AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weird Dish: ತಮ್ಮ ತಲೆಯನ್ನು ಬಟ್ಟೆಯಿಂದ ಮುಚ್ಚಿ ಈ ಖಾದ್ಯ ಸೇವಿಸುತ್ತಾರೆ; ಏನಿದು ವಿಚಿತ್ರ ಆಹಾರ?

ಪ್ರಪಂಚದಲ್ಲೇ ಅತ್ಯಂತ ಅಸಹ್ಯಕರವಾದ ಖಾದ್ಯ ಯಾವುದು ಮತ್ತು ಅದನ್ನು ಅಸಹ್ಯಕರ ಎಂದು ಏಕೆ ಕರೆಯುತ್ತಾರೆ ಎಂದು ನಿಮಗೆ ತಿಳಿದಿದೆಯೇ? ಈ ಖಾದ್ಯವನ್ನು ತಿನ್ನುವಾಗ ಜನರು ತಮ್ಮ ತಲೆಯನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳುತ್ತಾರೆ, ಆದ್ದರಿಂದ ಅವರು ತಿನ್ನುವುದನ್ನು ಯಾರೂ ನೋಡುವುದಿಲ್ಲ ಎಂದು ಹೇಳಲಾಗುತ್ತದೆ. ಇದಕ್ಕೆ ಕಾರಣ ಬಹಳ ವಿಚಿತ್ರ.

Weird Dish: ತಮ್ಮ ತಲೆಯನ್ನು ಬಟ್ಟೆಯಿಂದ ಮುಚ್ಚಿ ಈ ಖಾದ್ಯ ಸೇವಿಸುತ್ತಾರೆ; ಏನಿದು ವಿಚಿತ್ರ ಆಹಾರ?
Weird Dish
Follow us
ಅಕ್ಷತಾ ವರ್ಕಾಡಿ
|

Updated on: Dec 06, 2023 | 12:49 PM

ಜಗತ್ತಿನಲ್ಲಿ ವಿವಿಧ ರೀತಿಯ ಆಹಾರ ಪದಾರ್ಥಗಳು ಲಭ್ಯವಿವೆ. ಕೆಲವು ಆಹಾರಗಳು ತುಂಬಾ ವಿಚಿತ್ರವಾಗಿದ್ದು, ಅವುಗಳನ್ನು ನೋಡಿದರೆ ಸಾಕು ವಾಕರಿಕೆ ಬರುವುದಂತೂ ಖಚಿತ. ಅಂತದ್ದೇ ವಿಶ್ವದ ಅತ್ಯಂತ ‘ಅಸಹ್ಯ’ ಆಹಾರವೆಂದು ಪರಿಗಣಿಸಲ್ಪಟ್ಟಿರುವ ಆಹಾರ ಬಗ್ಗೆ ನೀವು ಇಲ್ಲಿ ತಿಳಿದುಕೊಳ್ಳಿ. ಈ ವಿಚಿತ್ರ ಖಾದ್ಯ ಎಷ್ಟು ಅಸಹ್ಯಕರವಾಗಿದೆಯೆಂದರೆ, ಜನರು ತಮ್ಮ ಪಾಪವನ್ನು ದೇವರಿಂದ ಮರೆಮಾಡಲು ತಲೆಯ ಮೇಲೆ ಕರವಸ್ತ್ರವನ್ನು ಮುಚ್ಚಿ ತಿನ್ನಬೇಕು ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಜನರು ತಿನ್ನುವ ಮೊದಲು ದೇವರನ್ನು ಸ್ಮರಿಸುತ್ತಾರೆ ಮತ್ತು ಪ್ರಾರ್ಥಿಸುತ್ತಾರೆ, ಆದರೆ ಆಹಾರವನ್ನು ಸೇವಿಸುವ ಮೊದಲು ಜನರು ಕರವಸ್ತ್ರದಿಂದ ತಮ್ಮ ತಲೆಯಿಂದ ಮುಖದ ವರೆಗೆ ಮುಚ್ಚಿಕೊಳ್ಳುತ್ತಾರೆ.

ಏನಿದು ಆಹಾರ?

ಓರ್ಟೋಲನ್ ಬಂಟಿಂಗ್ ಎಂಬ ಒಂದು ಸಣ್ಣ ಹಾಡುವ ಹಕ್ಕಿಯಾಗಿದ್ದು , ಅದು ಈಗ ಬಹಳ ಅಪರೂಪವಾಗಿದೆ. ಈ ಹಕ್ಕಿ ಮಂಗೋಲಿಯಾದಿಂದ ಯುರೋಪಿಗೆ ಕಂಡುಬಂದರೂ, ಹಾರುವ ಮೂಲಕ ಆಫ್ರಿಕಾವನ್ನು ತಲುಪುತ್ತದೆ. ಈ ಪಕ್ಷಿಯು ತಿನ್ನಲು ತುಂಬಾ ರುಚಿಕರವಾಗಿದೆ ಎಂಬ ಕಾರಣಕ್ಕೆ ಬೇಟೆಯಾಡಲಾಗುತ್ತದೆ . ಆದರೆ ಬೇಟೆಯ ವಿಧಾನವು ತುಂಬಾ ಭಯಾನಕವಾಗಿದೆ. ಮೊದಲು ಬಲೆ ಹಾಕಿ ಹಕ್ಕಿ ಹಿಡಿದ ನಂತರ ಎರಡೂ ಕಣ್ಣುಗಳನ್ನು ಕಿತ್ತು ಕುರುಡರನ್ನಾಗಿಸಿ ನಂತರ ಚಿಕ್ಕ ಪೆಟ್ಟಿಗೆಗಳಲ್ಲಿ ಬಂಧಿಸುತ್ತಾರೆ.

