AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಡರ್​ ಬಿಲ್​ಗಿಂತ 400 ಪಟ್ಟು ಹೆಚ್ಚು ಟಿಪ್ಸ್​ ನೀಡಿದ ಗ್ರಾಹಕ! ರೆಸ್ಟೋರೆಂಟ್​​ ಸಿಬ್ಬಂದಿಯಿಂದ ಶ್ಲಾಘನೆ

ಇದು ಕ್ರೆಡಿಟ್​ ಕಾರ್ಡ್​ನ ರೂಪದಲ್ಲಿತ್ತು. ಆದ್ದರಿಂದ ಹಣ ಎಷ್ಟಿದೆ ಎಂಬುದನ್ನು ಕೆಲಸಗಾರ ಮೊದಲು ನೋಡಿರಲಿಲ್ಲ. ಹೋಟೆಲ್​ ಮಾಲೀಕನಿಗೆ ಬಿಲ್​ ಮತ್ತು ಹಣವನ್ನು ಕೊಟ್ಟಾಗ ಆಶ್ಚರ್ಯರಾದರು.

ಆರ್ಡರ್​ ಬಿಲ್​ಗಿಂತ 400 ಪಟ್ಟು ಹೆಚ್ಚು ಟಿಪ್ಸ್​ ನೀಡಿದ ಗ್ರಾಹಕ! ರೆಸ್ಟೋರೆಂಟ್​​ ಸಿಬ್ಬಂದಿಯಿಂದ ಶ್ಲಾಘನೆ
ಬಿಲ್​
TV9 Web
| Edited By: |

Updated on: Jun 25, 2021 | 12:38 PM

Share

ಕೊರೊನಾ ಸಾಂಕ್ರಾಮಿಕ ಕಾರಣದಿಂದಾಗಿ ಲಾಕ್​ ಆಗಿದ್ದ ಅಂಗಡಿಗಳೆಲ್ಲಾ ತೆರೆಯಲ್ಪಡುತ್ತಿವೆ. ರೆಸ್ಟೋರೆಂಟ್​ಗಳೆಲ್ಲ ಆನ್​ಲೈನ್​ ಡೆಲಿವರಿ ಮೂಲಕ ಮನೆ ಬಾಗಿಲಿಗೇ ತಿಂಡಿಗಳನ್ನು ಸಪ್ಲೈ ಮಾಡುತ್ತಿವೆ. ಹೀಗಿರುವಾಗ ತಾವು ಖರೀದಿಸಿದ ತಿಂಡಿಯ ಬಿಲ್​ಗಿಂತ 400 ಪಟ್ಟು ಹೆಚ್ಚು ಹಣ ನೀಡಿದ ವ್ಯಕ್ತಿಯೋರ್ವರ ಮನೋಭಾವವನ್ನು ಮೆಚ್ಚಿ ನೆಟ್ಟಿಗರು ಪ್ರಶಂಸೆ ನೀಡುತ್ತಿದ್ದಾರೆ. ಜತೆಗೆ ರೆಸ್ಟೋರೆಂಟ್​ ಸಿಬ್ಬಂದಿಯೂ ಸಹ ಕೃತಜ್ಞತೆಯನ್ನುಸಲ್ಲಿಸಿದ್ದಾರೆ.

ಸಾಂಕ್ರಾಮಿಕ ಸಮಯದಲ್ಲೂ ಸಹ ರೆಸ್ಟೋರೆಂಟ್​ಗಳಲ್ಲಿ ಕೆಲಸ ಮಾಡುವವರು, ಜನರು ಆನ್ಲೈನ್​ ಮೂಲಕ ಬುಕ್ ಮಾಡಿದ ತಿಂಡಿಗಳನ್ನು ಮನೆಬಾಗಿಲಿಗೆ ತಂದು ಕೊಟ್ಟು ಹೋಗುತ್ತಿದ್ದಾರೆ. ಈ ಸಮಯದಲ್ಲಿ ಕೆಲಸಗಾರರಿಗೆ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಇಲ್ಲೋರ್ವರು ತಾವು ಬಿಲ್​ ಮಾಡಿದ ಹಣಕ್ಕಿಂತ 400 ಪಟ್ಟು ಹೆಚ್ಚು ಹಣವನ್ನು ನೀಡಿದ್ದಾರೆ. ಘಟನೆ ಅಮೆರಿಕದಲ್ಲಿ ನಡೆದಿದೆ.

