AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೇಸ್​ಬುಕ್​​, ವಾಟ್ಸ್​ಆ್ಯಪ್​ ಸರ್ವರ್ ಡೌನ್ ಆದ ದಿನ ಪಾರ್ನ್​ಹಬ್​ ಜಾಲತಾಣದ ಬಳಕೆ ಹೆಚ್ಚಳ

ಸಾಮಾಜಿಕ ಜಾಲತಾಣಗಳನ್ನು ಬಳಸಲು ಸಾಧ್ಯವಾಗದೇ ಜನರು ಪಾರ್ನ್ ಸೈಟ್​ಗಳತ್ತ ಮುಖ ಮಾಡಿದ್ದರು ಎಂಬುದು ತಿಳಿದುಬಂದಿದೆ.

ಫೇಸ್​ಬುಕ್​​, ವಾಟ್ಸ್​ಆ್ಯಪ್​ ಸರ್ವರ್ ಡೌನ್ ಆದ ದಿನ ಪಾರ್ನ್​ಹಬ್​ ಜಾಲತಾಣದ ಬಳಕೆ ಹೆಚ್ಚಳ
ಮಾರ್ಕ್ ಝಕರ್​ಬರ್ಗ್ (ಸಂಗ್ರಹ ಚಿತ್ರ)
TV9 Web
| Updated By: guruganesh bhat|

Updated on: Oct 09, 2021 | 10:13 PM

Share

ಕಳೆದ ಸೋಮವಾರ ಸರ್ವರ್ ದೋಷದಿಂದ 6 ಗಂಟೆಗಳ ಕಾಲ ವಾಟ್ಸ್ಆ್ಯಪ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಬಳಕೆದಾರರು ಫಜೀತಿ ಅನುಭವಿಸಿದ್ದರು. ಈ ಅವಧಿಯನ್ನು ಟೆಲಿಗ್ರಾಂ ಸೇರಿದಂತೆ ಹಲವು ಇತರ ಕಂಪನಿಗಳು ಅವಕಾಶವನ್ನಾಗಿ ಬಳಸಿಕೊಂಡು ತಮ್ಮ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದವು. ಫೇಸ್ಬುಕ್, ವಾಟ್ಸ್ಆ್ಯಪ್,  ಮತ್ತು ಇನ್ಸ್ಟಾಗ್ರಾಂ ಸರ್ವರ್ ದೋಷದಿಂದ ಇನ್ನೊಂದು ಜಾಲತಾಣವೊಂದು ಲಾಭ ಮಾಡಿಕೊಂಡ ಸುದ್ದಿಯೊಂದು ಇದೀಗ ವರದಿಯಾಗಿದೆ.

ಸಾಮಾಜಿಕ ಜಾಲತಾಣಗಳನ್ನು ಬಳಸಲು ಸಾಧ್ಯವಾಗದೇ ಜನರು ಪಾರ್ನ್ ಸೈಟ್​ಗಳತ್ತ ಮುಖ ಮಾಡಿದ್ದರು ಎಂಬುದು ತಿಳಿದುಬಂದಿದೆ. ಅದರಲ್ಲೂ ಪಾರ್ನ್​ಹಬ್ ಜಾಲತಾಣದ ಬಳಕೆದಾರರಲ್ಲಿ ಶೇಕಡಾ 10.5ರಷ್ಟು ಏರಿಕೆ ಫೇಸ್ಬುಕ್ ಸರ್ವರ್ ದೋಷ ಉಂಟಾದ ಅವಧಿಯಲ್ಲಿ ಕಂಡುಬಂದಿದೆ. ಭಾರತದಲ್ಲಿ ಪಾರ್ನ್ ವೆಬ್ ಪೋರ್ಟಲ್​ಗಳಿಗೆ ನಿಷೇಧವಿದ್ದರೂ ಸಹ ಪಾರ್ನ್​ಹಬ್ ಸೇರಿ ಕೆಲವು ಜಾಲತಾಣಗಳ ಬಳಕೆದಾರರಲ್ಲಿ ಹೆಚ್ಚಳ ಕಂಡುಬಂದಿದೆ.