ವರದಿಗಳ ಪ್ರಕಾರ, ಒರ್ಟೊಲನ್ ಅನ್ನು ಸುಮಾರು ಮೂರು ವಾರಗಳ ಕಾಲ ಒಂದು ಪೆಟ್ಟಿಗೆಗಳಲ್ಲಿ ಲಾಕ್ ಮಾಡಲಾಗುತ್ತದೆ. ಈ ಸಮಯದಲ್ಲಿ ಅವುಗಳಿಗೆ ಸಾಕಷ್ಟು ಆಹಾರವನ್ನು ನೀಡಲಾಗುತ್ತದೆ. ಹಕ್ಕಿಗಳನ್ನು ಕಣ್ಣು ಕಾಣದಂತೆ ಮಾಡಿರುವುದರಿಂದ, ಈ ಹಕ್ಕಿಗಳು ಸ್ವಲ್ಪ ಗೊಂದಲಕ್ಕೊಳಗಾಗಿ ಬಹಳಷ್ಟು ಧಾನ್ಯಗಳು ಮತ್ತು ಬೀಜಗಳನ್ನು ಸೇವಿಸುತ್ತವೆ. ಇದರಿಂದಾಗಿ ಅವು ತಮ್ಮ ಮೂಲ ಗಾತ್ರಕ್ಕಿಂತ ಸುಮಾರು ಮೂರು ಪಟ್ಟು ದಪ್ಪವಾಗುತ್ತವೆ. ನಂತರ ಅವುಗಳನ್ನು ಅಲ್ಲಿಂದ ಹೊರತೆಗೆದು ಖಾದ್ಯಗಳಿಗಾಗಿ ಕೊಂದು ಸುಮಾರು 8 ನಿಮಿಷಗಳ ಕಾಲ ಹುರಿದು ಆಹಾರ ತಯಾರಿಸಲಾಗುತ್ತದೆ.

ಇದನ್ನೂ ಓದಿ: ಶ್ರೀ ಕೃಷ್ಣದೇವರಾಯರ ಆಸ್ಥಾನದ ಮಹಾಮಂತ್ರಿ ತಿಮ್ಮರಸರ ವಾಡೆ ಮತ್ತು ಕುಟುಂಬ ಈಗ ಹೇಗಿದೆ ಗೊತ್ತಾ?

ಈ ಆಹಾರವನ್ನು ತಿನ್ನಲು ತುಂಬಾ ಕಷ್ಟ ಎಂದು ಹೇಳುತ್ತಾರೆ. ಕೆಲವೊಮ್ಮೆ ಈ ಹಕ್ಕಿಯ ಸಣ್ಣ ಮೂಳೆಗಳು ಮತ್ತು ಕೆಲವೊಮ್ಮೆ ಅದರ ಕೊಕ್ಕು ಹಲ್ಲುಗಳಲ್ಲಿ ಸಿಲುಕಿಕೊಳ್ಳುತ್ತವೆ. ಕೆಲವರು ಇದು ಸುಂದರವಾದ ಪಕ್ಷಿ, ಅದನ್ನು ತಿನ್ನುವುದು ಪಾಪ ಎಂದು ಕೂಡ ಹೇಳುತ್ತಾರೆ. ಆದುದರಿಂದಲೇ ಜನರು ಅದನ್ನು ತಿನ್ನುವಾಗ ದೇವರಿಗೆ ಕಾಣದಂತೆ ತಲೆಯನ್ನು ಮುಚ್ಚಿಕೊಳ್ಳುತ್ತಾರೆ.

ಓರ್ಟೋಲನ್ ಬೇಟೆಯನ್ನು ಫ್ರಾನ್ಸ್‌ನಲ್ಲಿ 1999 ರಲ್ಲಿ ನಿಷೇಧಿಸಲಾಗಿದೆಯಾದರೂ, ಅದರ ಬೇಟೆಯು ಅನೇಕ ಸ್ಥಳಗಳಲ್ಲಿ ಮುಂದುವರಿದಿದೆ. ಈಗ ಯುರೋಪಿಯನ್ ರಾಷ್ಟ್ರಗಳಲ್ಲಿ ಓರ್ಟೋಲನ್ ಬೇಟೆಯಾಡುವುದನ್ನು ನಿಷೇಧಿಸಲಾಗಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು