AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಫೋನ್ ಪೇ, ಗೂಗಲ್ ಪೇನಲ್ಲಿ ಹಣ ಕಳುಹಿಸುವಾಗ ಅರ್ಧಕ್ಕೆ ನಿಂತರೆ ಏನು ಮಾಡಬೇಕು?

ಹಲವು ಬಾರಿ ನಿಮ್ಮ ಖಾತೆಯಿಂದ ಹಣ ಕಡಿತಗೊಂಡರೂ ವ್ಯಾಪಾರಿ ಅಥವಾ ಸ್ವೀಕರಿಸುವವರನ್ನು ತಲುಪುವುದಿಲ್ಲ. ಅಂತಹ ಸಂದರ್ಭದಲ್ಲಿ, ನೀವು ತಕ್ಷಣ ವ್ಯಾಪಾರಿ ಅಥವಾ ಸ್ವೀಕರಿಸುವವರನ್ನು ಸಂಪರ್ಕಿಸಬೇಕು. ಹಣ ಅವರನ್ನು ತಲುಪಿಲ್ಲ ಎಂದು ದೃಢೀಕರಿಸಿಕೊಳ್ಳಬೇಕು. ಸಾಮಾನ್ಯವಾಗಿ 60 ಸೆಕೆಂಡುಗಳ ಒಳಗೆ ನಿಮಗೆ ವಹಿವಾಟು ವಿಫಲವಾದ ಸಂದೇಶ ಬರುತ್ತದೆ.

Tech Tips: ಫೋನ್ ಪೇ, ಗೂಗಲ್ ಪೇನಲ್ಲಿ ಹಣ ಕಳುಹಿಸುವಾಗ ಅರ್ಧಕ್ಕೆ ನಿಂತರೆ ಏನು ಮಾಡಬೇಕು?
Upi Payment
Vinay Bhat
|

Updated on: Jun 14, 2025 | 3:10 PM

Share

ಬೆಂಗಳೂರು (ಜೂ. 14): ಫೋನ್ ಪೇ (PhonePe), ಗೂಗಲ್ ಪೇ, ಪೇಟಿಎಮ್​ ನಂತಹ ಯುಪಿಐ ಅಪ್ಲಿಕೇಶನ್‌ಗಳನ್ನು ಬಳಸುವ ಬಳಕೆದಾರರು ಪಾವತಿ ಮಾಡುವಾಗ ಅದು ಅರ್ಧಕ್ಕೆ ಸಿಲುಕಿಕೊಳ್ಳುವ ಪ್ರಮೇಯ ಕೆಲವು ಬಾರಿ ಆಗುತ್ತದೆ. ದೇಶದಲ್ಲಿ ಯುಪಿಐ ಬಳಕೆದಾರರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ, ಇದರಿಂದಾಗಿ ಸರ್ವರ್‌ನಲ್ಲಿ ಹೆಚ್ಚಿನ ಲೋಡ್ ಇರುತ್ತದೆ. ವಿಶೇಷವಾಗಿ ಸಂಜೆ, ಬಳಕೆದಾರರು ಯುಪಿಐ ಪಾವತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಯಾವುದೇ ಕಾರಣಕ್ಕಾಗಿ, ನಿಮ್ಮ ಯುಪಿಐ ವಹಿವಾಟು ಸಿಲುಕಿಕೊಂಡರೆ ಮತ್ತು ಖಾತೆಯಿಂದ ಹಣವನ್ನು ಕಡಿತಗೊಳಿಸಿದರೆ, ನೀವು ಭಯಪಡುವ ಅಗತ್ಯವಿಲ್ಲ. ಫೋನ್ ಪೇ, ಗೂಗಲ್ ಪೇ, ಪೇಟಿಎಮ್ ನಂತಹ UPI ಅಪ್ಲಿಕೇಶನ್‌ಗಳಲ್ಲಿ, ಈ ಹಣವನ್ನು ಸುಲಭವಾಗಿ ಹಿಂತಿರುಗಿಸಲಾಗುತ್ತದೆ.

