AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಕ್ಸ್ ವರ್ಕರ್ಸ್​ಗೆ ಕಳುಹಿಸಿ ಡಿಲೀಟ್ ಆಗಿದ್ದ ಗಂಡನ ಮೆಸೇಜ್ ನೋಡಿದ ಪತ್ನಿ; ಈಗ ಆ್ಯಪಲ್ ಕಂಪನಿ ವಿರುದ್ಧ ಮೊಕದ್ದಮೆ

Wife finds out husbands deleted messages sent to sex workers: ಸೆಕ್ಸ್ ವರ್ಕರ್ಸ್​ಗೆ ಗಂಡ ಕಳುಹಿಸಿ ಡಿಲೀಟ್ ಮಾಡಲಾಗಿದ್ದ ಮೆಸೇಜ್​ಗಳನ್ನು ಹೆಂಡತಿ ನೋಡಿ, ಡಿವೋರ್ಸ್ ಕೊಟ್ಟಿದ್ದಾಳೆ. ಜೀವನಾಂಶವಾಗಿ ಐದು ಮಿಲಿಯನ್ ಪೌಂಡ್ ಹಣವನ್ನು ಗಂಡ ಕೊಟ್ಟಿದ್ದಾರೆ. ಐಫೋನ್​ನಲ್ಲಿ ಡಿಲೀಟ್ ಆದ ಮೆಸೇಜ್ ನಿಜವಾಗಿಯೂ ಡಿಲೀಟ್ ಆಗದೇ ಹೆಂಡತಿ ಕಣ್ಣಿಗೆ ಬಿದ್ದಿದೆ. ಇದಕ್ಕೆ ಆ್ಯಪಲ್ ಸಂಸ್ಥೆಯೇ ಕಾರಣ ಎಂದು ಹೇಳಿ ಅದರ ವಿರುದ್ಧ ಆ ವ್ಯಕ್ತಿ ಮೊಕದ್ದಮೆ ಹೂಡಿದ್ದಾರೆ.

ಸೆಕ್ಸ್ ವರ್ಕರ್ಸ್​ಗೆ ಕಳುಹಿಸಿ ಡಿಲೀಟ್ ಆಗಿದ್ದ ಗಂಡನ ಮೆಸೇಜ್ ನೋಡಿದ ಪತ್ನಿ; ಈಗ ಆ್ಯಪಲ್ ಕಂಪನಿ ವಿರುದ್ಧ ಮೊಕದ್ದಮೆ
ಡಿವೋರ್ಸ್ ಕೇಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 17, 2024 | 7:27 PM

Share

ಲಂಡನ್, ಜೂನ್ 17: ಆ್ಯಪಲ್​ನ ಐಫೋನ್​ಗಳು ಗೌಪ್ಯತೆಗೆ ಹೆಸರುವಾಸಿ. ಐಫೋನ್​ನಿಂದ ಡಿಲೀಟ್ ಮಾಡಲಾದ ಮೆಸೇಜ್ ಅಥವಾ ಫೋಟೋ, ವಿಡಿಯೋಗಳನ್ನು ಹಿಂಪಡೆಯಲು (retrieving messages) ಆಗುವುದಿಲ್ಲ ಎನ್ನುವ ನಂಬಿಕೆ ಇದೆ. ಈ ಕಾರಣಕ್ಕೆ ಬಹಳ ಜನರು ಐಫೋನ್ ಅನ್ನು ಇಚ್ಛಿಸುತ್ತಾರೆ. ಅದರ ಈ ಫೀಚರ್ ಕೈಕೊಟ್ಟರೆ..? ಗಂಭೀರ ಸ್ವರೂಪದ ತೊಂದರೆಗಳೇ ಆಗಬಹುದು. ಬ್ರಿಟನ್​ನ ವ್ಯಕ್ತಿಯೊಬ್ಬರಿಗೆ ಇಂಥದ್ದೊಂದು ಅನುಭವವಾಗಿದ್ದು, ಪತ್ನಿಯೇ ವಿಚ್ಛೇದನ (divorce) ಕೊಡುವ ಮಟ್ಟಕ್ಕೆ ಅನುಭವವಾಗಿದೆ. ಈಗ ಆ್ಯಪಲ್ ಸಂಸ್ಥೆ ವಿರುದ್ಧ ಮುನಿಸಿಕೊಂಡಿರುವ ಆ ಬ್ರಿಟನ್ ವ್ಯಕ್ತಿ ಕೋರ್ಟ್ ಮೆಟ್ಟಿಲೇರಿ ನ್ಯಾಯದ ಮೊರೆ ಹೋಗಿದ್ದಾರೆ. ತಾನು ಡಿಲೀಟ್ ಮಾಡಿದ ಮೆಸೇಜ್ ಅನ್ನು ಹೆಂಡತಿ ನೋಡಿದ ಪರಿಣಾಮ ಡಿವೋರ್ಸ್ ಆಗುವಂತಾಗಿದೆ. ಇದಕ್ಕೆ ಆ್ಯಪಲ್ ಸಂಸ್ಥೆಯೇ ಕಾರಣ ಎಂದು ಆ ವ್ಯಕ್ತಿ ತನ್ನ ಮೊಕದ್ದಮೆಯಲ್ಲಿ (lawsuit against Apple) ದೂರಿದ್ದಾರೆ.

