AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp Ban: ವಾಟ್ಸ್ಆ್ಯಪ್ ಬ್ಯಾನ್ ಆಗಿರುವ ಆ 6 ದೇಶಗಳು ಯಾವುವು ಗೊತ್ತೇ?

WhatsApp Ban Country: ಪ್ರಪಂಚದಾದ್ಯಂತ ವಾಟ್ಸ್ಆ್ಯಪ್ ಅತ್ಯಂತ ಜನಪ್ರಿಯ ಅಪ್ಲಿಕೇಷನ್ ಆಗಿದೆ. ಆದರೆ ಕೆಲವು ದೇಶಗಳಲ್ಲಿ ವಾಟ್ಸ್ಆ್ಯಪ್ ಅನ್ನು ನಿರ್ಬಂಧಿಸಲಾಗಿದೆ. ಇಂದು ನಾವು ನಿಮಗೆ ಯಾವ ಯಾವ ದೇಶಗಳಲ್ಲಿ ವಾಟ್ಸ್ಆ್ಯಪ್ ಬಳಕೆಯನ್ನು ಸೀಮಿತಗೊಳಿಸಲಾಗಿದೆ ಅಥವಾ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಮತ್ತು ನಿಷೇಧದ ಹಿಂದಿನ ಕಾರಣವೇನು ಎಂಬುದರ ಕುರಿತು ಮಾಹಿತಿಯನ್ನು ನೀಡುತ್ತೇವೆ.

WhatsApp Ban: ವಾಟ್ಸ್ಆ್ಯಪ್ ಬ್ಯಾನ್ ಆಗಿರುವ ಆ 6 ದೇಶಗಳು ಯಾವುವು ಗೊತ್ತೇ?
Whatsapp Ban Country
Vinay Bhat
|

Updated on: Jun 07, 2025 | 11:23 AM

Share

ಬೆಂಗಳೂರು (ಜೂ. 07): ಮೆಟಾ ಒಡೆತನದ ವಾಟ್ಸ್​ಆ್ಯಪ್ (WhatsApp) ತುಂಬಾ ಜನಪ್ರಿಯವಾದ ಇನ್​ಸ್ಟೆಂಟ್ ಮೆಸೇಜಿಂಗ್ ಆಪ್ ಆಗಿದ್ದು, ಇದಕ್ಕೆ ಯಾವುದೇ ಪರಿಚಯದ ಅಗತ್ಯವಿಲ್ಲ. ಪ್ರತಿದಿನ ಲಕ್ಷಾಂತರ ಸಕ್ರಿಯ ಬಳಕೆದಾರರು ಈ ಆಪ್ ಬಳಸುತ್ತಾರೆ. ಆದರೆ ವಾಟ್ಸ್​ಆ್ಯಪ್ ಬಳಸುವ ಹೆಚ್ಚಿನ ಜನರಿಗೆ ವಾಟ್ಸ್​ಆ್ಯಪ್ ಅನ್ನು ‘ಲಾಕ್’ ಮಾಡಲಾಗಿದೆ ಅಥವಾ ನಿಷೇಧಿಸಲಾದ 6 ದೇಶಗಳ ಬಗ್ಗೆ ತಿಳಿದಿಲ್ಲ. ಪ್ರಪಂಚದ ಹೆಚ್ಚಿನ ದೇಶಗಳಲ್ಲಿ ವಾಟ್ಸ್​ಆ್ಯಪ್ ಬಳಸಲಾಗುತ್ತಿದೆ, ಆದರೆ ಕೆಲವು ದೇಶಗಳಲ್ಲಿ ಇದನ್ನು ನಿಷೇಧಿಸಲಾಗಿದೆ. ಚೀನಾ, ಇರಾನ್, ಸಿರಿಯಾ, ಉತ್ತರ ಕೊರಿಯಾ, ಕತಾರ್ ಮತ್ತು ಯುಎಇಯಂತಹ ದೇಶಗಳಲ್ಲಿ ವಾಟ್ಸ್​ಆ್ಯಪ್ ಕಾರ್ಯನಿರ್ವಹಿಸುವುದಿಲ್ಲ.

ವಾಟ್ಸ್​ಆ್ಯಪ್ ಕೆಲಸ ಮಾಡದ 6 ದೇಶಗಳು ಇವು

ಚೀನಾ: ವ್ಯಾಪಕ ಇಂಟರ್ನೆಟ್ ನಿಯಂತ್ರಣದ ಭಾಗವಾಗಿ ವಾಟ್ಸ್​ಆ್ಯಪ್ ಅನ್ನು ನಿರ್ಬಂಧಿಸಲಾಗಿದೆ. ಡೇಟಾ ನೀತಿಗಳೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ವಿಚಾಟ್ (WeChat) ನಂತಹ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಅಪ್ಲಿಕೇಶನ್‌ಗಳನ್ನು ಸರ್ಕಾರ ಬಳಕೆ ಮಾಡುತ್ತಿದೆ.

