AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸ್ವಾತಂತ್ರ್ಯೋತ್ಸವದ ನಿಮಿತ್ತ ಖಾಲೀಬಾಟಲಿ ತಾಳವಾದ್ಯ ಕಛೇರಿಗೆ ನಿಮ್ಮನ್ನು ಆಹ್ವಾನಿಸಲಾಗಿದೆ

Children : ನಮ್ಮ ಮಕ್ಕಳಿಗೆ ಸಂಗೀತ ಕಲಿಸಬೇಕು. ಗುರುಗಳನ್ನು, ಶಾಲೆಗಳನ್ನು ಹುಡುಕಬೇಕು. ವಾದ್ಯಗಳನ್ನು ಕೊಡಿಸಬೇಕು ಎಂದು ಓಡಾಡುತ್ತಿರುವ ಪೋಷಕರು ಒಮ್ಮೆ ಇತ್ತ ಗಮನಿಸಿ. ಸಂಗೀತ ಕಲಿಸುವ ಮೊದಲು ಸಂಗೀತದ ಗುಂಗು ಹಿಡಿಸುವುದನ್ನು ಕಲಿಸಿ. ಅದು ಹೇಗೆ? ಈ ವಿಡಿಯೋ ನೋಡಿದರೆ ಖಂಡಿತ ನಿಮಗೂ ಸೃಜನಶೀಲ ವಿಚಾರಗಳು ಹೊಮ್ಮುತ್ತವೆ!

Viral Video: ಸ್ವಾತಂತ್ರ್ಯೋತ್ಸವದ ನಿಮಿತ್ತ ಖಾಲೀಬಾಟಲಿ ತಾಳವಾದ್ಯ ಕಛೇರಿಗೆ ನಿಮ್ಮನ್ನು ಆಹ್ವಾನಿಸಲಾಗಿದೆ
ಖಾಲೀ ಬಾಟಲಿಗಳಿಂದ ಚೆಂಡೆ ವಾದನ
ಶ್ರೀದೇವಿ ಕಳಸದ
|

Updated on:Aug 15, 2023 | 11:01 AM

Share

Percussion : ಮಕ್ಕಳು ಅಳಲು ಶುರು ಮಾಡಿದರೆ ಕೈಯಲ್ಲಿದ್ದ ಸಾಮಾನುಗಳಿಂದಲೇ ತಾಳಬದ್ಧವಾಗಿ ಕುಟ್ಟುತ್ತ ಗಮನವನ್ನು ಸೆಳೆಯುತ್ತೇವಲ್ಲ. ಅದು ಬಟ್ಟಲೋ, ಚಮಚವೋ, ಪ್ಲೇಟೋ ಇನ್ನೊಂದೇನೋ. ಆ ಶಬ್ದ ಮತ್ತು ಲಯದತ್ತ ಮನಸ್ಸನ್ನು ಕೇಂದ್ರೀಕರಿಸುವ ಮಕ್ಕಳು ಯಾವುದಕ್ಕೆ ಹಠ ಬಂದಿತ್ತು ಅನ್ನುವುದನ್ನೇ ಮರೆತು ಹೋಗುತ್ತವೆ. ಸಂಗೀತದ ಮಾಂತ್ರಿಕತೆ ಅದು. ಸಂಗೀತವೆಂದಾಕ್ಷಣ ಮಕ್ಕಳಿಗೆ ದುಬಾರಿ ವಾದ್ಯಗಳನ್ನು ಕೊಡಿಸಬೇಕು, ಕ್ಲಾಸುಗಳಿಗೆ ಕರೆದುಕೊಂಡು ಹೋಗಬೇಕು ಅಂತೇಲ್ಲ ಏನಿಲ್ಲ. ವಾತಾವರಣ ಮತ್ತು ಅದರ ರುಚಿ ಬೆಳೆಸುವುದು ಮತ್ತು ನಾದದ ಗುಂಗಿಗೆ ಬೀಳಿಸುವುದು ಮುಖ್ಯ. ಇದೀಗ ವೈರಲ್ (Viral) ಆಗಿರುವ ಈ ವಿಡಿಯೋದಲ್ಲಿ ಈ ನಾಲ್ಕು ಮಕ್ಕಳು  ‘ಚೆಂಡೆವಾದನ’ದಲ್ಲಿ ಮುಳುಗಿವೆ.

ಇದನ್ನೂ ಓದಿ : Viral Video: ತಿನ್ನಲು ಎಲೆ ಕೊಟ್ಟ ಬಾಲಕನನ್ನೇ ಮೇಲೆತ್ತಿದ ಜಿರಾಫೆಯ ವಿಡಿಯೋ ವೈರಲ್, ಮುಂದೆ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮಕ್ಕಳನ್ನು ಯಾವ ಕ್ಲಾಸಿಗೆ ಸೇರಿಸಬೇಕು, ಯಾರ ಬಳಿ ಸೇರಿಸಬೇಕು, ಯಾವ ವಾದ್ಯ ಕೊಡಿಸಬೇಕು, ರಿಯಾಝ್ ಮಾಡಿಸಬೇಕು ಅಂತೆಲ್ಲ ತಲೆಬಿಸಿ ಇವರ ಪೋಷಕರಿಗಿಲ್ಲ. ಈ ಮಕ್ಕಳೂ ಇಂಥ ಯಾವ ಒತ್ತಡಕ್ಕೂ ಇಲ್ಲಿ ಒಳಪಟ್ಟಿಲ್ಲ. ಅತ್ಯಂತ ಸಹಜವಾಗಿ ಇದ್ದ ಪರಿಕರಗಳನ್ನೇ ವಾದ್ಯವಾಗಿಸಿಕೊಂಡಿದ್ದಾರೆ. ಆದರೂ ಇವರು ಹೀಗೆ ನುಡಿಸುವುದನ್ನು ಹೇಗೆ ಕಲಿತರು?

