AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral : ಬೀದಿಯಲ್ಲಿ ಈ ಕುದುರೆ ಕುಸಿದು ಬಿದ್ದ ಆ ಕ್ಷಣ…

Horse Viral Video : ನ್ಯೂಯಾರ್ಕ್‌ನ ಜನನಿಬಿಡ ರಸ್ತೆಯ ಮಧ್ಯದಲ್ಲಿ ಕುದುರೆಯೊಂದು ಕುಸಿದು ಬಿದ್ದ ಆತಂಕಕಾರೀ ವಿಡಿಯೋ ವೈರಲ್ ಆಗಿದೆ.

Viral : ಬೀದಿಯಲ್ಲಿ ಈ ಕುದುರೆ ಕುಸಿದು ಬಿದ್ದ ಆ ಕ್ಷಣ...
ರಸ್ತೆಯ ಮಧ್ಯೆ ಕುಸಿದು ಬಿದ್ದ ಕುದುರೆ
TV9 Web
| Edited By: |

Updated on: Aug 13, 2022 | 12:59 PM

Share

Viral : ನ್ಯೂಯಾರ್ಕ್ ನಗರದ ಜನನಿಬಿಡ ರಸ್ತೆಯಲ್ಲಿ ಥಟ್ಟನೆ ಎರಗಿದ ಈ ಸಂಕಟಮಯ ದೃಶ್ಯ ಯಾರ ಮನಸ್ಸನ್ನೂ ಹಿಂಡುತ್ತದೆ. NYPDಯ ಗಸ್ತು ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ಪ್ರಾಣಿಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಎಂದಿನಂತೆ ಸಾಗುತ್ತಿರುವ ಈ ಕುದುರೆ ರಸ್ತೆಮಧ್ಯೆ ಕುಸಿದು ಬೀಳು ಕಾರಣ ಏನು ಎನ್ನುವ ಪ್ರಶ್ನೆ ಉಂಟಾಗಿದೆ. ಅದಕ್ಕಿಂತ ಮೊದಲು ಮಾಲಿಕನಿಗೆ ಗಾಬರಿಯಾಗಿ ಪರಿಪರಿಯಾಗಿ ಎಬ್ಬಿಸಲು ನೋಡಿದ್ದಾನೆ. ತಕ್ಷಣವೇ ನ್ಯೂಯಾರ್ಕ್ ಪೊಲೀಸ್ ಇಲಾಖೆಗೆ ಕರೆ ಹೋಗಿದೆ. ಒಂಬತ್ತನೇ ಅವೆನ್ಯೂ ಮತ್ತು ಮ್ಯಾನ್​ಹಟನ್​ನ 45ನೇ ಬೀದಿಯ ಬಳಿ ಅವರು ತಕ್ಷಣವೇ ಬಂದು ತಲುಪಿದ್ದಾರೆ. ನಂತರ ನೀರು ಎರಚಿ ಅದನ್ನು ಪುನಾ ಎದ್ದು ನಿಲ್ಲುವಂತೆ ಮಾಡಿದ್ದಾರೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಕುದುರೆಯ ಮಾಲಿಕ ಅದನ್ನೆಬ್ಬಿಸಲು ಪ್ರಯತ್ನಿಸುವ ಈ ದೃಶ್ಯ ನೋಡುವುದು ಸ್ವಲ್ಪ ಕಷ್ಟವೆನ್ನಿಸುತ್ತದೆ. ಬೇಗ ಎದ್ದರೆ ಸಾಕು ಎಂಬ ಹಾರೈಕೆ ನಮಗರಿವಿಲ್ಲದೆಯೇ ಹೊಮ್ಮುತ್ತದೆ. ನಂತರ ಪಶುವೈದ್ಯಕೀಯ ಆರೈಕೆಗೆಂದು ಸಮೀಪದ ಲಾಯಕ್ಕೆ ಕರೆದುಕೊಂಡ ಹೋಗಲಾಗುತ್ತದೆ. ತಾಪಮಾನ, ಲಾಲಾರಸದ ಬಣ್ಣ ಸುಸ್ಥಿತಿಯಲ್ಲಿಯೇ ಇರುವುದು ತಿಳಿದುಬರುತ್ತದೆ. ಆದರೂ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗುತ್ತದೆ. ಈ ಕುದುರೆಗೆ ರೈಡರ್ ಎಕ್ವೈನ್​ ಪ್ರೊಟೊಜೋಲ್ ಮೈಲೋಎನ್ಸೆಫಾಲಿಟಿಸ್ ಎಂಬ ರೋಗವಿರುವುದು ಪತ್ತೆಯಾಗುತ್ತದೆ. ಇದೊಂದು ನರಸಂಬಂಧಿ ಸಮಸ್ಯೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಕುದುರೆ ಆರಾಮಾಗಿ ಹುಲ್ಲು ತಿಂದುಕೊಂಡು ವಿಶ್ರಾಂತಿ ಪಡೆಯುತ್ತಿದೆ.

ಇಂಥ ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