AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಬಾಡಿಗೆ ಮನೆ ಖಾಲಿ ಮಾಡುವಾಗ ಮನೆಮಾಲೀಕನಿಂದ ಬಾಡಿಗೆದಾರನಿಗೆ ಸಿಕ್ತು ಪ್ರೀತಿಯ ಉಡುಗೊರೆ

ಬೆಂಗಳೂರು ಎಂದರೆ ಎಲ್ಲರೂ ದುಡಿಯೋಕೆ ಬಂದವರು, ಇಲ್ಲಿ ದುಡ್ಡಿಗೆ ಬಿಟ್ಟರೆ ಭಾವನೆಗಳಿಗೆ ಬೆಲೆಯಿಲ್ಲ ಎನ್ನುವ ಮಾತಿದೆ. ಇನ್ನು ಬಾಡಿಗೆ ಮನೆಯ ವಿಚಾರದಲ್ಲಿ ಇಂತಿಷ್ಟು ಹಣ ಡೆಪಾಸಿಟ್ ಇಟ್ಟರೆ ಮಾತ್ರ ಬಾಡಿಗೆ ಮನೆ ಗ್ಯಾರಂಟಿ. ಮನೆ ಖಾಲಿ ಮಾಡುವ ವೇಳೆ ಆ ಹಣ ಮರಳಿ ನಮ್ಮ ಕೈಗೆ ಸಿಗುತ್ತದೆ ಎನ್ನುವ ಗ್ಯಾರಂಟಿಯಂತೂ ಇರಲ್ಲ. ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿರುವ ಅದೆಷ್ಟೋ ಜನರಿಗೆ ಇಂತಹ ಕಹಿ ಅನುಭವವು ಆಗಿರುತ್ತದೆ. ಆದರೆ ಇದೀಗ ಬಾಡಿಗೆ ಮನೆಯಲ್ಲಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬರು ಮನೆ ಖಾಲಿ ಮಾಡುವ ವೇಳೆ ಮನೆಮಾಲೀಕನ ಪ್ರೀತಿಯ ವಿದಾಯಕ್ಕೆ ಮನಸೋತಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸವಿದ್ದ ನನಗೆ ವಿಭಿನ್ನವಾದ ಅನುಭವವಾಯಿತು ಎಂದು ಹೇಳಿಕೊಂಡಿದ್ದಾರೆ. ಈ ಕುರಿತಾದ ಪೋಸ್ಟ್ ಇಲ್ಲಿದೆ.

Viral: ಬಾಡಿಗೆ ಮನೆ ಖಾಲಿ ಮಾಡುವಾಗ ಮನೆಮಾಲೀಕನಿಂದ ಬಾಡಿಗೆದಾರನಿಗೆ ಸಿಕ್ತು ಪ್ರೀತಿಯ ಉಡುಗೊರೆ
ಬಾಡಿಗೆದಾರನಿಗೆ ಬೆಳ್ಳಿ ಕಡಗ ಉಡುಗೊರೆ ನೀಡಿದ ಮನೆಮಾಲೀಕImage Credit source: Reddit
ಸಾಯಿನಂದಾ
|

Updated on: Jul 22, 2025 | 10:43 AM

Share

ಬೆಂಗಳೂರಿಗೆ (Bengaluru) ಉದ್ಯೋಗ ಹಾಗೂ ಕಲಿಕೆಗಾಗಿ ಬರುವ ಅನೇಕರಿಗೆ ಬಾಡಿಗೆಗೆ ಮನೆ ಹುಡುಕುವುದು ಕಷ್ಟದ ಕೆಲಸ. ಮನೆ ಸಿಕ್ಕಿದರೂ ಬಾಡಿಗೆ ಹೆಚ್ಚು, ಇಲ್ಲದಿದ್ದರೆ ಉದ್ಯೋಗದ ಸ್ಥಳದಿಂದ ಮನೆ ತುಂಬಾ ದೂರ ಎನ್ನುವ ಅಸಮಾಧಾನ. ಹೀಗಾಗಿ ಈ ಬಾಡಿಗೆ ಮನೆ ಹಾಗೂ ಮನೆ ಮಾಲೀಕರ ವಿಚಾರದಲ್ಲಿ ಸಾಕಷ್ಟು ಕಹಿ ಅನುಭವವಾಗಿರುತ್ತದೆ. ಆದರೆ ಇಲ್ಲೊಬ್ಬ ಬೆಂಗಳೂರಿನ ವ್ಯಕ್ತಿಯೂ ಮನೆ ಮಾಲೀಕನು ತನ್ನನ್ನು ನಡೆಸಿಕೊಂಡ ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಮನೆ ಖಾಲಿ ಮಾಡುವ ಸಂದರ್ಭದಲ್ಲಿ ತನ್ನನ್ನು ಅತಂತ್ಯ ಪ್ರೀತಿಯಿಂದ ಬೆಳ್ಳಿಯ ಕಡಗವನ್ನು ಉಡುಗೊರೆಯಾಗಿ ನೀಡಿ ವಿದಾಯ ಹೇಳಿದ್ದಾರೆ, ಒಳ್ಳೆಯ ಮನಸ್ಸಿನ ವ್ಯಕ್ತಿ ಎಂದು ರೆಡ್ಡಿಟ್ (reddit) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

