
ವಿದೇಶಿ ಪ್ರಜೆಗಳು (foreigner) ಭಾರತಕ್ಕೆ ಆಗಾಗ ಭೇಟಿ ಕೊಡ್ತಾರೆ. ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಇತಿಹಾಸಗಳನ್ನು ಕೆದಕುತ್ತಾರೆ. 21 ವರ್ಷದ ಆಫ್ರಿಕನ್ ವ್ಯಕ್ತಿಯೊಬ್ಬರು (African) ಏಕಾಂಗಿಯಾಗಿ ಭಾರತಕ್ಕೆ ಭೇಟಿ ನೀಡಿದ್ದಾರೆ. ಏಕಾಂಗಿ ಪ್ರವಾಸದ ವೇಳೆ ಈ ದೇಶದ ಆಧ್ಯಾತ್ಮಿಕತೆ, ಅವ್ಯವಸ್ಥೆ ಮತ್ತು ಇತಿಹಾಸವು ತಾನು ಜಗತ್ತನ್ನು ನೋಡುವ ವಿಧಾನವನ್ನು ಆಳವಾಗಿ ಬದಲಾಯಿಸಿತು ಎಂದು ಹೇಳಿಕೊಂಡಿದ್ದಾರೆ. ತಾನು ಕಲಿತ ಐದು ಪಾಠಗಳನ್ನು ಹಂಚಿಕೊಂಡಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.
@hunchsquare ಬಳಕೆದಾರ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ವಾರಣಾಸಿಯಲ್ಲಿ ಸಂಜೆ ಗಂಗಾ ಆರತಿಯಲ್ಲಿ ಭಾಗವಹಿಸಿದ್ದನ್ನು ತೋರಿಸಲಾಗಿದೆ. ಈ ವಿಡಿಯೋದ ಕ್ಲಿಪ್ ನಲ್ಲಿ ನಾನು 21 ವರ್ಷದ ಆಫ್ರಿಕನ್ ಆಗಿ ಭಾರತದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದೆ. ನಾನು ಕಲಿತದ್ದು ಇಲ್ಲಿದೆ ಎಂದು ಬರೆದಿರುವುದನ್ನು ಕಾಣಬಹುದು.
ಈ ವಿಡಿಯೋದೊಂದಿಗೆ ಭಾರತವು ಒಂದು ಕಾಲದಲ್ಲಿ ಭೂಮಿಯ ಮೇಲಿನ ಅತ್ಯಂತ ಶ್ರೀಮಂತ ನಾಗರಿಕತೆಯಾಗಿತ್ತು. ವಸಾಹತುಶಾಹಿಗೆ ಮುಂಚಿತವಾಗಿ, ಭಾರತವು ಜಾಗತಿಕ GDP ಯ 25% ಅನ್ನು ಹೊಂದಿತ್ತು. ಈ ಸ್ಥಳದಲ್ಲಿ ನಡೆಯುವಾಗ ಕುಸಿಯುತ್ತಿರುವ ಭವ್ಯತೆ, ಬಡತನದಿಂದ ಆವೃತವಾದ ದೇವಾಲಯಗಳೊಳಗಿನ ಚಿನ್ನ, ನೀವು ಎಲ್ಲೆಡೆ ಆ ಗಾಯವನ್ನು ಅನುಭವಿಸುತ್ತೀರಿ. ನೀವು ಆಫ್ರಿಕನ್ ಆಗಿದ್ದಾಗ ನಿಮಗೆ ವಿಭಿನ್ನ ಅನುಭವವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವುದನ್ನು ಕಾಣಬಹುದು.
