AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮೇಕೆ ಮರಿಯನ್ನು ರಕ್ಷಿಸಲು ಬಾಲಕನಿಗೆ ಹಗ್ಗ ಕಟ್ಟಿ 40 ಅಡಿ ಆಳದ ಬಾವಿಗೆ ಇಳಿಸಿದ್ರು

ಮೇಕೆ ಮರಿಯನ್ನು ರಕ್ಷಿಸಲು ಪುಟ್ಟ ಬಾಲಕನೊಬ್ಬ ಬಾವಿಗೆ ಇಳಿದಿರುವ ವಿಡಿಯೋ ವಿಡಿಯೋ ವೈರಲ್ ಆಗಿದೆ. ಈ ಘಟನೆ ಬಿಹಾರದಲ್ಲಿ ನಡೆದಿದೆ. ಮೇಕೆ ಮರಿಯನ್ನು ರಕ್ಷಿಸಲು ಬಾಲಕನೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾನೆ. ಅದು ತೆರೆದ ಬಾವಿಯಾಗಿದ್ದು, ಬಾವಿ ಬಳಿ ಆಟವಾಡುತ್ತಿದ್ದ ಮೇಕೆ ಮರಿ ಹೇಗೋ ಬಾವಿಗೆ ಬಿದ್ದಿತ್ತು. ಅದರ ಕಿರುಚಾಟ ಕೇಳಿ ಗ್ರಾಮಸ್ಥರೆಲ್ಲರೂ ಅಲ್ಲಿಗೆ ಬಂದಿದ್ದರು.

Viral Video: ಮೇಕೆ ಮರಿಯನ್ನು ರಕ್ಷಿಸಲು ಬಾಲಕನಿಗೆ ಹಗ್ಗ ಕಟ್ಟಿ 40 ಅಡಿ ಆಳದ ಬಾವಿಗೆ ಇಳಿಸಿದ್ರು
ಬಾಲಕ Image Credit source: Free Press Journal
ನಯನಾ ರಾಜೀವ್
|

Updated on: Feb 27, 2026 | 9:49 AM

Share

ಚಂಪಾರಣ್, ಫೆಬ್ರವರಿ 27: ಬಿಹಾರ(Bihar)ದ ಮೀತಿಹಾರಿ ಜಿಲ್ಲೆಯ ಪಹರ್​ಪುರ ಪ್ರದೇಶದ ಹಳ್ಳಿಯೊಂದರಲ್ಲಿ ಮೇಕೆಯ ಮರಿಯೊಂದು ಆಳವಾದ ಬಾವಿಗೆ ಬಿದ್ದಿತ್ತು. ಅದನ್ನು ರಕ್ಷಿಸಲು ಪುಟ್ಟ ಬಾಲಕನಿಗೆ ಹಗ್ಗ ಕಟ್ಟಿ 40 ಅಡಿ ಆಳದ ಬಾವಿಗೆ ಆತನನ್ನು ಇಳಿಸಿರುವ ವಿಡಿಯೋ ವೈರಲ್ ಆಗಿದೆ.

ಮೇಕೆ ಮರಿಯನ್ನು ರಕ್ಷಿಸಲು ಬಾಲಕನೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾನೆ. ಅದು ತೆರೆದ ಬಾವಿಯಾಗಿದ್ದು, ಬಾವಿ ಬಳಿ ಆಟವಾಡುತ್ತಿದ್ದ ಮೇಕೆ ಮರಿ ಹೇಗೋ ಬಾವಿಗೆ ಬಿದ್ದಿತ್ತು. ಅದರ ಕಿರುಚಾಟ ಕೇಳಿ ಗ್ರಾಮಸ್ಥರೆಲ್ಲರೂ ಅಲ್ಲಿಗೆ ಬಂದಿದ್ದರು. ಬಾವಿಯ ಆಳವು ರಕ್ಷಣಾ ಕಾರ್ಯಾಚರಣೆಯನ್ನು ಅತ್ಯಂತ ಕಷ್ಟಕರವಾಗಿಸಿತು. ಗ್ರಾಮಸ್ಥರು ಆರಂಭದಲ್ಲಿ ತಾತ್ಕಾಲಿಕ ಉಪಕರಣಗಳು ಮತ್ತು ಹಗ್ಗಗಳನ್ನು ಬಳಸಿ ಪ್ರಾಣಿಯನ್ನು ಹೊರತೆಗೆಯಲು ಪ್ರಯತ್ನಿಸಿದರು, ಆದರೆ ಅವರ ಪ್ರಯತ್ನಗಳು ವಿಫಲವಾದವು.