@Kind_Transition_7885/Reddit ರೆಡ್ಡಿಟ್ ಖಾತೆಯಲ್ಲಿ ಬಾಡಿಗೆ ಮನೆ ಬಿಡುವಾಗ ಮನೆ ಮಾಲೀಕನ ಪ್ರೀತಿಯ ಬೀಳ್ಕೊಡುಗೆ ಉಡುಗೊರೆಯ ಬಗ್ಗೆ ಹೇಳಿಕೊಂಡಿದ್ದಾರೆ. ಮನೆ ಮಾಲೀಕರು ಠೇವಣಿಯನ್ನೂ ಹಿಂದಿರುಗಿಸದ ನಗರದಲ್ಲಿ, ನನ್ನ ಮನೆ ಮಾಲೀಕರು ನನಗೆ ವಿದಾಯ ಉಡುಗೊರೆಯನ್ನು ನೀಡಿದರು. ನಾನು ಎರಡು ವರ್ಷಗಳ ಕಾಲ ಒಂದೇ ಮನೆಯಲ್ಲಿ ವಾಸಿಸುತ್ತಿದ್ದ ವೇಳೆಯಲ್ಲಿ ಮಾಲೀಕರು ತಮ್ಮ ವಾಸ್ತವ್ಯದ ಉದ್ದಕ್ಕೂ ತಮ್ಮನ್ನು ಮಗನಂತೆ ನಡೆಸಿಕೊಂಡಿದ್ದಾರೆ. ಮನೆ ಖಾಲಿ ಮಾಡುವಾಗ ಮನೆಯ ಮಾಲೀಕರಿಂದ ಬೀಳ್ಕೊಡುಗೆ ಉಡುಗೊರೆಯಾಗಿ ಬೆಳ್ಳಿ ಕಡಗ ಸಿಕ್ಕಿದೆ. ನನಗೆ ಅಗತ್ಯವಿದ್ದ ವಸ್ತುಗಳ ತೆಗೆದುಕೊಂಡು ಬರಲು ನನಗೆ ಅಗತ್ಯವಿದ್ದಾಗಲೆಲ್ಲಾ ಅವರು ತನ್ನ ಸ್ಕೂಟಿಯನ್ನು ಸಹ ನನಗೆ ನೀಡುತ್ತಿದ್ದರು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ :Viral: ಬೆಂಗಳೂರಿಗರೇ, ಓಲಾದಲ್ಲಿ ಆಟೋ ಬುಕ್ ಮಾಡೋ ಬದಲು ಸೆಡಾನ್ ಕಾರ್ ಬುಕ್ ಮಾಡೋದೇ ಬೆಸ್ಟ್

ಇದನ್ನೂ ಓದಿ
Image
ಓಲಾದಲ್ಲಿ ಆಟೋ ಬುಕ್ ಮಾಡೋ ಬದಲು ಸೆಡಾನ್ ಕಾರ್ ಬುಕ್ ಮಾಡೋದೇ ಬೆಸ್ಟ್
Image
ದೇವರ ಹೆಸರಿನಲ್ಲಿ ಹಣ ವಸೂಲಿ ಮಾಡ್ತಾರೆ, ಈ ಜನರಿಂದ ನೀವು ದೂರವಿರಿ
Image
ವಿಚ್ಛೇದಿತ ಮಹಿಳೆಯರಿಗೆ ರಿಲ್ಯಾಕ್ಸ್ ನೀಡುವ ವಿಶೇಷ ಡಿವೋರ್ಸ್ ಕ್ಯಾಂ
Image
ಗ್ರಾಹಕರಿಗೆ ವಿಶೇಷ ಸೂಚನೆ : ಚಹಾ ಅಂಗಡಿಯ ಗೋಡೆಯ ಮೇಲೆ ವಿಶಿಷ್ಟ ಪೋಸ್ಟರ್

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

Viral Post

 

ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ನಾನಾ ರೀತಿಯ ಕಾಮೆಂಟ್ ಮಾಡಿ ಆ ಮನೆ ಮಾಲೀಕರ ಒಳ್ಳೆಯ ವ್ಯಕ್ತಿತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ನೀವು 8 ಬಿಲಿಯನ್‌ನಲ್ಲಿ 1 ಮೊಟ್ಟೆಯಿಡುವ ಅವಕಾಶವಿರುವ ಮನೆ ಮಾಲೀಕರನ್ನು ಆಕಸ್ಮಿಕವಾಗಿ ಭೇಟಿಯಾದಿರಿ ಎಂದಿದ್ದಾರೆ. ಇನ್ನೊಬ್ಬರು, ಕೆಲವು ವರ್ಷಗಳ ಹಿಂದೆ ನನಗೂ ಒಳ್ಳೆಯ ಮನೆ ಮಾಲೀಕರು ಸಿಕ್ಕಿದ್ದರು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೀವು ಅವರಿಗೆ ಏನಾದರೂ ರೀತಿಯಲ್ಲಿ ಉಪಕಾರ ಮಾಡಿ. ಇಷ್ಟೊಂದು ಒಳ್ಳೆಯ ಜನರು ಇರುವುದು ಅಪರೂಪ. ನೀವು ಅವರೊಂದಿಗಿನ ಒಳ್ಳೆಯ ಬಾಂಧವ್ಯವನ್ನು ನಿಮ್ಮ ಕೆಲಸ ಕಾರ್ಯಗಳಲ್ಲಿ ವ್ಯಕ್ತಪಡಿಸಬೇಕು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