AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: 7 ರೂ. ಬ್ಯಾಗ್ ತಗೊಳ್ಳಿ ಎಂದು ಒತ್ತಾಯಿಸಿದ ಪಿಜ್ಜಾ ಶಾಪ್​ಗೆ 11,000 ರೂ. ದಂಡ!

ನನಗೆ ಕ್ಯಾರಿ ಬ್ಯಾಗ್ ಬೇಡ ಎಂದರೂ ಕೇಳದೆ ಒತ್ತಾಯಪೂರ್ವಕವಾಗಿ ಬಿಲ್​ನಲ್ಲಿ ಕ್ಯಾರಿ ಬ್ಯಾಗ್​ ಮೊತ್ತ 7.62 ರೂ. ನಮೂದಿಸಿ ಬಿಲ್ ನೀಡಿದ್ದಾರೆ ಎಂದು ಗ್ರಾಹಕರೊಬ್ಬರು ಹೈದರಾಬಾದಿನ ಗ್ರಾಹಕ ವೇದಿಕೆಗೆ ದೂರು ನೀಡಿದ್ದರು.

Viral News: 7 ರೂ. ಬ್ಯಾಗ್ ತಗೊಳ್ಳಿ ಎಂದು ಒತ್ತಾಯಿಸಿದ ಪಿಜ್ಜಾ ಶಾಪ್​ಗೆ 11,000 ರೂ. ದಂಡ!
ಪಿಜ್ಜಾ
TV9 Web
| Edited By: |

Updated on: Nov 18, 2021 | 3:44 PM

Share

ಹೈದರಾಬಾದ್: ಯಾವುದೇ ಅಂಗಡಿ, ಶಾಪಿಂಗ್ ಮಾಲ್​, ಸೂಪರ್ ಮಾರ್ಕೆಟ್​ಗೆ ಹೋದರೂ ಬಿಲ್ಲಿಂಗ್ ಕೌಂಟರ್​ನಲ್ಲಿ ‘ಕ್ಯಾರಿ ಬ್ಯಾಗ್ ಬೇಕಾ?’ ಎಂದು ಕೇಳುವುದು ಮಾಮೂಲು. ನಿಮಗೇನಾದರೂ ಬ್ಯಾಗ್ ಬೇಕಾಗಿದ್ದರೆ ಅದರ ಬೆಲೆ ತೆತ್ತು ಬ್ಯಾಗ್ ಖರೀದಿಸಬಹುದು. ಅಥವಾ ನಿಮ್ಮದೇ ಬ್ಯಾಗ್​ನಲ್ಲಿ ಅಲ್ಲಿ ಖರೀದಿಸಿದ ವಸ್ತುಗಳನ್ನು ಹಾಕಿಕೊಂಡು ಬರಬಹುದು. ಆದರೆ, ಪಿಜ್ಜಾ ಶಾಪ್​ವೊಂದು ತಮ್ಮ ಲೋಗೋ ಇರುವ ಕ್ಯಾರಿ ಬ್ಯಾಗ್​ ತೆಗೆದುಕೊಳ್ಳಲು ಗ್ರಾಹಕನಿಗೆ ಒತ್ತಾಯಿಸಿದ್ದಕ್ಕೆ ಇದೀಗ 11 ಸಾವಿರ ರೂ. ದಂಡ ತೆರಬೇಕಾಗಿದೆ!

ನನಗೆ ಕ್ಯಾರಿ ಬ್ಯಾಗ್ ಬೇಡ ಎಂದರೂ ಕೇಳದೆ ಒತ್ತಾಯಪೂರ್ವಕವಾಗಿ ಬಿಲ್​ನಲ್ಲಿ ಕ್ಯಾರಿ ಬ್ಯಾಗ್​ ಮೊತ್ತ 7.62 ರೂ. ನಮೂದಿಸಿ ಬಿಲ್ ನೀಡಿದ್ದಾರೆ ಎಂದು ಗ್ರಾಹಕರೊಬ್ಬರು ಹೈದರಾಬಾದಿನ ಗ್ರಾಹಕ ವೇದಿಕೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆ ಪಿಜ್ಜಾ ಔಟ್‌ಲೆಟ್‌ಗೆ 11,000 ರೂ. ದಂಡ ವಿಧಿಸಲಾಗಿದೆ. 7 ರೂ. ಬ್ಯಾಗ್​ನ ಬಿಲ್ ಹಾಕಿದ್ದಕ್ಕೆ ಆ ಪಿಜ್ಜಾ ಶಾಪ್ ಈಗ 11 ಸಾವಿರ ರೂ. ಹಣ ತೆರಬೇಕಾಗಿದೆ.

