AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಶಿವಾಜಿನಗರದ ಡಂಪ್​ಯಾರ್ಡ್​ನಿಂದ ಸೆಲ್ವಮ್ಮನ ತಳ್ಳುಗಾಡಿ ಮರಳುವುದೇ?

Street Vendor : ಈವತ್ತು ಸೋಮವಾರ, ಬಿಬಿಎಂಪಿ ತಾನು ನೀಡಿದ ಭರವಸೆಯ ಪ್ರಕಾರ ಆಕೆಯ ಸೋಲಾರ್​ ವ್ಯವಸ್ಥೆಯುಳ್ಳ ತಳ್ಳುಗಾಡಿಯನ್ನು ಆಕೆಗೆ ಮರಳಿಸಬೇಕಿತ್ತು. ಆದರೆ...

Viral: ಶಿವಾಜಿನಗರದ ಡಂಪ್​ಯಾರ್ಡ್​ನಿಂದ ಸೆಲ್ವಮ್ಮನ ತಳ್ಳುಗಾಡಿ ಮರಳುವುದೇ?
ತನ್ನ ತಳ್ಳುಗಾಡಿಗಾಗಿ ಕಾಯುತ್ತ ಕುಳಿತಿರುವ ಸೆಲ್ವಮ್ಮ
ಶ್ರೀದೇವಿ ಕಳಸದ
|

Updated on:Jul 24, 2023 | 6:07 PM

Share

Bengaluru: ಕಳೆದ ಮೂವತ್ತು ವರ್ಷಗಳಿಂದ ಕಬ್ಬನ್​ ಪಾರ್ಕ್​​ನ (Cubban Park) ಎಂಎಸ್​ ಬಿಲ್ಡಿಂಗ್​​​ನ ಬಳಿ ಇರುವ ಗೇಟಿನ ಬಳಿ ಜೋಳ ಮಾರಿಕೊಂಡು ಜೀವನ ಸಾಗಿಸುತ್ತಿದ್ದರು ಈ ವಯೋವೃದ್ಧೆ ಸೆಲ್ವಮ್ಮ. ಆದರೆ ಶನಿವಾರದಂದು ಅಕ್ಕಪಕ್ಕದ ಚಹಾ ಮತ್ತು ತಿಂಡಿತಿನಿಸು ಮಾರುವವರು ಈಕೆಯ ತಳ್ಳುಗಾಡಿಯನ್ನು ಎತ್ತಿ ಬಿಬಿಎಂಪಿ ಟ್ರಕ್​ನಲ್ಲಿ ಸಾಗಿಸಿದ್ದಾರೆ. ಎರಡು ದಿನಗಳಿಂದ ಉಪವಾಸವಿರುವ ಈ ಅಜ್ಜಿ ಇದೇ ಜಾಗದಲ್ಲಿ ತನ್ನ ತಳ್ಳುಗಾಡಿಗಾಗಿ ಕಾಯ್ದು ಕುಳಿತಿದ್ದಾಳೆ.

ಜೋಳವನ್ನು ಸುಡಲು ಈಕೆ ಸೌರಶಕ್ತಿಯನ್ನು ಬಳಸುತ್ತಿದ್ದಳು ಎನ್ನುವುದನ್ನು ಮೇಲಿನ ಚಿತ್ರದಿಂದ ತಿಳಿದುಕೊಳ್ಳಬಹುದು. 30 ವರ್ಷಗಳಿಂದಲೂ ಇದೇ ಜಾಗದಲ್ಲಿ ಕುಳಿತು ತನ್ನಷ್ಟಕ್ಕೆ ತಾನು ದುಡಿದು ತಿನ್ನುತ್ತಿದ್ದ ಈಕೆ ಪಾರ್ಕಿಗೆ ಬರುವ ಜನರಿಗೂ ಪರಿಚಿತಳು. ಆದರೆ ಶನಿವಾರದಂದು ಇದ್ದಕ್ಕಿದ್ದ ಹಾಗೆ ಈಕೆಯ ಜೀವನೋಪಾಯಕ್ಕೆ ಸಂಚಕಾರ ಒದಗಿದೆ. ಪ್ರಿಯಾ ಚೆಟ್ಟಿ ರಾಜಗೋಪಾಲ್​ ಎನ್ನುವವರು ಈಕೆಗೆ ಒದಗಿದ ಸಂದರ್ಭವನ್ನು ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ. ಕಾಳಜಿ ವಹಿಸಿ ಬಿಬಿಎಂಪಿಗೆ ವಿಚಾರಿಸಿದ್ದಾರೆ.

ಶಿವಾಜಿನಗರದ ಡಂಪ್​ ಯಾರ್ಡ್​ ಈಗ ಮುಚ್ಚಿರುವುದರಿಂದ ಸೋಮವಾರದವರೆಗೆ ಆಕೆ ಕಾಯಬೇಕಾಗುತ್ತದೆ ಎಂದು ಬಿಬಿಎಂಪಿ ಸಿಬ್ಬಂದಿ ತಿಳಿಸಿದೆ. ಸದ್ಯ ಪ್ರಿಯಾ, ಮೀನು ಮತ್ತು ಲಲಿತಾ ಎಂಬ ಟ್ವೀಟಿಗರು ಸೆಲ್ವಮ್ಮನಿಗೆ ಸಹಾಯ ಮಾಡಿ ಮತ್ತೊಂದು ತಳ್ಳುಗಾಡಿಯ ವ್ಯವಸ್ಥೆ ಮಾಡಿದ್ದಾರೆ. ಆದರೆ ಸೋಲಾರ್​ ವ್ಯವಸ್ಥೆಯಿದ್ದ ಆ ಗಾಡಿಗಾಗಿ ಆಕೆ ಕಾಯುತ್ತಿದ್ದಾರೆ. ಈ ವಯಸ್ಸಿನಲ್ಲಿ, ಇಂಥ ಮಳೆಯಲ್ಲಿ ಆಕೆ ಕಟ್ಟಿಗೆಯಿಂದ ಜೋಳವನ್ನು ಸುಟ್ಟು ಮಾಡುವುದು ಸುಲಭವೇ?

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​​ಗಾಗಿ ಕ್ಲಿಕ್ ಮಾಡಿ

Published On - 5:19 pm, Mon, 24 July 23

ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್
ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್
ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್
ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಆಳಂದ ಮತಗಳ್ಳತನ: ಚಾರ್ಜ್​ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ಆಳಂದ ಮತಗಳ್ಳತನ: ಚಾರ್ಜ್​ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ
ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?
ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?