ನೀವೀಗ ಪ್ರವೇಶಿಸುತ್ತಿದ್ದೀರಿ ಖಾಲೀಬಾಟಲಿ ತಾಳವಾದ್ಯ ಕಛೇರಿ

ಚೆಂಡೆವಾದನದ ಧ್ವನಿಯನ್ನು ಹೋಲುತ್ತಿದೆ ಖಾಲೀ ಪ್ಲಾಸ್ಟಿಕ್ ಬಾಟಲಿಗಳ ವಾದನ. ಇವರು ಯಾರ ಬಳಿಯೂ ಕ್ಲಾಸಿಗೆ ಹೋಗಿಲ್ಲ. ಇವರದೇನಿದ್ದರೂ ನೋಡಿಕೆಯ ಕಲಿಕೆ. ಈ ವಿಡಿಯೋ ಅನ್ನು ಈತನಕ 8.7 ಲಕ್ಷಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಇವರೆಲ್ಲರೂ ಭವಿಷ್ಯದಲ್ಲಿ ಅತ್ಯುತ್ತಮ ಕಲಾವಿದರಾಗುವ ಗುಣಲಕ್ಷಣವನ್ನು ಹೊಂದಿದ್ದಾರೆ ಎಂದಿದ್ದಾರೆ. ಸಂಗೀತ ಉಳ್ಳವರದ್ದಷ್ಟೇ ಸ್ವತ್ತಲ್ಲ, ಯಾರೂ ಅವರವರಿಗೆ ಬೇಕಾದ ಹಾಗೆ ಅದನ್ನು ಅಪ್ಪಬಹುದು ಎಂದಿದ್ದಾರೆ ಕೆಲವರು.

ಇದನ್ನೂ ಓದಿ : Viral Video: ಪರ್ಸ್, ಬ್ಯಾಗ್​, ಇಟ್ಟಿಗೆ, ಚೆಂಡು ಕೈಗೆ ಸಿಕ್ಕಿದ್ದನ್ನೆಲ್ಲ ತಿನ್ನುವ ಇಸ್ತಾನ್​ಬುಲ್​ ಮಹಿಳೆ

ನನ್ನ ಶಾಲಾ ದಿನಗಳನ್ನು ಈ ವಿಡಿಯೋ ನೆನಪಿಸಿದೆ, ಇದು ಖಂಡಿತ ವೈರಲ್ ಆಗುತ್ತದೆ ಎಂದು ಅನೇಕರು ಹೇಳಿದ್ದಾರೆ. ಇವರಿಗೆ ಒಳ್ಳೆಯ ಗುರುವಿನೆಡೆ ತರಬೇತಿ ಕೊಡಿಸಬೇಕು, ಪಾಲಕರು ದುಡಿಯುವುದರಲ್ಲಿ ಮುಳುಗಿರುತ್ತಾರೆ. ಆದರೆ ಈ ಮಕ್ಕಳ ಕಲೆಯನ್ನು ಪೋಷಿಸುವವರು ಯಾರು? ಅಂತೆಲ್ಲ ನೆಟ್ಟಗರು ಚರ್ಚಿಸಿದ್ದಾರೆ. ಏನೇ ಆಗಲಿ ಮಕ್ಕಳು ಆಡಾಡುತ್ತಲೇ ಕಲೆಯ ಗುಂಗನ್ನು ಹಿಡಿಸಿಕೊಳ್ಳಬೇಕು. ಅಂದಾಗಲೇ ಅದರಲ್ಲಿ ಅವುಗಳಿಗೆ ಪ್ರೀತಿ ಹುಟ್ಟುತ್ತದೆ. ಅಂದಹಾಗೆ ಕಲೆ ಒತ್ತಾಯಿಸಿದರೆ ಬರುವಂಥದ್ದಲ್ಲ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 10:57 am, Tue, 15 August 23

‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು
‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು
ಸಿದ್ದರಾಮಯ್ಯರಿಂದ ಶಾಸಕರನ್ನೆಲ್ಲ ತಮ್ಮೆಡೆ ಸೆಳೆದುಕೊಳ್ಳುವ ಹುನ್ನಾರ: ಅಶೋಕ
ಸಿದ್ದರಾಮಯ್ಯರಿಂದ ಶಾಸಕರನ್ನೆಲ್ಲ ತಮ್ಮೆಡೆ ಸೆಳೆದುಕೊಳ್ಳುವ ಹುನ್ನಾರ: ಅಶೋಕ
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್
ಪೊಲೀಸರು ಹಿಡಿದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಪೊಲೀಸರು ಹಿಡಿದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
12 ವೈಡ್, 1 ನೋ ಬಾಲ್... ಓವರ್ ಮುಗಿಯುವ ಮುನ್ನವೇ ಪಂದ್ಯವೇ ಮುಗಿದು ಹೋಯ್ತು!
12 ವೈಡ್, 1 ನೋ ಬಾಲ್... ಓವರ್ ಮುಗಿಯುವ ಮುನ್ನವೇ ಪಂದ್ಯವೇ ಮುಗಿದು ಹೋಯ್ತು!