ಅಯೋಧ್ಯೆಯಲ್ಲಿ ಭಕ್ತರ ಹಣೆಗೆ ತಿಲಕವಿಡುತ್ತಾ ಈ ಬಾಲಕ ಗಳಿಸುತ್ತಿರುವುದು ಎಷ್ಟು ಗೊತ್ತಾ? ವಿಡಿಯೋ ನೋಡಿ

ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಹಣೆಯ ಮೇಲೆ ಬೊಟ್ಟು ಇಡುತ್ತಾ ದುಡಿಯುತ್ತಾನಂತೆ ಆ ಬಾಲಕ. ಇದರಿಂದ ಚಿನ್ನಾರಿ ಬಾಲಕ ದಿನಕ್ಕೆ ಸುಮಾರು 1500 ರೂ. ಗಳಿಸುತ್ತಾನಂತೆ. ಇದನ್ನು ಕೇಳಿದ ಅಮಿತ್ ಶಾಕ್ ಆಗಿದ್ದಾರೆ. ಗೋಲು ನೀನು ಯಾವುದೇ ವೃತ್ತಿಪರ ವ್ಯಕ್ತಿಯಂತೆ ಒಳ್ಳೆಯ ಗಳಿಕೆ ಸಂಪಾದಿಸುತ್ತಿದ್ದೀಯಪ್ಪಾ ಎಂದು ಪ್ರತಿಕ್ರಿಯಿಸಿದರಂತೆ. ಅಮಿತ್ ತಮ್ಮ ಪೋಸ್ಟ್ ನಲ್ಲಿ ಇದನ್ನೆಲ್ಲಾ ವಿಡಿಯೋ ಸ್ಟೋರಿ ಮಾಡಿ ಹಾಕಿಕೊಂಡಿದ್ದಾರೆ.

ಅಯೋಧ್ಯೆಯಲ್ಲಿ ಭಕ್ತರ ಹಣೆಗೆ ತಿಲಕವಿಡುತ್ತಾ ಈ ಬಾಲಕ ಗಳಿಸುತ್ತಿರುವುದು ಎಷ್ಟು ಗೊತ್ತಾ? ವಿಡಿಯೋ ನೋಡಿ
ಭಕ್ತರ ಹಣೆಗೆ ತಿಲಕವಿಡುತ್ತಾ ಈ ಬಾಲಕ ಗಳಿಸುತ್ತಿರುವುದು ಎಷ್ಟು?
Follow us
| Updated By: ಸಾಧು ಶ್ರೀನಾಥ್​

