AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣಿತ ಶಿಕ್ಷಕರು ಬೇಕಾಗಿದ್ದಾರೆ; ಸಂಚಲನ ಮೂಡಿಸಿದ ಗುಜರಾತ್​ ಶಾಲೆಯ ವಿಶಿಷ್ಟ ಜಾಹೀರಾತು

Gujarat : ಈ ಜಾಹೀರಾತು ಗಣಿತಪ್ರಿಯರೆಲ್ಲರನ್ನೂ ಬಡಿದೆಬ್ಬಿಸಿದೆ. ತುಂಡುಪೇಪರ್​ಗಳ ಮೇಲೂ ಸಮೀಕರಣ ಬಿಡಿಸಿ ಮೊಬೈಲ್​ ನಂಬರ್ ಕಂಡುಹಿಡಿದಿದ್ಧಾರೆ ಅನೇಕರು. ಶಕುಂತಲಾದೇವಿ, ರಾಮಾನುಜನ್​ರನ್ನು ಹುಡುಕುತ್ತಿದೆಯೇ ಈ ಶಾಲೆ?

ಗಣಿತ ಶಿಕ್ಷಕರು ಬೇಕಾಗಿದ್ದಾರೆ; ಸಂಚಲನ ಮೂಡಿಸಿದ ಗುಜರಾತ್​ ಶಾಲೆಯ ವಿಶಿಷ್ಟ ಜಾಹೀರಾತು
ಗುಜರಾತಿನ ಶಾಲೆ ನೀಡಿದ ಜಾಹೀರಾತು
TV9 Web
| Edited By: ಶ್ರೀದೇವಿ ಕಳಸದ|

Updated on: Jan 23, 2023 | 3:15 PM

Share

Viral News : ಉದ್ಯೋಗಾವಕಾಶಕ್ಕೆ ಸಂಬಂಧಿಸಿ ಯಾವುದೇ ಜಾಹೀರಾತು ನೀಡಿದರೂ ಸಂಪರ್ಕ ವಿಳಾಸ, ಮೇಲ್​ ಐಡಿ ಅಥವಾ ದೂರವಾಣಿ ಸಂಪರ್ಕ, ಮೊಬೈಲ್​ ನಂಬರ್​ ಅನ್ನು ಕಡ್ಡಾಯವಾಗಿ ನಮೂದಿಸಿರುತ್ತಾರೆ. ಆದರೆ ಇದೀಗ ವೈರಲ್ ಆಗುತ್ತಿರುವ ಈ ಜಾಹೀರಾತು ಗಮನಿಸಿ, ಬಹಳ ವಿಶೇಷವಾಗಿದೆ. ಗುಜರಾತಿನ ಶಾಲಯೊಂದು ಗಣಿತ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆದರೆ ಸಂಪರ್ಕಿಸಬೇಕಾದ ನಂಬರ್​ ಬದಲಾಗಿ ಸಮೀಕರಣವನ್ನು ನೀಡಲಾಗಿದೆ. ಅಂದರೆ, ಈ ಸಮೀಕರಣವನ್ನು ಬಿಡಿಸಿದರೆ ಸಂಪರ್ಕಿಸಬೇಕಾದ ಮೊಬೈಲ್​ ನಂಬರ್​ ದೊರೆಯುತ್ತದೆ. ಈ ಹುದ್ದೆಗೆ  ಹೀಗೊಂದು ಸವಾಲಾತ್ಮಕ ಜಾಹೀರಾತನ್ನು ಶಾಲೆಯವರು ನೀಡಿದ್ದು ನೆಟ್ಟಿಗರ ಗಮನ ಸೆಳೆಯುತ್ತಿದೆ.

ಉದ್ಯಮಿ ಹರ್ಷ ಗೋಯೆಂಕಾ ಈ ಟ್ವೀಟ್ ಮಾಡಿದ್ದಾರೆ. ಈತನಕ ಈ ಪೋಸ್ಟ್​ ಅನ್ನು 1.8 ಮಿಲಿಯನ್​ ಜನರು ನೋಡಿದ್ಧಾರೆ. 21,000 ಕ್ಕಿಂತಲೂ ಹೆಚ್ಚು ಇಷ್ಟಪಟ್ಟಿದ್ದಾರೆ. 2,000ಕ್ಕಿಂತಲೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ನೂರಾರು ಜನರು ಸಮೀಕರಣ ಬಿಡಿಸಿ ಫೋನ್ ನಂಬರ್ ಪತ್ತೆ ಹಚ್ಚಿದ್ದಾರೆ. ಲೆಕ್ಕದ ಫೋಟೋ ತೆಗೆದು ಟ್ವೀಟ್ ಮಾಡಿದ್ದಾರೆ. ಉತ್ತರ 9428163811.

ಇದನ್ನೂ ಓದಿ : ಇಲ್ಲಿ ಅಡಗಿರುವ ಬೆಕ್ಕನ್ನು ಹರ್ಷ ಗೋಯೆಂಕಾರಿಗೆ ಕೊಡಬೇಕಿದೆ, ನಿಮಗಿರುವ ಸಮಯ 10 ಸೆಕೆಂಡುಗಳು

ಕೆಲವರು ಕ್ಯಾಲ್ಕ್ಯುಲೇಟರ್​ ಉಪಯೋಗಿಸದೇ ಸಿಕ್ಕ ತುಂಡು ಪೇಪರ್ ಮೇಲೆ ಉತ್ತರ ಕಂಡುಕೊಂಡಿದ್ದಾರೆ. ಹಾಗಾಗಿ ಬಹುಮಾನ ನನಗೆ ಕೊಡಬೇಕು ಎಂದಿದ್ದಾರೆ. ಬಹುಶಃ ಈ ಶಾಲೆಯು ರಾಮಾನುಜನ್ ಮತ್ತು ಶಕುಂತಲಾದೇವಿಯವರನ್ನು ಹುಡುಕುತ್ತಿದೆ ಎಂದು ಯಾರೋ ಒಬ್ಬರು ತಮಾಷೆ ಮಾಡಿದ್ದಾರೆ. ಈ ಉಪಾಯ ಬಹಳ ಆಕರ್ಷಕವಾಗಿದೆ. ಖಂಡಿತ ಬುದ್ಧಿವಂತ ಶಿಕ್ಷಕರೇ ಸಿಗುತ್ತಾರೆ ಈ ಶಾಲೆಗೆ ಎಂದಿದ್ಧಾರೆ ಕೆಲವರು.

ನೀವೇನಂತೀರಿ ಇದನ್ನು ಓದಿ?

ಮತ್ತಷ್ಟೂ ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್