AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ವಿಮಾನ ಪತನಕ್ಕೂ ಮೊದಲು ಪ್ರಯಾಣಿಕರ ಕಿರುಚಾಟ, ಪ್ರಾರ್ಥನೆಯ ಕೂಗು; AI ಯಲ್ಲಿ ಕೊನೆಯ ಕ್ಷಣದ ದೃಶ್ಯ

ಅಹಮದಬಾದ್‌ನಲ್ಲಿ ಸಂಭವಿಸಿದ ಏರ್‌ ಇಂಡಿಯಾ ವಿಮಾನ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಹಲವಾರು ಕನಸುಗಳನ್ನು ಹೊತ್ತು ಬಾನೆತ್ತರದಲ್ಲಿ ಸಾಗುತ್ತಿದ್ದ ಅದೆಷ್ಟೋ ಮುಗ್ಧ ಜೀವಗಳು ಈ ಘೋರ ದುರಂತದಲ್ಲಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ವಿಮಾನ ಪತನಕ್ಕೂ ಮೊದಲು ವಿಮಾನದೊಳಗಿದ್ದವರ ಕೊನೆಯ ಕ್ಷಣ ಹೇಗಿತ್ತು ಎಂಬುದನ್ನು ತೋರಿಸುವ ಎಐ ವಿಡಿಯೋವೊಂದು ಇದೀಗ ವೈರಲ್‌ ಆಗಿದ್ದು, ಈ ದೃಶ್ಯವನ್ನು ನೋಡುಗರ ಕಣ್ಣಂಚಿನಲಿ ನೀರು ತರಿಸಿದೆ.

Video: ವಿಮಾನ ಪತನಕ್ಕೂ ಮೊದಲು ಪ್ರಯಾಣಿಕರ ಕಿರುಚಾಟ, ಪ್ರಾರ್ಥನೆಯ ಕೂಗು; AI ಯಲ್ಲಿ ಕೊನೆಯ ಕ್ಷಣದ ದೃಶ್ಯ
ವೈರಲ್‌ ವಿಡಿಯೋImage Credit source: bharathfx1/Instagram
Follow us
ಮಾಲಾಶ್ರೀ ಅಂಚನ್​
|

Updated on: Jun 13, 2025 | 2:28 PM

ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ನ ಗ್ಯಾಟ್‌ವಿಕ್‌ಗೆ ಪ್ರಯಾಣ ಆರಂಭಿಸಿದ್ದ ಏರ್‌ ಇಂಡಿಯಾ ವಿಮಾನವು ಟೇಕ್‌ ಆಫ್‌ ಆದ ಕೆಲವೇ ಹೊತ್ತಿನಲ್ಲಿ (Plane Crash) ಪತನಗೊಂಡ ಆಘಾತಕಾರಿ ಘಟನೆ ಗುರುವಾರ (ಮೇ. 12) ನಡೆದಿದೆ. ಹಲವಾರು ಕನಸುಗಳನ್ನು, ತಮ್ಮವರನ್ನು ಭೇಟಿಯಾಗುವ ಆಸೆಯನ್ನು ಹೊತ್ತು ಬಾನೆತ್ತರದಲ್ಲಿ ಹಾರುತ್ತಿದ್ದ ಮುಗ್ಧ ಜೀವಗಳು ಈ ದುರಂತದಲ್ಲಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ವಿಮಾನ ಪತನದ ಭೀಕರ ದೃಶ್ಯವನ್ನು ನೋಡಿದಾಗ ಎದೆ ಝಲ್‌ ಎನ್ನುತ್ತೆ, ಇನ್ನೂ ವಿಮಾನ ಪತನಕ್ಕೂ ಮೊದಲು ಸಾವು ಕಣ್ಣ ಮುಂದೆ ಬಂದಾಗ ವಿಮಾನದೊಳಗಿದ್ದ ಪ್ರಯಾಣಿಕರು ಹಾಗೂ ಪೈಲಟ್‌ಗಳ ಅಸಹಾಯಕ ಪರಿಸ್ಥಿತಿ ಹೇಗಿರಬೇಡ ಹೇಳಿ. ಹೀಗೆ ವಿಮಾನ ಪತನಕ್ಕೂ ಮೊದಲು ಕೊನೆಯ ಕ್ಷಣದಲ್ಲಿ ವಿಮಾನದೊಳಗೆ ಏನೆಲ್ಲಾ ನಡೆದಿರಬಹುದು ಎಂಬುದನ್ನು ತೋರಿಸುವ ಎಐ (AI Video) ವಿಡಿಯೋವೊಂದು ವೈರಲ್‌ ಆಗಿದ್ದು, ಈ ದೃಶ್ಯ ಕರುಳು ಹಿಂಡುವಂತಿದೆ.