ಮತ್ತಷ್ಟು ಓದಿ: Viral News: ಶಾಲೆಯಲ್ಲಿ ಆಟವಾಡುತ್ತಿದ್ದಾಗಲೇ ಹೃದಯಾಘಾತದಿಂದ 9 ವರ್ಷದ ಬಾಲಕಿ ಸಾವು!

ತಕ್ಷಣ ಅದನ್ನು ಮೇಲಕ್ಕೆತ್ತಲು ಏನು ಮಾಡಬೇಕು ಎಂದು ಎಲ್ಲರೂ ಯೋಚನೆ ಮಾಡಲು ಶುರು ಮಾಡಿದ್ದರು, ಗ್ರಾಮದ ಒಬ್ಬ ಬಾಲಕ ಸ್ವಯಂಪ್ರೇರಿತನಾಗಿ ಬಾವಿಗೆ ಇಳಿದು ಮರಿಯ ಪ್ರಾಣ ಉಳಿಸಿದ್ದಾನೆ. ಅವನ ಸೊಂಟದ ಸುತ್ತಲೂ ಹಗ್ಗವನ್ನು ಬಿಗಿಯಾಗಿ ಕಟ್ಟಲಾಗಿತ್ತು, ಮತ್ತು ಹಲವಾರು ಜನರು ಅವನನ್ನು ಎಚ್ಚರಿಕೆಯಿಂದ ಕಿರಿದಾದ ಬಾವಿಗೆ ಇಳಿಸಿದರು, ಆದರೆ ಇತರರು ಹಗ್ಗವನ್ನು ಮೇಲಿನಿಂದ ಬಿಗಿಯಾಗಿ ಹಿಡಿದಿದ್ದರು.

