AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬಂಡೀಪುರ; ಸ್ಕ್ರೀನ್ ಬಿಟ್ಟು ಕಾಡಿನ ದಾರಿ ಹಿಡಿಯಬೇಕು ಎನ್ನಿಸುತ್ತಿಲ್ಲವೆ?

Tiger : ಗುಬ್ಬಿಯಿಂದ ಆನೆಯವರೆಗೂ ಮಳೆ ಎನ್ನುವುದು ಪುಳಕ ತರುವಂಥದ್ದು. ಈಗ ಬಂಡೀಪುರಕ್ಕೆ ಹೋದರೆ ಹುಲಿ, ಚಿರತೆ, ಕರಡಿಯಂಥ ದೈತ್ಯಪ್ರಾಣಿಗಳು ಮಳೆಗಾಲವನ್ನು ಹೇಗೆ ಕಳೆಯುತ್ತಿವೆ ಎಂದು ನೋಡಬಹುದಾಗಿದೆ.

Viral Video: ಬಂಡೀಪುರ; ಸ್ಕ್ರೀನ್ ಬಿಟ್ಟು ಕಾಡಿನ ದಾರಿ ಹಿಡಿಯಬೇಕು ಎನ್ನಿಸುತ್ತಿಲ್ಲವೆ?
ಬಂಡೀಪುರದ ರಾಷ್ಟ್ರೀಯ ಉದ್ಯಾನವನದಲ್ಲಿ ಮಳೆನೀರು ಕುಡಿಯುತ್ತಿರುವ ಹುಲಿ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Jul 29, 2023 | 2:06 PM

Share

Bandipur : ಬಾಲ್ಯದಲ್ಲಿ ಧೋ ಎಂದು ಸುರಿದು ನಿಂತ ಮಳೆಗೆ ಅಂಗಳದಲ್ಲಿ ಅಲ್ಲಲ್ಲಿ ಸಣ್ಣಸಣ್ಣ ನೀರಗುಂಡಿಗಳು ಸೃಷ್ಟಿಯಾಗುತ್ತಿದ್ದವು. ಆಕಾಶ ಕಾಣುವಷ್ಟು ತಿಳಿಯಾದ ಆ ನೀರಿನಲ್ಲಿ ಗುಬ್ಬಚ್ಚಿಗಳು ಸ್ನಾನ ಮಾಡಿ ನೀರು ಕುಡಿದು ಪುರ್ ಎಂದು ಹಾರಿ ಹೋಗುತ್ತಿದ್ದವು. ಪ್ರಕೃತಿಯ ಇಂಥ ಸಣ್ಣಪುಟ್ಟ ಬೆರಗು  ಮೈಮನಸ್ಸೆಲ್ಲ ಪುಳಕಗೊಳಿಸುತ್ತಿತ್ತು. ಈ ದೃಶ್ಯಗಳು ಈಗಲೂ ಇವೆ. ಆದರೆ ನಾವು ಎಲ್ಲಿ ಕಳೆದುಹೋಗಿದ್ದೇವೆ? ಮತ್ತೆ ಮತ್ತೆ ಹೇಳಬೇಕಿಲ್ಲ. ಚೈತನ್ಯ ತುಂಬುವ ಇಂಥ ದೃಶ್ಯಗಳಿಗಾಗಿ ಖಂಡಿತ ಸಮಯ ಮಾಡಿಕೊಳ್ಳಲೇಬೇಕು. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ, ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ (Bandkpur National Park) ಬಿದ್ದ ಮಳೆ ಮತ್ತು ಅದರಿಂದ ಉಂಟಾದ ನೀರಗುಂಡಿಯಲ್ಲಿ ಹುಲಿಯೊಂದು ನೀರು ಕುಡಿಯುತ್ತಿದೆ.

ಐಎಫ್‌ಎಸ್ ಅಧಿಕಾರಿ ರಮೇಶ್ ಪಾಂಡೆ ಇದನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಈತನಕ 3,000ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದು, ಸುಮಾರು 400 ಜನರು ರೀಟ್ವೀಟ್ ಮಾಡಿದ್ದಾರೆ. ಮಳೆಗಾಲದಲ್ಲಿ ವನ್ಯಜೀವಿಗಳನ್ನು ಮತ್ತು ಅವುಗಳ ಜೀವನಶೈಲಿಯನ್ನು ನೋಡಬೇಕೆಂದರೆ ಬಂಡೀಪುರಕ್ಕೆ ಹೋಗಲೇಬೇಕು ಎನ್ನುವಂತಿದೆ ಈ ವಿಡಿಯೋ.

ಇದನ್ನೂ ಓದಿ : Viral Video: ಡಿಜಿಟಲ್ ಭಿಕ್ಷೆ; ಸ್ಲೀಪರ್ ಕೋಚ್​ನಲ್ಲಿಯೂ ರೀಲಿಗರ ಹಾವಳಿ; ಕಿಡಿಕಾರಿದ ನೆಟ್ಟಿಗರು

ಇಡೀ ದೇಶದಲ್ಲಿ ಅತೀ ಹೆಚ್ಚು ಹುಲಿಗಳನ್ನು ಹೊಂದಿದ ರಾಜ್ಯ ಕರ್ನಾಟಕ. ಅಷ್ಟೇ ಏಕೆ ಚಿರತೆ, ಆನೆ, ಕರಡಿ, ಸಾಂಬಾರ್​​ ಪ್ರಾಣಿಗಳನ್ನು ಬಂಡೀಪುರ ಅರಣ್ಯದಲ್ಲಿ ಕಾಣಬಹುದು. ಹಲವಾರು ಥರದ ಪಕ್ಷಿಗಳನ್ನೂ. ತಂಪಾದ ವಾತಾವರಣ ಮತ್ತು ಪ್ರಯಾಣ ಜೊತೆಗೆ ಪ್ರಾಣಿ ಪಕ್ಷಿಗಳ ಅಪರೂಪದ ದೃಶ್ಯಗಳನ್ನೂ ಇಲ್ಲಿ ನೋಡಬಹುದಾಗಿದೆ.

ಇದನ್ನೂ ಓದಿ : Viral Video: ವೈಪರ್ ವಿಥ್ ಸ್ಟಿಕರ್​; ಈ ಕಾರ್​ನಿಂದ ಅದೆಷ್ಟು ಅಪಘಾತಗಳಾಗಿವೆಯೋ

ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ. ಇದು ಅಪರೂಪದ ದೃಶ್ಯ, ಹೀಗೆ ಸೆರೆಹಿಡಿದಿರುವ ಅರಣ್ಯ ಸಿಬ್ಬಂದಿ ಕಾರ್ಯ ಮೆಚ್ಚುವಂಥದ್ದು. ಕಾಡಿನ ಸೌಂದರ್ಯವನ್ನು ಸೆರೆಹಿಡಿಯಲು ಅಪಾರ ತಾಳ್ಮೆ ಮತ್ತು ಜ್ಞಾನ ಬೇಕು, ಇದು ಕೆಲವರಿಗಷ್ಟೇ ಸಿದ್ಧಿಸುತ್ತದೆ. ಈ ವಿಡಿಯೋಗಾಗಿ ಧನ್ಯವಾದ ಎಂದಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:03 pm, Sat, 29 July 23

Follow Us
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?