ಒಬ್ಬನ ಭಾರಿ ನಷ್ಟ ಮತ್ತೊಬ್ಬನಿಗೆ ಭಾರಿ ಲಾಭ. ಕಾರ್ಪೋರೇಟ್ ವಿಶ್ವದಲ್ಲಿ ಆಗೋದೇ ಹಾಗೆ. ಸೋಮವಾರ ಫೇಸ್​ಬುಕ್​ ಮತ್ತು ಅದರ ಎರಡು ಪ್ಲಾಟ್​ಫಾರ್ಮ್​ಗಳಾದ ಇನ್ಸ್ಟಾಗ್ರಾಮ್ ಮತ್ತು ವಾಟ್ಸ್ಯಾಪ್ ಸೇವೆಗಳಲ್ಲಿ 6 ಗಂಟೆ ವ್ಯತ್ಯಯ ಉಂಟಾಗಿದ್ದರಿಂದ ಅದರ ಸಿಈಓ ಮಾರ್ಕ್ ಝಕರ್​ಬರ್ಗ್​ ರೂ. 52,000 ಕೋಟಿ ಕಳೆದುಕೊಂಡಿದ್ದಷ್ಟೇ ಅಲ್ಲ ಅದರೊಂದಿಗೆ ಅಪಾರ ಪ್ರಮಾಣದ ಗ್ರಾಹಕರನ್ನೂ ಕಳೆದುಕೊಂಡಿದ್ದಾರೆ. ಫೇಸ್​ಬುಕ್​​​ ಪ್ರತಿಸ್ಪರ್ಧಿ ಟೆಲಿಗ್ರಾಮ್ ಆ ಒಂದು ದಿನದ ಅವಧಿಯಲ್ಲಿ ಸುಮಾರು 7 ಕೋಟಿ ಹೊಸ ಗ್ರಾಹಕರನ್ನು ಸಂಪಾದಿಸಿಕೊಂಡಿದೆಯಂತೆ!

ಟೆಲಿಗ್ರಾಮ್ ಫ್ಲಾಟ್​ಫಾರ್ಮ್​​ ಸಿಇಒ ಪವೆಲ್ ಡುರೊವ್ ಅವರು ತಮ್ಮ ಚ್ಯಾನೆಲ್​ನಲ್ಲಿ  ‘ಬೇರೆ ಫ್ಲಾಟ್​ಫಾರ್ಮ್ ಗಳ ಸುಮಾರು 70 ಮಿಲಿಯನ್ ನಿರಾಶ್ರಿತರನ್ನು ನಾವು ಒಂದು ದಿನದಲ್ಲಿ ಬರಮಾಡಿಕೊಂಡಿದ್ದೇವೆ,’ ಎಂದು ಹೇಳಿದ್ದು ಗ್ರಾಹಕರ ನೋಂದಣಿ ಕಾರ್ಯವನ್ನು ಭರದಿಂದ ಮಾಡಿರುವ ತಮ್ಮ ಸಿಬ್ಬಂದಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ: 

Instagram down: ವಾರದಲ್ಲಿ ಎರಡನೇ ಬಾರಿ ವಾಟ್ಸ್​ಆ್ಯಪ್​, ಫೇಸ್​ಬುಕ್, ಇನ್​ಸ್ಟಾಗ್ರಾಮ್​ ಸರ್ವರ್ ಡೌನ್

ಫೇಸ್​ಬುಕ್​  ಮತ್ತು ಅದರ ಎರಡು ಪ್ಲಾಟ್​ಫಾರ್ಮ್​​​ಗಳಲ್ಲಿ ವ್ಯತ್ಯಯ ಉಂಟಾಗಿದ್ದಕ್ಕೆ ಅಸಲಿ ಕಾರಣವಿದು!

ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