Updated on: May 07, 2024 | 2:32 PM

ಅಯೋಧ್ಯೆಯಲ್ಲಿ ಬಾಲ ರಾಮ ಮಂದಿರ (Ayodhya Ram Mandir) ಸ್ಥಾಪನೆಗೊಂಡಿದ್ದೇ ತಡ ಯಾರು ಯಾರಿಗೆ ಎಷ್ಟೆಲ್ಲಾ ಭಾಗ್ಯದ ಬಾಗಿಲು ತೆರೆದಿದೆ ಎಂಬುದು ಊಹಿಸಿಕೊಳ್ಳೋಕು ಆಗ್ತಿಲ್ಲ, ಗಳಿಕೆ ಎಂಬುದು ಲೆಕ್ಕಕ್ಕೂ ಸಿಗ್ತಿಲ್ಲ. ಇನ್ನು ರಾಜಕೀಯ ಮೇಲಾಟದಲ್ಲಿ ಲಾಭ-ನಷ್ಟದ ಬಾಬ್ತು ಎಷ್ಟು ಎಂಬುದು ಪ್ರಚಲಿತ ಲೋಕಸಭಾ ಚುನಾವಣೆ ಫಲಿತಾಂಶಗಳನ್ನು ನೋಡಿ ಜೂನ್​ ಮೊದಲ ವಾರದಲ್ಲಿ ಹೇಳಬಹುದು! ಇದರಾಚೆಗೆ ನೋಡುವುದಾದರೆ ಈಗಂತೂ ಬಿಡಿ ಇದು ಸಾಮಾಜಿಕ ಜಾಲತಾಣಗಳ ಯುಗ. ಇಲ್ಲಿ ಜನಪ್ರಿಯವಾಗುವುದು ದೊಡ್ಡ ವಿಷಯವಲ್ಲ. ನಿಮ್ಮಲ್ಲಿ ನಿಜಕ್ಕೂ ಒಂದಷ್ಟು ವಿಶೇಷ ಕಲೆ ಅಥವಾ ಕೆಲವು ವಿಚಿತ್ರ ಗುಣಗಳು ಇದ್ದು ಅದನ್ನು ಪ್ರದರ್ಶನಕ್ಕೆ ಇಟ್ಟರೆ ದಿನಬೆಳಗಾಗೋದರೊಳಗೆ ಜನಪ್ರಿಯತೆಯ ಶಿಖರವನ್ನೇರಿರುತ್ತೀರಿ. ಅದಕ್ಕೆ ತಕ್ಕಂತೆ ಲಾಭ/ ಪ್ರಯೋಜನಗಳನ್ನು ಹೋಂದಿರುತ್ತೀರಿ. ಒಟ್ಟು ಜನರನ್ನು ಆಕರ್ಷಿಸಬೇಕು ಅಷ್ಟೇ – ಇಲ್ಲಿನ ನಿಯಮ. ಅದನ್ನು ಅಂತರ್ಜಾಲದಲ್ಲಿ ಶೇರ್ ಮಾಡುವ ಮೂಲಕ ಸದ್ದು ಮಾಡುತ್ತಾರೆ. ಮತ್ತು ಆ ವೀಡಿಯೊಗಳು ನಿಮ್ಮನ್ನು ರಾತ್ರೋರಾತ್ರಿ ಹೀರೋ ಮಾಡಿಬಿಡುತ್ತವೆ. ದೆಹಲಿಯ ವೈರಲ್ ವಡಾ ಪಾವ್ ಹುಡುಗಿಯಿಂದ ನಾಗ್ಪುರದ ಡಾಲಿ ಛಾಯ್​ವಾಲಾವರೆಗೆ, ಅನೇಕ ಸಾಮಾಜಿಕ ಮಾಧ್ಯಮದ ಜನಪ್ರಿಯ ತಾರೆಯರ ವೀಡಿಯೊಗಳನ್ನು ಇಂಟರ್ನೆಟ್‌ನಲ್ಲಿ ನೋಡಬಹುದು. ಸದ್ಯ ಅಂತಹ ಒಂದು ವಿಡಿಯೋ ನೆಟ್‌ನಲ್ಲಿ (instagram) ಹರಿದಾಡುತ್ತಿದೆ. ಅದು ಅಯೋಧ್ಯೆಯ ಗೋಲು ಎಂಬ ಬಾಲಕನ (Tilak) ಕುರಿತದ್ದಾಗಿದೆ. ಈ ವಿಡಿಯೋ (Viral Video) ನೆಟಿಜನ್‌ಗಳ ಗಮನ ಸೆಳೆದಿದೆ. ಬಾಲ ಗೋಲು ತನ್ನ ಉತ್ತರದಿಂದ ಅಪಾರ ಜನರ (Devotees) ಮನ ಗೆದ್ದಿದ್ದಾನೆ.

ಕ್ರಿಪ್ಟೋ ಶಿಕ್ಷಣತಜ್ಞ ಅಮಿತ್ ಸಿಂಗ್ ಅವರು ಆ ಹುಡುಗನ ವೀಡಿಯೊವನ್ನು ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಯೋಧ್ಯೆಯಲ್ಲಿ ವಾಸಿಸುವ ಬಾಲ ಗೋಲು, ದೇಶದ ಇತರೆ ಪ್ರೊಫೆಷನಲ್​ಗಳಿಗಿಂತ ಅಧಿಕ ಸಂಪಾದನೆ ಮಾಡುತ್ತಿದ್ದಾನೆ. ಅದಲ್ಲದೆ, ಹುಡುಗನ ಆತ್ಮವಿಶ್ವಾಸ ನೋಡಿದರೆ ಆತ ಉತ್ಸಾಹದ ಚಿಲುಮೆಯಾಗಿದ್ದಾನೆ ಎಂಬುದು ದೃಢಪಡುತ್ತದೆ. ಬಾಲ ರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ಭೇಟಿ ನೀಡಿರುವ ಅಮಿತ್ ಅವರು ಅಲ್ಲಿನ ರಸ್ತೆ ಬದಿಯಲ್ಲಿ ಭಕ್ತರ ಹಣೆಗೆ ಶ್ರೀಗಂಧದ ತಿಲಕದ ಬೊಟ್ಟು ಹಾಕುವ ಗೋಲು ಬಾಲಕ ಕಂಡಿದ್ದಾನೆ. ನಂತರ ಗೋಲುನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಮಿತ್ ಆ ಬಾಲಕನ ದಿನನಿತ್ಯದ ಗಳಿಕೆಯನ್ನು ತಿಳಿದುಕೊಳ್ಳಲು ಯತ್ನಿಸಿದ್ದಾರೆ. ಅದಕ್ಕೆ ಉತ್ಗರವಾಗಿ ಬಂದ ಆ ಮಗುವಿನ ಉತ್ತರ ಕೇಳಿ ಹುಬ್ಬೇರಿಸಿದ್ದಾರೆ!

