AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಡರ್​ ಬಿಲ್​ಗಿಂತ 400 ಪಟ್ಟು ಹೆಚ್ಚು ಟಿಪ್ಸ್​ ನೀಡಿದ ಗ್ರಾಹಕ! ರೆಸ್ಟೋರೆಂಟ್​​ ಸಿಬ್ಬಂದಿಯಿಂದ ಶ್ಲಾಘನೆ

ಇದು ಕ್ರೆಡಿಟ್​ ಕಾರ್ಡ್​ನ ರೂಪದಲ್ಲಿತ್ತು. ಆದ್ದರಿಂದ ಹಣ ಎಷ್ಟಿದೆ ಎಂಬುದನ್ನು ಕೆಲಸಗಾರ ಮೊದಲು ನೋಡಿರಲಿಲ್ಲ. ಹೋಟೆಲ್​ ಮಾಲೀಕನಿಗೆ ಬಿಲ್​ ಮತ್ತು ಹಣವನ್ನು ಕೊಟ್ಟಾಗ ಆಶ್ಚರ್ಯರಾದರು.

ಆರ್ಡರ್​ ಬಿಲ್​ಗಿಂತ 400 ಪಟ್ಟು ಹೆಚ್ಚು ಟಿಪ್ಸ್​ ನೀಡಿದ ಗ್ರಾಹಕ! ರೆಸ್ಟೋರೆಂಟ್​​ ಸಿಬ್ಬಂದಿಯಿಂದ ಶ್ಲಾಘನೆ
ಬಿಲ್​
TV9 Web
| Updated By: shruti hegde|

Updated on: Jun 25, 2021 | 12:38 PM

Share

ಕೊರೊನಾ ಸಾಂಕ್ರಾಮಿಕ ಕಾರಣದಿಂದಾಗಿ ಲಾಕ್​ ಆಗಿದ್ದ ಅಂಗಡಿಗಳೆಲ್ಲಾ ತೆರೆಯಲ್ಪಡುತ್ತಿವೆ. ರೆಸ್ಟೋರೆಂಟ್​ಗಳೆಲ್ಲ ಆನ್​ಲೈನ್​ ಡೆಲಿವರಿ ಮೂಲಕ ಮನೆ ಬಾಗಿಲಿಗೇ ತಿಂಡಿಗಳನ್ನು ಸಪ್ಲೈ ಮಾಡುತ್ತಿವೆ. ಹೀಗಿರುವಾಗ ತಾವು ಖರೀದಿಸಿದ ತಿಂಡಿಯ ಬಿಲ್​ಗಿಂತ 400 ಪಟ್ಟು ಹೆಚ್ಚು ಹಣ ನೀಡಿದ ವ್ಯಕ್ತಿಯೋರ್ವರ ಮನೋಭಾವವನ್ನು ಮೆಚ್ಚಿ ನೆಟ್ಟಿಗರು ಪ್ರಶಂಸೆ ನೀಡುತ್ತಿದ್ದಾರೆ. ಜತೆಗೆ ರೆಸ್ಟೋರೆಂಟ್​ ಸಿಬ್ಬಂದಿಯೂ ಸಹ ಕೃತಜ್ಞತೆಯನ್ನುಸಲ್ಲಿಸಿದ್ದಾರೆ.

ಸಾಂಕ್ರಾಮಿಕ ಸಮಯದಲ್ಲೂ ಸಹ ರೆಸ್ಟೋರೆಂಟ್​ಗಳಲ್ಲಿ ಕೆಲಸ ಮಾಡುವವರು, ಜನರು ಆನ್ಲೈನ್​ ಮೂಲಕ ಬುಕ್ ಮಾಡಿದ ತಿಂಡಿಗಳನ್ನು ಮನೆಬಾಗಿಲಿಗೆ ತಂದು ಕೊಟ್ಟು ಹೋಗುತ್ತಿದ್ದಾರೆ. ಈ ಸಮಯದಲ್ಲಿ ಕೆಲಸಗಾರರಿಗೆ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಇಲ್ಲೋರ್ವರು ತಾವು ಬಿಲ್​ ಮಾಡಿದ ಹಣಕ್ಕಿಂತ 400 ಪಟ್ಟು ಹೆಚ್ಚು ಹಣವನ್ನು ನೀಡಿದ್ದಾರೆ. ಘಟನೆ ಅಮೆರಿಕದಲ್ಲಿ ನಡೆದಿದೆ.

