AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 6 ಸೆಕೆಂಡ್​ಗಳಲ್ಲಿ ಸೋಡಾ ಕುಡಿದು ಮತ್ತೊಂದು ವಿಶ್ವದಾಖಲೆ ಬರೆದ ವೃತ್ತಿಪರ ಭಕ್ಷಕ!

ಯೂಟ್ಯೂಬರ್ ಎರಿಕ್ 'ಬ್ಯಾಡ್‌ಲ್ಯಾಂಡ್ಸ್' ಬುಕರ್ ಅವರು ಕೇವಲ 6.80 ಸೆಕೆಂಡುಗಳಲ್ಲಿ 1 ಲೀಟರ್ ಮೌಂಟೇನ್ ಡ್ಯೂ ಸೋಡಾವನ್ನು ಸೇವಿಸಿ ಮತ್ತೊಂದು ವಿಶ್ವ ದಾಖಲೆ ಬರೆದಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

ಕೇವಲ 6 ಸೆಕೆಂಡ್​ಗಳಲ್ಲಿ ಸೋಡಾ ಕುಡಿದು ಮತ್ತೊಂದು ವಿಶ್ವದಾಖಲೆ ಬರೆದ ವೃತ್ತಿಪರ ಭಕ್ಷಕ!
ಎರಿಕ್ ಬುಕರ್
Follow us
TV9 Web
| Updated By: Rakesh Nayak Manchi

Updated on:Jun 26, 2022 | 3:45 PM

ವಿಶ್ವದಲ್ಲಿ ಗಿನ್ನಿಸ್ ರೆಕಾರ್ಡ್ ಬರೆಯುವ ವ್ಯಕ್ತಿಗಳ ಸಂಖ್ಯೆ ಇನ್ನೂ ಕಡಿಮೆಯಾಗಿಲ್ಲ. ಆಗೊಂದು ಈಗೊಂದು ವಿಶ್ವ ದಾಖಲೆ ಬರೆಯಲಾಗುತ್ತದೆ. ಇದೀಗ ಯೂಟ್ಯೂಬರ್ ಎರಿಕ್ ‘ಬ್ಯಾಡ್‌ಲ್ಯಾಂಡ್ಸ್’ ಬುಕರ್ ಅವರು ತಮ್ಮ ಹೆಸರಿನಲ್ಲಿ ಮತ್ತೊಂದು ವಿಶ್ವದಾಖಲೆ ಬರೆದಿದ್ದಾರೆ. 1 ಲೀಟರ್ ಮೌಂಟೇನ್ ಡ್ಯೂ ಸೋಡಾವನ್ನು ಕೇವಲ 6.80 ಸೆಕೆಂಡ್​ಗಳಲ್ಲಿ ಕುಡಿಯುವ ಮೂಲಕ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಇದನ್ನು ಓದಿ: Viral Video: ಇದು ಇದು ಆಕ್ಚುಲಿ ಚೆನ್ನಾಗಿರೋದು! ಪ್ರೋತ್ಸಾಹ ಅಂದ್ರೆ ಹೀಗಿರಬೇಕು

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಬ್ಯಾಡ್‌ಲ್ಯಾಂಡ್ಸ್ ಅವರು 1 ಲೀಟರ್ ಮೌಂಟೇನ್ ಡ್ಯೂ ಸೋಡಾವನ್ನು ಅಳತೆ ಮಾಡುವ ಕಪ್‌ನಲ್ಲಿ ಹಾಕಿ ಕೇವಲ 6.80 ಸೆಕೆಂಡುಗಳಲ್ಲಿ ಕುಡಿದಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ಬ್ಯಾಡ್​ಲ್ಯಾಂಡ್ಸ್​, “ಐ ಫೀಲ್ ಗ್ರೇಟ್, ಇದು ನಿಮಗೆ ಗೊತ್ತಿಲ್ಲ, ನಾನು ಇದನ್ನು ಒಂಬತ್ತು ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಮುಗಿಸುತ್ತೇನೆ ಎಂದು ಹೇಳಿದ್ದಾರೆ.