ಸೆಕ್ಸ್ ಕಾರ್ಯಕರ್ತೆಯರಿಗೆ ಕಳುಹಿಸಿದ್ದ ಟೆಕ್ಸ್ಟ್ ಮೆಸೇಜ್​ಗಳು…

ಆ್ಯಪಲ್ ವಿರುದ್ಧ ಮೊಕದ್ದಮೆ ಹಾಕಿರುವ ಬ್ರಿಟನ್​ನ ಈ ವ್ಯಕ್ತಿ ತನ್ನ ಐಫೋನ್​ನಲ್ಲಿನ ಐಮೆಸೇಜ್ ಆ್ಯಪ್​ನಲ್ಲಿ ವಿವಿಧ ವೈಶ್ಯೆಯರೊಂದಿಗೆ ಮೆಸೇಜ್ ವಿನಿಮಯ ಮಾಡಿಕೊಂಡಿರುತ್ತಾನೆ. ಬಳಿಕ ಆ ಮೆಸೇಜ್​ಗಳನ್ನು ಡಿಲೀಟ್ ಮಾಡಿರುತ್ತಾನೆ.

ಈ ಮೆಸೇಜ್​ಗಳನ್ನು ಆತನ ಹೆಂಡತಿ ಬೇರೊಂದು ಡಿವೈಸ್​ನಲ್ಲಿ ನೋಡಿಬಿಡುತ್ತಾಳೆ. ಈ ಘಟನೆಯಿಂದ ನೊಂದ ಆ ಮಹಿಳೆ ಗಂಡನಿಗೆ ವಿಚ್ಛೇದನ ಕೊಡಲು ಮುಂದಾಗಿದ್ದಾಳೆ. ಆಕೆಗೆ ಐದು ಮಿಲಿಯನ್ ಪೌಂಡ್​ಗಳಷ್ಟು ಹಣವನ್ನು ಆ ವ್ಯಕ್ತಿ ಪರಿಹಾರವಾಗಿ ಕೊಡಬೇಕಾಗುತ್ತದೆ. ಐಮೆಸೇಜಿಂಗ್ ಆ್ಯಪ್​ನಿಂದ ಡಿಲೀಟ್ ಆಗಿದ್ದ ಮೆಸೇಜ್​ಗಳು ಪತ್ನಿಗೆ ಕಣ್ಣಿಗೆ ಬೀಳದೇ ಹೋಗಿದ್ದರೆ ತಾನು ಡಿವೋರ್ಸ್ ಕೊಡುವ ಮಟ್ಟಕ್ಕೆ ಪರಿಸ್ಥಿತಿ ಹೋಗುತ್ತಿರಲಿಲ್ಲ ಎಂಬುದು ಇವರ ವಾದ.

ಇದನ್ನೂ ಓದಿ: 80ರ ವೃದ್ಧನನ್ನು ಪ್ರೀತಿಸಿ ಮದುವೆಯಾದ 23ರ ಯುವತಿ, ಅಪರೂಪದ ಲವ್ ಸ್ಟೋರಿ 

ಡಿಲೀಟ್ ಆದ ಮೆಸೇಜ್ ಅನ್ನು ಪತ್ನಿ ನೋಡಿದ್ದು ಹೇಗೆ?

