AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಾಪ್​ ಪ್ಲೀಸ್​! ದೀಪಾವಳಿಗೆ ಮನೆಗೆ ಹೋಗಬೇಕು ಬೇಗ ಬಾಗಿಲು ತೆರೆಯಣ್ಣೋ

Elephant : ಬೇಗ ಬಾಗಿಲು ತೆರೆಯಬಾರದೇ ಎಂದು ಆನೆ. ಈ ಆನೆ ಬಸ್ಸನ್ನೇ ಎತ್ತಿ ಹಾಕಿದರೆ ಎಂದು ಪ್ರಯಾಣಿಕರು, ಈ ಆನೆಗೂ, ಪ್ರಯಾಣಿಕರಿಗೂ ತೊಂದರೆಯಾಗದಂತೆ ಚಲಿಸಬೇಕು ಎಂದು ಡ್ರೈವರ್. ಕೊನೆಗೆ ಏನಾಯಿತು?

ಡ್ರಾಪ್​ ಪ್ಲೀಸ್​! ದೀಪಾವಳಿಗೆ ಮನೆಗೆ ಹೋಗಬೇಕು ಬೇಗ ಬಾಗಿಲು ತೆರೆಯಣ್ಣೋ
Elephant tries to enter a moving bus, watch how driver handles the situation
TV9 Web
| Edited By: ಶ್ರೀದೇವಿ ಕಳಸದ|

Updated on:Oct 26, 2022 | 5:07 PM

Share

Viral Video : ಸಾಮಾಜಿಕ ಜಾಲತಾಣಗಳಲ್ಲಿರುವ ಪ್ರಾಣಿಗಳ ವಿಡಿಯೋ ನೋಡುತ್ತಿದ್ದರೆ ಎಂಥ ಒತ್ತಡವೂ ಜರ್ರನೇ ಇಳಿದು ಹೋಗುತ್ತದೆ. ಅವುಗಳ ನಡೆ, ಹಾವಭಾವವನ್ನು ನೋಡಿದ ಯಾರಿಗೂ ಮುದ್ದು ಉಕ್ಕಿಬರುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಆನೆಯ ದಾರಿಯಲ್ಲಿ ಬಸ್ಸೊಂದು ಬರುತ್ತಿದೆ. ಅದನ್ನು ತಡೆದು ನಿಲ್ಲಿಸುವ ಆನೆ ಬಸ್ಸಿನ ಬಾಗಿಲುಗಳನ್ನು ತೆರೆಯಲು ಪ್ರಯತ್ನಿಸುತ್ತದೆ. ಮುಂದೇನಾಗುತ್ತದೆ?

ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ‘ದೀಪಾವಳಿ ಸಮಯ ನೋಡಿ. ಎಲ್ಲರಿಗೂ ಅವರವರ ಮನೆ ತಲುಪುವ ಅವಸರವಿರುತ್ತದೆ’ ಎಂದು ಈ ವಿಡಿಯೋಗೆ ಒಕ್ಕಣೆ ಬರೆದಿದ್ದಾರೆ. ಆದರೆ ಡ್ರೈವರಣ್ಣನಿಗೆ ಅಷ್ಟೊಂದು ಪ್ರಯಾಣಿಕರ ಚಿಂತೆ! ಆನೆಯನ್ನು ಸಿಟ್ಟಿಗೆಬ್ಬಿಸದೆ ಉಪಾಯದಿಂದ ಅಲ್ಲಿಂದ ದಾಟಿಕೊಂಡಿದ್ದಾನೆ. ಈಗಾಗಲೇ ಈ ವಿಡಿಯೋ ಅನ್ನು 1.4 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ಧಾರೆ. 1,500ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.

ಮೊದಲು ಬಸ್​ ನಿಲ್ಲಿಸಲು ಚಾಲಕನಿಗೆ ಮನವಿ ಮಾಡಿ ನಂತರ ಬಸ್ಸಿನೊಳಗೆ ಹತ್ತಬೇಕು ಎಂದಕೊಂಡಹಾಗಿದೆ ಈ ಆನೆ ಎಂದಿದ್ದಾರೆ ಒಬ್ಬರು. ಎಷ್ಟು ಕುತೂಹಲದಿಂದ ಈ ಆನೆ ಬಸ್ಸಿನಲ್ಲಿ ಚಲಿಸಲು ಕಾಯುತ್ತಿದೆಯಲ್ಲವಾ ಎಂದಿದ್ದಾರೆ ಇನ್ನೂ ಒಬ್ಬರು. ಈ ಬಸ್​ ತುಂಬಿತುಳುಕುತ್ತಿದೆ. ಹಿಂದೆ ಬರುತ್ತಿರುವ ಬಸ್ ಖಾಲಿ ಇದೆ, ಅದರಲ್ಲಿ ನೀ ಕುಳಿತುಕೊಂಡು ಹೋಬಹುದು ಎಂದು ತಮಾಷೆ ಮಾಡಿದ್ದಾರೆ ಮಗದೊಬ್ಬರು.

ನಿಮ್ಮನ್ನು ಹೀಗೆ ಈ ಆನೆ ಅಡ್ಡಗಟ್ಟಿದರೆ ಏನು ಮಾಡುತ್ತೀರಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:02 pm, Wed, 26 October 22

Follow Us
Web contact
Web contact

TV9 Kannada

Read More
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್