AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೇಬುವನ್ನು ಎಣ್ಣೆಯಲ್ಲಿ ಬೇಯಿಸಿ ತಿಂದ ವ್ಯಕ್ತಿ: ವಿಚಿತ್ರ ಖಾದ್ಯದ ವೀಡಿಯೋ ವೈರಲ್​

ಇಲ್ಲೊಬ್ಬರು ಇಡಿಯಾದ ಸೇಬುವನ್ನು ಕಾದ ಎಣ್ಣೆಯಲ್ಲಿ ಬೇಯಿಸಿದ್ದಾರೆ. ಇಡಿಯಾದ ಸೇಬುವನ್ನು ಹಿಟ್ಟಿನಲ್ಲಿ ಮುಳುಗಿಸಿ ನಂತರ ಎಣ್ಣೆಗೆ ಹಾಕಿ ಬೇಯಿಸಿದ್ದಾರೆ.

ಸೇಬುವನ್ನು ಎಣ್ಣೆಯಲ್ಲಿ ಬೇಯಿಸಿ ತಿಂದ ವ್ಯಕ್ತಿ: ವಿಚಿತ್ರ ಖಾದ್ಯದ ವೀಡಿಯೋ ವೈರಲ್​
ವೀಡಿಯೋದಿಂದ ತೆಗೆದ ಚಿತ್ರ
TV9 Web
| Updated By: Pavitra Bhat Jigalemane|

Updated on: Dec 18, 2021 | 12:50 PM

Share

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ವೀಡಿಯೋಗಳಿಗೇನೂ ಕೊರತೆಯಿಲ್ಲ. ಹೊಸ ಹೊಸ ಪ್ರಯೋಗಗಳಿಂದ ಹಿಡಿದು ಹೊಸ ಬಗೆಯ ತಿನಿಸುಗಳನ್ನು ತಯಾರಿಸುವ ವೀಡಿಯೋಗಳೂ ವೈರಲ್​ ಆಗುತ್ತವೆ. ಇತ್ತೀಚೆಗೆ ಮಿರಿಂಡಾದಿಂದ ತಯಾರಿಸಿದ ಗೋಲಗಪ್ಪಾ ವೀಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಅದನ್ನು ನೋಡಿ ವಿಚಿತ್ರ ಕಾಮೆಂಟ್​ಗಳನ್ನು ಮಾಡಿದ್ದಾರೆ. ಇದೀಗ ಸೇಬುವಿನ ಸರದಿ. ಹೌದು ಇಲ್ಲೊಬ್ಬರು ಇಡಿಯಾದ ಸೇಬುವನ್ನು ಕಾದ ಎಣ್ಣೆಯಲ್ಲಿ ಬೇಯಿಸಿದ್ದಾರೆ. ಇಡಿಯಾದ ಸೇಬುವನ್ನು ಹಿಟ್ಟಿನಲ್ಲಿ ಮುಳುಗಿಸಿ ನಂತರ ಎಣ್ಣೆಗೆ ಹಾಕಿ ಬೇಯಿಸಿದ್ದಾರೆ. ನಂತರ ಅದನ್ನು ಎಣ್ಣೆಯಿಂದ ಬೇಯಿಸಿ ತೆಗೆದು ತಿಂದಿದ್ದಾರೆ. ತಿಂದು ತಂಬ್ಸ್​ ಅಫ್​ ಎಮೋಜಿಯನ್ನೂ ತೋರಿಸಿದ್ದಾರೆ. ಈ ವೀಡಿಯೋ 3 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ವೈರಲ್​ ಆಗಿದೆ.

ವೀಡಿಯೋದಲ್ಲಿ ಮೊದಲು ವ್ಯಕ್ತಿಯೊಬ್ಬರು ಸೇಬು ಹಣ್ಣೊಂದನ್ನು ತೆಗೆದುಕೊಂಡು ಹಿಟ್ಟಿನಲ್ಲಿ ಮುಳುಗಿಸುತ್ತಾರೆ. ಬಳಿಕ ಅದನ್ನು ಕಾದ ಬಿಸಿ ಎಣ್ಣೆಗೆ ಹಾಕುತ್ತಾರೆ. ಅದು ಬೆಂದಿದೆ ಎಂದು ಖಚಿತಪಡಿಸಿಕೊಂಡು ಎಣ್ಣೆಯಿಂದ ತೆಗೆದು ಅರ್ಧ ಭಾಗ ಮಾಡಿ ತಿನ್ನುತ್ತಾರೆ. ತಿಂದ ಬಳಿಕ ತಂಬ್ಸ್​ ಅಫ್​ ಮಾಡುತ್ತಾರೆ.

View this post on Instagram

A post shared by Whathowtry (@whathowtry)

ತಿಂಡಿ ಪ್ರಿಯರು ವಾವ್​ ಎಂದು ಉದ್ಘರಿಸಿದರೆ ಇನ್ನೂ ಕೆಲವರು ನಿಜವಾಗಿಯೂ ಇದು ನಂಬಲಸಾಧ್ಯ ಎಂದಿದ್ದಾರೆ. ಇನ್ಸ್ಟಾಗ್ರಾಮ್​ ನಲ್ಲಿ ವಾಟ್​ ಹೌ ಟ್ರೈ ಎನ್ನುವ ಪುಟ ಈ ವಿಡಿಯೋವನ್ನು ಹಂಚಿಕೊಂಡಿದೆ. ಈ ವೀಡಿಯೋ ಫುಡ್​ ಪ್ರಿಯರನ್ನು ಆಕರ್ಷಿತಗೊಳಿಸಿದರೆ ಇನ್ನೂ ಕೆಲವರು ವಿಷಕಾರಿ ಕ್ಯಾಂಡಿ ಎಂದು ಕರೆದಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗಿದ್ದು ಕೆಲವರು ಸೇಬು ಫ್ರೈ ಅನ್ನು ತಯಾರಿಸಲು ಪ್ರಯತ್ನಿಸಿದ್ದಾರೆ.

 ಇದನ್ನೂ ಓದಿ:

Viral Video: ಮಿರಿಂಡಾ ಗೋಲ್​ಗಪ್ಪ ತಿಂದಿದ್ದೀರಾ? ಅರೇ ಇದೇನು ಎಂಬ ಕುತೂಹಲವೇ?; ವಿಡಿಯೋ ನೋಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!