ಇದರ ನಂತರ 1 ಲೀಟರ್ ಟೊಮ್ಯಾಟೋ ಸಾಸ್ ಅನ್ನು ಸ್ಟ್ರಾ ಮೂಲಕ 1 ನಿಮಿಷ 18 ಸೆಕಂಡ್​ಗಳಲ್ಲಿ ಸೇವಿಸಿ ಮತ್ತೊಂದು ದಾಖಲೆ ಬರೆದಿದ್ದಾರೆ. ಮೇಜರ್ ಲೀಗ್ ಈಟಿಂಗ್‌ನಲ್ಲಿ ಪ್ರಸ್ತುತ 23ನೇ ಸ್ಥಾನದಲ್ಲಿರುವ ವೃತ್ತಿಪರ ಭಕ್ಷಕ ಬುಕರ್, ಈ ಹಿಂದೆ 18.45 ಸೆಕೆಂಡುಗಳಲ್ಲಿ ಎರಡು ಲೀಟರ್ ಸೋಡಾವನ್ನು ಸೇವಿಸಿದ ತ್ವರಿತ ಸಮಯಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದ್ದರು.

ಇದನ್ನೂ ಓದಿ: Viral Video: ಮಳೆಗಾಳದಲ್ಲಿ ಹೇಗೆ ನಡೆದುಕೊಂಡು ಹೋಗಬೇಕು ಗೊತ್ತಾ? ಈ ವಿಡಿಯೋ ನೋಡಿ

ಜೂನ್ 24 ರಂದು ಪೋಸ್ಟ್ ಮಾಡಲಾದ ಬುಕರ್ ಅವರ ಈ ವಿಡಿಯೋ ಈವರೆಗೆ 42,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ವೀಕ್ಷಿಸಿದ ನೆಟ್ಟಿಗರು ಕಾಮೆಂಟ್ ಬಾಕ್ಸ್​ನಲ್ಲಿ ಪ್ರತಿಕ್ರಿಯಿಸಿದ್ದು, “ಈ ವ್ಯಕ್ತಿಯಿಂದ ಎರಡನೇ ವಿಶ್ವ ದಾಖಲೆ, ಎಂತಹ ದಂತಕಥೆ!” ಎಂದು ಒಬ್ಬರು ಹೇಕೊಂಡಿದ್ದಾರೆ. ಮತ್ತೊಬ್ಬ ನೆಟ್ಟಿಗ, “ಅವನು ಖಂಡಿತವಾಗಿಯೂ ಈ ದಾಖಲೆಯನ್ನು ಮುರಿಯಲು ಪ್ರಯತ್ನಿಸುತ್ತಾನೆ ಎಂದು ನನ್ನ ಅಂತಃಪ್ರಜ್ಞೆಯು ಹೇಳುತ್ತದೆ” ಎಂದು ಹೇಳಿದ್ದಾರೆ.

Published On - 3:45 pm, Sun, 26 June 22

ಜಮೀರ್ ಜೊತೆ ಸಿಎಂ ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಲಿ: ಅಶೋಕ
ಜಮೀರ್ ಜೊತೆ ಸಿಎಂ ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಲಿ: ಅಶೋಕ
ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ
ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!
ಬಿಜೆಪಿ ಮತ್ತು ನಾನು ಪರಸ್ಪರ ಅವಲಂಬಿತರಾಗಿದ್ದೇವೆ: ಬಸನಗೌಡ ಯತ್ನಾಳ್
ಬಿಜೆಪಿ ಮತ್ತು ನಾನು ಪರಸ್ಪರ ಅವಲಂಬಿತರಾಗಿದ್ದೇವೆ: ಬಸನಗೌಡ ಯತ್ನಾಳ್
ರಾಷ್ಟ್ರಪತಿ ಭೇಟಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೇಳಿದ್ದೇನೆ: ಸಿಎಂ
ರಾಷ್ಟ್ರಪತಿ ಭೇಟಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೇಳಿದ್ದೇನೆ: ಸಿಎಂ
ರಾಜ್ಯ ರಾಜ್ಯಕಾರಣದಲ್ಲಿ ಯಡಿಯೂರಪ್ಪ ಸಕ್ರಿಯರಾಗುವ ಹಿಂದೆ ಕಾರಣವಿದೆಯೇ?
ರಾಜ್ಯ ರಾಜ್ಯಕಾರಣದಲ್ಲಿ ಯಡಿಯೂರಪ್ಪ ಸಕ್ರಿಯರಾಗುವ ಹಿಂದೆ ಕಾರಣವಿದೆಯೇ?