ನಿಮ್ಮ ಮೆದುಳು ಫಿಲ್ಟರ್ ಮಾಡುವ ಪ್ರಯತ್ನವನ್ನು ಬಿಟ್ಟುಬಿಡುತ್ತದೆ ಹಾಗೂ ನೀವು ಶರಣಾಗುತ್ತೀರಿ. ವಿಚಿತ್ರವೆಂದರೆ, ಇದು ನಾನು ಅನುಭವಿಸಿದಅತ್ಯಂತ ಪ್ರಸ್ತುತವಾಗಿದೆ. ಇಲ್ಲಿನ ಆಚರಣೆಗಳು, ಭಕ್ತಿ, ಸಂಪೂರ್ಣ ಪ್ರಾಮಾಣಿಕತೆ ನನ್ನ ರಕ್ಷಣೆಯನ್ನು ಮೀರಿತು. ನಾನು ನನಗೆ ತಿಳಿದಿರದ ಭಾವನೆಗಳು ಹೊರಹೊಮ್ಮಿದವು. ನಾನು ಅಳುತ್ತಿದ್ದೆ. ಆದರೆ ಏಕೆ ಎಂದು ಸಂಪೂರ್ಣವಾಗಿ ತಿಳಿದಿರಲಿಲ್ಲ ಎಂದಿದ್ದಾರೆ.
ಭಾರತವು ಒಂದು ಕಾಲ್ಪನಿಕ ಜಗತ್ತುಎಂಬ ಭಾವನೆಯನ್ನು ಹೊಂದಿದೆ. ಆದರೆ ಇಲ್ಲಿನ ವಾಸ್ತುಶಿಲ್ಪ, ಬಣ್ಣಗಳು ಮತ್ತು ಅವ್ಯವಸ್ಥೆಯು ತಾನು ಹಿಂದೆ ಅನುಭವಿಸಿದ್ದಕ್ಕಿಂತ ಭಿನ್ನವಾಗಿದೆ ಇದು ನಿಜವೆಂದು ಭಾವಿಸುವುದಿಲ್ಲ. ಯಾರೋ ಶುದ್ಧ ಕಲ್ಪನೆಯಿಂದ ನಾಗರಿಕತೆಯನ್ನು ರಚಿಸಿದಂತಿದೆ. ಭಾರತದ ವಸಾಹತುಶಾಹಿ ಇತಿಹಾಸದ ಹೊರತಾಗಿ, ಅದರ ಸ್ಥಿತಿಸ್ಥಾಪಕತ್ವವನ್ನು ನೋಡಿ ತಾನು ಆಘಾತಕ್ಕೊಳಗಾಗಿದ್ದೇನೆ. ಭಾರತವನ್ನು ಲೂಟಿ ಮಾಡಲಾಗಿದೆ. ಬ್ರಿಟಿಷರು ತಮ್ಮ ಕೈಲಾದಷ್ಟು ತೆಗೆದುಕೊಂಡರು. ಆದರೂ ಈ ಸ್ಥಳದ ಆತ್ಮವು ಸ್ಪಷ್ಟ ಮತ್ತು ಅಖಂಡವಾಗಿದೆ. ನಾನು ಇನ್ನೂ ಪ್ರಕ್ರಿಯೆಗೊಳಿಸುತ್ತಿದ್ದೇನೆ ಎಂಬ ಪಾಠವಿದೆ ಎಂದು ವಿಡಿಯೋದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಯುರೋಪಿಯನ್ನರು ಭಾರತೀಯರಿಂದ ಈ ವಿಷ್ಯಗಳನ್ನು ಕಲಿಯಬೇಕು ಎಂದ ವಿದೇಶಿ ಮಹಿಳೆ
ಈ ವಿಡಿಯೋ ಹತ್ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಭಾರತದಲ್ಲಿನ ಸಕಾರಾತ್ಮಕ ಅಂಶಗಳನ್ನು ನೀವು ಬಳಸಿಕೊಂಡಿದ್ದಕ್ಕೆ ಸಂತೋಷ! ಚಿಯರ್ಸ್ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಮ್ಮಂತಹ ಜನರು ನಮ್ಮ ದೇಶದಲ್ಲಿ ಇರುವುದು ಒಳ್ಳೆಯದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಪ್ರಾಮಾಣಿಕ ಅಭಿಪ್ರಾಯ ನೀಡಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