AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ಲಾಸ್ಟಿಕ್​ ಬಾಟಲಿಗಳನ್ನು ಕೊಟ್ಟರೆ ಬಸ್​​ನಲ್ಲಿ ಉಚಿತ ಪ್ರಯಾಣ, ಬಸ್​ ನಿಲ್ದಾಣದಲ್ಲಿದೆ ಮಶಿನ್​; ಈ ದೇಶದಲ್ಲೊಂದು ವಿನೂತನ ಆಫರ್​ !​

600 ಎಂಎಲ್​ ಅಥವಾ ಅದಕ್ಕೂ ಕಡಿಮೆ ಅಳತೆಯ ಪ್ರತಿ ಬಾಟಲಿಗೂ ಒಂದು ಪಾಯಿಂಟ್​ ಇರುತ್ತದೆ. ಹಾಗೇ, 600 ಎಂಎಲ್​ ಮತ್ತು ಅದಕ್ಕೂ ದೊಡ್ಡದಾದ ಬಾಟಲಿಗಳಿಗೆ 2 ಪಾಯಿಂಟ್. ಅಂದರೆ ಪ್ರತಿ ಬಾಟಲಿಗೆ 2 ಪಾಯಿಂಟ್ ಪಡೆಯಬಹುದು.

ಪ್ಲಾಸ್ಟಿಕ್​ ಬಾಟಲಿಗಳನ್ನು ಕೊಟ್ಟರೆ ಬಸ್​​ನಲ್ಲಿ ಉಚಿತ ಪ್ರಯಾಣ, ಬಸ್​ ನಿಲ್ದಾಣದಲ್ಲಿದೆ ಮಶಿನ್​; ಈ ದೇಶದಲ್ಲೊಂದು ವಿನೂತನ ಆಫರ್​ !​
ಸಾಂಕೇತಿಕ ಚಿತ್ರ
TV9 Web
| Updated By: Lakshmi Hegde|

Updated on:Mar 30, 2022 | 6:24 PM

Share

ಯುನೈಟೆಡ್​ ಅರಬ್​ ಎಮಿರೇಟ್ಸ್​​ನಲ್ಲಿ ಸಾರ್ವಜನಿಕ ಬಸ್​​ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾದ ಒಂದು ಅವಕಾಶವನ್ನು ಅಬು ಧಮಿ ಮುನ್ಸಿಪಲ್ಟೀಸ್​ ಮತ್ತು ಸಾರಿಗೆ ಇಲಾಖೆಯ ಸಮಗ್ರ ಸಾರಿಗೆ ಕೇಂದ್ರ ಕಲ್ಪಿಸಿದೆ. ಆದರೆ ಉಚಿತವಾಗಿ ಅಂದರೆ ಯಾರು ಬೇಕಾದರೂ ಹೋಗಿ, ಸುಮ್ಮನೆ ಪ್ರಯಾಣ ಮಾಡುವಂತಿಲ್ಲ. ಅದಕ್ಕೊಂದು ಟಾಸ್ಕ್​ ಇದೆ. ಮತ್ತೇನಲ್ಲ, ಖಾಲಿ ಪ್ಲಾಸ್ಟಿಕ್​ ಬಾಟಲಿಗಳನ್ನು ಸಂಗ್ರಹಿಸಿ ತಂದು ಕೊಡಬೇಕು. ನೀರು, ತಂಪು ಪಾನೀಯ ಅಥವಾ ಇನ್ನೇನಾದರೂ ಕುಡಿದ ಬಳಿಕ ಪ್ಲಾಸ್ಟಿಕ್​ ಬಾಟಲಿಗಳನ್ನು ಅಲ್ಲಲ್ಲೇ ಬಿಸಾಕುವುದು ಸಾಮಾನ್ಯವಾಗಿಬಿಟ್ಟಿದೆ. ಒಮ್ಮೆ ಡಸ್ಟ್​ಬಿನ್​ಗೆ ಹಾಕಿದರೂ ಕೂಡ ಅದು ಸಂಸ್ಕರಣೆಗೊಳ್ಳುವುದಿಲ್ಲ. ಎಲ್ಲೆಂದರಲ್ಲಿ ಈ ಪ್ಲಾಸ್ಟಿಕ್​ ಬಿಸಾಡಿ ಉಂಟಾಗುವ ಮಾಲಿನ್ಯ ತಪ್ಪಿಸುವ ದೃಷ್ಟಿಯಿಂದ ಅಬುಧಾಬಿ ಸರ್ಕಾರ ಹೀಗೊಂದು ಭರ್ಜರಿ ಆಫರ್​ ನೀಡಿದೆ.