ಹೈದರಾಬಾದ್​ನ ಕೆ. ಮುರಳಿ ಕುಮಾರ್ ಎಂಬ ವಿದ್ಯಾರ್ಥಿ ಪಿಜ್ಜಾ 2019ರ ಸೆಪ್ಟೆಂಬರ್ 16ರಂದು ಪಿಜ್ಜಾ ಶಾಪ್​ ಒಂದರಲ್ಲಿ ಪಾರ್ಸಲ್​ಗೆ ಆರ್ಡರ್ ಮಾಡಿದ್ದರು. ಪಿಜ್ಜಾ ಮತ್ತಿತರ ಆಹಾರ ಪದಾರ್ಥಗಳನ್ನು ಅಲ್ಲಿ ಖರೀದಿಸಿದ ಅವರ ಬಿಲ್ 983.5 ರೂ. ಆಗಿತ್ತು. ಅದರಲ್ಲಿ ಆ ಪಿಜ್ಜಾ ಔಟ್​ಲೆಟ್​ನ ಲೋಗೋ ಇರುವ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗೆ ಹೆಚ್ಚುವರಿಯಾಗಿ 7.62 ರೂ.ಗಳನ್ನು ವಿಧಿಸಲಾಗಿತ್ತು. ನನಗೆ ಕ್ಯಾರಿ ಬ್ಯಾಗ್ ಬೇಡ, ಒಂದೊಮ್ಮೆ ನೀವು ಬ್ಯಾಗ್ ಕೊಡುವುದೇ ಆದರೆ ಲೋಗೋ ಇಲ್ಲದ ಬ್ಯಾಗ್ ಕೊಡಿ ಎಂದು ಮುರಳಿ ಕೇಳಿದ್ದರು. ಅದಕ್ಕೆ ಆ ಶಾಪ್​ನವರು ಒಪ್ಪಿರಲಿಲ್ಲ.

ಹೀಗಾಗಿ, ತಮ್ಮ ಬ್ರಾಂಡ್ ಅನ್ನು ಪ್ರಚಾರ ಮಾಡಿಕೊಳ್ಳಲು ನಮ್ಮ ಹಣ ಬಳಸಿಕೊಳ್ಳಲಾಗುತ್ತಿದೆ. ಆ ಶಾಪ್​ನವರಿಂದ ನನಗೆ ಕಿರುಕುಳ ಆಗಿದೆ ಎಂದು ಮುರಳಿ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು. ಆ ಪ್ರಕರಣದ ಎರಡು ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಗ್ರಾಹಕರ ವೇದಿಕೆಯು ದೂರು ನೀಡಿದ ಗ್ರಾಹಕ ಮುರಳಿ ಅವರಿಗೆ 11,000 ರೂ. ಪಾವತಿಸಬೇಕೆಂದು ಪಿಜ್ಜಾ ಔಟ್​ಲೆಟ್​ಗೆ ಆದೇಶ ನೀಡಿದೆ.

ಇದನ್ನೂ ಓದಿ: Viral News: ಮದುವೆಯಾದ ಮರುದಿನವೇ ಗರ್ಲ್​ಫ್ರೆಂಡ್ ಜೊತೆ ವಧು ಪರಾರಿ; ಶಾಕ್ ಆದ ಗಂಡನಿಗೆ ಹೃದಯಾಘಾತ!

Viral News: ಜೈಲಿಗೆ ಹಾಕಿ ಪ್ಲೀಸ್!; ಮನೆಯಲ್ಲಿ ಹೆಂಡತಿಯ ಕಾಟ ತಾಳಲಾರದೆ ಪೊಲೀಸರ ಬಳಿ ಬೇಡಿಕೊಂಡ ಗಂಡ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