AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಕ್ಕಿನ ಹೇರ್ ಕಟಿಂಗ್​; ಏಯ್ ಮಾನವ, ನನ್ನ ಮೀಸೆ ಮಾತ್ರ ಕಟ್ ಮಾಡಬೇಡ!

Haircut : ದಿನಾ ಅದೇ ಇಲಿ ಅದೇ ಊಟ. ಅದಕ್ಕೆ ಈವತ್ತು ನನ್ನ ಫ್ರೆಂಡ್​ ಜೊತೆ ಔಟಿಂಗ್​ ಹೋಗ್ತೀದೀನಿ. ಸಲೂನಿನಲ್ಲಿ ಹೀಗೆ ಕುಳಿತ ನನ್ನನ್ನು ನೋಡಿದ ನೆಟ್ಟಿಗರೆಲ್ಲ ಅತ್ಯಂತ ಶಾಂತಿಯುತ ಬೆಕ್ಕು ಅಂತ ಅವಾರ್ಡ್​ ಕೊಟ್ಟಿದಾರೆ. ನೋಡಿ ವಿಡಿಯೋ.

ಬೆಕ್ಕಿನ ಹೇರ್ ಕಟಿಂಗ್​; ಏಯ್ ಮಾನವ, ನನ್ನ ಮೀಸೆ ಮಾತ್ರ ಕಟ್ ಮಾಡಬೇಡ!
Adorable cat calmly getting a haircut
TV9 Web
| Edited By: ಶ್ರೀದೇವಿ ಕಳಸದ|

Updated on:Nov 18, 2022 | 12:30 PM

Share

Viral Video : ಸುಂದರವಾಗಿ ಕಾಣಲು ಆರಾಮಾಗಿ ಇರಲು ನೀವು ಏನೆಲ್ಲ ಮಾಡಿಸಿಕೊಳ್ಳುತ್ತೀರೋ ಅದೆಲ್ಲ ನಮಗೂ ಬೇಕು ಎನ್ನುತ್ತಿವೆ ಬೆಕ್ಕು ನಾಯಿಗಳು. ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೆ ಇಂಥ ಸಾವಿರಾರು ವಿಡಿಯೋಗಳನ್ನು ನೋಡಿರುತ್ತೀರಿ. ಈ ಬೆಕ್ಕಿಗೆ ಕಿರಿಕಿರಿಯಾಗುತ್ತಿದ್ದರೆ ನೆಟ್ಟಿಗರೆಲ್ಲ ಇದು ಪ್ರಾಣಿಹಿಂಸೆ ಎಂದು ಖಂಡಿಸುತ್ತಿದ್ದರು. ಆದರೆ ಇದು ಆರಾಮಾಗಿ ಹೇರ್ ಕಟ್​ ಮಾಡಿಸಿಕೊಳ್ಳುತ್ತಿದೆ. ಅದರ ಕಣ್ಣು, ಮುಖ, ಎಕ್ಸ್​​ಪ್ರೆಷನ್​ ಗಮನಿಸಿ.

ಕೆಲದಿನಗಳ ಹಿಂದೆ ಈ ವಿಡಿಯೋ ಟ್ವೀಟ್ ಮಾಡಲಾಗಿದ್ದು 2.8 ಮಿಲಿಯನ್ ಜನರು ಇದನ್ನು ನೋಡಿದ್ದಾರೆ. ಅನೇಕರು ಈ ಚೆಂದದ ವಿಡಿಯನ್ನು ಕೊಂಡಾಡಿದ್ದಾರೆ. ಇದು ನಾ ನೋಡಿದ ಅತ್ಯಂತ ಶಾಂತ ಬೆಕ್ಕು ಎಂದಿದ್ದಾರೆ ಒಬ್ಬರು. ಇದನ್ನು ನೋಡಿ ನಗು ನಿಲ್ಲಿಸಲಾಗುತ್ತಲೇ ಇಲ್ಲ ಎಂದಿದ್ದಾರೆ ಇನ್ನೂ ಒಬ್ಬರು. ನೆಟ್ಟಿಗರು ಹೇಳುವುದರಲ್ಲಿ ನಿಜ ಇದೆ. ಅವುಗಳಿಗೆ ಇಷ್ಟವಾಗದ ಯಾವುದನ್ನೂ ಅವು ಹತ್ತಿರ ಸೇರಿಸಿಕೊಳ್ಳುವುದೇ ಇಲ್ಲ. ಹತ್ತಿರ ಸೇರಿಸಿಕೊಂಡಿವೆ ಎಂದರೆ ಅವುಗಳಿಗೆ ಇಷ್ಟವಾಗಿದೆ ಎಂದರ್ಥ. ಹಾಗೆಯೇ ಈ ಹೇರ್​ ಕಟ್​ ಮಾಡಿಸಿಕೊಳ್ಳುವುದು ಇದಕ್ಕೆ ಇಷ್ಟವಾಗಿರಬೇಕು.

ಹುಷಾರು ನಿಮ್ಮ ಮನೆಯ ಬೆಕ್ಕಿಗೆ ಹೇರ್ ಕಟ್ ಮಾಡೋಕೆ ಹೋಗಿ ಅವಾಂತರಕ್ಕೆ ಬಿದ್ದೀರಿ! ಎಲ್ಲ ಬೆಕ್ಕುಗಳೂ ಒಂದೇ ತೆರನಾಗಿ ಇರುವುದಿಲ್ಲ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:27 pm, Fri, 18 November 22

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್