ಉತ್ತರ ಕೊರಿಯಾ: ಉತ್ತರ ಕೊರಿಯಾದಲ್ಲಿ ಇಂಟರ್ನೆಟ್ ತುಂಬಾ ನಿರ್ಬಂಧಿತವಾಗಿದೆ, ಹೆಚ್ಚಿನ ನಾಗರಿಕರಿಗೆ ಇಂಟರ್ನೆಟ್ ಪ್ರವೇಶವಿಲ್ಲ. ಉನ್ನತ ಮಟ್ಟದ ಅಧಿಕಾರಿಗಳು ಮಾತ್ರ ಇಂಟರ್ನೆಟ್ ಬಳಸಬಹುದು, ಇತರರು ಕ್ವಾಂಗ್ಮ್ಯೊಂಗ್ ಎಂಬ ಅಂತರ್ಜಾಲವನ್ನು ಬಳಸಬೇಕಾಗುತ್ತದೆ.

ಇದನ್ನೂ ಓದಿ
Image
ಭಾರತದಲ್ಲಿ ಒನ್​ಪ್ಲಸ್​ನಿಂದ ಆಕರ್ಷಕ ಸ್ಮಾರ್ಟ್​​ಫೋನ್ ಬಿಡುಗಡೆ
Image
ಇನ್‌ಸ್ಟಾ, ಫೇಸ್‌ಬುಕ್‌ನಂತೆ ವಾಟ್ಸ್ಆ್ಯಪ್​ನಲ್ಲೂ ಲಾಗ್ ಔಟ್ ಮಾಡಬಹುದು
Image
Tech Utility: ಕೂಲರ್‌ ನೀರನ್ನು ಎಷ್ಟು ದಿನಗಳ ನಂತರ ಬದಲಾಯಿಸಬೇಕು?
Image
ಐಫೋನ್ 15 ಫೋನಿನ 256GB ಬೆಲೆಯಲ್ಲಿ ಭಾರೀ ಕುಸಿತ

ಇರಾನ್: ವಾಟ್ಸ್​ಆ್ಯಪ್ ಬಗ್ಗೆ ಇರಾನ್‌ನ ನಿಲುವು ಕಾಲಾನಂತರದಲ್ಲಿ ಬದಲಾಗಿದೆ. ರಾಜಕೀಯ ಅಶಾಂತಿಯ ಸಮಯದಲ್ಲಿ ಇದನ್ನು ನಿಷೇಧಿಸಲಾಯಿತು, ಇತ್ತೀಚಿನ ವರದಿಗಳು ನಿರ್ಬಂಧಗಳನ್ನು ಸ್ವಲ್ಪಮಟ್ಟಿಗೆ ಸಡಿಲಿಸಲಾಗಿದೆ ಎಂದು ಸೂಚಿಸುತ್ತವೆ ಆದರೆ ಬಳಕೆದಾರರು ಇನ್ನೂ ವಾಟ್ಸ್​ಆ್ಯಪ್ ಅನ್ನು ಪ್ರವೇಶಿಸುವಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದಾರೆ. ವಾಟ್ಸ್​ಆ್ಯಪ್ ಬಳಸಲು ಬಳಕೆದಾರರು VPN ಗಳನ್ನು ಅವಲಂಬಿಸಬೇಕಾಗಿದೆ.

OnePlus 13s: ಸ್ನಾಪ್‌ಡ್ರಾಗನ್ 8 ಎಲೈಟ್ SoC, 5850mAh ಬ್ಯಾಟರಿ: ಭಾರತದಲ್ಲಿ ಒನ್​ಪ್ಲಸ್​ನಿಂದ ಆಕರ್ಷಕ ಸ್ಮಾರ್ಟ್​​ಫೋನ್ ಬಿಡುಗಡೆ

ಯುಎಇ: ವಾಟ್ಸ್​ಆ್ಯಪ್ ಸಂದೇಶ ಕಳುಹಿಸುವಿಕೆಯು ಯುಎಇಯಲ್ಲಿ ಕಾರ್ಯನಿರ್ವಹಿಸುತ್ತದೆ, ಆದರೆ ಧ್ವನಿ ಮತ್ತು ವಿಡಿಯೋ ಕರೆ ವೈಶಿಷ್ಟ್ಯಗಳನ್ನು ನಿರ್ಬಂಧಿಸಲಾಗಿದೆ. ಈ ನಿರ್ಧಾರವು ದೇಶದ ದೂರಸಂಪರ್ಕ ನೀತಿಗಳು ಮತ್ತು ಸ್ಥಳೀಯ ನಿಯಮಗಳಿಗೆ ಅನುಗುಣವಾಗಿ ಪರ್ಯಾಯ ಪರವಾನಗಿ ಪಡೆದ ಅಪ್ಲಿಕೇಶನ್‌ಗಳಿಗೆ ಸಂಬಂಧಿಸಿದೆ.

