AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech tips: ಯಾವುದೇ ಬಟನ್ ಪ್ರೆಸ್ ಮಾಡದೆ ಐಫೋನ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬಹುದು: ಹೇಗೆ ನೋಡಿ

ಐಫೋನ್ನಲ್ಲಿ, ಸ್ಕ್ರೀನ್‌ಶಾಟ್‌ಗಾಗಿ ಟಾಗಲ್ ಬಾರ್ ಅಥವಾ ಟ್ರಿಪಲ್ ಫಿಂಗರ್‌ನಂತಹ ಯಾವುದೇ ವೈಶಿಷ್ಟ್ಯವನ್ನು ಒದಗಿಸಲಾಗಿಲ್ಲ. ಐಫೋನ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು, ಸಾಮಾನ್ಯವಾಗಿ ಬಳಕೆದಾರರು ವಾಲ್ಯೂಮ್ ಡೌನ್ ಬಟನ್ ಮತ್ತು ಪವರ್ ಬಟನ್ ಅನ್ನು ಏಕಕಾಲದಲ್ಲಿ ಒತ್ತಬೇಕಾಗುತ್ತದೆ. ಅನೇಕ ಸ್ಥಳಗಳಲ್ಲಿ ಇದು ಸಾಕಷ್ಟು ಕಿರಿಕಿರಿಯನ್ನು ತೋರುತ್ತದೆ. ನಾವು ನಿಮಗೆ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಒಂದು ವಿಧಾನವನ್ನು ಹೇಳಲಿದ್ದು, ಇದು ಆಂಡ್ರಾಯ್ಡ್‌ಗಿಂತಲೂ ಸುಲಭವಾಗಿದೆ.

Tech tips: ಯಾವುದೇ ಬಟನ್ ಪ್ರೆಸ್ ಮಾಡದೆ ಐಫೋನ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬಹುದು: ಹೇಗೆ ನೋಡಿ
Iphone Tips And Tricks
ಮಾಲಾಶ್ರೀ ಅಂಚನ್​
| Updated By: Vinay Bhat|

Updated on: Jan 17, 2025 | 11:39 AM

Share

iPhone Screenshot shortcut: ಸ್ಮಾರ್ಟ್‌ಫೋನ್ ಬಳಸುವಾಗ, ನಾವು ಅನೇಕ ಬಾರಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬೇಕಾಗುತ್ತದೆ. ಭವಿಷ್ಯದಲ್ಲಿ ಅಗತ್ಯವಿರಬಹುದು ಎಂದು ನಾವು ಭಾವಿಸುವ ಯಾವುದೇ ವಿಷಯವನ್ನು ನಾವು ನೋಡಿದಾಗ, ಸೇವ್ ಮಾಡಿಟ್ಟುಕೊಳ್ಳಲು ತಕ್ಷಣ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುತ್ತೇವೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ, ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳಲು ನೀವು ಹಲವು ಆಯ್ಕೆಗಳನ್ನು ಪಡೆಯುತ್ತೀರಿ, ಆದರೆ ಐಫೋನ್ ಬಳಕೆದಾರರು ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳಲು ಬಹಳಷ್ಟು ತೊಂದರೆಗಳನ್ನು ಎದುರಿಸುತ್ತಾರೆ. ನೀವು ಐಫೋನ್ ಬಳಕೆದಾರರಾಗಿದ್ದರೆ ಈ ಸುದ್ದಿ ನಿಮಗೆ ತುಂಬಾ ಉಪಯುಕ್ತವಾಗಿದೆ. ಏಕೆಂದರೆ ನಾವು ನಿಮಗೆ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಒಂದು ವಿಧಾನವನ್ನು ಹೇಳಲಿದ್ದು, ಇದು ಆಂಡ್ರಾಯ್ಡ್‌ಗಿಂತಲೂ ಸುಲಭವಾಗಿದೆ.

ವಾಸ್ತವವಾಗಿ ಐಫೋನ್​ನಲ್ಲಿ, ಸ್ಕ್ರೀನ್‌ಶಾಟ್‌ಗಾಗಿ ಟಾಗಲ್ ಬಾರ್ ಅಥವಾ ಟ್ರಿಪಲ್ ಫಿಂಗರ್‌ನಂತಹ ಯಾವುದೇ ವೈಶಿಷ್ಟ್ಯವನ್ನು ಒದಗಿಸಲಾಗಿಲ್ಲ. ಐಫೋನ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು, ಸಾಮಾನ್ಯವಾಗಿ ಬಳಕೆದಾರರು ವಾಲ್ಯೂಮ್ ಡೌನ್ ಬಟನ್ ಮತ್ತು ಪವರ್ ಬಟನ್ ಅನ್ನು ಏಕಕಾಲದಲ್ಲಿ ಒತ್ತಬೇಕಾಗುತ್ತದೆ. ಅನೇಕ ಸ್ಥಳಗಳಲ್ಲಿ ಇದು ಸಾಕಷ್ಟು ಕಿರಿಕಿರಿಯನ್ನು ತೋರುತ್ತದೆ.

ಆದರೆ ಆಂಡ್ರಾಯ್ಡ್‌ಗಿಂತಲೂ ಸುಲಭವಾದ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳಲು ಆ್ಯಪಲ್ ಒಂದು ವೈಶಿಷ್ಟ್ಯವನ್ನು ಒದಗಿಸಿದೆದೆ ಎಂದು ನಿಮಗೆ ತಿಳಿದಿದೆಯೇ. ಇದು ಅನೇಕರಿಗೆ ತಿಳಿದಿಲ್ಲ.. ಒಂದು ಬೆರಳಿನಿಂದ ಎರಡು ಬಾರಿ ಟ್ಯಾಪ್ ಮಾಡುವ ಮೂಲಕ ನೀವು ಐಫೋನ್​ನಲ್ಲಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬಹುದು.

