ಸೆಕ್ಸ್ ವರ್ಕರ್ಸ್​ಗೆ ಕಳುಹಿಸಿ ಡಿಲೀಟ್ ಆಗಿದ್ದ ಗಂಡನ ಮೆಸೇಜ್ ನೋಡಿದ ಪತ್ನಿ; ಈಗ ಆ್ಯಪಲ್ ಕಂಪನಿ ವಿರುದ್ಧ ಮೊಕದ್ದಮೆ

Wife finds out husbands deleted messages sent to sex workers: ಸೆಕ್ಸ್ ವರ್ಕರ್ಸ್​ಗೆ ಗಂಡ ಕಳುಹಿಸಿ ಡಿಲೀಟ್ ಮಾಡಲಾಗಿದ್ದ ಮೆಸೇಜ್​ಗಳನ್ನು ಹೆಂಡತಿ ನೋಡಿ, ಡಿವೋರ್ಸ್ ಕೊಟ್ಟಿದ್ದಾಳೆ. ಜೀವನಾಂಶವಾಗಿ ಐದು ಮಿಲಿಯನ್ ಪೌಂಡ್ ಹಣವನ್ನು ಗಂಡ ಕೊಟ್ಟಿದ್ದಾರೆ. ಐಫೋನ್​ನಲ್ಲಿ ಡಿಲೀಟ್ ಆದ ಮೆಸೇಜ್ ನಿಜವಾಗಿಯೂ ಡಿಲೀಟ್ ಆಗದೇ ಹೆಂಡತಿ ಕಣ್ಣಿಗೆ ಬಿದ್ದಿದೆ. ಇದಕ್ಕೆ ಆ್ಯಪಲ್ ಸಂಸ್ಥೆಯೇ ಕಾರಣ ಎಂದು ಹೇಳಿ ಅದರ ವಿರುದ್ಧ ಆ ವ್ಯಕ್ತಿ ಮೊಕದ್ದಮೆ ಹೂಡಿದ್ದಾರೆ.

ಸೆಕ್ಸ್ ವರ್ಕರ್ಸ್​ಗೆ ಕಳುಹಿಸಿ ಡಿಲೀಟ್ ಆಗಿದ್ದ ಗಂಡನ ಮೆಸೇಜ್ ನೋಡಿದ ಪತ್ನಿ; ಈಗ ಆ್ಯಪಲ್ ಕಂಪನಿ ವಿರುದ್ಧ ಮೊಕದ್ದಮೆ
ಡಿವೋರ್ಸ್ ಕೇಸ್
Follow us
|

Updated on: Jun 17, 2024 | 7:27 PM

ಲಂಡನ್, ಜೂನ್ 17: ಆ್ಯಪಲ್​ನ ಐಫೋನ್​ಗಳು ಗೌಪ್ಯತೆಗೆ ಹೆಸರುವಾಸಿ. ಐಫೋನ್​ನಿಂದ ಡಿಲೀಟ್ ಮಾಡಲಾದ ಮೆಸೇಜ್ ಅಥವಾ ಫೋಟೋ, ವಿಡಿಯೋಗಳನ್ನು ಹಿಂಪಡೆಯಲು (retrieving messages) ಆಗುವುದಿಲ್ಲ ಎನ್ನುವ ನಂಬಿಕೆ ಇದೆ. ಈ ಕಾರಣಕ್ಕೆ ಬಹಳ ಜನರು ಐಫೋನ್ ಅನ್ನು ಇಚ್ಛಿಸುತ್ತಾರೆ. ಅದರ ಈ ಫೀಚರ್ ಕೈಕೊಟ್ಟರೆ..? ಗಂಭೀರ ಸ್ವರೂಪದ ತೊಂದರೆಗಳೇ ಆಗಬಹುದು. ಬ್ರಿಟನ್​ನ ವ್ಯಕ್ತಿಯೊಬ್ಬರಿಗೆ ಇಂಥದ್ದೊಂದು ಅನುಭವವಾಗಿದ್ದು, ಪತ್ನಿಯೇ ವಿಚ್ಛೇದನ (divorce) ಕೊಡುವ ಮಟ್ಟಕ್ಕೆ ಅನುಭವವಾಗಿದೆ. ಈಗ ಆ್ಯಪಲ್ ಸಂಸ್ಥೆ ವಿರುದ್ಧ ಮುನಿಸಿಕೊಂಡಿರುವ ಆ ಬ್ರಿಟನ್ ವ್ಯಕ್ತಿ ಕೋರ್ಟ್ ಮೆಟ್ಟಿಲೇರಿ ನ್ಯಾಯದ ಮೊರೆ ಹೋಗಿದ್ದಾರೆ. ತಾನು ಡಿಲೀಟ್ ಮಾಡಿದ ಮೆಸೇಜ್ ಅನ್ನು ಹೆಂಡತಿ ನೋಡಿದ ಪರಿಣಾಮ ಡಿವೋರ್ಸ್ ಆಗುವಂತಾಗಿದೆ. ಇದಕ್ಕೆ ಆ್ಯಪಲ್ ಸಂಸ್ಥೆಯೇ ಕಾರಣ ಎಂದು ಆ ವ್ಯಕ್ತಿ ತನ್ನ ಮೊಕದ್ದಮೆಯಲ್ಲಿ (lawsuit against Apple) ದೂರಿದ್ದಾರೆ.

