AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವಕಪ್​ನ​ ನೇರ ಆಯ್ಕೆಯಿಂದ ಔಟ್: ವಿಂಡೀಸ್ ಮುಂದಿದೆ 2 ಹಾದಿಗಳು!

ODI World Cup 2027: ವೆಸ್ಟ್ ಇಂಡೀಸ್ ಕ್ರಿಕೆಟ್‌ಗೆ ಮತ್ತೊಂದು ಭಾರಿ ಆಘಾತ ಎದುರಾಗಿದೆ. 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಗೆ ನೇರವಾಗಿ ಅರ್ಹತೆ ಪಡೆಯುವಲ್ಲಿ ಕೆರಿಬಿಯನ್ ಪಡೆ ಮತ್ತೊಮ್ಮೆ ಮುಗ್ಗರಿಸಿದೆ. ಇತ್ತೀಚೆಗೆ ನಡೆದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ್ ತಂಡ ಭರ್ಜರಿ ಜಯಭೇರಿ ಬಾರಿಸುತ್ತಿದ್ದಂತೆ, ವೆಸ್ಟ್ ಇಂಡೀಸ್ ತಂಡದ ನೇರ ಅರ್ಹತೆಯ ಕೊನೆಯ ಆಸೆಯೂ ಅಧಿಕೃತವಾಗಿ ಕಮರಿಹೋಗಿದೆ. ವಿಂಡೀಸ್ ಪಾಲಿಗೆ ಇನ್ನುಳಿದಿರುವುದು ಅರ್ಹತಾ ಸುತ್ತಿನ ಆಯ್ಕೆ ಒಂದೇ!

ವಿಶ್ವಕಪ್​ನ​ ನೇರ ಆಯ್ಕೆಯಿಂದ ಔಟ್: ವಿಂಡೀಸ್ ಮುಂದಿದೆ 2 ಹಾದಿಗಳು!
West Indies Image Credit source: Espn
ಝಾಹಿರ್ ಯೂಸುಫ್
|

Updated on: Aug 11, 2026 | 10:48 AM

Share

ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಗೆ ನೇರವಾಗಿ ಅರ್ಹತೆ ಪಡೆಯುವಲ್ಲಿ ವೆಸ್ಟ್ ಇಂಡೀಸ್​ ತಂಡ ಮತ್ತೊಮ್ಮೆ ವಿಫಲವಾಗಿದೆ. ಇತ್ತೀಚೆಗೆ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡವು ಐರ್ಲೆಂಡ್ ವಿರುದ್ಧ ಜಯಭೇರಿ ಬಾರಿಸುತ್ತಿದ್ದಂತೆ, ವೆಸ್ಟ್ ಇಂಡೀಸ್ ತಂಡದ ನೇರ ಅರ್ಹತೆಯ ಎಲ್ಲ ಅವಕಾಶಗಳೂ ಅಧಿಕೃತವಾಗಿ ಮುಚ್ಚಿಹೋಗಿವೆ. ಇದರೊಂದಿಗೆ ಕೆರಿಬಿಯನ್ ಪಡೆ ಸತತ ಮೂರನೇ ಬಾರಿಗೆ ವಿಶ್ವಕಪ್‌ಗಾಗಿ ಅರ್ಹತಾ ಸುತ್ತಿನ ಕಠಿಣ ಹಾದಿ ಹಿಡಿಯುವುದು ಅನಿವಾರ್ಯವಾಗಿದೆ.

ವೆಸ್ಟ್ ಇಂಡೀಸ್ ಔಟ್!

ಐಸಿಸಿ ನಿಯಮಾವಳಿಗಳ ಪ್ರಕಾರ, ಸೆಪ್ಟೆಂಬರ್ 30, 2026ರ ಕಟ್-ಆಫ್ ಅವಧಿಯೊಳಗೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರ 8ರ ಒಳಗಿರುವ ತಂಡಗಳು ಮಾತ್ರ ನೇರ ಅರ್ಹತೆ ಪಡೆಯುತ್ತವೆ. ಸದ್ಯ 10ನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್, ಬರುವ ಸೆಪ್ಟೆಂಬರ್‌ನಲ್ಲಿ ಭಾರತದ ವಿರುದ್ಧ ನಡೆಯಲಿರುವ ಮುಂದಿನ ಎರಡೂ ಏಕದಿನ ಪಂದ್ಯಗಳನ್ನು ಗೆದ್ದರೂ ಸಹ ಅಗ್ರ 8ರೊಳಗೆ ಬರಲು ಅಗತ್ಯವಿರುವ ರೇಟಿಂಗ್ ಪಾಯಿಂಟ್‌ಗಳನ್ನು ಗಳಿಸಲು ಸಾಧ್ಯವಿಲ್ಲ. ಹೀಗಾಗಿ, ಅವರು ಅಧಿಕೃತವಾಗಿ ರೇಸ್‌ನಿಂದ ಹೊರಬಿದ್ದಿದ್ದಾರೆ.

