Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೆಲಿವರಿ ಬಾಯ್ ಲೇಟಾದ್ರೆ ಬೈಯ್ಯುತ್ತೀರಿ, ಲೇಟಾಗಿದ್ದಕ್ಕೆ ಕಾರಣ ಕೇಳಿದ್ದೀರಾ? ವ್ಯಕ್ತಿಯೊಬ್ಬರ ಅನುಭವದ ಬಗ್ಗೆ ಟ್ವೀಟ್ ಮಾಡಿದ ಹಾಸ್ಯನಟ ಸಾಹಿಲ್ ಶಾ

ನಿಮ್ಮ ಊಟ ತಡವಾದರೆ ಪರವಾಗಿಲ್ಲ. ನನಗೆ ಕೋಪ ಅರ್ಥವಾಗುತ್ತದೆ. ಆದರೆ ಅವರು ಅದನ್ನು ನಿಮ್ಮ ಬಳಿಗೆ ತರಲು ತಮ್ಮ ಪ್ರಾಣವನ್ನು ಪಣಕ್ಕಿಡುತ್ತಿದ್ದಾರೆ. ನೀವು ಎಷ್ಟೇ ಹಸಿದಿದ್ದರೂ ಪರವಾಗಿಲ್ಲ... ಅದು ಎಂದಿಗೂ ಇನ್ನೊಬ್ಬರ ಜೀವ ಕಳೆಯುವಂತಾಗಿರಬಾರದು ಎಂದು ಸರಣಿ ಟ್ವೀಟ್​​ನಲ್ಲಿ ಶಾ ಬರೆದಿದ್ದಾರೆ.

ಡೆಲಿವರಿ ಬಾಯ್ ಲೇಟಾದ್ರೆ ಬೈಯ್ಯುತ್ತೀರಿ, ಲೇಟಾಗಿದ್ದಕ್ಕೆ ಕಾರಣ ಕೇಳಿದ್ದೀರಾ? ವ್ಯಕ್ತಿಯೊಬ್ಬರ ಅನುಭವದ ಬಗ್ಗೆ ಟ್ವೀಟ್ ಮಾಡಿದ ಹಾಸ್ಯನಟ ಸಾಹಿಲ್ ಶಾ
ಸಾಹಿಲ್ ಶಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Apr 06, 2022 | 9:12 PM

