Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಶಿವಾಜಿನಗರದ ಡಂಪ್​ಯಾರ್ಡ್​ನಿಂದ ಸೆಲ್ವಮ್ಮನ ತಳ್ಳುಗಾಡಿ ಮರಳುವುದೇ?

Street Vendor : ಈವತ್ತು ಸೋಮವಾರ, ಬಿಬಿಎಂಪಿ ತಾನು ನೀಡಿದ ಭರವಸೆಯ ಪ್ರಕಾರ ಆಕೆಯ ಸೋಲಾರ್​ ವ್ಯವಸ್ಥೆಯುಳ್ಳ ತಳ್ಳುಗಾಡಿಯನ್ನು ಆಕೆಗೆ ಮರಳಿಸಬೇಕಿತ್ತು. ಆದರೆ...

Viral: ಶಿವಾಜಿನಗರದ ಡಂಪ್​ಯಾರ್ಡ್​ನಿಂದ ಸೆಲ್ವಮ್ಮನ ತಳ್ಳುಗಾಡಿ ಮರಳುವುದೇ?
ತನ್ನ ತಳ್ಳುಗಾಡಿಗಾಗಿ ಕಾಯುತ್ತ ಕುಳಿತಿರುವ ಸೆಲ್ವಮ್ಮ
Follow us
ಶ್ರೀದೇವಿ ಕಳಸದ
|

Updated on:Jul 24, 2023 | 6:07 PM

Bengaluru: ಕಳೆದ ಮೂವತ್ತು ವರ್ಷಗಳಿಂದ ಕಬ್ಬನ್​ ಪಾರ್ಕ್​​ನ (Cubban Park) ಎಂಎಸ್​ ಬಿಲ್ಡಿಂಗ್​​​ನ ಬಳಿ ಇರುವ ಗೇಟಿನ ಬಳಿ ಜೋಳ ಮಾರಿಕೊಂಡು ಜೀವನ ಸಾಗಿಸುತ್ತಿದ್ದರು ಈ ವಯೋವೃದ್ಧೆ ಸೆಲ್ವಮ್ಮ. ಆದರೆ ಶನಿವಾರದಂದು ಅಕ್ಕಪಕ್ಕದ ಚಹಾ ಮತ್ತು ತಿಂಡಿತಿನಿಸು ಮಾರುವವರು ಈಕೆಯ ತಳ್ಳುಗಾಡಿಯನ್ನು ಎತ್ತಿ ಬಿಬಿಎಂಪಿ ಟ್ರಕ್​ನಲ್ಲಿ ಸಾಗಿಸಿದ್ದಾರೆ. ಎರಡು ದಿನಗಳಿಂದ ಉಪವಾಸವಿರುವ ಈ ಅಜ್ಜಿ ಇದೇ ಜಾಗದಲ್ಲಿ ತನ್ನ ತಳ್ಳುಗಾಡಿಗಾಗಿ ಕಾಯ್ದು ಕುಳಿತಿದ್ದಾಳೆ.

ಜೋಳವನ್ನು ಸುಡಲು ಈಕೆ ಸೌರಶಕ್ತಿಯನ್ನು ಬಳಸುತ್ತಿದ್ದಳು ಎನ್ನುವುದನ್ನು ಮೇಲಿನ ಚಿತ್ರದಿಂದ ತಿಳಿದುಕೊಳ್ಳಬಹುದು. 30 ವರ್ಷಗಳಿಂದಲೂ ಇದೇ ಜಾಗದಲ್ಲಿ ಕುಳಿತು ತನ್ನಷ್ಟಕ್ಕೆ ತಾನು ದುಡಿದು ತಿನ್ನುತ್ತಿದ್ದ ಈಕೆ ಪಾರ್ಕಿಗೆ ಬರುವ ಜನರಿಗೂ ಪರಿಚಿತಳು. ಆದರೆ ಶನಿವಾರದಂದು ಇದ್ದಕ್ಕಿದ್ದ ಹಾಗೆ ಈಕೆಯ ಜೀವನೋಪಾಯಕ್ಕೆ ಸಂಚಕಾರ ಒದಗಿದೆ. ಪ್ರಿಯಾ ಚೆಟ್ಟಿ ರಾಜಗೋಪಾಲ್​ ಎನ್ನುವವರು ಈಕೆಗೆ ಒದಗಿದ ಸಂದರ್ಭವನ್ನು ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ. ಕಾಳಜಿ ವಹಿಸಿ ಬಿಬಿಎಂಪಿಗೆ ವಿಚಾರಿಸಿದ್ದಾರೆ.

ಶಿವಾಜಿನಗರದ ಡಂಪ್​ ಯಾರ್ಡ್​ ಈಗ ಮುಚ್ಚಿರುವುದರಿಂದ ಸೋಮವಾರದವರೆಗೆ ಆಕೆ ಕಾಯಬೇಕಾಗುತ್ತದೆ ಎಂದು ಬಿಬಿಎಂಪಿ ಸಿಬ್ಬಂದಿ ತಿಳಿಸಿದೆ. ಸದ್ಯ ಪ್ರಿಯಾ, ಮೀನು ಮತ್ತು ಲಲಿತಾ ಎಂಬ ಟ್ವೀಟಿಗರು ಸೆಲ್ವಮ್ಮನಿಗೆ ಸಹಾಯ ಮಾಡಿ ಮತ್ತೊಂದು ತಳ್ಳುಗಾಡಿಯ ವ್ಯವಸ್ಥೆ ಮಾಡಿದ್ದಾರೆ. ಆದರೆ ಸೋಲಾರ್​ ವ್ಯವಸ್ಥೆಯಿದ್ದ ಆ ಗಾಡಿಗಾಗಿ ಆಕೆ ಕಾಯುತ್ತಿದ್ದಾರೆ. ಈ ವಯಸ್ಸಿನಲ್ಲಿ, ಇಂಥ ಮಳೆಯಲ್ಲಿ ಆಕೆ ಕಟ್ಟಿಗೆಯಿಂದ ಜೋಳವನ್ನು ಸುಟ್ಟು ಮಾಡುವುದು ಸುಲಭವೇ?

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​​ಗಾಗಿ ಕ್ಲಿಕ್ ಮಾಡಿ

Published On - 5:19 pm, Mon, 24 July 23

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!