AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಾಪ್​ ಪ್ಲೀಸ್​! ದೀಪಾವಳಿಗೆ ಮನೆಗೆ ಹೋಗಬೇಕು ಬೇಗ ಬಾಗಿಲು ತೆರೆಯಣ್ಣೋ

Elephant : ಬೇಗ ಬಾಗಿಲು ತೆರೆಯಬಾರದೇ ಎಂದು ಆನೆ. ಈ ಆನೆ ಬಸ್ಸನ್ನೇ ಎತ್ತಿ ಹಾಕಿದರೆ ಎಂದು ಪ್ರಯಾಣಿಕರು, ಈ ಆನೆಗೂ, ಪ್ರಯಾಣಿಕರಿಗೂ ತೊಂದರೆಯಾಗದಂತೆ ಚಲಿಸಬೇಕು ಎಂದು ಡ್ರೈವರ್. ಕೊನೆಗೆ ಏನಾಯಿತು?

ಡ್ರಾಪ್​ ಪ್ಲೀಸ್​! ದೀಪಾವಳಿಗೆ ಮನೆಗೆ ಹೋಗಬೇಕು ಬೇಗ ಬಾಗಿಲು ತೆರೆಯಣ್ಣೋ
Elephant tries to enter a moving bus, watch how driver handles the situation
TV9 Web
| Edited By: ಶ್ರೀದೇವಿ ಕಳಸದ|

Updated on:Oct 26, 2022 | 5:07 PM

Share

Viral Video : ಸಾಮಾಜಿಕ ಜಾಲತಾಣಗಳಲ್ಲಿರುವ ಪ್ರಾಣಿಗಳ ವಿಡಿಯೋ ನೋಡುತ್ತಿದ್ದರೆ ಎಂಥ ಒತ್ತಡವೂ ಜರ್ರನೇ ಇಳಿದು ಹೋಗುತ್ತದೆ. ಅವುಗಳ ನಡೆ, ಹಾವಭಾವವನ್ನು ನೋಡಿದ ಯಾರಿಗೂ ಮುದ್ದು ಉಕ್ಕಿಬರುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಆನೆಯ ದಾರಿಯಲ್ಲಿ ಬಸ್ಸೊಂದು ಬರುತ್ತಿದೆ. ಅದನ್ನು ತಡೆದು ನಿಲ್ಲಿಸುವ ಆನೆ ಬಸ್ಸಿನ ಬಾಗಿಲುಗಳನ್ನು ತೆರೆಯಲು ಪ್ರಯತ್ನಿಸುತ್ತದೆ. ಮುಂದೇನಾಗುತ್ತದೆ?

ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ‘ದೀಪಾವಳಿ ಸಮಯ ನೋಡಿ. ಎಲ್ಲರಿಗೂ ಅವರವರ ಮನೆ ತಲುಪುವ ಅವಸರವಿರುತ್ತದೆ’ ಎಂದು ಈ ವಿಡಿಯೋಗೆ ಒಕ್ಕಣೆ ಬರೆದಿದ್ದಾರೆ. ಆದರೆ ಡ್ರೈವರಣ್ಣನಿಗೆ ಅಷ್ಟೊಂದು ಪ್ರಯಾಣಿಕರ ಚಿಂತೆ! ಆನೆಯನ್ನು ಸಿಟ್ಟಿಗೆಬ್ಬಿಸದೆ ಉಪಾಯದಿಂದ ಅಲ್ಲಿಂದ ದಾಟಿಕೊಂಡಿದ್ದಾನೆ. ಈಗಾಗಲೇ ಈ ವಿಡಿಯೋ ಅನ್ನು 1.4 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ಧಾರೆ. 1,500ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.

ಮೊದಲು ಬಸ್​ ನಿಲ್ಲಿಸಲು ಚಾಲಕನಿಗೆ ಮನವಿ ಮಾಡಿ ನಂತರ ಬಸ್ಸಿನೊಳಗೆ ಹತ್ತಬೇಕು ಎಂದಕೊಂಡಹಾಗಿದೆ ಈ ಆನೆ ಎಂದಿದ್ದಾರೆ ಒಬ್ಬರು. ಎಷ್ಟು ಕುತೂಹಲದಿಂದ ಈ ಆನೆ ಬಸ್ಸಿನಲ್ಲಿ ಚಲಿಸಲು ಕಾಯುತ್ತಿದೆಯಲ್ಲವಾ ಎಂದಿದ್ದಾರೆ ಇನ್ನೂ ಒಬ್ಬರು. ಈ ಬಸ್​ ತುಂಬಿತುಳುಕುತ್ತಿದೆ. ಹಿಂದೆ ಬರುತ್ತಿರುವ ಬಸ್ ಖಾಲಿ ಇದೆ, ಅದರಲ್ಲಿ ನೀ ಕುಳಿತುಕೊಂಡು ಹೋಬಹುದು ಎಂದು ತಮಾಷೆ ಮಾಡಿದ್ದಾರೆ ಮಗದೊಬ್ಬರು.

ನಿಮ್ಮನ್ನು ಹೀಗೆ ಈ ಆನೆ ಅಡ್ಡಗಟ್ಟಿದರೆ ಏನು ಮಾಡುತ್ತೀರಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:02 pm, Wed, 26 October 22

Follow Us
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