Tech Tips: ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಚಾರ್ಜ್ ಬೇಗನೆ ಖಾಲಿಯಾಗಲು ಏನು ಕಾರಣ?: ಈ ರೀತಿ ಬಳಸಬೇಡಿ

ಐಫೋನ್‌ನಲ್ಲಿ ಡಬಲ್ ಟ್ಯಾಪ್ ಸ್ಕ್ರೀನ್‌ಶಾಟ್ ಆಯ್ಕೆಯನ್ನು ಹೇಗೆ ಸಕ್ರಿಯಗೊಳಿಸುವುದು:

ಹಂತ 1-   ಮೊದಲು ಐಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ.

ಹಂತ 2- ಈಗ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಆ್ಯಕ್ಸೆಸೆಬಿಲಿಟಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 3- ಇಲ್ಲಿ ಟಚ್ ಆಯ್ಕೆಯನ್ನು ಪಡೆಯುತ್ತೀರಿ. ಅದನ್ನು ಕ್ಲಿಕ್ ಮಾಡಿ

ಹಂತ 4- ಈಗ ನೀವು ಹೊಸ ಪುಟದ ಕೆಳಭಾಗದಲ್ಲಿ ಬ್ಯಾಕ್ ಟ್ಯಾಪ್ ಆಯ್ಕೆಯನ್ನು ಕಾಣುತ್ತೀರಿ, ಅದರ ಮೇಲೆ ಕ್ಲಿಕ್ ಮಾಡಿ.

ಹಂತ 5- ಬ್ಯಾಕ್ ಟ್ಯಾಪ್‌ನಲ್ಲಿ ನೀವು ಎರಡು ಆಯ್ಕೆಗಳನ್ನು ಪಡೆಯುತ್ತೀರಿ ಅದರಲ್ಲಿ ನೀವು ಡಬಲ್ ಟ್ಯಾಪ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ.

ಹಂತ 6- ಡಬಲ್ ಟ್ಯಾಪ್‌ನಲ್ಲಿ, ನೀವು ಸ್ಕ್ರೀನ್‌ಶಾಟ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಹೋಮ್ ಸ್ಕ್ರೀನ್‌ಗೆ ಬರಬೇಕು.

ಹಂತ 7- ಈಗ ನೀವು ಐಫೋನ್‌ನ ಹಿಂಭಾಗದ ಪ್ಯಾನೆಲ್‌ನಲ್ಲಿರುವ ಕ್ಯಾಮೆರಾದ ಕೆಳಗಡೆ ಬೆರಳಿನಿಂದ ಎರಡು ಬಾರಿ ಟ್ಯಾಪ್ ಮಾಡುವ ಮೂಲಕ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಳ್ಳಬಹುದು.

ಇನ್ನು ಆ್ಯಪಲ್ ತನ್ನ ಐಫೋನ್ ಬಳಕೆದಾರರಿಗೆ ಇತ್ತೀಚೆಗಷ್ಟೆ iOS 18.1 ಅಪ್ಡೇಟ್ ಹೊರತಂದಿದೆ. ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯವನ್ನು ಸಹ ಈ ಅಪ್‌ಡೇಟ್‌ನಲ್ಲಿ ಸೇರಿಸಲಾಗಿದೆ. ಇಲ್ಲಿಯವರೆಗೆ ಐಫೋನ್ ಬಳಕೆದಾರರು ಫೋನ್‌ನಲ್ಲಿ ಕರೆ ರೆಕಾರ್ಡಿಂಗ್ ಸೌಲಭ್ಯವನ್ನು ಪಡೆಯುತ್ತಿರಲಿಲ್ಲ, ಆದರೆ ಈಗ ಈ ಹೊಸ ಅಪ್‌ಡೇಟ್‌ನೊಂದಿಗೆ ಕಂಪನಿಯು ಬಳಕೆದಾರರ ಅನುಕೂಲಕ್ಕಾಗಿ ಈ ವೈಶಿಷ್ಟ್ಯವನ್ನು ಸಹ ಸೇರಿಸಿದೆ. ಫೋನ್ ಅನ್ನು ನವೀಕರಿಸಿದ ನಂತರ, ನೀವು ಕರೆ ಮಾಡಿದ ತಕ್ಷಣ ಅಥವಾ ಸ್ವೀಕರಿಸಿದ ತಕ್ಷಣ, ನೀವು ಫೋನ್‌ನ ಎಡಭಾಗದಲ್ಲಿ ಸಣ್ಣ ಐಕಾನ್ ಅನ್ನು ನೋಡುತ್ತೀರಿ. ಐಕಾನ್ ಮೇಲೆ ಕ್ಲಿಕ್ ಮಾಡಿದ ನಂತರ ನೀವು ಕಂಟುನ್ಯೂ ಮೇಲೆ ಟ್ಯಾಪ್ ಮಾಡಬೇಕು. ಕರೆ ಮುಗಿದ ನಂತರ, ನೀವು ಅದರ ಮೇಲೆ ಕ್ಲಿಕ್ ಮಾಡಿ ಮತ್ತು ರೆಕಾರ್ಡಿಂಗ್ ಅನ್ನು ಕೇಳಬಹುದಾದ. ಇದು ಪಾಪ್-ಅಪ್ ಅನ್ನು ನಿಮಗೆ ತೋರಿಸಲಾಗುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