ಇವತ್ತು ವಿವಿಧ ಸಾಧನಗಳನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪರಿಸ್ಪರ ಕನೆಕ್ಟ್ ಮಾಡಬಹುದು. ಐಫೋನ್ ಅನ್ನು ಆ್ಯಪಲ್​ನ ಬೇರೆ ಬೇರೆ ಸಾಧನಗಳಿಗೆ ಸಿಂಕ್ರೊನೈಸ್ ಮಾಡಬಹುದು. ಬ್ರಿಟನ್​ನ ಈ ವ್ಯಕ್ತಿಯ ಐಫೋನ್ ಅನ್ನು ಆತನ ಕುಟುಂಬದ ಐಮ್ಯಾಕ್ ಸಿಸ್ಟಂಗೆ ಸಿಂಕ್ರೊನೈಸ್ ಮಾಡಲಾಗಿತ್ತು.

ಇಲ್ಲಿ ಆ ವ್ಯಕ್ತಿ ತನ್ನ ಮೊಬೈಲ್​ನಲ್ಲಿದ್ದ ಮೆಸೇಜ್ ಅನ್ನು ಡಿಲೀಟ್ ಮಾಡಿದಾಗ ಈತನ ಸಾಧನದಲ್ಲಿ ಮಾತ್ರವೇ ಅದು ಡಿಲೀಟ್ ಆಗಿತ್ತು. ಈತನ ಫೋನ್ ಜತೆ ಸಿಂಕ್ರೊನೈಸ್ ಆಗಿದ್ದ ಐಮ್ಯಾಕ್​ನಲ್ಲಿ ಆ ಮೆಸೇಜ್ ಡಿಲೀಟ್ ಆಗಿರಲಿಲ್ಲ. ಹೀಗಾಗಿ, ಐಮ್ಯಾಕ್​ನಲ್ಲಿ ಈತನ ಮೆಸೇಜ್​ಗಳನ್ನು ಪತ್ನಿಗೆ ಓದಲು ಸಾಧ್ಯವಾಯಿತು.

ಇದನ್ನೂ ಓದಿ: ಸಪ್ತಪದಿಗೂ ಮುನ್ನ ವಧುವಿನ ಮುಖ ನೋಡಿ ಮದುವೆ ಬೇಡ ಎಂದ ವರ

‘ಇಲ್ಲಿ ಮಾತ್ರವೇ ಡಿಲೀಟ್ ಆಗಿದೆ ಎಂದಿದ್ದರೆ ಎಚ್ಚೆತ್ತುಕೊಳ್ಳುತ್ತಿದ್ದೆ’

ಆ್ಯಪಲ್ ವಿರುದ್ಧ ದೂರು ಕೊಟ್ಟಿರುವ ವ್ಯಕ್ತಿ ವಾದ ಏನೆಂದರೆ, ತಾನು ಮೆಸೇಜ್ ಡಿಲೀಟ್ ಮಾಡಿದಾಗ, ಈ ಮೆಸೇಜ್ ಈ ಸಾಧನದಲ್ಲಿ ಮಾತ್ರವೇ ಡಿಲೀಟ್ ಆಗುತ್ತದೆ ಎಂದು ಎಚ್ಚರಿಸುವ ವಾರ್ನಿಂಗ್ ಬಂದಿದ್ದರೆ ಸಾಕಾಗುತ್ತಿತ್ತು, ಎಚ್ಚೆತ್ತುಕೊಳ್ಳುತ್ತಿದ್ದೆ. ಅಥವಾ, ಈ ಸಾಧನ ಸಿಂಕ್ ಆಗಿರುವ ಬೇರೆ ಡಿವೈಸ್​ಗಳಲ್ಲಿ ಮೆಸೇಜ್ ಲಭ್ಯ ಇರುತ್ತದೆ ಎಂದೂ ಎಚ್ಚರಿಸಬಹುದಿತ್ತು. ಆ್ಯಪಲ್ ಸಂಸ್ಥೆಯಿಂದ ತನಗೆ ಬಹಳ ಹಾನಿಯಾಗಿದೆ ಎಂದು ಆ ವ್ಯಕ್ತಿ ಕೋರ್ಟ್​ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಇದೀಗ ಅದು ಕ್ಲ್ಯಾಸ್ ಆ್ಯಕ್ಷನ್ ಮೊಕದ್ದಮೆಯಾಗಿ ತಿರುಗಿದ್ದು, ಆ್ಯಪಲ್ ವಿರುದ್ಧ ಇಂಥ ಅಸಮಾಧಾನ ಇರುವವರು ಕೈಜೋಡಿಸಬಹುದಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