ನೀವು ಜೊಮ್ಯಾಟೊ (Zomato) ಮತ್ತು ಸ್ವಿಗ್ಗಿ ( Swiggy)ಯಂತಹ  ಆಹಾರ ಡೆಲಿವರಿ ಸೈಟ್​​ಗಳಲ್ಲಿ ನಿಮ್ಮ ಊಟವನ್ನು ಆರ್ಡರ್ ಮಾಡಿದಾಗ ಮತ್ತು ಡೆಲಿವರಿ ಬಾಯ್ ನಿಮ್ಮ ಮನೆ ಬಾಗಿಲಿಗೆ ಸಮಯಕ್ಕೆ ಸರಿಯಾಗಿ ಬರಲು ಸಾಧ್ಯವಾಗದೇ ಇದ್ದಾಗ, ನೀವು ತಡವಾಗಿ ಬಂದಿದ್ದಕ್ಕಾಗಿ ಅವನನ್ನು ದೂಷಿಸುತ್ತೀರಿ. ಆದಾಗ್ಯೂ, ಅವರು ತಡವಾಗಿ ಬಂದ ಕಾರಣವನ್ನು ಕೇಳಬೇಕು ಎಂದು ನೀವು  ಯೋಚಿಸಿದ್ದೀರಾ? ಅವರಿಗೆ ಅಪಘಾತವೇನಾದರೂ ಆಯಿತೇ? ಯಾವುದಾದರೂ ಆರೋಗ್ಯ ತುರ್ತು ಪರಿಸ್ಥಿತಿ ಇದೆಯೇ? ಹೀಗೆ ಯಾರೂ ಅವರನ್ನು ಕೇಳುವುದಿಲ್ಲ ಎಂದ ಹಾಸ್ಯನಟ ಸಾಹಿಲ್ ಶಾ (Sahil Shah) ಟ್ವಿಟರ್‌ನಲ್ಲಿ ಡೆಲಿವರಿ ಬಾಯ್ ಒಬ್ಬರು ತನ್ನ ಮುಂದೆ ಹೇಗೆ ಕಣ್ಣೀರಾದರು ಎಂಬುದನ್ನು ಬರೆದುಕೊಂಡಿದ್ದಾರೆ. ಈ ಡೆಲಿವರಿ ಬಾಯ್ ಆಹಾರವನ್ನು ತಲುಪಿಸುವ ದಾರಿಯಲ್ಲಿ ಮೂರು ಅಪಘಾತಗಳಿಂದ ಕೂದಲೆಳೆಯಲ್ಲಿ ಪಾರಾಗಿದ್ದರು ಎಂದು ಹೇಳಿದ ಶಾ, ಗ್ರಾಹಕರು ತಾಳ್ಮೆಯಿಂದಿರಿ ಮತ್ತು ಒಳ್ಳೆಯವರಾಗಿ. ನಿಮ್ಮ ಒಳ್ಳೆತನ ನಿಮ್ಮ ಕೈಹಿಡಿಯುತ್ತೆ ಎಂದಿದ್ದಾರೆ. ಸಾಹಿಲ್ ಶಾ ಅವರ ಟ್ವಿಟರ್ ಥ್ರೆಡ್ ವೈರಲ್ ಆಗಿದ್ದು ಅವರ ಟ್ವೀಟ್ ಹೀಗಿದೆ- ಇಂದು ನನ್ನಲ್ಲಿಗೆ ಬಂದ ಆಹಾರ ವಿತರಣಾ ವ್ಯಕ್ತಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅವರು  ನನ್ನ ಆಹಾರವನ್ನು ತಲುಪಿಸಲು ಪ್ರಯತ್ನಿಸುತ್ತಿರುವಾಗ ಸುಮಾರು 3 ಅಪಘಾತಗಳನ್ನು ಎದುರಿಸಿದ್ದಾರೆ. ನಾನು ಅವನಿಗೆ ನೀರು ಮತ್ತು ಉತ್ತಮ ಸಲಹೆಯನ್ನು ನೀಡಿದ್ದೇನೆ ಮತ್ತು ನಂತರ ಅವನಲ್ಲಿ ಕ್ಷಮೆಯಾಚಿಸಿದ್ದೇನೆ. ಏಕೆಂದರೆ ನನ್ನ 500 ರೂಪಾಯಿಯ ಭೋಜನವು ಅವನ ಜೀವನಕ್ಕೆ ಎಂದಿಗೂ ಮೇಲಲ್ಲ. ನಿಮ್ಮ ಡೆಲಿವರಿ ಬಾಯ್ ಜತೆ ದಯವಿಟ್ಟು ಒಳ್ಳೆಯವರಾಗಿರಿ. ಅವರು ತಮ್ಮ ಕೈಲಾದಷ್ಟು ಮಾಡುತ್ತಿದ್ದಾರೆ ಎಂದು ಬರೆದಿದ್ದಾರೆ.

“ನಿಮ್ಮ ಊಟ ತಡವಾದರೆ ಪರವಾಗಿಲ್ಲ. ನನಗೆ ಕೋಪ ಅರ್ಥವಾಗುತ್ತದೆ. ಆದರೆ ಅವರು ಅದನ್ನು ನಿಮ್ಮ ಬಳಿಗೆ ತರಲು ತಮ್ಮ ಪ್ರಾಣವನ್ನು ಪಣಕ್ಕಿಡುತ್ತಿದ್ದಾರೆ. ನೀವು ಎಷ್ಟೇ ಹಸಿದಿದ್ದರೂ ಪರವಾಗಿಲ್ಲ… ಅದು ಎಂದಿಗೂ ಇನ್ನೊಬ್ಬರ ಜೀವ ಕಳೆಯುವಂತಾಗಿರಬಾರದು ಎಂದು ಸರಣಿ ಟ್ವೀಟ್​​ನಲ್ಲಿ ಶಾ ಬರೆದಿದ್ದಾರೆ.

ಡೆಲಿವರಿ ಬಾಯ್​​ಗೆ ಟಿಪ್ ನೀಡಿ. ಅವರಿಗೆ ಸಾಕಷ್ಟು ಗೌರವ ಅಥವಾ ಹಣ ಸಿಗುವುದಿಲ್ಲ. ಅವರಿಗೆ ಟಿಪ್ ನೀಡಿ. ಅವರ ಜತೆ ಒಳ್ಳೆಯವರಾಗಿರಿ. ಅವರೊಂದಿಗೆ ಮಾತನಾಡಿ. ಅವರನ್ನು ಗೌರವಿಸಿ. ಉತ್ತಮವಾದ ನಡವಳಿಕೆ ನಿಮ್ಮನ್ನು ಮುಂದೆ ಕರೆದೊಯ್ಯುತ್ತದೆ ಎಂದು ಸಾಹಿಲ್ ಶಾ ಹೇಳಿದ್ದಾರೆ.

