AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Post: ಯೂಟ್ಯೂಬ್​ನಲ್ಲಿ 100 ಚಂದಾದಾರರನ್ನು ಪಡೆದುದಕ್ಕೆ ಮರದ ಪ್ಲೇ ಬಟನ್ ಗಿಫ್ಟ್​

YouTube Play Button : ನಿಮ್ಮ ಯಶಸ್ಸಿಗೆ ನಿಮ್ಮ ಸ್ನೇಹಿತರೂ ಖುಷಿಪಡುತ್ತಾರೆ ಎಂದರೆ ಅವರೇ ನಿಜವಾದ ಸ್ನೇಹಿತರು. ಎಂದಾದರೂ ಇಂಥ ಮುದ್ದಾದ ಗಿಫ್ಟ್​ ಕೊಡುವ ಆಲೋಚನೆ ನಿಮಗೆ ಬಂದಿದ್ದಿದೆಯಾ?

Viral Post: ಯೂಟ್ಯೂಬ್​ನಲ್ಲಿ 100 ಚಂದಾದಾರರನ್ನು ಪಡೆದುದಕ್ಕೆ ಮರದ ಪ್ಲೇ ಬಟನ್ ಗಿಫ್ಟ್​
ಕಟ್ಟಿಗೆಯ ಪ್ಲೇ ಬಟನ್!
TV9 Web
| Edited By: ಶ್ರೀದೇವಿ ಕಳಸದ|

Updated on:Aug 16, 2022 | 3:58 PM

Share

Wooden Play Button : ಗಿಫ್ಟ್​! ನಿಮ್ಮ ಆಪ್ತರು ನಿಮಗೆ ಏನೇ ಗಿಫ್ಟ್​ ಕೊಡಲಿ ಆ ಕ್ಷಣಕ್ಕೆ ಪುಳಕ, ಉತ್ಸಾಹವನ್ನಂತೂ ಅದು ತುಳುಕಿಸದೇ ಇರದು. ಈ ಮೂಲಕ ನಿಮ್ಮೊಳಗಿನ ಬಾಂಧವ್ಯವನ್ನೂ ಒಂದು ಹೆಜ್ಜೆ ಗಟ್ಟಿಗೊಳಿಸುತ್ತದೆ. ಆದರೆ, ನಿಮ್ಮ ಯಶಸ್ಸಿಗೆ ನಿಮ್ಮ ಸ್ನೇಹಿತರೂ ಖುಷಿಪಡುತ್ತಾರೆ ಎಂದರೆ ಅವರೇ ನಿಜವಾದ ನಿಮ್ಮ ಸ್ನೇಹಿತರು. ಯೂಟ್ಯೂಬ್​ನಲ್ಲಿ 100 ಚಂದಾದಾರರನ್ನು ಪಡೆದ ಒಬ್ಬ ಹುಡುಗನಿಗೆ ಅವನ ಸ್ನೇಹಿತ ಅಚ್ಚರಿಯಾದ ಈ ಗಿಫ್ಟ್​ ನೀಡಿದ್ದಾನೆ. ಏನಿರಬಹುದು? ಬಹಳ ಮುದ್ದಾದ ಗಿಫ್ಟ್​ ಅದು. ಮೇಲೆ ಆ ಚಿತ್ರವನ್ನು ನೀವು ಈಗಾಗಲೇ ನೋಡಿದ್ದೀರಿ; ಮರದ ಪ್ಲೇ ಬಟನ್​ವುಳ್ಳ ಗಿಫ್ಟ್​. ಮಟ್ ಕೋವಲ್ (Matt Koval) ಎಂಬ ಟ್ವಿಟರ್ ಖಾತೆದಾರರು ತಮ್ಮ ಮಗನಿಗೆ ಅವನ ಸ್ನೇಹಿತ ಕೊಟ್ಟ ಈ ಗಿಫ್ಟ್​ನ ಪೋಸ್ಟ್​ ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಯೂಟ್ಯೂಬ್​ ಕಂಟೆಂಟ್​ ಕ್ರಿಯೇಟರ್​ಗಳು 1 ಲಕ್ಷ, 1 ಕೋಟಿ, 10 ಕೋಟಿ ಚಂದಾದಾರರನ್ನು ಪಡೆದ ಮೇಲೆ ಯೂಟ್ಯೂಬ್​ ಬೆಳ್ಳಿ, ಚಿನ್ನ, ವಜ್ರ ಮತ್ತು ಕೆಂಪು ಡೈಮಂಡ್​ ಪ್ಲೇ ಬಟನ್​ ಅನ್ನು ಉಡುಗೊರೆಯಾಗಿ ನೀಡುತ್ತದೆ. ಇದನ್ನು ಗಮನಿಸಿದ ಈ ಹುಡುಗ ತನ್ನ ಸ್ನೇಹಿತನಿಗೆ ಹೀಗೆ ತಾನೇ ಗಿಫ್ಟ್​ ಕೈಯ್ಯಾರೆ ಮಾಡಿಕೊಟ್ಟು ಸಂತೋಷ ವ್ಯಕ್ತಪಡಿಸಿದ್ದಾನೆ. 68,000 ಕ್ಕೂ ಹೆಚ್ಚು ಲೈಕ್ಸ್​ ಈ ಪೋಸ್ಟ್​ ಪಡೆದಿದೆ. ನೆಟ್ಟಿಗರು ಹೃದಯಸ್ಪರ್ಶಿಯಾದ ಪ್ರತಿಕ್ರಿಯೆಗಳಿಂದ ಸಂತಸ ವ್ಯಕ್ತಪಡಿಸಿದ್ಧಾರೆ.

ಖರೀದಿಸಿ ಯಾರೂ ಗಿಫ್ಟ್​ ಕೊಡಬಹುದು. ಆದರೆ ಸ್ವತಃ ತಯಾರಿಸಿ? ಇದೇ ಸ್ನೇಹದ ಕೊಂಡಿಯನ್ನು ಹಿಡಿದಿಡುವ ಪ್ರೀತಿ, ಶ್ರದ್ಧೆ ಮತ್ತು ಕಟ್ಟಲಾಗದ ಬೆಲೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:48 pm, Tue, 16 August 22

Follow Us
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