ಸೆಕ್ಸ್ ಕಾರ್ಯಕರ್ತೆಯರಿಗೆ ಕಳುಹಿಸಿದ್ದ ಟೆಕ್ಸ್ಟ್ ಮೆಸೇಜ್​ಗಳು…

ಆ್ಯಪಲ್ ವಿರುದ್ಧ ಮೊಕದ್ದಮೆ ಹಾಕಿರುವ ಬ್ರಿಟನ್​ನ ಈ ವ್ಯಕ್ತಿ ತನ್ನ ಐಫೋನ್​ನಲ್ಲಿನ ಐಮೆಸೇಜ್ ಆ್ಯಪ್​ನಲ್ಲಿ ವಿವಿಧ ವೈಶ್ಯೆಯರೊಂದಿಗೆ ಮೆಸೇಜ್ ವಿನಿಮಯ ಮಾಡಿಕೊಂಡಿರುತ್ತಾನೆ. ಬಳಿಕ ಆ ಮೆಸೇಜ್​ಗಳನ್ನು ಡಿಲೀಟ್ ಮಾಡಿರುತ್ತಾನೆ.

ಈ ಮೆಸೇಜ್​ಗಳನ್ನು ಆತನ ಹೆಂಡತಿ ಬೇರೊಂದು ಡಿವೈಸ್​ನಲ್ಲಿ ನೋಡಿಬಿಡುತ್ತಾಳೆ. ಈ ಘಟನೆಯಿಂದ ನೊಂದ ಆ ಮಹಿಳೆ ಗಂಡನಿಗೆ ವಿಚ್ಛೇದನ ಕೊಡಲು ಮುಂದಾಗಿದ್ದಾಳೆ. ಆಕೆಗೆ ಐದು ಮಿಲಿಯನ್ ಪೌಂಡ್​ಗಳಷ್ಟು ಹಣವನ್ನು ಆ ವ್ಯಕ್ತಿ ಪರಿಹಾರವಾಗಿ ಕೊಡಬೇಕಾಗುತ್ತದೆ. ಐಮೆಸೇಜಿಂಗ್ ಆ್ಯಪ್​ನಿಂದ ಡಿಲೀಟ್ ಆಗಿದ್ದ ಮೆಸೇಜ್​ಗಳು ಪತ್ನಿಗೆ ಕಣ್ಣಿಗೆ ಬೀಳದೇ ಹೋಗಿದ್ದರೆ ತಾನು ಡಿವೋರ್ಸ್ ಕೊಡುವ ಮಟ್ಟಕ್ಕೆ ಪರಿಸ್ಥಿತಿ ಹೋಗುತ್ತಿರಲಿಲ್ಲ ಎಂಬುದು ಇವರ ವಾದ.

ಇದನ್ನೂ ಓದಿ: 80ರ ವೃದ್ಧನನ್ನು ಪ್ರೀತಿಸಿ ಮದುವೆಯಾದ 23ರ ಯುವತಿ, ಅಪರೂಪದ ಲವ್ ಸ್ಟೋರಿ 

ಡಿಲೀಟ್ ಆದ ಮೆಸೇಜ್ ಅನ್ನು ಪತ್ನಿ ನೋಡಿದ್ದು ಹೇಗೆ?

ಇವತ್ತು ವಿವಿಧ ಸಾಧನಗಳನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪರಿಸ್ಪರ ಕನೆಕ್ಟ್ ಮಾಡಬಹುದು. ಐಫೋನ್ ಅನ್ನು ಆ್ಯಪಲ್​ನ ಬೇರೆ ಬೇರೆ ಸಾಧನಗಳಿಗೆ ಸಿಂಕ್ರೊನೈಸ್ ಮಾಡಬಹುದು. ಬ್ರಿಟನ್​ನ ಈ ವ್ಯಕ್ತಿಯ ಐಫೋನ್ ಅನ್ನು ಆತನ ಕುಟುಂಬದ ಐಮ್ಯಾಕ್ ಸಿಸ್ಟಂಗೆ ಸಿಂಕ್ರೊನೈಸ್ ಮಾಡಲಾಗಿತ್ತು.

ಇಲ್ಲಿ ಆ ವ್ಯಕ್ತಿ ತನ್ನ ಮೊಬೈಲ್​ನಲ್ಲಿದ್ದ ಮೆಸೇಜ್ ಅನ್ನು ಡಿಲೀಟ್ ಮಾಡಿದಾಗ ಈತನ ಸಾಧನದಲ್ಲಿ ಮಾತ್ರವೇ ಅದು ಡಿಲೀಟ್ ಆಗಿತ್ತು. ಈತನ ಫೋನ್ ಜತೆ ಸಿಂಕ್ರೊನೈಸ್ ಆಗಿದ್ದ ಐಮ್ಯಾಕ್​ನಲ್ಲಿ ಆ ಮೆಸೇಜ್ ಡಿಲೀಟ್ ಆಗಿರಲಿಲ್ಲ. ಹೀಗಾಗಿ, ಐಮ್ಯಾಕ್​ನಲ್ಲಿ ಈತನ ಮೆಸೇಜ್​ಗಳನ್ನು ಪತ್ನಿಗೆ ಓದಲು ಸಾಧ್ಯವಾಯಿತು.

ಇದನ್ನೂ ಓದಿ: ಸಪ್ತಪದಿಗೂ ಮುನ್ನ ವಧುವಿನ ಮುಖ ನೋಡಿ ಮದುವೆ ಬೇಡ ಎಂದ ವರ

‘ಇಲ್ಲಿ ಮಾತ್ರವೇ ಡಿಲೀಟ್ ಆಗಿದೆ ಎಂದಿದ್ದರೆ ಎಚ್ಚೆತ್ತುಕೊಳ್ಳುತ್ತಿದ್ದೆ’

