AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಕಪ್ ಗೆಲ್ಲೋಕೆ ಆಡುತ್ತಿಲ್ಲ’: ಅಸಲಿ ಉದ್ದೇಶ ಬಹಿರಂಗ ಮಾಡಿದ ಹನುಮಂತ

ಬಿಗ್ ಬಾಸ್ ಟ್ರೋಫಿ ಬಗ್ಗೆ ತಮಗೆ ಹೆಚ್ಚೇನೂ ಆಸೆ ಇಲ್ಲ ಎಂಬ ರೀತಿ ಹನುಮಂತ ನಡೆದುಕೊಂಡಿದ್ದಾರೆ. ಟಾಸ್ಕ್​ ವೇಳೆ ಅವರು ಹೇಳಿದ ಈ ಮಾತು ಕೇಳಿ ಧನರಾಜ್​ಗೆ ಅಚ್ಚರಿ ಆಗಿದೆ. ಹಾಗಂತ ಹನುಮಂತ ಅವರು ಆಟವನ್ನು ಅರ್ಧಕ್ಕೆ ನಿಲ್ಲಿಸುವವರಲ್ಲ. ಪ್ರತಿ ಟಾಸ್ಕ್​ ಅನ್ನೂ ಅವರು ಚೆನ್ನಾಗಿಯೇ ಆಡುತ್ತಾ ಬಂದಿದ್ದಾರೆ.

‘ನಾನು ಕಪ್ ಗೆಲ್ಲೋಕೆ ಆಡುತ್ತಿಲ್ಲ’: ಅಸಲಿ ಉದ್ದೇಶ ಬಹಿರಂಗ ಮಾಡಿದ ಹನುಮಂತ
Bigg Boss Kannada
ಮದನ್​ ಕುಮಾರ್​
|

Updated on: Jan 08, 2025 | 10:16 PM

Share

ಸಿಂಗರ್​ ಹನುಮಂತ ಅವರು ಬಹಳ ಚಾಲಾಕಿತನದಿಂದ ಬಿಗ್ ಬಾಸ್​ ಆಟವನ್ನು ಆಡುತ್ತಿದ್ದಾರೆ. ಅವರ ಆಟ ಹಲವರಿಗೆ ಅರ್ಥ ಆಗುತ್ತಿಲ್ಲ. ಬೇರೆ ಸ್ಪರ್ಧಿಗಳೆಲ್ಲ ಸಖತ್ ಟೆನ್ಷನ್ ಮಾಡಿಕೊಂಡು ಆಡಿದರೆ ಹನುಮಂತ ಅವರು ಎಲ್ಲವನ್ನೂ ಕೂಲ್ ಆಗಿ ತೆಗೆದುಕೊಳ್ಳುತ್ತಿದ್ದಾರೆ. ಅದೇ ಕಾರಣಕ್ಕಾಗಿ ಅವರಿಗೆ ಹಲವು ಬಾರಿ ಮೆಚ್ಚುಗೆ ಸಿಕ್ಕಿದೆ. ಇಷ್ಟು ದಿನಗಳ ತನಕ ಅವರು ವೀಕ್ಷಕರಿಂದ ಅಗತ್ಯ ಪ್ರಮಾಣದ ವೋಟ್​ ಪಡೆದು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ. ಈಗ 101ನೇ ದಿನ ‘ನಾನು ಕಪ್ ಗೆಲ್ಲೋಕೆ ಆಡುತ್ತಿಲ್ಲ’ ಎನ್ನುವ ಮೂಲಕ ಹನುಮಂತ ಅವರು ಎಲ್ಲರಿಗೂ ಅಚ್ಚರಿ ನೀಡಿದರು.

