AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Go Corona Video: ಕೊರೊನಾ ಕೊರೊನಾ ಭಾಗ್; ಈತನ ಮಂತ್ರ ಕೇಳಿಯೇ ಕೊರೊನಾ ಓಡಿಹೋಗಬಹುದು! ವಿಡಿಯೋ ನೋಡಿ

Go Corona Viral Video: ಇತ್ತೀಚೆಗೆ ಕೊರೊನಾ ವಿರುದ್ಧ ಹೋರಾಡಲು ಕೊರೊನಾ ದೇವತೆ, ಕೊರೊನಾ ಮಾರಮ್ಮ ಇತ್ಯಾದಿ ವಿಚಾರಗಳು ವೈರಲ್ ಆಗಿದ್ದವು. ಕಳೆದ ಬಾರಿ ರಾಜಕೀಯ ಮುಖಂಡರು ಗೋ ಕೊರೊನಾ ಗೋ ಎಂದು ಕ್ಯಾಂಡಲ್ ಹಿಡಿದು ಘೋಷಣೆ ಕೂಗಿದ್ದರು.

Go Corona Video: ಕೊರೊನಾ ಕೊರೊನಾ ಭಾಗ್; ಈತನ ಮಂತ್ರ ಕೇಳಿಯೇ ಕೊರೊನಾ ಓಡಿಹೋಗಬಹುದು! ವಿಡಿಯೋ ನೋಡಿ
ಕೊರೊನಾ ಹೋಮ
TV9 Web
| Edited By: |

Updated on:Aug 21, 2021 | 10:06 AM

Share

ಭಾರತದಲ್ಲಿ ಕೊರೊನಾ ಎರಡನೇ ಅಲೆ ಅತ್ಯಂತ ವೇಗವಾಗಿ ಹರಡುತ್ತಿದೆ. ಬಹಳಷ್ಟು ಮಂದಿ ಕೊವಿಡ್-19ಗೆ ತುತ್ತಾಗುತ್ತಿದ್ದಾರೆ. ಎದುರಾದ ಸಂಕಷ್ಟ ಹಾಗೂ ಸಾವು ನೋವುಗಳಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈ ಸಂದರ್ಭದಲ್ಲಿ ಜನರು ಕೊರೊನಾದಿಂದ ಮುಕ್ತಿ ಹೊಂದಲು ಹಲವು ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ವೈದ್ಯಕೀಯ ಪದ್ಧತಿಯ ಜೊತೆಗೆ ವಿವಿಧ ದೇವರ, ಹೋಮ, ಹವನಗಳ ಮೊರೆ ಹೋಗುತ್ತಿದ್ದಾರೆ. ಕೆಲವು ಪ್ರಯೋಗಗಳು ಧಾರ್ಮಿಕ ಹಿನ್ನೆಲೆಯಲ್ಲಿ ಸರಿಯೇ ಆಗಿದ್ದರೂ ಕೆಲವಷ್ಟು ಕೆಲಸಗಳು ಮೂಢತೆಯ ಪರಮಾವಧಿ ಎಂದು ಅನಿಸಲ್ಪಡುತ್ತದೆ. ಜನರಿಂದ ತಮಾಷೆಗೆ ಒಳಗಾಗಿಬಿಡುತ್ತದೆ. ಅಂತಹುದೇ ಒಂದು ಸನ್ನಿವೇಶ ಇಲ್ಲಿ ನಡೆದಿದೆ.

ಇತ್ತೀಚೆಗೆ ಕೊರೊನಾ ವಿರುದ್ಧ ಹೋರಾಡಲು ಕೊರೊನಾ ದೇವತೆ, ಕೊರೊನಾ ಮಾರಮ್ಮ ಇತ್ಯಾದಿ ವಿಚಾರಗಳು ವೈರಲ್ ಆಗಿದ್ದವು. ಕಳೆದ ಬಾರಿ ರಾಜಕೀಯ ಮುಖಂಡರು ಗೋ ಕೊರೊನಾ ಗೋ ಎಂದು ಕ್ಯಾಂಡಲ್ ಹಿಡಿದು ಘೋಷಣೆ ಕೂಗಿದ್ದರು. ಆ ಬಳಿಕ, ಪ್ರಧಾನಿ ಮೋದಿ ಚಪ್ಪಾಳೆ ತಟ್ಟಲು, ದೀಪ ಹಚ್ಚಲು ಹೇಳಿದ್ದು ಕೂಡ ತಪ್ಪಾಗಿ ಕಾರ್ಯರೂಪಕ್ಕೆ ಬಂದು ಟ್ರೋಲ್​ಗೆ ಒಳಗಾಗಿತ್ತು.

ಈ ಘಟನಾವಳಿಗಳಿಗೆ ಈಗ ಹೊಸತೊಂದು ವಿಡಿಯೋ ಸೇರ್ಪಡೆಯಾಗಿದೆ. ಬಾಲಿವುಡ್ ಛಾಯಾಗ್ರಾಹಕ ವರೀಂದ್ರ ಚಾವ್ಲಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಕಂಡುಬಂದಿರುವಂತೆ, ಒಬ್ಬರು ಕೊರೊನಾ ನಿರ್ಮೂಲನೆಗಾಗಿ ಯಜ್ಞ ಮಾಡುತ್ತಿದ್ದಾರೆ. ಓಂ ಕೊರೊನಾ ಭಾಗ್ ಸ್ವಾಹಾ ಎಂದು ಮಂತ್ರ ಹೇಳುತ್ತಾ ಅಗ್ನಿಗೆ ಹವಿಸ್ಸನ್ನು ಅರ್ಪಣೆ ಮಾಡುತ್ತಿದ್ದಾರೆ. ಕೊರೊನಾ ತೊಲಗಿಸಲು ಕೈಗೊಂಡ ಈ ಕ್ರಮ ನೋಡುಗರನ್ನು ನಗೆಗಡಲಲ್ಲಿ ತೇಲಿಸಿದೆ.

ಕೊರೊನಾ ಕೊರೊನಾ ಎಂದು ನಾಲ್ಕಾರು ಬಾರಿ ಹೇಳಿ, ಭಾಗ್ (ತೊಲಗು) ಎಂದು ಹೋಮ ಮಾಡುವಾತ ಅಬ್ಬರಿಸುತ್ತಿದ್ದಾನೆ. ಇದನ್ನು ನೋಡಿದವರೆಲ್ಲಾ ಆತನ ಧ್ವನಿಗೇ ಕೊರೊನಾ ಓಡಿ ಹೋಗಬಹುದು ಎಂದು ಕಮೆಂಟ್ ಮಾಡಿದ್ದಾರೆ. ಏನೇ ಆದರೂ ಭಾರತೀಯರು ತಮ್ಮದೇ ಶೈಲಿಯಲ್ಲಿ ಕೊರೊನಾ ಓಡಿಸುವ ಪ್ರಯತ್ನ ಮಾಡೋದು ಬಿಡುವುದಿಲ್ಲ ಎಂದು ಇನ್ನು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ: ಕೊರೊನಾ ಸೋಂಕಿತರಿಗೆ ಆಯುರ್ವೇದದಲ್ಲಿ ಚಿಕಿತ್ಸೆ; 10 ಸಾವಿರದಷ್ಟು ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ

ಕೊರೊನಾದಿಂದ ಪತಿಯ ಸಾವು; ಮನನೊಂದ 3 ತಿಂಗಳ ಗರ್ಭಿಣಿ ಪತ್ನಿ ನೇಣಿಗೆ ಶರಣು

Published On - 8:23 pm, Fri, 21 May 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