AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: 14 ಜನರಲ್ಲಿ ಯಾರನ್ನು ಮದುವೆಯಾಗಲಿ?; ನೆಟ್ಟಿಗರ ಸಹಾಯ ಕೋರಿದ ಯುವತಿ

Marriage : ಸದ್ಯ ನಿರುದ್ಯೋಗಿಯಾಗಿರುವ ಈ ಹುಡುಗಿ ಟಿಸಿಎಸ್​, ಬೈಜೂಸ್​, ಡೆಲಾಯಿಟ್​ ಮುಂತಾದ ಕಂಪೆನಿಗಳಲ್ಲಿ ರೂ. 14ರಿಂದ 45 ಲಕ್ಷ ಆದಾಯವಿರುವ 14ರ ಹುಡುಗರ ಪಟ್ಟಿ ಮಾಡಿಕೊಂಡಿದ್ದಾಳೆ. ಆದರೆ ಆಯ್ಕೆಯ ಗೊಂದಲಕ್ಕೆ ಬಿದ್ದಿದ್ದಾಳೆ.

Viral: 14 ಜನರಲ್ಲಿ ಯಾರನ್ನು ಮದುವೆಯಾಗಲಿ?; ನೆಟ್ಟಿಗರ ಸಹಾಯ ಕೋರಿದ ಯುವತಿ
ಸೌಜನ್ಯ : ಅಂತರ್ಜಾಲ
Follow us
ಶ್ರೀದೇವಿ ಕಳಸದ
|

Updated on:Jul 19, 2023 | 11:50 AM

Matrimonial : ತನ್ನ ನಿರೀಕ್ಷೆಗೆ ತಕ್ಕಂಥ ಸಂಗಾತಿ ಬೇಕೆಂದು ಹುಡುಗನೂ ಬಯಸುತ್ತಾನೆ, ಹುಡುಗಿಯೂ. ಇದಕ್ಕೆ ಆನ್​ಲೈನ್​ ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ಗಳು ಸಾಥ್​ ಕೊಡುತ್ತ ಮೂರು ದಶಕಗಳೇ ಕಳೆದವು. ಸಾಕಷ್ಟು ಜನರ ಮದುವೆಗೂ (Marriage) ಇವು ಸಾಕ್ಷಿಯಾದವು ಮತ್ತು ಆಗುತ್ತಲೇ ಇವೆ. ಆದರೆ ಇಲ್ಲೊಬ್ಬಳು ಹುಡುಗಿ ಆಯ್ಕೆಯ ಗೊಂದಲದಲ್ಲಿದ್ದಾಳೆ. 14 ಹುಡುಗರನ್ನು ಶಾರ್ಟ್​ಲಿಸ್ಟ್ ಮಾಡಿದ ಆಕೆ ಯಾವ ಹುಡುಗನನ್ನು ಮದುವೆಯಾದರೆ ಒಳ್ಳೆಯದು ಎಂದು ನೆಟ್ಟಿಗರಲ್ಲಿ ಸಲಹೆ ಕೇಳಿದ್ದಾಳೆ. ಈಕೆ ಲಿಸ್ಟ್ ಮಾಡಿದ ಹುಡುಗರು ಬೈಜೂಸ್​, ಡೆಲಾಯ್ಡ್​, ಟಿಸಿಎಸ್​ ಮುಂತಾದ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರ ವಾರ್ಷಿಕ ಆದಾಯ ರೂ. 14 ಲಕ್ಷದಿಂದ ರೂ 45 ಲಕ್ಷ.

‘ನನಗೆ 29 ವರ್ಷ. ಬಿಕಾಂ ಓದಿದ್ದೇನೆ ಆದರೆ ಸದ್ಯ ಉದ್ಯೋಗದಲ್ಲಿಲ್ಲ. ಈ 14 ಹುಡುಗರೊಂದಿಗೆ ಸಂವಹನ ನಡೆಸುತ್ತಿದ್ದೇನೆ. ಆದರೆ ಮದುವೆಯಾಗಲು ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲದಲ್ಲಿದ್ದೇನೆ, ದಯವಿಟ್ಟು ಸಹಾಯ ಮಾಡಿ’ ತಪ್ಪೊಪ್ಪಿಗೆ ಎಂಬ ಶೀರ್ಷಿಕೆಯಡಿ ಈಕೆ ಆ ವಿವಾಹಾಕಾಂಕ್ಷಿಗಳ ವಯಸ್ಸು, ಊರು, ಕಂಪೆನಿ, ವಾರ್ಷಿಕ ಆದಾಯವನ್ನು ಪಟ್ಟಿ ಮಾಡಿದ್ದಾಳೆ. ಈ ಪಟ್ಟಿ  ಅಂತರ್ಜಾಲದಲ್ಲಿ ಭಾರೀ ಚರ್ಚೆಗೀಡು ಮಾಡುತ್ತಿದೆ.

ಇದನ್ನೂ ಓದಿ : Viral Video: ಸಂಚಾರಿ ನಿಯಮ ಮುರಿದ ಜೋಡಿ; ವಿಡಿಯೋಗೆ ಪ್ರತಿಕ್ರಿಯಿಸಿದ ದೆಹಲಿ ಪೊಲೀಸರು

ಆದರೆ ರೂ. 45 ಲಕ್ಷ ವಾರ್ಷಿಕ ಆದಾಯವಿರುವ ವ್ಯಕ್ತಿಗಳು,  ವೈದ್ಯರುಗಳು ನಿರುದ್ಯೋಗಿಯಾಗಿರುವ ಈ ಹುಡುಗಿಯೆಡೆ ಆಸಕ್ತಿ ತೋರಿಸುತ್ತಿದ್ದಾರೆಂದರೆ, ಅವರಿಗೆ ತುಂಬಾ ಮುಖ್ಯವಾದಂಥ ಯಾವುದೇ ನ್ಯೂನತೆಗಳು ಇಲ್ಲ ತಾನೇ? ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಈಕೆ ಯಾಕೆ ಉದ್ಯೋಗದಲ್ಲಿಲ್ಲ? ಈಕೆ ತಾನು ಮದುವೆಯಾಗಬಯಸುವ ಹುಡುಗರಿಂದ ಏನನ್ನು ನಿರೀಕ್ಷಿಸುತ್ತಿದ್ದಾಳೆ? ಎಂದೂ ಕೇಳುತ್ತಿದ್ಧಾರೆ.

ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:49 am, Wed, 19 July 23

ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!