Sign In

By signing in or creating an account, you agree with Associated Broadcasting Company's Terms & Conditions and Privacy Policy.

Amul Lassi: ಅಮುಲ್ ಲಸ್ಸಿ ಪ್ಯಾಕೆಟ್‌ಗಳಲ್ಲಿ ಫಂಗಸ್..!? ವೈರಲ್ ವಿಡಿಯೋಗೆ ಅಮುಲ್ ಕಂಪನಿ ಪ್ರತಿಕ್ರಿಯೆ ಏನು?

ಅಮುಲ್ ಲಸ್ಸಿಗೆ ಸಂಬಂಧಿಸಿದ ವೀಡಿಯೊವನ್ನು ಹಂಚಿಕೊಂಡ ಗ್ರಾಹಕರು, ಅಮುಲ್ ಲಸ್ಸಿ ಪ್ಯಾಕೆಟ್‌ಗಳು ಮುಕ್ತಾಯ ದಿನಾಂಕಕ್ಕಿಂತ ಮೊದಲು ಶಿಲೀಂಧ್ರದಿಂದ ಸೋಂಕಿಗೆ ಒಳಗಾಗಿದ್ದವು ಮತ್ತು ಗುಣಮಟ್ಟದ ಕೊರತೆಯಿದೆ ಎಂದು ಹೇಳಿಕೊಂಡಿದ್ದರು.

Amul Lassi: ಅಮುಲ್ ಲಸ್ಸಿ ಪ್ಯಾಕೆಟ್‌ಗಳಲ್ಲಿ ಫಂಗಸ್..!? ವೈರಲ್ ವಿಡಿಯೋಗೆ ಅಮುಲ್ ಕಂಪನಿ ಪ್ರತಿಕ್ರಿಯೆ ಏನು?
ಅಮುಲ್ ಲಸ್ಸಿ ಪ್ಯಾಕೆಟ್‌ಗಳಲ್ಲಿ ಫಂಗಸ್..!?
Follow us
ಸಾಧು ಶ್ರೀನಾಥ್​
|

Updated on: May 26, 2023 | 4:30 PM

ಜನಪ್ರಿಯ ಡೈರಿ ಕಂಪನಿ ಅಮುಲ್ (Amul Company) ಕರ್ನಾಟಕಕ್ಕೆ ಎಂಟ್ರಿ ಕೊಡುತ್ತೆ ಎಂಬ ಸುದ್ದಿ ಇತ್ತೀಚೆಗೆ ಭಾರೀ ಸದ್ದು ಮಾಡಿತ್ತು. ಆದರೆ ಆ ಯೋಜನೆ ಸದ್ಯಕ್ಕೆಮ ಕೋಲ್ಡ್​​ ಸ್ಟಫರೇಜ್​ ಸೇರಿದೆ. ಈ ಮಧ್ಯೆ, ಅಮುಲ್ ಕಂಪನಿ ಮತ್ತೆ ಸುದ್ದಿಗೆ ಬಂದಿದೆ. ಅಮುಲ್ ಲಸ್ಸಿ ಪ್ಯಾಕ್‌ನಲ್ಲಿ ಬೂಜು ಕಟ್ಟಿದೆ, ಶಿಲೀಂಧ್ರವಿದೆ (fungus) ಎಂದು ಆರೋಪಿಸಿ ವೀಡಿಯೊವೊಂದು ವೈರಲ್ ಆಗಿದೆ. ಆದರೆ ಅದಕ್ಕೆ ಉತ್ತರವಾಗಿ ಅಮುಲ್ ಕಂಪನಿ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ವಿವರಣೆ ನೀಡಿದೆ. ಅಮುಲ್ ಕಂಪನಿಯು ತನ್ನ ಟ್ವೀಟ್‌ನಲ್ಲಿ ವೈರಲ್ ಆಗುತ್ತಿರುವ ವೀಡಿಯೊ ನಕಲಿಯಾಗಿದೆ ಮತ್ತು ಇದು ಗ್ರಾಹಕರಲ್ಲಿ ತಪ್ಪು ಮಾಹಿತಿಯನ್ನು ಹರಡುವ ಕೃತ್ಯವಾಗಿದೆ ಎಂದು ಹೇಳಿದೆ. ವೀಡಿಯೋದಲ್ಲಿರುವ ಲಸ್ಸಿ ಪ್ಯಾಕ್‌ಗಳು ಒಣಹುಲ್ಲಿನ ಹೊದಿಕೆಯನ್ನು ಹೊಂದಿದ್ದು, ಅದು ಹಾನಿಗೊಳಗಾಗಿದೆ (contamination) ಎಂದು ಹೇಳಿದೆ. ಇದರಿಂದಾಗಿ ಶಿಲೀಂಧ್ರವು ಒಳಗೆ ರೂಪುಗೊಂಡಿದೆ. ಮತ್ತು ವೀಡಿಯೊವನ್ನು ರಚಿಸಿದ ಜನರಿಗೆ ಇದು ಚೆನ್ನಾಗಿ ತಿಳಿದಿದೆ. ಅದಕ್ಕೆ ಈ ವಿಡಿಯೋವೇ ನೇರ ಸಾಕ್ಷಿಯಾಗಿದೆ ಎಂದೂ ಕಂಪನಿ ಹೇಳಿದೆ.

