Viral: ಶಿವಾಜಿನಗರದ ಡಂಪ್​ಯಾರ್ಡ್​ನಿಂದ ಸೆಲ್ವಮ್ಮನ ತಳ್ಳುಗಾಡಿ ಮರಳುವುದೇ?

Street Vendor : ಈವತ್ತು ಸೋಮವಾರ, ಬಿಬಿಎಂಪಿ ತಾನು ನೀಡಿದ ಭರವಸೆಯ ಪ್ರಕಾರ ಆಕೆಯ ಸೋಲಾರ್​ ವ್ಯವಸ್ಥೆಯುಳ್ಳ ತಳ್ಳುಗಾಡಿಯನ್ನು ಆಕೆಗೆ ಮರಳಿಸಬೇಕಿತ್ತು. ಆದರೆ...

Viral: ಶಿವಾಜಿನಗರದ ಡಂಪ್​ಯಾರ್ಡ್​ನಿಂದ ಸೆಲ್ವಮ್ಮನ ತಳ್ಳುಗಾಡಿ ಮರಳುವುದೇ?
ತನ್ನ ತಳ್ಳುಗಾಡಿಗಾಗಿ ಕಾಯುತ್ತ ಕುಳಿತಿರುವ ಸೆಲ್ವಮ್ಮ
Follow us
|

Updated on:Jul 24, 2023 | 6:07 PM

Bengaluru: ಕಳೆದ ಮೂವತ್ತು ವರ್ಷಗಳಿಂದ ಕಬ್ಬನ್​ ಪಾರ್ಕ್​​ನ (Cubban Park) ಎಂಎಸ್​ ಬಿಲ್ಡಿಂಗ್​​​ನ ಬಳಿ ಇರುವ ಗೇಟಿನ ಬಳಿ ಜೋಳ ಮಾರಿಕೊಂಡು ಜೀವನ ಸಾಗಿಸುತ್ತಿದ್ದರು ಈ ವಯೋವೃದ್ಧೆ ಸೆಲ್ವಮ್ಮ. ಆದರೆ ಶನಿವಾರದಂದು ಅಕ್ಕಪಕ್ಕದ ಚಹಾ ಮತ್ತು ತಿಂಡಿತಿನಿಸು ಮಾರುವವರು ಈಕೆಯ ತಳ್ಳುಗಾಡಿಯನ್ನು ಎತ್ತಿ ಬಿಬಿಎಂಪಿ ಟ್ರಕ್​ನಲ್ಲಿ ಸಾಗಿಸಿದ್ದಾರೆ. ಎರಡು ದಿನಗಳಿಂದ ಉಪವಾಸವಿರುವ ಈ ಅಜ್ಜಿ ಇದೇ ಜಾಗದಲ್ಲಿ ತನ್ನ ತಳ್ಳುಗಾಡಿಗಾಗಿ ಕಾಯ್ದು ಕುಳಿತಿದ್ದಾಳೆ.

ಜೋಳವನ್ನು ಸುಡಲು ಈಕೆ ಸೌರಶಕ್ತಿಯನ್ನು ಬಳಸುತ್ತಿದ್ದಳು ಎನ್ನುವುದನ್ನು ಮೇಲಿನ ಚಿತ್ರದಿಂದ ತಿಳಿದುಕೊಳ್ಳಬಹುದು. 30 ವರ್ಷಗಳಿಂದಲೂ ಇದೇ ಜಾಗದಲ್ಲಿ ಕುಳಿತು ತನ್ನಷ್ಟಕ್ಕೆ ತಾನು ದುಡಿದು ತಿನ್ನುತ್ತಿದ್ದ ಈಕೆ ಪಾರ್ಕಿಗೆ ಬರುವ ಜನರಿಗೂ ಪರಿಚಿತಳು. ಆದರೆ ಶನಿವಾರದಂದು ಇದ್ದಕ್ಕಿದ್ದ ಹಾಗೆ ಈಕೆಯ ಜೀವನೋಪಾಯಕ್ಕೆ ಸಂಚಕಾರ ಒದಗಿದೆ. ಪ್ರಿಯಾ ಚೆಟ್ಟಿ ರಾಜಗೋಪಾಲ್​ ಎನ್ನುವವರು ಈಕೆಗೆ ಒದಗಿದ ಸಂದರ್ಭವನ್ನು ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ. ಕಾಳಜಿ ವಹಿಸಿ ಬಿಬಿಎಂಪಿಗೆ ವಿಚಾರಿಸಿದ್ದಾರೆ.

ಶಿವಾಜಿನಗರದ ಡಂಪ್​ ಯಾರ್ಡ್​ ಈಗ ಮುಚ್ಚಿರುವುದರಿಂದ ಸೋಮವಾರದವರೆಗೆ ಆಕೆ ಕಾಯಬೇಕಾಗುತ್ತದೆ ಎಂದು ಬಿಬಿಎಂಪಿ ಸಿಬ್ಬಂದಿ ತಿಳಿಸಿದೆ. ಸದ್ಯ ಪ್ರಿಯಾ, ಮೀನು ಮತ್ತು ಲಲಿತಾ ಎಂಬ ಟ್ವೀಟಿಗರು ಸೆಲ್ವಮ್ಮನಿಗೆ ಸಹಾಯ ಮಾಡಿ ಮತ್ತೊಂದು ತಳ್ಳುಗಾಡಿಯ ವ್ಯವಸ್ಥೆ ಮಾಡಿದ್ದಾರೆ. ಆದರೆ ಸೋಲಾರ್​ ವ್ಯವಸ್ಥೆಯಿದ್ದ ಆ ಗಾಡಿಗಾಗಿ ಆಕೆ ಕಾಯುತ್ತಿದ್ದಾರೆ. ಈ ವಯಸ್ಸಿನಲ್ಲಿ, ಇಂಥ ಮಳೆಯಲ್ಲಿ ಆಕೆ ಕಟ್ಟಿಗೆಯಿಂದ ಜೋಳವನ್ನು ಸುಟ್ಟು ಮಾಡುವುದು ಸುಲಭವೇ?

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​​ಗಾಗಿ ಕ್ಲಿಕ್ ಮಾಡಿ

Published On - 5:19 pm, Mon, 24 July 23

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