Viral Video: ಈ ಆನೆ ಇಲ್ಲಿ ಮಾಡಿದ್ದೇನು ಮತ್ತು ಓಡಿಹೋಗಿದ್ದು ಏಕೆ?

Wildlife : ಸದ್ಯ, ಈ ಜೀಪಿನೊಳಗೆ ಅರಣ್ಯ ಸಿಬ್ಬಂದಿ ಇರಲಿಲ್ಲ ಎನ್ನುವುದೊಂದೇ ಸಮಾಧಾನ. ಆದರೆ ಈ ಮುದ್ದಾನೆಗೆ ಇದು ಆಟಿಕೆಯಂತೆ ಕಂಡಿತ್ತೋ? ಅಥವಾ ಯಾವುದಕ್ಕಾದರೂ ಕೋಪ ಬಂದಿತ್ತೋ? ನೋಡಿ ನಿಮಗೇನಾದರೂ ಅರ್ಥವಾಗುವುದೋ?

Viral Video: ಈ ಆನೆ ಇಲ್ಲಿ ಮಾಡಿದ್ದೇನು ಮತ್ತು ಓಡಿಹೋಗಿದ್ದು ಏಕೆ?
ಹೇಗಿದೆ ನನ್ನ ಹೊಸ ಆಟಿಕೆ?
Follow us
|

Updated on:Aug 04, 2023 | 11:49 AM

Elephant: ಈ ಜೀಪ್, ಆನೆಗೆ ಆಟಿಕೆಯಂತೆ (Toy) ಕಂಡಿದೆಯೋ ಅಥವಾ ನನ್ನ ಜಾಗದಲ್ಲಿ ನೀವ್ಯಾಕೆ ಗಾಡಿ ನಿಲ್ಲಿಸಿದ್ದೀರಿ ಎಂದು ಗಲಾಟೆ ಮಾಡಿದೆಯೋ ಅಥವಾ ಸರಿಯಾಗಿ ಬಾಗಿಲು ಮುಚ್ಚಲು ಬರುವುದಿಲ್ಲವೇ ನಿಮಗೆ? ಎಂದು ಜೊರು ಮಾಡಿದೆಯೋ ಅಥವಾ ಇನ್ನೂ ಯಾವುದಾದರೂ ಕಿಟಕಿ ಗಾಜು ಉಳಿದಿದೆಯೋ ಎಂದು ಪರೀಕ್ಷಿಸಿದೆಯೋ ಗೊತ್ತಾಗುತ್ತಿಲ್ಲ. ಮಾಡುವುದೆಲ್ಲ ಮಾಡಿ ಓಡಿ ಬೇರೆ ಹೋಗಿದೆ ಈ ಮುದ್ದಾದ ಪುಂಡಾನೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇದರದೇ ಗುಲ್ಲು. ನೋಡಿ ನಿಮಗೇನಾದರೂ ಇದರ ವರ್ತನೆ ಅರ್ಥವಾಗುವುದೆ?

ಐಎಫ್​ಎಸ್ ಅಧಿಕಾರಿ ಪರ್ವೀನ್​ ಕಸ್ವಾನ್​ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಅದೃಷ್ಟಕ್ಕೆ ಈ ಆನೆ ಈ ಜೀಪ್​ ಅನ್ನು ಡಿಕ್ಕಿ ಹೊಡೆಯುವಾಗ ಅರಣ್ಯ ಸಿಬ್ಬಂದಿ ಒಳಗೆ ಯಾರೂ ಇರಲಿಲ್ಲ. ಈ ವಿಡಿಯೋ ಅನ್ನು ಈತನಕ 1 ಲಕ್ಷಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. ಈತನಕ ಸುಮಾರು 2,000 ಜನರು ಲೈಕ್​ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: ಮುಂಬೈ; ‘ಡ್ಯಾನ್ಸ್ ನಿಲ್ಲಿಸಿದರೆ ಮಾತ್ರ ಪ್ರಮಾಣಪತ್ರ’ ಪ್ರಾಧ್ಯಾಪಕರ ತಾಕೀತು

ಬಾಗಿಲು ಮುಚ್ಚಿದೆಯೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ ಸಾಹೇಬರು ಎಂದಿದ್ದಾರೆ ಒಬ್ಬರು. ಯಾಕೆ ಇವರು ಬಾಗಿಲನ್ನು ಮುರಿಯುತ್ತಿದ್ದಾರೆ ಎಂದು ಇನ್ಬೊಬ್ಬರು. ಸುರಕ್ಷತೆಗಾಗಿ ಬಾಗಿಲುಗಳನ್ನು ಮುಚ್ಚಬೇಕು ಎಂದು ಹೇಳುತ್ತಿದ್ದಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಆಟವಾಡ್ತಾ ಇದೆ ಮಗು ಎಂದು ಮಗದೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : Viral Video: ದೆಹಲಿ ಮೆಟ್ರೋ; ಈ ಮಹಿಳೆಗೆ ತುರ್ತು ಸಹಾಯ ಬೇಕಿದೆ

ಅವನಿಗೆ ಒಂದು ಹಾಟ್​ ವೀಲ್​ ಅನ್ನು ಗಿಫ್ಟ್​ ಕೊಟ್ಟಿದ್ದೀರಿ ಎಂದುಕೊಂಡು ಅವನು ಆರಾಮಾಗಿ ಆಟವಾಡುತ್ತಿದ್ದಾನೆ ಎಂದಿದ್ದಾರೆ ಒಬ್ಬರು. ಈ ವಿಡಿಯೋ ನೋಡಿದ ನಿಮಗೆ ಏನೆನ್ನಿಸಿತು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:48 am, Fri, 4 August 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