AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಬಂಪರ್! ವಿಶೇಷ ಯೋಜನೆ ಘೋಷಿಸಿದ ಕೇರಳದ ಬಿಷಪ್

ವರ್ಚುವಲ್ ಮೀಟಿಂಗ್ ಒಂದರಲ್ಲಿ ಬಿಷಪ್ ಈ ಯೋಜನೆಯನ್ನು ಘೋಷಿಸಿದಾರೆ. ಆಗ ಎಲ್ಲರ ಹುಬ್ಬುಗಳೂ ಅಚ್ಚರಿಯಿಂದ ಮೇಲೇರಿದವಂತೆ. ಆದರೆ ಬಿಷಪ್ ತಾವು ಮಾಡಿದ ಘೋಷಣೆಯನ್ನು ಮತ್ತೊಮ್ಮೆ ದೃಢಪಡಿಸಿದ್ದಾರೆ.

5ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಬಂಪರ್! ವಿಶೇಷ ಯೋಜನೆ ಘೋಷಿಸಿದ ಕೇರಳದ ಬಿಷಪ್
ಬಿಷಪ್ ಜೊಸೆಫ್
TV9 Web
| Edited By: |

Updated on: Jul 27, 2021 | 4:01 PM

Share

ತಿರುವನಂತಪುರಂ: ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ನೀತಿ ಜಾರಿಗೊಳಿಸುವ ಕುರಿತು ತೀವ್ರತರದ ಚರ್ಚೆಗಳು ನಡೆಯುತ್ತಿವೆ. ಕಡಿಮೆ ಮಕ್ಕಳನ್ನು ಹೊಂದಿದ ಕುಟುಂಬಕ್ಕಷ್ಟೇ ಸರ್ಕಾರಿ ಯೋಜನೆಗಳನ್ನು ನೀಡುವುದಾಗಿ ಕೆಲವು ರಾಜ್ಯ ಸರ್ಕಾರಗಳು ಈಗಾಗಲೇ ಘೋಷಿಸಿವೆ. ಈ ಹೊತ್ತಲ್ಲೇ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಕ್ಕೆ ಕೆಲವು ಉತ್ತೇಜನಕಾರಿ ಯೋಜನೆಗಳನ್ನು ಒದಗಿಸುವುದಾಗಿ ಕೇರಳದ ಚರ್ಚ್ ಒಂದರ ಬಿಷಪ್ (Kerala Bishop) ಘೋಷಿಸಿದ್ದಾರೆ.

ಸಿರೋ ಮಲಬಾರ್ ಚರ್ಚ್​ನ ಮಾರ್ ಜೊಸೆಫ್ ಅವರೇ ಈ ಘೋಷಣೆ ಮಾಡಿದವರು. ತಮ್ಮ ಚರ್ಚ್​ನ ವ್ಯಾಪ್ತಿಯಲ್ಲಿ ಬರುವ ದಂಪತಿಗಳಿಗೆ 5 ಅಥವಾ 5ಕ್ಕಿಂತ ಹೆಚ್ಚು ಮಕ್ಕಳಿದ್ದಲ್ಲಿ ಬಂಪರ್ ಯೋಜನೆಗಳನ್ನು ಘೋಷಿಸಿದ್ದಾರೆ. ಆದರೆ 2000ನೇ ಇಸವಿಯ ನಂತರ ಮದುವೆಯಾದ ದಂಪತಿಗಳು ಮಾತ್ರ ಈ ಯೋಜನೆಯ ಫಲಾನುಭವಿಗಳಾಗಲು ಸಾಧ್ಯ ಎಂದು ಸಹ ಕೆಲ ನಿಯಮವನ್ನೂ ಅವರು ರೂಪಿಸಿದ್ದಾರೆ.

2000ನೇ ಇಸವಿಯ ನಂತರ ಮದುವೆಯಾದ ದಂಪತಿಗಳ 4ನೆ ಮಗುವಿನಿಂದ ನಂತರದ ಮಕ್ಕಳೆಲ್ಲರೂ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಚರ್ಚ್​ನ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನಲ್ಲಿ ಈ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಲಾಗುವುದು, ಅದೂ ಪ್ರತಿ ತಿಂಗಳು ₹1500 ಪ್ರೋತ್ಸಾಹ ಧನವನ್ನೂ ಒದಗಿಸಿ ಶಿಕ್ಷಣ ನೀಡಲಾಗುವುದು ಎಂದು ಬಿಷಪ್ ಘೋಷಿಸಿದ್ದಾರೆ. ದಂಪತಿಗಳ ನಾಲ್ಕನೇ ಮಗುವಿನಿಂದ ನಂತರದ ಎಲ್ಲಾ ಮಕ್ಕಳಿಗೆ ವೈದ್ಯಕೀಯ ಸೌಲಭ್ಯವನ್ನು ಸಹ ಚರ್ಚ್​ ನಡೆಸುತ್ತಿರುವ ಆಸ್ಪತ್ರೆಯೇ ನೋಡಿಕೊಳ್ಳಲಿದೆ ಎಂದು ಸಹ ಅವರು ತಿಳಿಸಿದ್ದಾರೆ.

ವರ್ಚುವಲ್ ಮೀಟಿಂಗ್ ಒಂದರಲ್ಲಿ ಬಿಷಪ್ ಈ ಯೋಜನೆಯನ್ನು ಘೋಷಿಸಿದಾರೆ. ಆಗ ಎಲ್ಲರ ಹುಬ್ಬುಗಳೂ ಅಚ್ಚರಿಯಿಂದ ಮೇಲೇರಿದವಂತೆ. ಆದರೆ ಬಿಷಪ್ ತಾವು ಮಾಡಿದ ಘೋಷಣೆಯನ್ನು ಮತ್ತೊಮ್ಮೆ ದೃಢಪಡಿಸಿದ್ದಾರೆ.

ಇದನ್ನೂ ಓದಿ: 

Viral News: ಕೈಕಾಲುಗಳನ್ನು ವಿಸ್ತರಿಸುವ ಮೂಲಕ ಮಾನವರನ್ನು 5.6 ಇಂಚು ಎತ್ತರವಾಗಿಸಬಹುದು! ವಿಲಕ್ಷಣ ಹೇಳಿಕೆ ನೀಡಿ ವೈರಲ್​ ಆದ ವೈದ್ಯ

‘ಲಂಚವನ್ನು ನಾನು ಸ್ವೀಕರಿಸುವುದೂ ಇಲ್ಲ, ಕೊಡುವುದೂ ಇಲ್ಲ’; ವೈರಲ್​ ಆಯ್ತು ರಾಜ್​ ಕುಂದ್ರಾ ಹಳೆಯ ವಿಡಿಯೋ

(Kerala Bishop announces special project if there are more than 5 children! )

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್