AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Brain Teaser: ವಾರಾಂತ್ಯದ ಮಂಕನ್ನು ಓಡಿಸಲು ಇಲ್ಲಿದೆ ಮೋಜಿನ ಗಣಿತ

Math Problem : ನಿಮ್ಮ ಮೆದುಳನ್ನು ಚುರುಕುಗೊಳಿಸುವ ಮತ್ತೊಂದು ಬ್ರೇನ್​ ಟೀಸರ್​ ಇಲ್ಲಿದೆ. ಕೆಲವರು ಇದಕ್ಕೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಇನ್ನೂ ಕೆಲವರು ತಮಾಷೆ ಮಾಡಿದ್ದಾರೆ. ಇದನ್ನು ಓದಿ ನೋಡಿ, ನಿಮಗೇನು ಎನ್ನಿಸುತ್ತದೆ ತಿಳಿಸಿ. ಚುರುಕಾದ ನೀವು ಖಂಡಿತ ಇದಕ್ಕೆ ಸರಿಯಾದ ಉತ್ತರ ಕಂಡುಕೊಳ್ಳುತ್ತೀರಿ ಎಂಬ ನಂಬಿಕೆ ನಮಗಿದೆ. ಏನಂತೀರಿ?

Viral Brain Teaser: ವಾರಾಂತ್ಯದ ಮಂಕನ್ನು ಓಡಿಸಲು ಇಲ್ಲಿದೆ ಮೋಜಿನ ಗಣಿತ
ಇಲ್ಲಿದೆ ಪ್ರಶ್ನೆ
Follow us
ಶ್ರೀದೇವಿ ಕಳಸದ
|

Updated on:Nov 11, 2023 | 10:23 AM

Math Puzzle: ವಾರಾಂತ್ಯ ಮೆಲ್ಲನೇ ಆರಂಭವಾಗಿದೆ. ಮುಂದಿನ ಕೆಲಸಗಳಿಗೆ ಹುರುಪು ತುಂಬಲು ನಿಮ್ಮ ಮೆದುಳಿಗೆ ಚೂರು ಗುದ್ದು (Brain Teaser) ಕೊಟ್ಟರೆ ಹೇಗೆ? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಮೋಜಿನ ಗಣಿತ ಇಲ್ಲಿದೆ. ನೆಟ್ಟಿಗರೂ ಈ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಚುರುಕಾಗಿರುವ ನೀವು ಇದಕ್ಕೆ ಉತ್ತರ ಕಂಡುಕೊಳ್ಳುತ್ತೀರಿ ಎನ್ನುವ ಭರವಸೆ ಇದೆ. ಮಿಶೆಲ್​ ಸ್ಟೋಹಿರೋ ಎಂಬುವ X ಖಾತೆದಾರರು ಈ ಪೋಸ್ಟ್​ ಹಂಚಿಕೊಂಡಿದ್ದಾರೆ. ಪ್ರಶ್ನೆ ಇಲ್ಲಿದೆ; ಸ್ಯಾಮ್ ಮತ್ತು ಜೆಸ್ಸಿ ಪ್ರತಿ ಒಂದು ಗಂಟೆಗೆ 5 ಕಾರುಗಳನ್ನು ತೊಳೆಯುತ್ತಾರೆ. ದಿನಕ್ಕೆ 7 ಗಂಟೆಗಳ ಕಾಲ ಇವರು ಕೆಲಸ ಮಾಡುತ್ತಾರೆ. ಹಾಗಾದರೆ ಸ್ಯಾಮ್ ಮತ್ತು ಜೆಸ್ಸಿ 2 ದಿನಗಳಲ್ಲಿ ಒಟ್ಟು ಎಷ್ಟು ಕಾರುಗಳನ್ನು ತೊಳೆಯುತ್ತಾರೆ?

ಇದನ್ನೂ ಓದಿ : Viral Video: ದೀಪಾವಳಿ ಬೋನಸ್​; ತಮಿಳುನಾಡಿನ ಟೀ ಎಸ್ಟೇಟ್​ ಉದ್ಯೋಗಿಗಳಿಗೆ ರಾಯಲ್ ಎನ್​ಫೀಲ್ಡ್​ 

ನವೆಂಬರ್ 8ರಂದು ಹಂಚಿಕೊಂಡಿ ಈ ಪೋಸ್ಟ್​ ಅನ್ನು ಈತನಕ 93,000 ಜನರು ನೋಡಿದ್ದಾರೆ. 600ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದು ನೂರಾರು ಜನರು ಪ್ರತಿಕ್ರಿಯಿಸಿ ಈ ಒಗಟನ್ನು ಬಿಡಿಸಲು ನೋಡಿದ್ದಾರೆ. ಅನೇಕರು ತಮಾಷೆ ಮಾಡಿದ್ದಾರೆ.

ಇಲ್ಲಿದೆ ಆ ಒಗಟು

ಗಣಿತದ ಈ ಒಗಟನ್ನು ಇಂಗ್ಲಿಷ್ ಶಿಕ್ಷಕರಿಗೆ ಪರಿಶೀಲಿಸಲು ಹೇಳಬೇಕಿದೆ ಎಂದು ತಮಾಷೆ ಮಾಡಿದ್ದಾರೆ ಒಬ್ಬರು. ಪ್ರೈಮರಿ ಸ್ಕೂಲಿನಲ್ಲಿ ಗಣಿತ ಬಿಡಿಸುವಾಗ ಕಣ್ಣೀರು ಹಾಕುತ್ತಿದ್ದುದು ಈಗ ನೆನಪಾಗುತ್ತಿದೆ ಎಂದಿದ್ದಾರೆ ಇನ್ನೊಬ್ಬರು. 140 ಅಥವಾ ಅದಕ್ಕಿಂತ ಕಡಿಮೆ ಎಂದಿದ್ದಾರೆ ಮತ್ತೊಬ್ಬರು. ಅಯ್ಯೋ ಈ ನಂಬರ್​ಗಳನ್ನು ನೋಡಿದರೆ ನನಗೆ ಹುಚ್ಚು ಹಿಡಿಯುತ್ತದೆ ಎಂದಿದ್ದಾರೆ ಮಗದೊಬ್ಬರು.

ನಿಮಗೆ ಉತ್ತರ ಹೊಳೆಯಿತೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:20 am, Sat, 11 November 23

6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