AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TikTok Star: ಕ್ರೇನ್​​ನಲ್ಲಿ ನಿಂತು ಲೈವ್​ ವಿಡಿಯೋ ಮಾಡಲು ಹೋಗಿ ದುರಂತ ಅಂತ್ಯ ಕಂಡ ಟಿಕ್​ಟಾಕ್ ಸ್ಟಾರ್​; ಭಯಾನಕ ವಿಡಿಯೋ ವೈರಲ್​

Crane Operator: ವೃತ್ತಿಯಲ್ಲಿ ಕ್ರೇನ್​ ಚಾಲಕಿಯಾಗಿರುವ ಕ್ಸಿಯಾವೋ ಅವರಿಗೆ ಇನ್ನೂ 23ವರ್ಷ. ಇಬ್ಬರು ಮಕ್ಕಳ ತಾಯಿಯೂ ಹೌದು. ಪ್ರತಿ ದಿನ ಒಂದಲ್ಲ ಒಂದು ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಿದ್ದರು.

TikTok Star: ಕ್ರೇನ್​​ನಲ್ಲಿ ನಿಂತು ಲೈವ್​ ವಿಡಿಯೋ ಮಾಡಲು ಹೋಗಿ ದುರಂತ ಅಂತ್ಯ ಕಂಡ ಟಿಕ್​ಟಾಕ್ ಸ್ಟಾರ್​; ಭಯಾನಕ ವಿಡಿಯೋ ವೈರಲ್​
ಕ್ರೇನ್​ನಿಂದ ಬಿದ್ದು ಸಾವನ್ನಪ್ಪಿದ ಟಿಕ್​ಟಾಕ್​ ಸ್ಟಾರ್​
TV9 Web
| Edited By: |

Updated on:Jul 27, 2021 | 6:27 PM

Share

ಸೆಲ್ಫೀ ತೆಗೆದುಕೊಳ್ಳಲು ಹೋಗಿ ಅವಘಡ ಮಾಡಿಕೊಂಡು ಪ್ರಾಣಬಿಟ್ಟವರ ಬಗ್ಗೆ ಅದೆಷ್ಟೋ ಸುದ್ದಿಗಳನ್ನು ಓದಿದ್ದೇವೆ. ಹಾಗೇ, ಈಗ ಇಲ್ಲೊಬ್ಬಳು ಟಿಕ್​ಟಾಕ್​ ಸ್ಟಾರ್ (TikTok Star)​, ಲೈವ್​ ವಿಡಿಯೋ(Live Video)ವೊಂದನ್ನು ಮಾಡಲು ಹೋಗಿ ಕ್ರೇನ್​ನಿಂದ 160 ಅಡಿ ಆಳಕ್ಕೆ ಬಿದ್ದು ಮೃತಪಟ್ಟಿದ್ದಾಳೆ. ಅಂದಹಾಗೆ ಈ ದುರ್ಘಟನೆ ನಡೆದದ್ದು ಚೀನಾದಲ್ಲಿ. ಟಿಕ್​ಟಾಕ್​ ವಿಡಿಯೋಗಳ ಮೂಲಕವೇ ಖ್ಯಾತಳಾಗಿದ್ದ, ಟಿಕ್​ಟಾಕ್ ಸ್ಟಾರ್​ ಎನ್ನಿಸಿಕೊಂಡಿದ್ದ 23 ವರ್ಷ ಕ್ಸಿಯಾವೋ ಕ್ಯುಮಿ ವಿಡಿಯೋ ಮಾಡುತ್ತಿದ್ದಾಗಲೇ ಬಿದ್ದು ಮೃತಪಟ್ಟಿದ್ದಾಳೆ.

ಕ್ಸಿಯಾವೋ ವೃತ್ತಿಯಲ್ಲಿ ಕ್ರೇನ್ ಚಾಲಕಿ. ಅದರಲ್ಲೇ ಕುಳಿತು ಟಿಕ್​ಟಾಕ್​ ವಿಡಿಯೋ ಮಾಡಲು ಪ್ರಯತ್ನಿಸುತ್ತಿದ್ದಳು. ಕ್ರೇನ್​ ಚಾಲಕಿಯಾಗಿದ್ದ ಈಕೆ ತನ್ನ ವೃತ್ತಿಯ ಬಗ್ಗೆ ಹೀಗೆ ಸೋಷಿಯಲ್ ಮೀಡಿಯಾಗಳಲ್ಲಿ ಪದೇಪದೆ ಏನಾದರೂ ಪೋಸ್ಟ್ ಹಾಕುತ್ತಿದ್ದಳು. ಆದರೆ ಈ ಬಾರಿ ದುರದೃಷ್ಟವಶಾತ್​ 160 ಅಡಿ ಆಳಕ್ಕೆ ಬಿದ್ದಿದ್ದಾಳೆ. ಆಕೆ ಲೈವ್​​ನಲ್ಲಿ ಮಾತನಾಡುತ್ತಿದ್ದಂತೇ ಜಾರಿದ್ದಾಳೆ. ಅಷ್ಟರಲ್ಲಿ ಕ್ಯಾಮರಾ ಆಫ್​ ಆಗಿದೆ..ಮಾತು ನಿಂತಿದೆ ಎಂದು ಸನ್​ ಮಾಧ್ಯಮ ವರದಿ ಮಾಡಿದೆ.

ಈಕೆಗೆ ಮದುವೆಯಾಗಿ ಇಬ್ಬರು ಮಕ್ಕಳೂ ಇದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಚೀನಾದ ಖ್ಯಾತ ಕಂಟೆಂಟ್​ ಕ್ರಿಯೇಟರ್​ ಮತ್ತು ಟಿಕ್​ಟಾಕ್​ ಆರ್ಟಿಸ್ಟ್​ಗಳಲ್ಲಿ ಒಬ್ಬರಾಗಿದ್ದರು. ಇವರು @Xiaoquimei ಎಂಬ ಹೆಸರಿನಲ್ಲಿ ಟಿಕ್​ಟಾಕ್ ಅಕೌಂಟ್ ಹೊಂದಿದ್ದಾರೆ. ಪ್ರತಿದಿನ ಒಂದಲ್ಲ ಒಂದು ವಿಡಿಯೋವನ್ನು ಪೋಸ್ಟ್​ ಮಾಡಿ, ಜನಮೆಚ್ಚುಗೆ ಗಳಿಸಿದ್ದರು. ಅನೇಕ ಅಭಿಮಾನಿಗಳೂ ಇದ್ದರು. ಇದೀಗ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: Nokia XR20: ಮತ್ತೆರಡು ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದ ನೋಕಿಯಾ: ಏನಿದರ ವಿಶೇಷ, ಬೆಲೆ ಎಷ್ಟು?

Published On - 6:27 pm, Tue, 27 July 21

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್