ಅಬುಧಾಬಿ ಡಿಎಂಟಿ ಈ ಅಭಿಯಾನಕ್ಕೆ Points for Plastic: the Bus Tariff ಎಂದು ಹೆಸರಿಟ್ಟಿದೆ. ಅದರಡಿಯಲ್ಲಿ ಅಬುಧಾಬಿಯ ಮುಖ್ಯ ಬಸ್​ ನಿಲ್ದಾಣದಲ್ಲಿ ಒಂದು ಪ್ಲಾಸ್ಟಿಕ್​ ಡಿಪೋಸಿಟ್​  (ಪ್ಲಾಸ್ಟಿಕ್ ಬಾಟಲಿಯನ್ನು ಠೇವಣಿ ಇಡುವ) ಮಶಿನ್​ ಅಳವಡಿಸಲಾಗಿದೆ. ಯಾವುದೇ ಪ್ರಯಾಣಿಕ ಖಾಲಿ ಪ್ಲಾಸ್ಟಿಕ್​  ಬಾಟಲಿಯನ್ನು ಅದರಲ್ಲಿ ಹಾಕಿದರೆ ಅದರ ಬದಲಿಗೆ ಅವರಿಗೆ ಪಾಯಿಂಟ್​ ಸಿಗುತ್ತದೆ. ಹೀಗೆ ಪ್ಲಾಸ್ಟಿಕ್​ ಬಾಟಲಿ ಕೊಟ್ಟು ಗಳಿಸಿದ ಪಾಯಿಂಟ್​ಗಳನ್ನು ಬಸ್​ ಪ್ರಯಾಣ ದರಕ್ಕೆ ಅನ್ವಯ ಮಾಡಿಕೊಳ್ಳಬಹುದು.

ಉದಾಹರಣೆಗೆ, 600 ಎಂಎಲ್​ ಅಥವಾ ಅದಕ್ಕೂ ಕಡಿಮೆ ಅಳತೆಯ ಪ್ರತಿ ಬಾಟಲಿಗೂ ಒಂದು ಪಾಯಿಂಟ್​ ಇರುತ್ತದೆ. ಹಾಗೇ, 600 ಎಂಎಲ್​ ಮತ್ತು ಅದಕ್ಕೂ ದೊಡ್ಡದಾದ ಬಾಟಲಿಗಳಿಗೆ 2 ಪಾಯಿಂಟ್. ಅಂದರೆ ಪ್ರತಿ ಬಾಟಲಿಗೆ 2 ಪಾಯಿಂಟ್ ಪಡೆಯಬಹುದು. ಹೀಗೆ ಪ್ಲಾಸ್ಟಿಕ್​ ಬಾಟಲಿಯಿಂದ ಗಳಿಸಿದ ಒಂದು ಪಾಯಿಂಟ್​ 10 ಫಿಲ್ಸ್​ಗಳಿಗೆ ಸಮ(ಫಿಲ್ಸ್​ ಎಂದರೆ ಕರೆನ್ಸಿಯ ಘಟಕ. ಭಾರತದಲ್ಲಿ ರೂಪಾಯಿಗೆ ಪೈಸೆ ಘಟಕವಿದ್ದಂತೆ). ಹಾಗೇ 10 ಪಾಯಿಂಟ್​ಗಳು 1 ದಿರ್ಹಾಮ್​​ಗೆ ಸರಿಸಮ( ದಿರ್ಹಾಮ್​ ಎಂದರೆ ಯುನೈಟೆಡ್ ಅರಬ್​​ ಎಮಿರೇಟ್ಸ್​ನ ಕರೆನ್ಸಿ). ಈ ಲೆಕ್ಕಾಚಾರದಲ್ಲಿ ಬಸ್​ ದರವನ್ನು ಪರಿಗಣಿಸಿ, ಎಷ್ಟು ಹಣ ಆಗುತ್ತದೆಯೋ ಅಷ್ಟು ದೂರ ಉಚಿತ ಪ್ರಯಾಣ ಮಾಡಬಹುದಾಗಿದೆ.

ಪರಿಸರ ಸಂಸ್ಥೆ – ಅಬುಧಾಬಿ (ಇಎಡಿ), ಅಬುಧಾಬಿ ತ್ಯಾಜ್ಯ ನಿರ್ವಹಣಾ ಕೇಂದ್ರ (ತದ್ವೀರ್) ಮತ್ತು ಡಿ ಗ್ರೇಡ್ ಸಹಯೋಗದಲ್ಲಿ ಈ ಅಭಿಯಾನ ಶುರುವಾಗಿದೆ. ಅಂದರೆ ಜನರು ಮನೆಯಲ್ಲಿ ಸಂಗ್ರಹವಾದ ಪ್ಲಾಸ್ಟಿಕ್​ ಬಾಟಲಿಗಳನ್ನು ಹೇಗೆ ಬೇಕಾದರೆ ಹಾಗೇ ಎಸೆದು, ಪರಿಸರ ಮಾಲಿನ್ಯ ಮಾಡದೆ, ಅದನ್ನು ತಂದುಕೊಡಬೇಕು. ಈ ಮೂಲಕ ಪ್ಲಾಸ್ಟಿಕ್​ ತ್ಯಾಜ್ಯ ನಿರ್ವಹಣೆ ಸರಿಯಾಗಿ ಆಗಬೇಕು ಎಂಬುದು ಉದ್ದೇಶ.

ಇದನ್ನೂ ಓದಿ: ನಾನು ನನ್ನ ರಾಜಕಾರಣಿ ಎಂದು ನನ್ನ ಕರೆದುಕೊಳ್ಳಲ್ಲ, ನಾನು ಆಕಸ್ಮಿಕವಾಗಿ ಸಂಸದೆಯಾಗಿದ್ದೇನೆ: ಸಂಸದೆ ಸುಮಲತಾ

Published On - 6:23 pm, Wed, 30 March 22

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..