ದಿನಕ್ಕೆ ರೂ.1500 ಗಳಿಸುತ್ತಾನಂತೆ ಗೋಲು!

ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಹಣೆಯ ಮೇಲೆ ಬೊಟ್ಟು ಇಡುತ್ತಾ ದುಡಿಯುತ್ತಾನಂತೆ ಆ ಬಾಲಕ. ಇದರಿಂದ ಚಿನ್ನಾರಿ ಬಾಲಕ ದಿನಕ್ಕೆ ಸುಮಾರು 1500 ರೂ. ಗಳಿಸುತ್ತಾನಂತೆ. ಇದನ್ನು ಕೇಳಿದ ಅಮಿತ್ ಶಾಕ್ ಆಗಿದ್ದಾರೆ. ಗೋಲು ನೀನು ಯಾವುದೇ ವೃತ್ತಿಪರ ವ್ಯಕ್ತಿಯಂತೆ ಒಳ್ಳೆಯ ಗಳಿಕೆ ಸಂಪಾದಿಸುತ್ತಿದ್ದೀಯಪ್ಪಾ ಎಂದು ಪ್ರತಿಕ್ರಿಯಿಸಿದರಂತೆ. ಅಮಿತ್ ತಮ್ಮ ಪೋಸ್ಟ್ ನಲ್ಲಿ ಇದನ್ನೆಲ್ಲಾ ವಿಡಿಯೋ ಸ್ಟೋರಿ ಮಾಡಿ ಹಾಕಿಕೊಂಡಿದ್ದಾರೆ. ಗೋಲು ಬಾಲಕನಲ್ಲಿ ಬುದ್ದಿವಂತಿಕೆ ಇದೆ. ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವಂತೆ, ಐಐಎಂ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದವರಂತೆ ಈತನಲ್ಲೂ ಅದೊಂದು ರೀತಿಯ ಪರಿಣಿತಿ ಇದೆ. ವಾಸ್ತವವಾಗಿ, ಭಾರತದ ಬೀದಿ ಬೀದಿಗಳಲ್ಲಿ ಅಸಂಖ್ಯಾತ ನುರಿತ ಜನರು ‘ಗೋಲು’ ರೂಪದಲ್ಲಿ ತಿರುಗುತ್ತಿದ್ದಾರೆ. ಅವರಲ್ಲಿ ಅದಮ್ಯ ಧೈರ್ಯ ಮತ್ತು ನಂಬಿಕೆ ಇದೆ. ಆದರೂ ಗೋಲು ಅಂತಹ ಬಾಲಕರು ಸೂಕ್ತ ಶಿಕ್ಷಣ, ಸಮರ್ಥ ಮಾರ್ಗದರ್ಶನ ಪಡೆದರೆ ಏನು ಬೇಕಾದರೂ ಮಾಡಬಲ್ಲರು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಏಪ್ರಿಲ್ 29 ರಂದು Insta ಹ್ಯಾಂಡಲ್ @guardians_of_the_cryptoverse ನೊಂದಿಗೆ ಹಂಚಿಕೊಳ್ಳಲಾದ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋ ಇದುವರೆಗೆ ಎರಡು ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ. ಸಾವಿರಾರು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಕಷ್ಟಪಟ್ಟು ದುಡಿಯುವ ಗೋಲುಗೆ ಸೆಲ್ಯೂಟ್ ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಆದರೆ, ಇನ್ನು ಕೆಲವರು ಹಾಗಾದರೆ ಇನ್ನು ಮುಂದೆ ದೇವಸ್ಥಾನ, ಫುಟ್​​​ಪಾತ್​​​ಗಳಲ್ಲಿ ಎಲ್ಲರೂ ತಿಲಕ ಪೆಟ್ಟಿಗೆ ಹಿಡಿದು ಕೆಲಸ ಆರಂಭಿಸಬೇಕಾ? ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?