Sign In

By signing in or creating an account, you agree with Associated Broadcasting Company's Terms & Conditions and Privacy Policy.

viral video: ಕುದುರೆ ಏರಿ ಮಂಟಪಕ್ಕೆ ಬಂದ ವಧು: ವೀಡಿಯೋ ವೈರಲ್​

ಇಲ್ಲೊಬ್ಬಳು ವಧು, ನಾನು ನನ್ನ ಗಂಡನನ್ನು ಪಡೆಯಲು ಹೊರಟಿದ್ದೇನೆ ಎಂದು ಕುದುರೆ ಏರಿಕೊಂಡು ಮದುವೆ ಮನೆಗೆ ಮೆರವಣಿಗೆ ಮೂಲಕ ಹೋದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. 

viral video: ಕುದುರೆ ಏರಿ ಮಂಟಪಕ್ಕೆ ಬಂದ ವಧು: ವೀಡಿಯೋ ವೈರಲ್​
ಕುದುರೆ ಏರಿ ಬಂದ ವಧು
Follow us
TV9 Web
| Updated By: Pavitra Bhat Jigalemane

Updated on:Dec 18, 2021 | 3:43 PM

ಗಯಾ: ಭಾರತೀಯ ಮದುವೆ ಸಮಾರಂಭಗಳಲ್ಲಿ ವಿಭಿನ್ನ ರೀತಿಯ ವಧುವರರ ಆಗಮನ ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿದೆ. ವಧು ವರರನ್ನು ಉಯ್ಯಾಲೆಯಲ್ಲಿ ಕರೆತರುವುದು, ಜೆಸಿಬಿಯಲ್ಲಿ ಕರೆದುಕೊಂಡು ಬರುವುದು ಸೇರಿದಂತೆ ಈ ರೀತಿಯ ಸಾಕಷ್ಟು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈವೆಂಟ್​ ಮ್ಯಾನೇಜ್ಮೆಂಟ್​ ಕಂಪನಿಗಳು ಹುಟ್ಟಿಕೊಂಡ ಬಳಿಕ ವಧುವರರ ವೆಲ್​ಕಮ್​ ಮಾಡಲು ಹೊಸ ಹೊಸ ಐಡಿಯಾಗಳನ್ನು ಕಾಣಬಹುದು. ಹೀಗೆ ವಿಭಿನ್ನ ಐಡಿಯಾಗಳಿಗೆ ಕೆಲವೊಮ್ಮೆ ಅಪರೂಪದ ಘಟನೆಗಳೂ ಸಾಕ್ಷಿಯಾಗುತ್ತವೆ.

ಅದನ್ನು ಹೊರತುಪಡಿಸಿದರೆ ಸಾಮಾನ್ಯವಾಗಿ ಮದುವೆಯ ವರ ಕುದುರೆ ಏರಿ ಮಂಟಪಕ್ಕೆ ಬರುತ್ತಾನೆ. ಆದರೆ ಇಲ್ಲೊಬ್ಬಳು ವಧು, ನಾನು ನನ್ನ ಗಂಡನನ್ನು ಪಡೆಯಲು ಹೊರಟಿದ್ದೇನೆ ಎಂದು ಕುದುರೆ ಏರಿಕೊಂಡು ಮದುವೆ ಮನೆಗೆ ಮೆರವಣಿಗೆ ಮೂಲಕ ಹೋದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.  ಸುದ್ದಿ ಸಂಸ್ಥೆ ಎಎನ್​ಐ ಇದರ ವಿಡಿಯೋವನ್ನು ಹಂಚಿಕೊಂಡಿದೆ.

ಗಯಾ ಮೂಲದ ಅನುಷ್ಕಾ ಗುಹಾ ಎನ್ನುವವರು ಈ ರೀತಿ ಮದುವೆಗೆ ಕುದುರೆ ಏರಿ ಮೆರವಣಿಗೆ ಮೂಲಕ ಸಾಗಿದ್ದಾರೆ. ಫ್ಲೈಟ್​ ಅಟೆಂಡೆಂಟ್​ ಆಗಿರುವ ಅನುಷ್ಕಾ ಅವರು ಕೋಲ್ಕತ್ತಾ ಮೂಲದ ಉದ್ಯಮಿ ಜೀತ್​ ಮುಖರ್ಜಿ ಎನ್ನುವವರನ್ನು ವಿವಾಹವಾಗಿದ್ದಾರೆ. ಈ ವೇಳೆ ಲೆಹೆಂಗಾ ಧರಿಸಿ ಕುದುರೆ ಏರಿ ಬಂದಿದ್ದಾರೆ. ಈ ಬಗ್ಗೆ ಅನುಷ್ಕಾ ಹುಡುಗರು ಮಾತ್ರ ಏಕೆ ಕುದುರೆ ಏರಿ ಬರಬೇಕು. ನಾನು ಹುಡುಗಿ ಆದರೂ ಕುದುರೆ ಹತ್ತಿಕೊಂಡು ಬಂದಿದ್ದೇನೆ. ಇದನ್ನು ಪ್ರಶ್ನೆ ಮಾಡದ್ದಿದ್ದಕ್ಕೆ ನನ್ನ ಪತಿಗೆ ಧನ್ಯವಾದಗಳೆ ಎಂದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಧು ಅನುಷ್ಕಾ ಕುದುರೆ ಏರಿ ಬಂದ ವೀಡಿಯೋ ವೈರಲ್​ ಅಗಿದೆ. ಮದುವೆಯಲ್ಲಿ ಧರಿಸುವ ಭಾರವಾದ ಲೆಹೆಂಗಾ ಧರಿಸಿ ಕುದುರೆ ಸವಾರಿ ಮಾಡಿಕೊಂಡು ಬಂದ ಅನುಷ್ಕಾ ಅವರನ್ನು ನೋಡಿ ನೆಟ್ಟಿಗರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ:

Viral Video: ಮದುವೆ ಮಂಟಪದಲ್ಲಿ ಫೋಟೋ ತೆಗೆಸಿಕೊಳ್ಳುವ ವೇಳೆ ವರನ ಕಾಲಿನಲ್ಲಿದ್ದ ಶೂ ಕಳ್ಳತನ; ವೈರಲ್ ವಿಡಿಯೋ ನೋಡಿ

Published On - 3:36 pm, Sat, 18 December 21

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್