ಇನ್ನು ವೈರಲ್ ಆಗುತ್ತಿರುವ ವಿಡಿಯೋವನ್ನು ಫಾರ್ವರ್ಡ್ ಮಾಡಿ.. ‘ಅಮುಲ್ ಲಸ್ಸಿ ಗುಣಮಟ್ಟ ಕಡಿಮೆಯಾಗಿದೆ’ ಎಂಬ ನಕಲಿ ಸಂದೇಶ ವಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಚಿತ್ರೀಕರಿಸಿದ ವ್ಯಕ್ತಿಯು ಕಂಪನಿಯ ವಿವರಣೆಗಾಗಿ ನಮ್ಮನ್ನು ಸಂಪರ್ಕಿಸಿಲ್ಲ, ಎಲ್ಲಿ ನಡೆದಿದೆ ಎಂಬುದನ್ನು ಸೂಚಿಸಲು ಸ್ಥಳವನ್ನು ಬಹಿರಂಗಪಡಿಸಿಲ್ಲ.’ ಇದರ ಸಂಬಂಧ ಯಾವುದೇ ಸ್ಪಷ್ಟೀಕರಣ ಅಥವಾ ಪ್ರಶ್ನೆಗಳಿಗಾಗಿ ಗ್ರಾಹಕರು ತಮ್ಮನ್ನು ನೇರವಾಗಿ ಸಂಪರ್ಕಿಸಬಹುದು ಎಂದು ಕೇಳಲಾಗಿದೆ. ಇಂತಹ ನಕಲಿ ವೀಡಿಯೋಗಳು ಚಾಲ್ತಿಯಲ್ಲಿದ್ದು, ಅದನ್ನು ನಂಬಬೇಡಿ ಎಂದು ಮನವಿ ಮಾಡಿದೆ.

ಏತನ್ಮಧ್ಯೆ, ಅಮುಲ್ ಲಸ್ಸಿಗೆ ಸಂಬಂಧಿಸಿದ ವೀಡಿಯೊವನ್ನು ಹಂಚಿಕೊಂಡ ಗ್ರಾಹಕರು, ಅಮುಲ್ ಲಸ್ಸಿ ಪ್ಯಾಕೆಟ್‌ಗಳು ಮುಕ್ತಾಯ ದಿನಾಂಕಕ್ಕಿಂತ ಮೊದಲು ಶಿಲೀಂಧ್ರದಿಂದ ಸೋಂಕಿಗೆ ಒಳಗಾಗಿದ್ದವು ಮತ್ತು ಗುಣಮಟ್ಟದ ಕೊರತೆಯಿದೆ ಎಂದು ಹೇಳಿಕೊಂಡಿದ್ದರು.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