ಬದಲಾದ ನಿಯಮ, ಕಠಿಣ ಸವಾಲು:

2027ರ ವಿಶ್ವಕಪ್ ಒಟ್ಟು 14 ತಂಡಗಳ ನಡುವೆ ನಡೆಯಲಿದ್ದು, ಈಗಾಗಲೇ ಆತಿಥೇಯರಾದ ಸೌತ್ ಆಫ್ರಿಕಾ ಮತ್ತು ಝಿಂಬಾಬ್ವೆ ಸೇರಿದಂತೆ ಒಟ್ಟು 10 ತಂಡಗಳು ಸ್ಥಾನ ಭದ್ರಪಡಿಸಿಕೊಂಡಿವೆ. ಉಳಿದ ಕೇವಲ 4 ಸ್ಥಾನಗಳಿಗಾಗಿ 2027ರ ಫೆಬ್ರವರಿ 22 ರಿಂದ ಮಾರ್ಚ್ 23 ರವರೆಗೆ ಬಲಿಷ್ಠ 10 ತಂಡಗಳ ನಡುವೆ ‘ಗ್ಲೋಬಲ್ ಕ್ವಾಲಿಫೈಯರ್’ (ಅರ್ಹತಾ ಸುತ್ತು) ಟೂರ್ನಿ ನಡೆಯಲಿದೆ.

ಈ ಬಾರಿ ಐಸಿಸಿ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಕ್ವಾಲಿಫೈಯರ್ ಟೂರ್ನಿಯಲ್ಲಿ ವಿಜೇತರಾಗುವ ಏಕೈಕ ತಂಡ ಮಾತ್ರ ನೇರವಾಗಿ ವಿಶ್ವಕಪ್‌ನ ಪ್ರಮುಖ 12 ತಂಡಗಳ ಹಂತಕ್ಕೆ ಪ್ರವೇಶಿಸಲಿದೆ. ಇನ್ನುಳಿದ 2, 3 ಮತ್ತು 4ನೇ ಸ್ಥಾನ ಪಡೆಯುವ ತಂಡಗಳು ವಿಶ್ವಕಪ್‌ನ ಆರಂಭದಲ್ಲಿ ‘ಸೂಪರ್ ಸೀರೀಸ್’ ಎಂಬ ತ್ರಿಕೋನ ಸರಣಿಯನ್ನು ಆಡಬೇಕಾಗುತ್ತದೆ. ಅದರಲ್ಲಿ ಅಗ್ರಸ್ಥಾನ ಪಡೆಯುವ ಒಂದು ತಂಡಕ್ಕೆ ಮಾತ್ರ ವಿಶ್ವಕಪ್‌ನ ಕೊನೆಯ ಟಿಕೆಟ್ ಸಿಗಲಿದೆ.

ಸತತ ಮೂರನೇ ಬಾರಿ ಮುಖಭಂಗ:

ವೆಸ್ಟ್ ಇಂಡೀಸ್ ತಂಡವು ಅರ್ಹತಾ ಸುತ್ತನ್ನಾಡುತ್ತಿರುವುದು ಇದು ಸತತ ಮೂರನೇ ಬಾರಿಯಾಗಿದೆ. 2019ರ ವಿಶ್ವಕಪ್‌ಗೆ ಕ್ವಾಲಿಫೈಯರ್ ಮೂಲಕ ಅರ್ಹತೆ ಪಡೆದಿದ್ದ ಕೆರಿಬಿಯನ್ ಪಡೆ, 2023ರ ಝಿಂಬಾಬ್ವೆ ಕ್ವಾಲಿಫೈಯರ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿ ಇತಿಹಾಸದಲ್ಲೇ ಮೊದಲ ಬಾರಿಗೆ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯದೆ ಹೊರಬಿದ್ದಿತ್ತು. ಆ ಕರಾಳ ಇತಿಹಾಸ ಮರುಕಳಿಸದಂತೆ ನೋಡಿಕೊಳ್ಳಬೇಕಾದ ಭಾರಿ ಜವಾಬ್ದಾರಿ ಈಗ ವಿಂಡೀಸ್ ಪಡೆ ಮೇಲಿದೆ.

ವಿಂಡೀಸ್ ಮುಂದಿರುವ ಹಾದಿಗಳಾವುವು?

