AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅಮ್ಮ ಸೆಲ್ಫಿ ಮತ್ತೆ ಒಮ್ಮೆ ಹಿಂದೆ ನೋಡು ಪಟಾಕಿ, ಓಡೋ.. ಓಡೋ ಓಡಲೇ ಎಂದ ಮಹಿಳೆಯರು 

ಕೆಲವೊಬ್ಬರಿಗೆ, ಇನ್ನೊಬ್ಬರ ಕಾಲೆಳೆಯುವುದು,  ಕೀಟಲೆ ಮಾಡುವುದೆಂದರೆ ಬಲು ಇಷ್ಟ. ಇಂತಹ ತರ್ಲೆ ತಮಾಷೆಯ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತದೆ. ಕೆಲವು ವೀಡಿಯೋಗಳು ಅತಿರೇಕವಾಗಿ ಕಂಡರೂ, ಅದು ಜನರನ್ನು ಮನರಂಜಿಸುವುದಂತೂ ನಿಜ. ಈಗ ಅಂತಹದ್ದೇ ಒಂದು ಹಾಸ್ಯಮಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,  ಸ್ಟೈಲ್ ಆಗಿ ಸೆಲ್ಫಿ ಕ್ಲಿಕ್ಕಿಸುತ್ತಿದ್ದ,  ಮೂವರು ಮಹಿಳೆಯರು ಪಟಾಕಿ ಸದ್ದಿಗೆ ಭಯಪಟ್ಟು, ಅಬ್ಬಬ್ಬಾ ಪ್ರಾಣ  ಉಳಿದರೆ ಸಾಕೆಂದು ಓಡಿ ಹೋಗುವುದನ್ನು ಕಾಣಬಹುದು. 

Viral Video: ಅಮ್ಮ ಸೆಲ್ಫಿ ಮತ್ತೆ ಒಮ್ಮೆ ಹಿಂದೆ ನೋಡು ಪಟಾಕಿ, ಓಡೋ.. ಓಡೋ ಓಡಲೇ ಎಂದ ಮಹಿಳೆಯರು 
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Nov 20, 2023 | 5:57 PM

Share

ವಾರಗಳ ಹಿಂದೆ ದೇಶದೆಲ್ಲೆಡೆ ದೀಪಾವಳಿ ಹಬ್ಬವನ್ನು ಬಹಳ ವಿಜೃಂಭನೆಯಿಂದ ಆಚರಿಸಲಾಯಿತು. ಕೆಲವರು ದೀಪಗಳನ್ನು ಹಚ್ಚಿ ಪರಿಸರ ಸ್ನೇಹಿ ದೀಪಾವಳಿ ಹಬ್ಬವನ್ನು ಆಚರಿಸಿದರೆ, ಇನ್ನೂ ಕೆಲವರು ಪಟಾಕಿಗಳನ್ನು ಸಿಡಿಸಿ ಬಹಳ ವಿಜೃಂಭನೆಯಿಂದ ಹಬ್ಬವನ್ನು ಆಚರಿಸಿದ್ದಾರೆ. ಇನ್ನೂ ದೀಪಾವಳಿ ಹಬ್ಬದಲ್ಲಿ ಉಳಿದಂತಹ ಪಟಾಕಿಗಳನ್ನು ಮರುದಿನವೂ ಕೆಲವರು ಸಿಡಿಸುತ್ತಾರೆ. ಅದರಲ್ಲೂ ಕೆಲವು ಹುಡುಗರು, ತಮ್ಮ ಮನರಂಜನೆಗಾಗಿ  ರಸ್ತೆಯಲ್ಲಿ ಓಡಾಡುವವರ ಹತ್ತಿರ ಪಟಾಕಿ ಸಿಡಿಸುವುದು, ತಮ್ಮ ಸ್ನೇಹಿತರ ಮೇಲೆ ಪಟಾಕಿ ಎಸೆಯುತ್ತಾ ತಮಾಷೆ ಮಾಡುತ್ತಿರುತ್ತಾರೆ. ಇಂತಹ ತಮಾಷೆ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಹಾಸ್ಯಮಯ ವೀಡಿಯೋ ಹರಿದಾಡುತ್ತಿದ್ದು, ವ್ಯಕ್ತಿಯೊಬ್ಬ ಮಹಿಳೆಯರು ಸೆಲ್ಫಿ ಕಿಕ್ಕಿಸುತ್ತಿದ್ದ ವೇಳೆಯಲ್ಲಿ, ಅವರ ಪಕ್ಕದಲ್ಲಿಯೇ ಪಟಾಕಿ ಸಿಡಿಸಿದ್ದಾನೆ. ಪಟಾಕಿ ಸದ್ದಿಗೆ  ಭಯಪಟ್ಟು ಪ್ರಾಣ ಉಳಿದರೆ ಸಾಕೆಂದು ಆ ಮಹಿಳೆಯರು ಕಕ್ಕಾಬಿಕ್ಕಿಯಾಗಿ ಓಡಿ ಹೋಗಿದ್ದಾರೆ.  ಈ  ತಮಾಷೆಯ ವೀಡಿಯೋವನ್ನು ಕಂಡು ನೋಡುಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಈ ಹಾಸ್ಯಮಯ ವೀಡಿಯೋವನ್ನು ಸತ್ಯಸಾಯಿ ರಾಮಕೃಷ್ಣ  (@sathyasai_krishnan) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೀಡಿಯೋದಲ್ಲಿ ಮೂವರು   ಮಹಿಳೆರು ಪಟಾಕಿ ಸದ್ದಿಗೆ ಹೆದರಿ, ಪ್ರಾಣ ಉಳಿದರೆ ಸಾಕೆಂದು ಓಡಿ ಹೋಗುವುದನ್ನು ಕಾಣಬಹುದು.