ವಿಮಾನ ಪತನಕ್ಕೂ ಮೊದಲು ಫ್ಲೈಟ್‌ ಒಳಗೆ ಏನೆಲ್ಲಾ ನಡೆಯಿತು?

ವಿಮಾನ ಪತನಕ್ಕೂ ಮೊದಲು, ಸಾವು ಕಣ್ಣ ಮುಂದೆ ಬಂದಾಗ ವಿಮಾನದೊಳಗಿದ್ದ ಪೈಲಟ್‌, ಸಿಬ್ಬಂದಿಗಳು, ಪ್ರಯಾಣಿಕರು ಎಷ್ಟು ಕೂಗಾಡಿರಬೇಡ, ಪ್ರಾಣವನ್ನು ಉಳಿಸಿಕೊಡು ಎಂದು ದೇವರಲ್ಲಿ ಎಷ್ಟು ಪ್ರಾರ್ಥಿಸಿರಬೇಡ, ಅವರ ಅಸಹಾಯಕ ಪರಿಸ್ಥಿತಿ ಹೇಗಿರಬೇಡ ಹೇಳಿ. ಹೀಗೆ ಕೊನೆಯ ಕ್ಷಣದಲ್ಲಿ ವಿಮಾನದೊಳಗೆ ಏನೆಲ್ಲಾ ನಡೆದಿರಬಹುದು ಎಂಬುದನ್ನು ತೋರಿಸುವ ಎಐ ವಿಡಿಯೋವನ್ನು ಕಲಾವಿದರೊಬ್ಬರು ಸೃಷ್ಟಿಸಿದ್ದಾರೆ.

ವೈರಲ್‌  ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ
Image
ಪ್ರಾಮಾಣಿಕತೆಗೆ ಈ ಹಳ್ಳಿ ಹೆಸರುವಾಸಿ, ಇಲ್ಲಿ ಅಂಗಡಿಗಳಿಗೆ ಮಾಲೀಕರೇ ಇಲ್ಲ
Image
ಮರದ ಬುಡದಿಂದ ಚಿಮ್ಮಿದ ನೀರು ಕಂಡು ಪೂಜೆ ಮಾಡಿದ ಸ್ಥಳೀಯರು

ಈ ವಿಡಿಯೋವನ್ನು bharathfx1 ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ವಿಮಾನ ಪತನಕ್ಕೂ ಮೊದಲು ವಿಮಾನದೊಳಗೆ ಏನೆಲ್ಲಾ ನಡೆಯಿತು ಎಂಬ ದೃಶ್ಯವನ್ನು ಕಾಣಬಹುದು. ಪೈಲಟ್‌ ಕೊನೆಯ ಕ್ಷಣದಲ್ಲಿ ಮೇ ಡೇ ಮೇ ಡೇ ಎಂಬ ಸಂದೇಶವನ್ನು ರವಾಣಿಸಿದಾಗ ವಿಮಾನದೊಳಗೆ ಪ್ರಯಾಣಿಕರು ಕಿರುಚಾಡುತ್ತಾ, ಪ್ರಾಣ ಉಳಿಸು ದೇವ್ರೇ ಎಂದು ಭಯದಲ್ಲಿ ಕೈ ಮುಗಿಯುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ವಿಮಾನ ಅಪಘಾತದಲ್ಲಿ ಎಲ್ಲವೂ ಸುಟ್ಟು ಕರಕಲಾದರೂ ಭಗವದ್ಗೀತೆಗೆ ಏನು ಆಗಿಲ್ಲ ನೋಡಿ

