is How)

Published On - 7:03 am, Sat, 3 April 21

ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
ರೆಬೆಲ್ ನಾಯಕರಲ್ಲಿ ಕುಮಾರ ಬಂಗಾರಪ್ಪ ಉಳಿದವರಿಗಿಂತ ಜಾಸ್ತಿ ಜನಪ್ರಿಯ
ರೆಬೆಲ್ ನಾಯಕರಲ್ಲಿ ಕುಮಾರ ಬಂಗಾರಪ್ಪ ಉಳಿದವರಿಗಿಂತ ಜಾಸ್ತಿ ಜನಪ್ರಿಯ