AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಧಾರವಾಡ ಪೇಡಾ; ಮುತ್ತಿನಂತೆ, ಒಂದು ಇನ್ನೊಂದು ಮತ್ತೊಂದಕ್ಕಾಗಿ ಹಾತೊರೆಯುತ್ತೀರಿ

Peda : 'ಬಂಗಾರವರ್ಣದ ಹಾಳೆಗಳಲ್ಲಿ ಒಂದೊಂದು ಪೇಡಾಗಳನ್ನೂ ಸುತ್ತಿಟ್ಟರೆ ಆಮದು ಮಾಡಿಕೊಂಡ ಚಾಕೋಲೇಟುಗಳ ಮೌಲ್ಯವನ್ನೇ ಈ ಪೇಡಾ ಕೂಡ ಪಡೆಯಬಹುದಲ್ಲವೆ?' ಎಂದಿದ್ದಾರೆ ನೆಟ್ಟಿಗರು. ನೀವೇನಂತೀರಿ?

Viral: ಧಾರವಾಡ ಪೇಡಾ; ಮುತ್ತಿನಂತೆ, ಒಂದು ಇನ್ನೊಂದು ಮತ್ತೊಂದಕ್ಕಾಗಿ ಹಾತೊರೆಯುತ್ತೀರಿ
ಧಾರವಾಡದ ಪೇಡಾ
ಶ್ರೀದೇವಿ ಕಳಸದ
|

Updated on:Jul 17, 2023 | 5:43 PM

Share

Dharwad : ‘ನಿನ್ನೆಯಷ್ಟೇ ಧಾರವಾಡದಿಂದ ಪೇಡಾ (Peda) ಬಾಕ್ಸ್ ತಲುಪಿತು. ಪೇಡಾಗಳು ಮಗುವಿನಂತೆ, ಬೆಣ್ಣೆಯಂತೆ ಅತ್ಯಂತ ಮೃದುವಾಗಿವೆ. ಕುತೂಹಲದಿಂದ ಅವುಗಳ ಗುಳಿಕೆನ್ನೆಯ ಮೇಲೆ ಬೆರಳಿಟ್ಟು ಎತ್ತಿಕೊಂಡೆ. ಖೋವಾ ಮತ್ತು ಸಕ್ಕರೆಯ ಮಿಶ್ರಣ ಮಂದಉರಿಯಲ್ಲಿ ತಾಸುಗಟ್ಟಲೆ ಹದವಾಗಿ ಬೆಂದು ಹೊಮ್ಮಿದ್ದೇ ಈ ಪೇಡಾ, ಟಾಫಿಯಂತೆ ಕಂದುಬಣ್ಣದಿಂದ ಕೂಡಿವೆ. ಧಾರವಾಡ ಪೇಡಾ ಎಂದರೆ ಮುತ್ತು, ನಿಮ್ಮ ತುಟಿಗಳ ಮೇಲೆ ಅದು ಸುಳಿದಾಡುತ್ತಲೇ ಇರುತ್ತದೆ, ಒಂದು ಇನ್ನೊಂದು, ಮತ್ತೊಂದಕ್ಕಾಗಿ ಹಾತೊರೆಯುವಂತೆ ಮಾಡುತ್ತದೆ.’

ಲೇಖಕಿ, ನಟಿ ತಾರಾ ದೇಶಪಾಂಡೆ ಇದನ್ನು ಟ್ವೀಟ್ ಮಾಡಿದ್ದಾರೆ. ಅನೇಕರು ಪೇಡಾ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಧಾರವಾಡದ ಪೇಡಾಗಳನ್ನು ಬಂಗಾರವರ್ಣದ ಹಾಳೆಗಳಲ್ಲಿ ಒಂದೊಂದನ್ನೂ ಸುತ್ತಿಟ್ಟರೆ ಆಮದಾದ ಚಾಕೋಲೇಟ್​ಗಳಂತೆ ಇವೂ ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತವೆ ಎಂದಿದ್ಧಾರೆ ಒಬ್ಬರು. ಅತ್ಯಂತ ಮಧುರವಾದ ಸಿಹಿತಿಂಡಿ ಇದು, ಒಂದು ತಿಂದರೆ ಸಾಕಾಗುವುದಿಲ್ಲ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಮೊಟ್ಟೆಯ ತಾಜಾತನವನ್ನು ಪರೀಕ್ಷಿಸುವುದು ಹೇಗೆ?

ಪೇಡಾದ ಹೊರತಾಗಿ ಧಾರವಾಡವು ಪ್ರಸಿದ್ಧ ಕವಿ ದ.ರಾ.ಬೇಂದ್ರೆಯವರನ್ನು ನಾಡಿಗೆ ಪರಿಚಯಿಸಿದೆ ಎಂದಿದ್ದಾರೆ ಇನ್ನೂ ಒಬ್ಬರು. ಠಾಕೂರ್​ ಮತ್ತು ಮಿಶ್ರಾ ಪೇಡಾಗಳು ನನ್ನ ಸ್ಮೃತಿಪಟಲದಲ್ಲಿ ತಮ್ಮ ರುಚಿಯನ್ನು ಹಾಗೇ ಉಳಿಸಿವೆ ಎಂದು ಮಗದೊಬ್ಬರು. ತಾರಾ ಪೇಡಾದ ತಯಾರಿಕೆ, ಇತಿಹಾಸದ ಬಗ್ಗೆ ಮಾಹಿತಿಯನ್ನು ಹಂಚಿಕೊಟ್ಟಿದ್ದಕ್ಕಾಗಿ ಅನೇಕರು ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 5:38 pm, Mon, 17 July 23

ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