ಹೌದು, ಕೆಟ್ಟ ಘಟನೆಗಳೂ ಇವೆ. ನಾನು ಒಪ್ಪುತ್ತೇನೆ. ಒಬ್ಬ ವಿತರಣಾ ವ್ಯಕ್ತಿಯೊಂದಿಗೆ ನಾನು ಎಂದಿಗೂ ಅಸಭ್ಯವಾಗಿ ವರ್ತಿಸಿಲ್ಲ ಏಕೆಂದರೆ ಅವರು ಎಲ್ಲಿಂದ ಬರುತ್ತಾರೆ ಎಂದು ನನಗೆ ಅರ್ಥವಾಗಿದೆ. ಆ ವ್ಯಕ್ತಿ ಇಂದು 10 ವರ್ಷಗಳಲ್ಲಿ ದೂರು ನೀಡದೆ ಮಾತನಾಡಿದ ಮತ್ತು ಅರ್ಥಮಾಡಿಕೊಂಡ ಮೊದಲ ವ್ಯಕ್ತಿ ನಾನು ಎಂದು ಹೇಳಿದರು. ಅವರೊಂದಿಗೆ ಚೆನ್ನಾಗಿರಿ ಅಷ್ಟೇ ಎಂದು ಶಾ ಟ್ವೀಟ್ ಮಾಡಿದ್ದಾರೆ.

ಸಹಜವಾಗಿಯೇ ಸಾಹಿಲ್ ಶಾ ಅವರ ಟ್ವೀಟ್‌ಗಳಿಗೆ ಹೆಚ್ಚಿನವರು ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದ್ದಾಕೆ . ಜೊಮ್ಯಾಟೊ ಹೊಸದಾಗಿ ಆರಂಭಿಸಿರುವ 10 ನಿಮಿಷಗಳ ವಿತರಣಾ ಸೇವೆಯ ಬಗ್ಗೆಯೂ ಕೆಲವರು ಕಾಳಜಿ ತೋರಿದ್ದಾರೆ. “ಸರಕಾರವು ಈ ರೀತಿಯ ತ್ವರಿತ ವಿತರಣೆಯನ್ನು ಕ್ರಮಬದ್ಧಗೊಳಿಸಲು ಬರಬೇಕು.  @deepigoyal ಅವರೇ ನೀವು ಈ 10 ನಿಮಿಷಗಳ ತ್ವರಿತ ವಿತರಣೆಯನ್ನು ನಿಲ್ಲಿಸಬೇಕು. ಡೊಮಿನೋಸ್‌ನಿಂದ ಕಲಿಯಿರಿ. ಅವರು ತಮ್ಮ 30-ನಿಮಿಷದ ಪಿಜ್ಜಾವನ್ನು ಮುಚ್ಚಿದ್ದಾರೆ ಎಂದು ಟ್ವೀಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ನನಗೆ ಇದು ಅರ್ಥವಾಗುತ್ತಿಲ್ಲ, ಆಹಾರ ವಿತರಣಾ ಕಂಪನಿಗಳು ಅವರು ಪೂರೈಸಲು ಸಾಧ್ಯವಾಗದ ಭರವಸೆಯನ್ನು ಮಾಡುತ್ತಲೇ ಇರುವಾಗ ಜನರು ಏಕೆ ಸಹಾನುಭೂತಿ, ಟಿಪ್  ನೀಡಬೇಕು ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.

ಡೆಲಿವರಿ ಬಾಯ್​​ಗಳ ಸುರಕ್ಷತೆ ಮತ್ತು ಅವರ ಕೆಲಸದ ಪರಿಸ್ಥಿತಿಗಳು ಬಹಳ ಸಮಯದಿಂದ ಹೆಚ್ಚು ಚರ್ಚಿತ ವಿಷಯವಾಗಿದೆ. ಹಲವಾರು ಸಂದರ್ಭಗಳಲ್ಲಿ, ಈ ಆಹಾರ ಸಂಗ್ರಾಹಕರು ತಮ್ಮ ಡೆಲಿವರಿ ಬಾಯ್‌ಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಕಳೆದ ತಿಂಗಳು, Zomato ತನ್ನ 10-ನಿಮಿಷದ ವಿತರಣಾ ಸೇವೆಯನ್ನು ಪ್ರಾರಂಭಿಸಿದ ನಂತರ ಹಲವಾರು ನೆಟ್ಟಿಗರು ಕಂಪನಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ: ಜೊಮ್ಯಾಟೋ, ಸ್ವಿಗ್ಗಿಯಲ್ಲಿ ತಾಂತ್ರಿಕ ದೋಷ; ಆ್ಯಪ್​ನಲ್ಲಿ ಫುಡ್ ಆರ್ಡರ್ ಮಾಡಲಾಗದೆ ಗ್ರಾಹಕರ ಪರದಾಟ

Published On - 8:42 pm, Wed, 6 April 22

VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್