ಮೊದಲ ಹಾದಿ: ಫೆಬ್ರವರಿ 22 ರಿಂದ ಮಾರ್ಚ್ 23, 2027 ರವರೆಗೆ ನಡೆಯಲಿರುವ 10 ತಂಡಗಳ ಗ್ಲೋಬಲ್ ಕ್ವಾಲಿಫೈಯರ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಮೊದಲ ಸ್ಥಾನ (ವಿಜೇತರಾಗಿ) ಪಡೆಯಬೇಕು. ಒಂದು ವೇಳೆ ಕ್ವಾಲಿಫೈಯರ್ ಗೆದ್ದರೆ, ವೆಸ್ಟ್ ಇಂಡೀಸ್ ಯಾವುದೇ ಹೆಚ್ಚುವರಿ ಆತಂಕವಿಲ್ಲದೆ ನೇರವಾಗಿ ವಿಶ್ವಕಪ್‌ನ ಪ್ರಧಾನ ಸುತ್ತಿಗೆ (12 ತಂಡಗಳ ಗುಂಪು ಹಂತ) ಅರ್ಹತೆ ಪಡೆಯುತ್ತದೆ.

ಎರಡನೇ ಹಾದಿ: ಒಂದು ವೇಳೆ ವೆಸ್ಟ್ ಇಂಡೀಸ್ ತಂಡ ಕ್ವಾಲಿಫೈಯರ್ ಟೂರ್ನಿಯನ್ನು ಗೆಲ್ಲಲು ವಿಫಲವಾಗಿ, 2ನೇ, 3ನೇ ಅಥವಾ 4ನೇ ಸ್ಥಾನ ಪಡೆದರೆ, ಅವರಿಗೆ ಐಸಿಸಿ ಹೊಸ ನಿಯಮದ ಪ್ರಕಾರ ಮತ್ತೊಂದು ಕಠಿಣ ಅವಕಾಶ ಸಿಗಲಿದೆ.  ಈ ಮೂರು ತಂಡಗಳು ವಿಶ್ವಕಪ್‌ನ ಆರಂಭಿಕ ಹಂತದಲ್ಲಿ “ಸೂಪರ್ ಸೀರೀಸ್” ಎಂಬ ವಿಶೇಷ ತ್ರಿಕೋನ ಸರಣಿಯನ್ನು ಆಡಬೇಕಾಗುತ್ತದೆ.  ಈ ಮೂರು ತಂಡಗಳಲ್ಲಿ ಯಾರು ಅಗ್ರಸ್ಥಾನ ಪಡೆಯುತ್ತಾರೋ ಅವರಿಗೆ ಮಾತ್ರ ವಿಶ್ವಕಪ್‌ನ ಮುಖ್ಯ ಟೂರ್ನಿಗೆ ಪ್ರವೇಶಿಸಲು ಕೊನೆಯ ಅವಕಾಶ ಸಿಗಲಿದೆ.

ಇದನ್ನೂ ಓದಿ: IPL 2027: ಹಾರ್ದಿಕ್ ಪಾಂಡ್ಯ ಖರೀದಿಗೆ ಐದು ಫ್ರಾಂಚೈಸಿಗಳ ಬಿಗ್ ಪ್ಲ್ಯಾನ್!

ಒಟ್ಟಾರೆಯಾಗಿ ಹೇಳುವುದಾದರೆ, ಎರಡು ಬಾರಿಯ ವಿಶ್ವ ಚಾಂಪಿಯನ್ಸ್ ವೆಸ್ಟ್ ಇಂಡೀಸ್ ತಂಡಕ್ಕೆ ಇದು ಮತ್ತೊಂದು ಅಗ್ನಿಪರೀಕ್ಷೆಯ ಕಾಲ. 2023ರ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯದೆ ಇತಿಹಾಸದಲ್ಲೇ ಮೊದಲ ಬಾರಿಗೆ ದೊಡ್ಡ ಆಘಾತ ಅನುಭವಿಸಿದ್ದ ಕೆರಿಬಿಯನ್ ಪಡೆ, ಈಗ 2027ರ ಟೂರ್ನಿಗೂ ನೇರ ಅರ್ಹತೆ ತಪ್ಪಿಸಿಕೊಂಡು ಅದೇ ಕಠಿಣ ಹಾದಿಗೆ ಮರಳಿದೆ.