ಮೇ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 9.3 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆ ಮುಗ್ಧ ಜೀವಗಳ ಪರಿಸ್ಥಿತಿ ಹೇಗಿತ್ತೋʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ದೃಶ್ಯವನ್ನು ಕಂಡು ನನ್ನ ಹೃದಯವೇ ಒಡೆದು ಹೋಯಿತುʼ ಎಂದು ಹೇಳಿದ್ಧಾರೆ. ಮತ್ತೊಬ್ಬ ಬಳಕೆದಾರರು ʼಬೇಸರವಾಯಿತು ಈ ದೃಶ್ಯ ಕಂಡುʼ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇಸ್ರೇಲ್‌ನಲ್ಲಿ ಇರಾನಿನ ಕ್ಷಿಪಣಿ ದಾಳಿಯ ಭೀಕರ ದೃಶ್ಯ ಇಲ್ಲಿದೆ
ಇಸ್ರೇಲ್‌ನಲ್ಲಿ ಇರಾನಿನ ಕ್ಷಿಪಣಿ ದಾಳಿಯ ಭೀಕರ ದೃಶ್ಯ ಇಲ್ಲಿದೆ
ಗವಾಸ್ಕರ್ ಎಷ್ಟೇ ಕೇಳಿಕೊಂಡರು ಜಗ್ಗದ ರಿಷಭ್ ಪಂತ್
ಗವಾಸ್ಕರ್ ಎಷ್ಟೇ ಕೇಳಿಕೊಂಡರು ಜಗ್ಗದ ರಿಷಭ್ ಪಂತ್
ಕೃಷ್ಣ ಭೈರೇಗೌಡ, ಹೆಚ್ ಕೆ ಪಾಟೀಲರನ್ನೂ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ
ಕೃಷ್ಣ ಭೈರೇಗೌಡ, ಹೆಚ್ ಕೆ ಪಾಟೀಲರನ್ನೂ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ
ರಾಜಕೀಯ ಪಿತೂರಿ, ಉಳಿದ ಸಂಗತಿಗಳ ಬಗ್ಗೆ ಈಗ್ಲೇ ಮಾತಾಡಲ್ಲ: ಡಿಕೆ ಸುರೇಶ್
ರಾಜಕೀಯ ಪಿತೂರಿ, ಉಳಿದ ಸಂಗತಿಗಳ ಬಗ್ಗೆ ಈಗ್ಲೇ ಮಾತಾಡಲ್ಲ: ಡಿಕೆ ಸುರೇಶ್
22 ಲಕ್ಷ ರೂ. ವಂಚನೆ: ನಿರ್ದೇಶಕ ನಂದ ಕಿಶೋರ್ ವಿರುದ್ಧ ದೂರು ನೀಡಿದ ಶಬರೀಶ್
22 ಲಕ್ಷ ರೂ. ವಂಚನೆ: ನಿರ್ದೇಶಕ ನಂದ ಕಿಶೋರ್ ವಿರುದ್ಧ ದೂರು ನೀಡಿದ ಶಬರೀಶ್
ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಮತ್ತೋರ್ವ ಕೈ ಶಾಸಕ
ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಮತ್ತೋರ್ವ ಕೈ ಶಾಸಕ
ವ್ಯಕ್ತಿ ಆರೋಪಿಸುತ್ತಿರೋದು ನಿಜವೇ ಆಗಿದ್ದರೆ ಅಧಿಕಾರಿಯಿಂದ ಅಪರಾಧ ನಡೆದಿದೆ
ವ್ಯಕ್ತಿ ಆರೋಪಿಸುತ್ತಿರೋದು ನಿಜವೇ ಆಗಿದ್ದರೆ ಅಧಿಕಾರಿಯಿಂದ ಅಪರಾಧ ನಡೆದಿದೆ
ಜಮೀರ್ ಜೊತೆ ಸಿಎಂ ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಲಿ: ಅಶೋಕ
ಜಮೀರ್ ಜೊತೆ ಸಿಎಂ ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಲಿ: ಅಶೋಕ
ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ
ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO