AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಚಪಾತಿಯಲ್ಲಿ ಜಿರಳೆಮರಿ; ವಂದೇ ಭಾರತ್​​​ನಿಂದ ಪ್ರಯಾಣಿಕರೊಬ್ಬರಿಗೆ ‘ಉಚಿತ ಕೊಡುಗೆ’

IRCTC : ಸೇವೆ ಎಂಬ ಹೆಸರಲ್ಲಿ ಲಾಭ ಮಾಡಿಕೊಳ್ಳಲು ಹೋದರೆ ಹೀಗೇ ಆಗುವುದು. ಐಆರ್​ಸಿಟಿಸಿಯಿಂದಾಗಿ ಪ್ರಯಾಣಿಕರ ಒಟ್ಟಾರೆ ನೆಮ್ಮದಿ ಹಾಳಾಗಿದೆ, ಬದಲಿ ವ್ಯವಸ್ಥೆ ಮಾಡಿ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

Viral: ಚಪಾತಿಯಲ್ಲಿ ಜಿರಳೆಮರಿ; ವಂದೇ ಭಾರತ್​​​ನಿಂದ ಪ್ರಯಾಣಿಕರೊಬ್ಬರಿಗೆ 'ಉಚಿತ ಕೊಡುಗೆ'
ವಂದೇ ಭಾರತ ರೈಲಿನ ಚಪಾತಿಯಲ್ಲಿ ಜಿರಳೆಮರಿ
ಶ್ರೀದೇವಿ ಕಳಸದ
|

Updated on:Jul 29, 2023 | 4:28 PM

Share

Vande Bharath Express : ವಂದೇ ಭಾರತ ಎಕ್ಸ್​ಪ್ರೆಸ್​ ರೈಲಿನಲ್ಲಿ ಭೋಪಾಲ್​ನಿಂದ ಗ್ವಾಲಿಯರ್​ಗೆ ಪ್ರಯಾಣಿಸುತ್ತಿದ್ದ ಸುಬೋಧ್​ ಪಹಲಾಜನ್​ ಎಂಬ ಪ್ರಯಾಣಿಕರಿಗೆ ಎಸ್​ಆರ್​ಸಿಟಿಸಿ ಸಿಬ್ಬಂದಿಯಿಂದ ಊಟವನ್ನು ಪಡೆದುಕೊಂಡಿದ್ದಾರೆ. ಇನ್ನೇನು ಊಟ ಮಾಡಬೇಕು ಚಪಾತಿಯಲ್ಲಿ ಸತ್ತ ಜಿರಳೆಮರಿಯೊಂದು ಕಣ್ಣಿಗೆ ಬಿದ್ದಿದೆ. ಸುಬೋಧ ತಡಮಾಡದೆ ಟ್ವೀಟ್​ ಮೂಲಕ ಐಆರ್​ಸಿಟಿಸಿಯ ಕಳಪೆ ಸೇವೆಯ (IRCTC) ಕುರಿತು ರೈಲ್ವೇ ಇಲಾಖೆಯ ಗಮನ ಸೆಳೆದಿದ್ದಾರೆ. ನೆಟ್ಟಿಗರು ಈ ಟ್ವೀಟಿನಡಿ ತಾವು ಎದುರಿಸಿದ ಅನುಭವಗಳನ್ನೂ ಹಂಚಿಕೊಂಡು ಭಾರತೀಯ ರೈಲ್ವೆ ಇಲಾಖೆಯ ಬಗ್ಗೆ ಕಿಡಿಕಾರಿದ್ಧಾರೆ.

ರೈಲ್ವೆ ಸೌಲಭ್ಯ, ಸ್ವಚ್ಛತೆ ಮತ್ತು ಸೇವೆಗಳ ಬಗ್ಗೆ ತಕರಾರು ಹೊಸದೇನಲ್ಲ. ಅದರಲ್ಲೂ ಸಾಮಾಜಿಕ ಜಾಲತಾಣಗಳ ಮೂಲಕವಂತೂ ಆಗಾಗ ಇವು ಚರ್ಚೆಯಾಗುತ್ತಲೇ ಇರುತ್ತವೆ. ವಂದೇಭಾರತ ರೈಲುಗಳ ಅವ್ಯವಸ್ಥೆಯ ಬಗೆಗೂ ಮೇಲಿಂದ ಮೇಲೆ ತಕರಾರುಗಳು ಸಾಕ್ಷಿಸಮೇತ ಕೇಳಿಬರುತ್ತಿರುತ್ತವೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಅನ್ನು ಜು. 24ರಂದು ಟ್ವೀಟ್ ಮಾಡಲಾಗಿದೆ.

ಇದನ್ನೂ ಓದಿ : Viral Video: ದೆಹಲಿ ಮೆಟ್ರೋ; ಈ ಎರಡೂ ರೀಲ್​​ಗಳ ಬಗ್ಗೆ ನಿಮ್ಮ ಅಭಿಪ್ರಾಯ ಬೇಕಿದೆ

ಈ ಪೋಸ್ಟ್​ ಅನ್ನು ಸುಮಾರು 17,300 ಜನರು ನೋಡಿದ್ದಾರೆ. 90 ಜನರು ರೀಟ್ವೀಟ್ ಮಾಡಿದ್ದಾರೆ. ವಂದೇಭಾರತ ರೈಲಿನಲ್ಲಿ ಯಾವ ವ್ಯವಸ್ಥೆ ಸರಿ ಇದೆ ಹೇಳಿ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಈ ರೈಲಿನಲ್ಲಿರುವ ಆಹಾರಸೇವೆಗಳ ಪರವಾನಿಗೆಯನ್ನು ದಯವಿಟ್ಟು ರದ್ದುಪಡಿಸಿ. ಇಲ್ಲಿರುವವರೆಲ್ಲರೂ ಊಟವನ್ನೇನೋ ಮಾಡಿಯಾಗಿದೆ. ಈಗ ಹೆಚ್ಚೂ ಕಡಿಮೆಯಾದರೆ ಏನು ಮಾಡುವುದು ಎಂದು ಒಬ್ಬರು ಕೇಳಿದ್ದಾರೆ.

ಇದನ್ನೂ ಓದಿ : Viral Video: ವೈಪರ್ ವಿಥ್ ಸ್ಟಿಕರ್​; ಈ ಕಾರ್​ನಿಂದ ಅದೆಷ್ಟು ಅಪಘಾತಗಳಾಗಿವೆಯೋ

ಸೇವೆ ಎಂಬ ಪದವನ್ನು ‘ಲಾಭದಾಯಕತೆ’ಯು ಆವರಿಸಿದಾಗ ಇಂಥವೆಲ್ಲ ಸಂಭವಿಸುತ್ತವೆ. ಇದು ಪ್ರಪಂಚದಾದ್ಯಂತ ಆವರಿಸಿದೆ. ವಾಸ್ತವದ ಸಮಸ್ಯೆಗಳನ್ನು ಎದುರಿಸಲು ನೀವು ಸಿದ್ಧರಾಗಿ ಎಂದು ಮತ್ತೊಬ್ಬರು ಹೇಳಿದ್ದಾರೆ. ರಾಜಧಾನಿ ರೈಲಿನ ಎಸಿ ಕೋಚ್​ನಲ್ಲಿ ಊಟದ ವಿಷಯವಾಗಿ ಮಾತನಾಡುವುದೇ ಬೇಡ ಎಂದಿದ್ದಾರೆ ಮಗದೊಬ್ಬರು.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:26 pm, Sat, 29 July 23

ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?
ಎಲ್ಲ ಮಂತ್ರಿಗಳು ಒಂದೇ ವಾಕ್ಯವನ್ನು ಪುನರಾವರ್ತಿಸುತ್ತಿದ್ದಾರೆ
ಎಲ್ಲ ಮಂತ್ರಿಗಳು ಒಂದೇ ವಾಕ್ಯವನ್ನು ಪುನರಾವರ್ತಿಸುತ್ತಿದ್ದಾರೆ
VIDEO: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಹಾವು... ಆಮೇಲೇನಾಯ್ತು?
VIDEO: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಹಾವು... ಆಮೇಲೇನಾಯ್ತು?
ಡಿಕೆಶಿ ಸಿಎಂ ಆಗಬೇಕು ಎಂಬ ಆಸೆ ಇದೆ, ಆದರೆ: ರಂಗನಾಥ್ ಹೇಳಿದ್ದೇನು ನೋಡಿ
ಡಿಕೆಶಿ ಸಿಎಂ ಆಗಬೇಕು ಎಂಬ ಆಸೆ ಇದೆ, ಆದರೆ: ರಂಗನಾಥ್ ಹೇಳಿದ್ದೇನು ನೋಡಿ
ವೃಥಾ ಹೇಳಿಕೆ ನೀಡುವ ಶಾಸಕರ ವಿರುದ್ಧ ಹೈಕಮಾಂಡ್ ಕ್ರಮ ತಗೊಳ್ಳುತ್ತೆ: ಸಚಿವ
ವೃಥಾ ಹೇಳಿಕೆ ನೀಡುವ ಶಾಸಕರ ವಿರುದ್ಧ ಹೈಕಮಾಂಡ್ ಕ್ರಮ ತಗೊಳ್ಳುತ್ತೆ: ಸಚಿವ