ಗ್ರಾಹಕರೋರ್ವರು ನ್ಯೂ ಹ್ಯಾಂಪ್​ಶೈರ್ನ ಲಂಡನ್​ಡೇರಿಯ ಸ್ಟಂಬಲ್​ ಇನ್​ಬಾರ್​ ಮತ್ತು ಗ್ರಿಲ್​ನಲ್ಲಿ ಹುರಿದ ಉಪ್ಪಿನಕಾಯಿ, ಚಿಲಿ ಡಾಗ್ಸ್​ ಮತ್ತು ಕೆಲವು ವಿಧದ ಜ್ಯೂಸ್​ ಹಾಗೂ ಪಾನೀಯಗಳನ್ನು ಆರ್ಡ್​ ಮಾಡಿದ್ದರು. ಇದರ ಮೊತ್ತ ಒಟ್ಟು 2,812.44 ರೂಪಾಯಿ ಆಗಿತ್ತು. ಆದರೆ ಗ್ರಾಹಕರು ಒಟ್ಟು 11,869,936 ರೂಪಯಿಯನ್ನು ನೀಡಿದ್ದಾರೆ. ರೆಸ್ಟೋರೆಂಟ್​ನವರು ಕೇಳಿದರೆ, ನಿಮಗೆ ಸಹಾಯ ಮಾಡಲೆಂದೇ ಕಳುಹಿಸಿದ್ದಾಗಿ ಹೇಳಿದ್ದಾರೆ. ಇದೀಗ ಜನರು ಇವರನ್ನು ಮೆಚ್ಚಿಕೊಂಡಿದ್ದು ಕೊವಿಡ್​ ಸಮಯದಲ್ಲಿ ಸಹಾಯ ಮಾಡಿದ್ದಕ್ಕಾಗಿ ಶ್ಲಾಘಿಸಿದ್ದಾರೆ.

ಇದು ಕ್ರೆಡಿಟ್​ ಕಾರ್ಡ್​ನ ರೂಪದಲ್ಲಿತ್ತು. ಆದ್ದರಿಂದ ಹಣ ಎಷ್ಟಿದೆ ಎಂಬುದನ್ನು ಕೆಲಸಗಾರ ಮೊದಲು ನೋಡಿರಲಿಲ್ಲ. ಹೋಟೆಲ್​ ಮಾಲೀಕನಿಗೆ ಬಿಲ್​ ಮತ್ತು ಹಣವನ್ನು ಕೊಟ್ಟಾಗ ಆಶ್ಚರ್ಯರಾದರು. ಮತ್ತು ರಶೀದಿಯನ್ನು ಹಿಂತಿರುಗಿಸಿದಾಗ ಇದು ನಿಮಗೆಂದೇ ಕೊಟ್ಟ ಟಿಪ್ಸ್. ಕಷ್ಟ ಕಾಲದಲ್ಲಿ ನೀವು ಕಷ್ಪಟ್ಟು ಕೆಲಸ ಮಾಡುತ್ತಿದ್ದೀರಿ​ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಒಂದೇ ವೇಳೆ ಅಷ್ಟೂ ಹಣವನ್ನು ಖಾಲಿ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ. ಇವರ ಈ ಮನೋಭಾವಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಇದನ್ನೂ ಓದಿ:

Viral Video : ಆಹಾರ ಹುಡುಕುತ್ತಾ ಬಂದ ಆನೆ ಗೋಡೆಯಿಂದ ಮನೆಯೊಳಗೆ ನುಗಿತ್ತು!

Viral Video: ಸೀರೆಯುಟ್ಟು ಸ್ಟೈಲಾಗಿ ಸೊಂಟ ಬಳುಕಿಸುತ್ತಿರುವ ಮಹಿಳೆ ನೋಡಿ ನೆಟ್ಟಿಗರು ಫಿದಾ!

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