ಟಿಕೆಟ್​ ಟು ಫಿನಾಲೆ ಆಟದಲ್ಲಿ ಹನುಮಂತ ಅವರು ಸ್ಪರ್ಧಿಸುತ್ತಿದ್ದರು. ಅವರ ಜೊತೆ ಭವ್ಯಾ ಗೌಡ, ತ್ರಿವಿಕ್ರಮ್, ಮೋಕ್ಷಿತಾ ಪೈ ಕೂಡ ಪೈಪೋಟಿ ನೀಡುತ್ತಿದ್ದರು. ಆಗ ಹನುಮಂತ ಯಾವುದೇ ಟೆನ್ಷನ್ ಮಾಡಿಕೊಳ್ಳದೇ ಕೂಲ್ ಆಗಿ ಕಾಣುತ್ತಿದ್ದರು. ನಡುನಡುವೆ ಹಾಡು ಹೇಳುತ್ತಲೇ ಕಾಲ ಕಳೆದರು. ಯಾಕೆ ಹೀಗೆ ಎಂದು ಕೇಳಿದ್ದರೆ ಹನುಮಂತ ಅಚ್ಚರಿಯ ಉತ್ತರ ನೀಡಿದರು.

‘ನಾನು ಕಪ್ ಗೆಲ್ಲೋಕೆ ಆಡುತ್ತಿಲ್ಲ. ಟಾಸ್ಕ್​ ಗೆಲ್ಲೋಕೆ ಆಡುತ್ತಿದ್ದೇನೆ’ ಎಂದು ಹನುಮಂತ ಹೇಳಿದರು. ಈ ಮಾತು ಕೇಳಿ ಧನರಾಜ್ ಅವರಿಗೆ ಆಶ್ಚರ್ಯ ಆಯಿತು. ಅವರು ಸಖತ್ ಇಂಪ್ರೆಸ್​ ಆದರು. ‘ನಿನ್ನ ಇಂಥ ಮಾತುಗಳೇ ಸ್ಪೂರ್ತಿ ತುಂಬುವುದು’ ಎಂದು ಧನರಾಜ್ ಹೇಳಿದರು. ಅಷ್ಟಕ್ಕೂ ಹನುಮಂತನ ಮಾತಿನ ಅರ್ಥವೇನು? ಕಪ್​ ಮೇಲೆ ಗುರಿ ಇಟ್ಟುಕೊಂಡರೆ ಆಟ ಟೆನ್ಷನ್​ ಎನಿಸುತ್ತದೆ. ಕೇವಲ ಟಾಸ್ಕ್​ ಗೆಲ್ಲುವ ಕಡೆಗೆ ಗಮನ ಹರಿಸಿದರೆ ಸಹಜವಾಗಿಯೇ ಕಪ್​ ಗೆಲ್ಲುವ ಹಾದಿ ಸುಗಮ ಆಗುತ್ತದೆ. ಆ ಸೂತ್ರವನ್ನೇ ಹನುಮಂತ ಅನುಸರಿಸುತ್ತಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?

ಹನುಮಂತ ಅವರು ಜನ ಅಂದುಕೊಂಡಷ್ಟು ಮುಗ್ಧನಲ್ಲ. ಈಗಾಗಲೇ ಅವರು ಬೇರೆ ಬೇರೆ ರಿಯಾಲಿಟಿ ಶೋಗಳನ್ನು ಮಾಡಿಕೊಂಡು ಬಿಗ್ ಬಾಸ್​ಗೆ ಬಂದಿದ್ದಾರೆ. ಹಾಗಾಗಿ ಅವರಿಗೆ ರಿಯಾಲಿಟಿ ಶೋಗಳ ನಾಡಿ ಮಿಡಿತ ಚೆನ್ನಾಗಿ ಅರ್ಥ ಆಗಿದೆ ಎಂಬುದು ಕೆಲವರ ಅಭಿಪ್ರಾಯ. ‘ನಿಜವಾದ ಬಿಗ್ ಬಾಸ್ ಆಟ ಏನು ಎಂಬುದು ಅರ್ಥ ಆಗಿರುವುದು ಹನುಮಂತನಿಗೆ ಮಾತ್ರ’ ಎಂದು ಕೂಡ ಹಲವರು ಹೇಳಿದ್ದುಂಟು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