ಈ ಕೆಲಸ ತಕ್ಷಣ ಮಾಡಿ

ಹಲವು ಬಾರಿ ನಿಮ್ಮ ಖಾತೆಯಿಂದ ಹಣ ಕಡಿತಗೊಂಡರೂ ವ್ಯಾಪಾರಿ ಅಥವಾ ಸ್ವೀಕರಿಸುವವರನ್ನು ತಲುಪುವುದಿಲ್ಲ. ಅಂತಹ ಸಂದರ್ಭದಲ್ಲಿ, ನೀವು ತಕ್ಷಣ ವ್ಯಾಪಾರಿ ಅಥವಾ ಸ್ವೀಕರಿಸುವವರನ್ನು ಸಂಪರ್ಕಿಸಬೇಕು. ಹಣ ಅವರನ್ನು ತಲುಪಿಲ್ಲ ಎಂದು ದೃಢೀಕರಿಸಿಕೊಳ್ಳಬೇಕು. ಸಾಮಾನ್ಯವಾಗಿ 60 ಸೆಕೆಂಡುಗಳ ಒಳಗೆ ನಿಮಗೆ ವಹಿವಾಟು ವಿಫಲವಾದ ಸಂದೇಶ ಬರುತ್ತದೆ. ನಿಮ್ಮ ಅಪ್ಲಿಕೇಶನ್‌ನಲ್ಲಿ ಪಾವತಿ ಬಾಕಿ ಇದ್ದರೆ, ನೀವು ಯುಪಿಐ ಸೇವಾ ಪೂರೈಕೆದಾರರನ್ನು ಸಂಪರ್ಕಿಸಬೇಕು.

ಇದನ್ನೂ ಓದಿ
Image
Google Cloud outage: ವಿಶ್ವಾದ್ಯಂತ ಗೂಗಲ್ ಕ್ಲೌಡ್ ಡೌನ್
Image
ಲಕ್ಷಾಂತರ ಆಂಡ್ರಾಯ್ಡ್ ಬಳಕೆದಾರರಿಗೆ ಎಚ್ಚರಿಕೆ: ಈ ಆಪ್ ತಕ್ಷಣ ಡಿಲೀಟ್ ಮಾಡಿ
Image
ALERT: ನೀವು ಕಾಲ್​ನಲ್ಲಿ ಮಾತನಾಡುವಾಗ ಇಂಟರ್ನೆಟ್ ಆನ್‌ ಆಗಿದ್ದರೆ ಎಚ್ಚರ
Image
ಮೊಬೈಲ್ ಚಾರ್ಜರ್​ನಲ್ಲಿ ಕಪ್ಪು ಕೊಳಕಿದ್ದರೆ ಅದನ್ನು ಬಿಳಿ ಮಾಡೋದು ಹೇಗೆ?

ಇದರ ಬಗ್ಗೆ ದೂರು ನೀಡಲು, ನೀವು ನಿಮ್ಮ ಫೋನ್ ಪೇ, ಗೂಗಲ್ ಪೇ, ಪೇಟಿಎಮ್ ಅಪ್ಲಿಕೇಶನ್‌ನ ವಹಿವಾಟು ಇತಿಹಾಸಕ್ಕೆ ಹೋಗಬೇಕಾಗುತ್ತದೆ. ಇಲ್ಲಿ ನೀವು ತಪ್ಪು ವರ್ಗಾವಣೆಯನ್ನು ಆಯ್ಕೆ ಮಾಡಿ ದೂರು ನೀಡಲು ಕ್ವೆರಿ ಎತ್ತಬೇಕಾಗುತ್ತದೆ. ಇದರ ನಂತರ, ವಹಿವಾಟು ಐಡಿ, ಯುಪಿಐ ಐಡಿ, ಮೊತ್ತ, ದಿನಾಂಕ ಮತ್ತು ಸಮಯ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ಮೂಲಕ ದೂರು ನೀಡಿ.