ಗ್ರಾಹಕರೋರ್ವರು ನ್ಯೂ ಹ್ಯಾಂಪ್​ಶೈರ್ನ ಲಂಡನ್​ಡೇರಿಯ ಸ್ಟಂಬಲ್​ ಇನ್​ಬಾರ್​ ಮತ್ತು ಗ್ರಿಲ್​ನಲ್ಲಿ ಹುರಿದ ಉಪ್ಪಿನಕಾಯಿ, ಚಿಲಿ ಡಾಗ್ಸ್​ ಮತ್ತು ಕೆಲವು ವಿಧದ ಜ್ಯೂಸ್​ ಹಾಗೂ ಪಾನೀಯಗಳನ್ನು ಆರ್ಡ್​ ಮಾಡಿದ್ದರು. ಇದರ ಮೊತ್ತ ಒಟ್ಟು 2,812.44 ರೂಪಾಯಿ ಆಗಿತ್ತು. ಆದರೆ ಗ್ರಾಹಕರು ಒಟ್ಟು 11,869,936 ರೂಪಯಿಯನ್ನು ನೀಡಿದ್ದಾರೆ. ರೆಸ್ಟೋರೆಂಟ್​ನವರು ಕೇಳಿದರೆ, ನಿಮಗೆ ಸಹಾಯ ಮಾಡಲೆಂದೇ ಕಳುಹಿಸಿದ್ದಾಗಿ ಹೇಳಿದ್ದಾರೆ. ಇದೀಗ ಜನರು ಇವರನ್ನು ಮೆಚ್ಚಿಕೊಂಡಿದ್ದು ಕೊವಿಡ್​ ಸಮಯದಲ್ಲಿ ಸಹಾಯ ಮಾಡಿದ್ದಕ್ಕಾಗಿ ಶ್ಲಾಘಿಸಿದ್ದಾರೆ.

ಇದು ಕ್ರೆಡಿಟ್​ ಕಾರ್ಡ್​ನ ರೂಪದಲ್ಲಿತ್ತು. ಆದ್ದರಿಂದ ಹಣ ಎಷ್ಟಿದೆ ಎಂಬುದನ್ನು ಕೆಲಸಗಾರ ಮೊದಲು ನೋಡಿರಲಿಲ್ಲ. ಹೋಟೆಲ್​ ಮಾಲೀಕನಿಗೆ ಬಿಲ್​ ಮತ್ತು ಹಣವನ್ನು ಕೊಟ್ಟಾಗ ಆಶ್ಚರ್ಯರಾದರು. ಮತ್ತು ರಶೀದಿಯನ್ನು ಹಿಂತಿರುಗಿಸಿದಾಗ ಇದು ನಿಮಗೆಂದೇ ಕೊಟ್ಟ ಟಿಪ್ಸ್. ಕಷ್ಟ ಕಾಲದಲ್ಲಿ ನೀವು ಕಷ್ಪಟ್ಟು ಕೆಲಸ ಮಾಡುತ್ತಿದ್ದೀರಿ​ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಒಂದೇ ವೇಳೆ ಅಷ್ಟೂ ಹಣವನ್ನು ಖಾಲಿ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ. ಇವರ ಈ ಮನೋಭಾವಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಇದನ್ನೂ ಓದಿ:

Viral Video : ಆಹಾರ ಹುಡುಕುತ್ತಾ ಬಂದ ಆನೆ ಗೋಡೆಯಿಂದ ಮನೆಯೊಳಗೆ ನುಗಿತ್ತು!

Viral Video: ಸೀರೆಯುಟ್ಟು ಸ್ಟೈಲಾಗಿ ಸೊಂಟ ಬಳುಕಿಸುತ್ತಿರುವ ಮಹಿಳೆ ನೋಡಿ ನೆಟ್ಟಿಗರು ಫಿದಾ!

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!