AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

viral video: ಕುದುರೆ ಏರಿ ಮಂಟಪಕ್ಕೆ ಬಂದ ವಧು: ವೀಡಿಯೋ ವೈರಲ್​

ಇಲ್ಲೊಬ್ಬಳು ವಧು, ನಾನು ನನ್ನ ಗಂಡನನ್ನು ಪಡೆಯಲು ಹೊರಟಿದ್ದೇನೆ ಎಂದು ಕುದುರೆ ಏರಿಕೊಂಡು ಮದುವೆ ಮನೆಗೆ ಮೆರವಣಿಗೆ ಮೂಲಕ ಹೋದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. 

viral video: ಕುದುರೆ ಏರಿ ಮಂಟಪಕ್ಕೆ ಬಂದ ವಧು: ವೀಡಿಯೋ ವೈರಲ್​
ಕುದುರೆ ಏರಿ ಬಂದ ವಧು
TV9 Web
| Edited By: |

Updated on:Dec 18, 2021 | 3:43 PM

Share

ಗಯಾ: ಭಾರತೀಯ ಮದುವೆ ಸಮಾರಂಭಗಳಲ್ಲಿ ವಿಭಿನ್ನ ರೀತಿಯ ವಧುವರರ ಆಗಮನ ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿದೆ. ವಧು ವರರನ್ನು ಉಯ್ಯಾಲೆಯಲ್ಲಿ ಕರೆತರುವುದು, ಜೆಸಿಬಿಯಲ್ಲಿ ಕರೆದುಕೊಂಡು ಬರುವುದು ಸೇರಿದಂತೆ ಈ ರೀತಿಯ ಸಾಕಷ್ಟು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈವೆಂಟ್​ ಮ್ಯಾನೇಜ್ಮೆಂಟ್​ ಕಂಪನಿಗಳು ಹುಟ್ಟಿಕೊಂಡ ಬಳಿಕ ವಧುವರರ ವೆಲ್​ಕಮ್​ ಮಾಡಲು ಹೊಸ ಹೊಸ ಐಡಿಯಾಗಳನ್ನು ಕಾಣಬಹುದು. ಹೀಗೆ ವಿಭಿನ್ನ ಐಡಿಯಾಗಳಿಗೆ ಕೆಲವೊಮ್ಮೆ ಅಪರೂಪದ ಘಟನೆಗಳೂ ಸಾಕ್ಷಿಯಾಗುತ್ತವೆ.

ಅದನ್ನು ಹೊರತುಪಡಿಸಿದರೆ ಸಾಮಾನ್ಯವಾಗಿ ಮದುವೆಯ ವರ ಕುದುರೆ ಏರಿ ಮಂಟಪಕ್ಕೆ ಬರುತ್ತಾನೆ. ಆದರೆ ಇಲ್ಲೊಬ್ಬಳು ವಧು, ನಾನು ನನ್ನ ಗಂಡನನ್ನು ಪಡೆಯಲು ಹೊರಟಿದ್ದೇನೆ ಎಂದು ಕುದುರೆ ಏರಿಕೊಂಡು ಮದುವೆ ಮನೆಗೆ ಮೆರವಣಿಗೆ ಮೂಲಕ ಹೋದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.  ಸುದ್ದಿ ಸಂಸ್ಥೆ ಎಎನ್​ಐ ಇದರ ವಿಡಿಯೋವನ್ನು ಹಂಚಿಕೊಂಡಿದೆ.

ಗಯಾ ಮೂಲದ ಅನುಷ್ಕಾ ಗುಹಾ ಎನ್ನುವವರು ಈ ರೀತಿ ಮದುವೆಗೆ ಕುದುರೆ ಏರಿ ಮೆರವಣಿಗೆ ಮೂಲಕ ಸಾಗಿದ್ದಾರೆ. ಫ್ಲೈಟ್​ ಅಟೆಂಡೆಂಟ್​ ಆಗಿರುವ ಅನುಷ್ಕಾ ಅವರು ಕೋಲ್ಕತ್ತಾ ಮೂಲದ ಉದ್ಯಮಿ ಜೀತ್​ ಮುಖರ್ಜಿ ಎನ್ನುವವರನ್ನು ವಿವಾಹವಾಗಿದ್ದಾರೆ. ಈ ವೇಳೆ ಲೆಹೆಂಗಾ ಧರಿಸಿ ಕುದುರೆ ಏರಿ ಬಂದಿದ್ದಾರೆ. ಈ ಬಗ್ಗೆ ಅನುಷ್ಕಾ ಹುಡುಗರು ಮಾತ್ರ ಏಕೆ ಕುದುರೆ ಏರಿ ಬರಬೇಕು. ನಾನು ಹುಡುಗಿ ಆದರೂ ಕುದುರೆ ಹತ್ತಿಕೊಂಡು ಬಂದಿದ್ದೇನೆ. ಇದನ್ನು ಪ್ರಶ್ನೆ ಮಾಡದ್ದಿದ್ದಕ್ಕೆ ನನ್ನ ಪತಿಗೆ ಧನ್ಯವಾದಗಳೆ ಎಂದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಧು ಅನುಷ್ಕಾ ಕುದುರೆ ಏರಿ ಬಂದ ವೀಡಿಯೋ ವೈರಲ್​ ಅಗಿದೆ. ಮದುವೆಯಲ್ಲಿ ಧರಿಸುವ ಭಾರವಾದ ಲೆಹೆಂಗಾ ಧರಿಸಿ ಕುದುರೆ ಸವಾರಿ ಮಾಡಿಕೊಂಡು ಬಂದ ಅನುಷ್ಕಾ ಅವರನ್ನು ನೋಡಿ ನೆಟ್ಟಿಗರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ:

Viral Video: ಮದುವೆ ಮಂಟಪದಲ್ಲಿ ಫೋಟೋ ತೆಗೆಸಿಕೊಳ್ಳುವ ವೇಳೆ ವರನ ಕಾಲಿನಲ್ಲಿದ್ದ ಶೂ ಕಳ್ಳತನ; ವೈರಲ್ ವಿಡಿಯೋ ನೋಡಿ

Published On - 3:36 pm, Sat, 18 December 21

Follow Us
Web contact
Web contact

TV9 Kannada

Read More
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!