ವಿಡಿಯೋ

ಅಪಾಯಕಾರಿ ಕಾರ್ಯಾಚರಣೆಯನ್ನು ನೋಡುತ್ತಿದ್ದ ಜನರಲ್ಲಿ ಆತಂಕ ಮನೆಮಾಡಿತ್ತು. ಮೇಕೆಯನ್ನು ತಲುಪಿ ಅದನ್ನು ಸುರಕ್ಷಿತವಾಗಿ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದ,ಗ್ರಾಮಸ್ಥರು ನಿಧಾನವಾಗಿ ಬಾಲಕ ಮತ್ತು ಮೇಕೆ ಮರಿಯನ್ನು ಸುರಕ್ಷಿತವಾಗಿ ಹಿಂದಕ್ಕೆ ಎಳೆದರು. ಅದೃಷ್ಟವಶಾತ್, ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಹುಡುಗನಾಗಲಿ ಅಥವಾ ಮೇಕೆಯಾಗಲಿ ಯಾವುದೇ ಅಪಾಯವಾಗಿಲ್ಲ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಮಂತ್ರಿಗಿರಿ ಬೇಡಿಕೆಯೊಂದಿಗೆ ಶಾಸಕರ ದೆಹಲಿ ಯಾತ್ರೆ ಬಗ್ಗೆ ಸಿಎಂ ಖಡಕ್ ಮಾತು
ಮಂತ್ರಿಗಿರಿ ಬೇಡಿಕೆಯೊಂದಿಗೆ ಶಾಸಕರ ದೆಹಲಿ ಯಾತ್ರೆ ಬಗ್ಗೆ ಸಿಎಂ ಖಡಕ್ ಮಾತು
ಆಶಾ ಭೋಸ್ಲೆ ನಿಧನ, ನಟ ರಾಘವೇಂದ್ರ ರಾಜ್​​ಕುಮಾರ್ ಸಂತಾಪ
ಆಶಾ ಭೋಸ್ಲೆ ನಿಧನ, ನಟ ರಾಘವೇಂದ್ರ ರಾಜ್​​ಕುಮಾರ್ ಸಂತಾಪ
4 ವಿಕೆಟ್ ಉರುಳಿಸಿದ ಕನ್ನಡಿಗ ಪ್ರಸಿದ್ಧ್​ಗೆ ಪರ್ಪಲ್ ಕ್ಯಾಪ್
4 ವಿಕೆಟ್ ಉರುಳಿಸಿದ ಕನ್ನಡಿಗ ಪ್ರಸಿದ್ಧ್​ಗೆ ಪರ್ಪಲ್ ಕ್ಯಾಪ್
ಪ್ರವಾಸಿಗರ ಮೇಲೆ ಎರಗಲು ಯತ್ನಿಸಿದ ಹುಲಿ, ಇಲ್ಲಿದೆ ಭಯಾನಕ ವಿಡಿಯೋ
ಪ್ರವಾಸಿಗರ ಮೇಲೆ ಎರಗಲು ಯತ್ನಿಸಿದ ಹುಲಿ, ಇಲ್ಲಿದೆ ಭಯಾನಕ ವಿಡಿಯೋ
ಪತ್ನಿಯನ್ನ ನೋಡಿ ಬೊಗಳಿದ್ದಕ್ಕೆ ಸ್ಕೂಬಿ ನಾಯಿ ಮೇಲೆ ಕ್ರೌರ್ಯ ಮೆರೆದ ಪತಿ
ಪತ್ನಿಯನ್ನ ನೋಡಿ ಬೊಗಳಿದ್ದಕ್ಕೆ ಸ್ಕೂಬಿ ನಾಯಿ ಮೇಲೆ ಕ್ರೌರ್ಯ ಮೆರೆದ ಪತಿ
ಟಿಎಂಸಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಟಿಎಂಸಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಎಂಥ ಬೌಲಿಂಗ್​ಯ್ಯ ನಿಂದು... ಬೌಲರ್-ಬ್ಯಾಟರ್​ ನಡುವೆ ಮಾತಿನ ಚಕಮಕಿ
ಎಂಥ ಬೌಲಿಂಗ್​ಯ್ಯ ನಿಂದು... ಬೌಲರ್-ಬ್ಯಾಟರ್​ ನಡುವೆ ಮಾತಿನ ಚಕಮಕಿ
ಡಾ. ರಾಜ್​ಕುಮಾರ್ 20ನೇ ವರ್ಷದ ಪುಣ್ಯಸ್ಮರಣೆ: ಅಭಿಮಾನಿಗಳಿಗೆ ಅನ್ನದಾನ
ಡಾ. ರಾಜ್​ಕುಮಾರ್ 20ನೇ ವರ್ಷದ ಪುಣ್ಯಸ್ಮರಣೆ: ಅಭಿಮಾನಿಗಳಿಗೆ ಅನ್ನದಾನ
ಗಾಯಾಳುವಿಗೆ ನೆರವಾದ ಹೆಚ್​​ಡಿಕೆ: ಮಾನವೀಯ ಕಾರ್ಯಕ್ಕೆ ಮೆಚ್ಚುಗೆ
ಗಾಯಾಳುವಿಗೆ ನೆರವಾದ ಹೆಚ್​​ಡಿಕೆ: ಮಾನವೀಯ ಕಾರ್ಯಕ್ಕೆ ಮೆಚ್ಚುಗೆ
ಅಮೆರಿಕದಲ್ಲಿ ಸ್ವಾಮಿ ವಿವೇಕಾನಂದರ ಪೂರ್ಣ ಗಾತ್ರದ ಪ್ರತಿಮೆ ಅನಾವರಣ
ಅಮೆರಿಕದಲ್ಲಿ ಸ್ವಾಮಿ ವಿವೇಕಾನಂದರ ಪೂರ್ಣ ಗಾತ್ರದ ಪ್ರತಿಮೆ ಅನಾವರಣ