AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಶರ್ಟ್​ ಲೇಬಲ್​ ನೆನಪಾಗ್ತಿದೆಯಾ ಈ ಚಾಕೋಲೇಟ್ ನೋಡ್ತಿದ್ದ ಹಾಗೆ?

Chocolate : ಸ್ವಲ್ಪ ಮುರಿದರೆ ಜಾಸ್ತಿ, ಜಾಸ್ತಿ ಮುರಿದರೆ ಸ್ವಲ್ಪ. ಅಂತೂ ಎಷ್ಟು ಬೇಕೋ ಅಷ್ಟು ಚಾಕೋಲೇಟನ್ನು ತಿನ್ನಲು ಆಗುವುದೇ ಇಲ್ಲ ಎಂದು ಬೇಸರಿಸಿಕೊಳ್ಳುವವರಿಗೆ ಇಲ್ಲೊಂದು ಮಜಾ ಇದೆ!

ಟೀಶರ್ಟ್​ ಲೇಬಲ್​ ನೆನಪಾಗ್ತಿದೆಯಾ ಈ ಚಾಕೋಲೇಟ್ ನೋಡ್ತಿದ್ದ ಹಾಗೆ?
Chocolate bar that comes in small to extra large size
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 29, 2022 | 11:40 AM

Viral : ಸ್ವಲ್ಪ ಚಾಕೋಲೇಟ್ ತಿನ್ನಿ ಅದು ನಿಮಗೆ ಆ ಕ್ಷಣಕ್ಕೆ ಕೊಡುವ ಶಕ್ತಿ ಮಾತ್ರ ಅದ್ಭುತ. ಎನರ್ಜಿ ಬೂಸ್ಟರ್​ನಂತೆ ಚಾಕೋಲೇಟ್​. ಮಕ್ಕಳನ್ನು ಗಮನಿಸಿ. ಮೊದಲೇ ಪುಟಿಯುವ ಚೆಂಡುಗಳು. ಇನ್ನು ಚಾಕೋಲೇಟ್​ ತಿಂದರೆ ಕೇಳಬೇಕೆ? ಆದರೆ ದೊಡ್ಡವರಾದ ನಿಮಗೆ ಇಡೀ ದೊಡ್ಡ ಚಾಕೋಲೇಟ್​ ಬಾರನ್ನು ತಿನ್ನುವುದು ಜಾಸ್ತಿ ಎನ್ನಿಸಬಹುದು. ಆಗ ಎಷ್ಟು ಬೇಕೋ ಅಷ್ಟು ಮುರಿಯುವುದು ಚೂರು ಕಷ್ಟ. ಹಾಗಂತ ಇನ್ನು ಇದಕ್ಕಾಗಿ ಬಹಳ ಯೋಚಿಸಬೇಕಿಲ್ಲ. ಏಕೆಂದರೆ ಇದೀಗ ವೈರಲ್ ಆಗಿರುವ ಈ ಟ್ವೀಟ್​ ನೋಡಿ. ಚಾಕೋಲೇಟ್​ ಬಾರಿನಲ್ಲಿ ಬಟ್ಟೆಗಳ ಮೇಲೆ ಬರೆದಿರುವಂತೆ ವಿವಿಧ ಅಳತೆಗಳನ್ನು ನಮೂದಿಸಿದ್ದಾರೆ!

ಇನ್ನು ನೀವು ಎಷ್ಟು ಬೇಕೋ ಅಷ್ಟಷ್ಟನ್ನೇ ಮುರಿದು ತಿನ್ನುವುದು ಸುಲಭ. ಈ ಐಡಿಯಾ ಚೆನ್ನಾಗಿದೆಯಲ್ಲ? ಟೀಶರ್ಟ್​ನ ಲೇಬಲ್​ ಮೇಲೆ ಬರೆದಂತೆ “XS,” “S,” “L,” ಮತ್ತು “XL” ನೋಡಲು ಮಜಾ. ತಿನ್ನಲೂ ಮಜಾ ಮತ್ತು ಸುಲಭ. ಪುಡಿಪುಡಿಯಾಯಿತು ಎಂದೋ, ಜಾಸ್ತಿ ಮುರಿಯಿತು ಎಂದೋ ಯೋಚಿಸಬೇಕಿಲ್ಲ. ಎಷ್ಟು ಬೇಕೋ ಅಷ್ಟು ತಿಂದು ಸಮಾಧಾನವಾಗಿ ಬ್ಯಾಗಿನೊಳಗಿಟ್ಟುಕೊಳ್ಳಬಹುದು.

ಈತನಕ ಸುಮಾರು 4,000 ಜನರು ಈ ಟ್ವೀಟ್​ ಇಷ್ಟಪಟ್ಟಿದ್ದಾರೆ. ಅನೇಕರುಈ ಐಡಿಯಾ ಅನ್ನು ಹೊಗಳಿದ್ದಾರೆ. ‘ಎಲ್ಲಿದ್ದೀಯಪ್ಪಾ ಸೃಷ್ಟಿಕರ್ತ. ನಿಮ್ಮ ಪ್ರತಿಭೆ ಅದ್ಭುತ. ಒಮ್ಮೆ ಭೇಟಿ ಮಾಡಬೇಕಿದೆ.’ ಎಂದಿದ್ದಾರೆ ಒಬ್ಬರು. ‘ನನಗೆ XS ಸರಿ ಇದೆ’ ಎಂದಿದ್ದಾರೆ ಇನ್ನೂ ಒಬ್ಬರು. ‘ನೀವೇನೇ ತಲೆ ಉಪಯೋಗಿಸಿ. ಆದರೆ ನಾನು ಮಾತ್ರ ಈ ಬಾರನ್ನು ಒಂದೇ ಏಟಿಗೆ ತಿನ್ನುತ್ತೇನೆ’ ಎಂದಿದ್ಧಾರೆ ಮತ್ತೊಬ್ಬರು.

ಅಲ್ವಾ? ಇಷ್ಟಿಷ್ಟೇ ಮುರಿದಿಟ್ಟುಕೊಂಡು ಚಾಕೋಲೇಟ್​ ತಿನ್ನುವುದು ಸ್ವಲ್ಪ ಏನು ಬಾರೀ ಕಷ್ಟವೇ ಅಲ್ಲವೇ!?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:32 am, Sat, 29 October 22

ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