Follow Us
ಗೆಳೆಯ ವಾಸುಕಿ ವೈಭವ್​ ಕಾನ್ಸರ್ಟ್​ಗೆ ಟಿಕೆಟ್ ಖರೀದಿಸಿ ಬಂದ ಶೈನ್ ಶೆಟ್ಟಿ
ಗೆಳೆಯ ವಾಸುಕಿ ವೈಭವ್​ ಕಾನ್ಸರ್ಟ್​ಗೆ ಟಿಕೆಟ್ ಖರೀದಿಸಿ ಬಂದ ಶೈನ್ ಶೆಟ್ಟಿ
ಇಂದು ಮಾಸ ಶಿವರಾತ್ರಿ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಮಾಸ ಶಿವರಾತ್ರಿ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಭಾರತ-ಚೀನಾ ಗಡಿ ಬಳಿ ಪ್ರವಾಹ; ಉತ್ತರಾಖಂಡದಲ್ಲಿ ಕೊಚ್ಚಿಹೋದ ಬಿಆರ್‌ಒ ಸೇತುವೆ
ಭಾರತ-ಚೀನಾ ಗಡಿ ಬಳಿ ಪ್ರವಾಹ; ಉತ್ತರಾಖಂಡದಲ್ಲಿ ಕೊಚ್ಚಿಹೋದ ಬಿಆರ್‌ಒ ಸೇತುವೆ
ಬಾಂಗ್ಲಾ ವಲಸಿಗರೆಂಬ ಶಂಕೆ; ಬಸ್ ಅಡ್ಡಗಟ್ಟಿದ ಹಿಂದೂ ಕಾರ್ಯಕರ್ತರು
ಬಾಂಗ್ಲಾ ವಲಸಿಗರೆಂಬ ಶಂಕೆ; ಬಸ್ ಅಡ್ಡಗಟ್ಟಿದ ಹಿಂದೂ ಕಾರ್ಯಕರ್ತರು
‘ಟಾಕ್ಸಿಕ್’ ನಿರ್ದೇಶಕಿ ಗೀತು ಮೋಹನ್​ದಾಸ್ ಹಿನ್ನೆಲೆ ಏನು? ಇಲ್ಲಿದೆ ವಿವರ
‘ಟಾಕ್ಸಿಕ್’ ನಿರ್ದೇಶಕಿ ಗೀತು ಮೋಹನ್​ದಾಸ್ ಹಿನ್ನೆಲೆ ಏನು? ಇಲ್ಲಿದೆ ವಿವರ
ಜಾರ್ಖಂಡ್​​ನಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಸರಿಯಲ್ಲ;ರಾಹುಲ್ ಗಾಂಧಿ
ಜಾರ್ಖಂಡ್​​ನಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಸರಿಯಲ್ಲ;ರಾಹುಲ್ ಗಾಂಧಿ
ಆಸ್ಪತ್ರೆಯಲ್ಲಿ ಚೆನ್ನಮ್ಮರ ಕೊನೆ ಕ್ಷಣಗಳನ್ನ ಹೇಳಿ ಗದ್ಗದಿತರಾದ ದೇವೇಗೌಡ್ರು
ಆಸ್ಪತ್ರೆಯಲ್ಲಿ ಚೆನ್ನಮ್ಮರ ಕೊನೆ ಕ್ಷಣಗಳನ್ನ ಹೇಳಿ ಗದ್ಗದಿತರಾದ ದೇವೇಗೌಡ್ರು
‘ಯಶ್ ಈಗ ರಾಜ್ಯ, ದೇಶ ಗೆದ್ದಾಗಿದೆ, ವಿಶ್ವವನ್ನೂ ಗೆಲ್ತಾರೆ’; ಅಜಯ್ ರಾವ್
‘ಯಶ್ ಈಗ ರಾಜ್ಯ, ದೇಶ ಗೆದ್ದಾಗಿದೆ, ವಿಶ್ವವನ್ನೂ ಗೆಲ್ತಾರೆ’; ಅಜಯ್ ರಾವ್
ರಾಸಾಯನಿಕ ತ್ಯಾಜ್ಯ: 3 ಕೈಗಾರಿಕೆ ಮುಚ್ಚಲು ಈಶ್ವರ ಖಂಡ್ರೆ ಸೂಚನೆ
ರಾಸಾಯನಿಕ ತ್ಯಾಜ್ಯ: 3 ಕೈಗಾರಿಕೆ ಮುಚ್ಚಲು ಈಶ್ವರ ಖಂಡ್ರೆ ಸೂಚನೆ
ಮಕ್ಕಳ ಪಿಕ್ಕಿ ಈಟಿಂಗ್ ಕಡಿಮೆ ಮಾಡೋದು ಹೇಗೆ?
ಮಕ್ಕಳ ಪಿಕ್ಕಿ ಈಟಿಂಗ್ ಕಡಿಮೆ ಮಾಡೋದು ಹೇಗೆ?