ವೈರಲ್​​​ ವಿಡಿಯೋ ಇಲ್ಲಿದೆ:

ವೀಡಿಯೋದಲ್ಲಿ ಒಂದು ರಸ್ತೆಯ ಮೂಲೆಯಲ್ಲಿ ಮೂವರು ಮಹಿಳೆಯರು ತಮ್ಮ ಪಾಡಿಗೆ ನಿಂತುಕೊಂಡು ಸೆಲ್ಫಿ ಕ್ಲಿಕ್ಕಿಸುತ್ತಿರುತ್ತಾರೆ.  ಅಲ್ಲಿಯೇ ಸ್ವಲ್ಪ ದೂರದಲ್ಲಿ ನಿಂತಿದ್ದ ಯುವಕನೊಬ್ಬ, ಅಪಾಯಕಾರಿಯಲ್ಲದ ಪಟಾಕಿಯನ್ನು ತೆಗದುಕೊಂಡು, ಅದಕ್ಕೆ ಬೆಂಕಿ ಹಚ್ಚಿ ಆ ಮಹಿಳೆಯ ಪಕ್ಕಕ್ಕೆ ಎಸೆಯುತ್ತಾನೆ. ಅಲ್ಲೇ ಹಿಂದೆ ಇದ್ದ ಪುಟ್ಟ ಮಗುವೊಂದು ತನ್ನ ತಾಯಿಯನ್ನು ಕಾಪಾಡಲು, ಅಮ್ಮಾ ಅಮ್ಮಾ ಪಟಾಕಿ ಸಿಡಿಸುತ್ತಿದ್ದಾರೆ ಎಂದು ಕಿರುಚುತ್ತಿದ್ದರೂ, ಇದರ ಪರಿವೇ ಇಲ್ಲದ ಆ ಮಹಿಳೆಯರು ಸ್ಪೆಲ್ಫಿ ಕ್ಲಿಕ್ಕಿಸುವುದರಲ್ಲಿಯೇ ನಿರತರಾಗಿರುತ್ತಾರೆ. ಆದರೆ ಪಟಾಕಿ ಡಮ್ಮೆಂದು ಸಿಡಿದಾಗ  ಮಹಿಳೆಯರು ಆ ಪಟಾಕಿ ಸದ್ದಿಗೆ ಭಯಪಟ್ಟು, ದಿಕ್ಕಾಪಾಲಾಗಿ ಓಡಿ ಹೋಗುವುದನ್ನು ಕಾಣಬಹುದು. ಈ ಹಾಸ್ಯಮಯ ವೀಡಿಯೋವನ್ನು ಕಂಡು ನೋಡುಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿ ಜೀವನದ ನೆನಪು, ಅಮ್ಮನಂತೆ ಅಕ್ಕರೆ ತೋರಿಸುವ ಶಿಕ್ಷಕಿಯ ಬರ್ತ್​​​ ಡೇ ಸರ್ಪ್ರೈಸ್ ಹೇಗಿತ್ತು ನೋಡಿ 

ನವೆಂಬರ್ 12 ರಂದು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾದ ಈ ವೀಡಿಯೋ  2.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ  223k ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು, ಆ ಮಗು ತನ್ನ ತಾಯಿಯನ್ನು ಉಳಿಸಲು ಪ್ರಯತ್ನಿಸುವ ರೀತಿ ಮುದ್ದಾಗಿದೆ  ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಆ ಮೂವರು ಮಹಿಳೆಯರು ಓಡಿ ಹೋಗುವ ದೃಶ್ಯ ತುಂಬಾ ತಮಾಷೆಯಾಗಿ ಕಂಡಿತು ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ಹಾಸ್ಯಮಯ ದೃಶ್ಯವನ್ನು ಕಂಡು ನಕ್ಕು ನಕ್ಕು ಸಾಕಾಯಿತು ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್