ಆ್ಯಪಲ್ ವಿರುದ್ಧ ದೂರು ಕೊಟ್ಟಿರುವ ವ್ಯಕ್ತಿ ವಾದ ಏನೆಂದರೆ, ತಾನು ಮೆಸೇಜ್ ಡಿಲೀಟ್ ಮಾಡಿದಾಗ, ಈ ಮೆಸೇಜ್ ಈ ಸಾಧನದಲ್ಲಿ ಮಾತ್ರವೇ ಡಿಲೀಟ್ ಆಗುತ್ತದೆ ಎಂದು ಎಚ್ಚರಿಸುವ ವಾರ್ನಿಂಗ್ ಬಂದಿದ್ದರೆ ಸಾಕಾಗುತ್ತಿತ್ತು, ಎಚ್ಚೆತ್ತುಕೊಳ್ಳುತ್ತಿದ್ದೆ. ಅಥವಾ, ಈ ಸಾಧನ ಸಿಂಕ್ ಆಗಿರುವ ಬೇರೆ ಡಿವೈಸ್​ಗಳಲ್ಲಿ ಮೆಸೇಜ್ ಲಭ್ಯ ಇರುತ್ತದೆ ಎಂದೂ ಎಚ್ಚರಿಸಬಹುದಿತ್ತು. ಆ್ಯಪಲ್ ಸಂಸ್ಥೆಯಿಂದ ತನಗೆ ಬಹಳ ಹಾನಿಯಾಗಿದೆ ಎಂದು ಆ ವ್ಯಕ್ತಿ ಕೋರ್ಟ್​ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಇದೀಗ ಅದು ಕ್ಲ್ಯಾಸ್ ಆ್ಯಕ್ಷನ್ ಮೊಕದ್ದಮೆಯಾಗಿ ತಿರುಗಿದ್ದು, ಆ್ಯಪಲ್ ವಿರುದ್ಧ ಇಂಥ ಅಸಮಾಧಾನ ಇರುವವರು ಕೈಜೋಡಿಸಬಹುದಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಮೈಸೂರಲ್ಲಿಂದು ಬೆಳ್ಳಂಬೆಳಗ್ಗೆಯೇ ಮಳೆ, ಮಕ್ಕಳನ್ನು ಶಾಲೆಗೆ ಕಳಿಸಲು ತಾಪತ್ರಯ
ಮೈಸೂರಲ್ಲಿಂದು ಬೆಳ್ಳಂಬೆಳಗ್ಗೆಯೇ ಮಳೆ, ಮಕ್ಕಳನ್ನು ಶಾಲೆಗೆ ಕಳಿಸಲು ತಾಪತ್ರಯ
‘ನನ್ನನ್ನು ಯಾರೂ ಮಾತನಾಡಿಸೋಲ್ಲ’; ಜೈಲಲ್ಲಿ ಪವಿತ್ರಾ ಗೌಡ ಕಣ್ಣೀರು
‘ನನ್ನನ್ನು ಯಾರೂ ಮಾತನಾಡಿಸೋಲ್ಲ’; ಜೈಲಲ್ಲಿ ಪವಿತ್ರಾ ಗೌಡ ಕಣ್ಣೀರು
Daily Horoscope: ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು
Daily Horoscope: ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು
Daily Devotional: ಬ್ರಾಹ್ಮೀ ಮುಹೂರ್ತದ ಮಹತ್ವ ತಿಳಿದುಕೊಳ್ಳಿ
Daily Devotional: ಬ್ರಾಹ್ಮೀ ಮುಹೂರ್ತದ ಮಹತ್ವ ತಿಳಿದುಕೊಳ್ಳಿ
‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ
ಮೂರ‍್ಯಾಕೆ ಸಮುದಾಯಕ್ಕೊಬ್ಬ ಡಿಸಿಎಂನನ್ನು ಮಾಡಲಿ; ಕುಹುಕವಾಡಿದ ಬಾಲಕೃಷ್ಣ
ಮೂರ‍್ಯಾಕೆ ಸಮುದಾಯಕ್ಕೊಬ್ಬ ಡಿಸಿಎಂನನ್ನು ಮಾಡಲಿ; ಕುಹುಕವಾಡಿದ ಬಾಲಕೃಷ್ಣ
ನಾಲ್ಕೇ ದಿನದಲ್ಲಿ ಪವಿತ್ರಾ ಗೌಡ ಸಹೋದರ ಸೈಲೆಂಟ್​; ವಿಡಿಯೋ ನೋಡಿ..
ನಾಲ್ಕೇ ದಿನದಲ್ಲಿ ಪವಿತ್ರಾ ಗೌಡ ಸಹೋದರ ಸೈಲೆಂಟ್​; ವಿಡಿಯೋ ನೋಡಿ..
ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ: ಕಾಶೀನಾಥಯ್ಯ
ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ: ಕಾಶೀನಾಥಯ್ಯ