ಸಿರಿಯಾ: ಸಿರಿಯಾ ವಾಟ್ಸ್​ಆ್ಯಪ್ ನಂತಹ ಎನ್‌ಕ್ರಿಪ್ಟ್ ಮಾಡಿದ ಸಂವಹನ ಸಾಧನಗಳನ್ನು ನಿಷೇಧಿಸಿದೆ, ಆದರೆ ಅದನ್ನು ಸ್ವಲ್ಪ ಮಟ್ಟಿಗೆ ವಿಪಿಎನ್ ಮೂಲಕ ಬಳಸಬಹುದು.

ಕತಾರ್: ಕತಾರ್‌ನಲ್ಲಿ ವಾಟ್ಸ್​ಆ್ಯಪ್​ನ ಧ್ವನಿ ಮತ್ತು ವಿಡಿಯೋ ಕರೆ ವೈಶಿಷ್ಟ್ಯಗಳನ್ನು ನಿರ್ಬಂಧಿಸಲಾಗಿದೆ, ಆದರೆ ಟೆಕ್ಸ್ಟ್ ಸಂದೇಶ ಕಳುಹಿಸುವಿಕೆಯು ಯಾವುದೇ ಸಮಸ್ಯೆಗಳಿಲ್ಲದೆ ಕಾರ್ಯನಿರ್ವಹಿಸುತ್ತದೆ.

ವಾಟ್ಸ್​ಆ್ಯಪ್​ನಲ್ಲಿ ಲಾಗೌಟ್ ಫೀಚರ್:

ವಾಟ್ಸ್​ಆ್ಯಪ್​ನಲ್ಲಿ ಸದ್ಯದಲ್ಲೇ ಲಾಗ್ ಔಟ್ ಆಯ್ಕೆ ಬರಲಿದೆ. ಇದರ ಪ್ರಯೋಜನವೆಂದರೆ ನಿಮಗೆ ವಾಟ್ಸ್​ಆ್ಯಪ್​ ಬಳಸಲು ಇಷ್ಟವಿಲ್ಲದಿದ್ದರೆ, ನೀವು ಲಾಗ್ ಔಟ್ ಮಾಡಲು ಸಾಧ್ಯವಾಗುತ್ತದೆ. ಹೀಗೆ ಮಾಡುವುದರಿಂದ ವಾಟ್ಸ್​ಆ್ಯಪ್​ ನಿಮ್ಮ ಡೇಟಾವನ್ನು ಸುರಕ್ಷಿತವಾಗಿರಿಸುತ್ತದೆ ಮತ್ತು ನೀವು ಯಾವುದೇ ಗ್ರೂಪ್​ನಿಂದ ನೀವು ಎಕ್ಸಿಟ್ ಆಗುವುದಿಲ್ಲ. ಪ್ರಸ್ತುತ ವಾಟ್ಸ್​ಆ್ಯಪ್​ನಲ್ಲಿ ಲಾಗ್ ಔಟ್ ಆಯ್ಕೆ ಇಲ್ಲ. ಬಳಕೆದಾರರಿಗೆ ವಾಟ್ಸ್​ಆ್ಯಪ್ ಬೇಡ ಎಂದಾದರೆ ಅವರಿಗೆ ಅದನ್ನು ಡಿಲೀಟ್ ಮಾಡಲು ಆಯ್ಕೆಯನ್ನು ನೀಡಲಾಗಿದೆ. ಆದರೆ, ಈ ಆಯ್ಕೆ ಮಾಡಿದಾಗ ಬಳಕೆದಾರ ತನ್ನೆಲ್ಲ ವಾಟ್ಸ್​ಆ್ಯಪ್​ ಡೇಟಾವನ್ನು ಕಳೆದುಕೊಳ್ಳುತ್ತಾನೆ. ಲಾಗ್ ಔಟ್ ಆಯ್ಕೆಯು ವಾಟ್ಸ್​ಆ್ಯಪ್​ ವೆಬ್‌ನಲ್ಲಿ ಲಭ್ಯವಿದ್ದರೂ, ಅದು ವೆಬ್ ಆವೃತ್ತಿಯಿಂದ ಅಂದರೆ ಕಂಪ್ಯೂಟರ್‌ನಿಂದ ಲಾಗ್ ಔಟ್ ಆಗುತ್ತದೆ ಅಷ್ಟೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