Google Cloud outage: ವಿಶ್ವಾದ್ಯಂತ ಗೂಗಲ್ ಕ್ಲೌಡ್ ಡೌನ್: ಅಮೆಜಾನ್ ವೆಬ್ ಸಿರೀಸ್, ಸ್ನ್ಯಾಪ್‌ಚಾಟ್ ಏಕಕಾಲದಲ್ಲಿ ಕ್ರ್ಯಾಶ್

NPCI ಮತ್ತು RBI ಅನ್ನು ಸಂಪರ್ಕಿಸಿ

ಇದಲ್ಲದೆ, ನೀವು ಲ್ಯಾಂಡರ್ ಬ್ಯಾಂಕಿನ ಗ್ರಾಹಕ ಸೇವೆಯನ್ನು ಸಂಪರ್ಕಿಸಿ ವಹಿವಾಟಿನಲ್ಲಿನ ಸಮಸ್ಯೆಯ ಬಗ್ಗೆ ಅವರಿಗೆ ಹೇಳಬಹುದು. ಪ್ರತಿಯೊಂದು ಬ್ಯಾಂಕ್ UPI ಪಾವತಿಗಳಿಗಾಗಿ ಮೀಸಲಾದ ಪರಿಹಾರ ಕಾರ್ಯವಿಧಾನವನ್ನು ಹೊಂದಿದೆ. ಆದಾಗ್ಯೂ, ಕೆಲವೊಮ್ಮೆ ಬ್ಯಾಂಕ್ ನಿಮ್ಮನ್ನು ಲಿಖಿತವಾಗಿ ದೂರು ನೀಡಲು ಅಥವಾ ಶಾಖೆಗೆ ಭೇಟಿ ನೀಡಲು ಕೇಳುತ್ತದೆ. ಅಪ್ಲಿಕೇಶನ್ ಮತ್ತು ಬ್ಯಾಂಕ್ ನಿಮ್ಮ ವಹಿವಾಟಿನಲ್ಲಿ ಸಮಸ್ಯೆಯನ್ನು ಪರಿಹರಿಸದಿದ್ದರೆ, ನೀವು ನಿಮ್ಮ ದೂರನ್ನು NPCI ಗೆ ರವಾನಿಸಬಹುದು.

ಇದಕ್ಕಾಗಿ, NPCI ಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ವಿವಾದ ಪರಿಹಾರ ವಿಭಾಗಕ್ಕೆ ಹೋಗಿ ನಿಮ್ಮ ವಹಿವಾಟಿನ ವಿವರಗಳನ್ನು ನಮೂದಿಸಿ. ಇದಾದ ನಂತರ, ನೀವು ದೂರಿನೊಂದಿಗೆ ಪೂರಕ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. NPCI ಯಿಂದಲೂ ನಿಮಗೆ ಪರಿಹಾರ ಸಿಗದಿದ್ದರೆ, ನೀವು RBI ಅನ್ನು ಸಂಪರ್ಕಿಸಬಹುದು. NPCI ಗೆ ದೂರು ನೀಡಿದ 30 ದಿನಗಳ ನಂತರವೇ ನೀವು ರಿಸರ್ವ್ ಬ್ಯಾಂಕ್ ಅನ್ನು ಸಂಪರ್ಕಿಸಬಹುದು ಎಂಬುದನ್ನು ನೆನಪಿನಲ್ಲಿಡಿ.

ಯುಪಿಐ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ

  • ಪಾವತಿ ಮಾಡುವ ಮೊದಲು ಸ್ವೀಕರಿಸುವವರ UPI ಐಡಿಯನ್ನು ದೃಢೀಕರಿಸಿ.
  • ಸ್ವೀಕರಿಸುವವರ ಹೆಸರು UPI ಐಡಿಗೆ ಹೊಂದಿಕೆಯಾಗುತ್ತದೆಯೇ ಎಂದು ಪರಿಶೀಲಿಸಿ.
  • QR ಕೋಡ್‌ಗಳನ್ನು ಸ್ಕ್ಯಾನ್ ಮಾಡುವಾಗ ಜಾಗರೂಕರಾಗಿರಿ.
  • ತಪ್ಪಾಗಿ ಸಹ ಅಪರಿಚಿತ UPI ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?